![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, Feb 21, 2021, 12:31 PM IST
ಮುಂಬಯಿ: ಮೈಸೂರು ಅಸೋಸಿಯೇಶನ್ ಮುಂಬಯಿ ಮತ್ತು ಆದ್ಯ ರಂಗಾಚಾರ್ಯ ಫೌಂಡೇಶನ್ನ ನಿರ್ದೇಶಕಿ ಡಾ| ಉಷಾ ದೇಸಾಯಿ ಅವರ ಸಹಯೋಗ
ದಲ್ಲಿ ಫೆ. 21ರಂದು ಸಂಜೆ 6ರಿಂದ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಆದ್ಯ ರಂಗಚಾರ್ಯ ಅವರ ರಂಗಭೂಮಿ ಹಾಗೂ ವಿವಿಧ ನಾಟಕಗಳ ಆಯ್ದ ಭಾಗಗಳ ನೆನಪಿಸಿಕೊಳ್ಳುವ ನೆನಪಿನ ಶ್ರೀರಂಗ (ರಿಮೆಂಬ ರಿಂಗ್ ಶ್ರೀರಂಗ) ರಂಗ ಪ್ರದರ್ಶನ ನಡೆಯಲಿದೆ.
ಮೈಸೂರು ಅಸೋಸಿಯೇಶನ್ ಮುಂಬಯಿ ಮತ್ತು ಕರ್ನಾಟಕ ಸಂಘ ಮುಂಬಯಿ ಇದರ ಕಲಾವಿದರ ಕೂಡುವಿಕೆ ಯೊಂದಿಗೆ ಹಾಗೂ ಡಾ| ಉಷಾ ದೇಸಾಯಿ ಇವರ ವಿಶೇಷ ಅಭಿನಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕೋವಿಡ್ ಸಾಂಕ್ರಮಿಕದ ಬಳಿಕ ಪ್ರೇಕ್ಷಕರೊಂದಿಗೆ ಮೊದಲ ಪ್ರದರ್ಶನ ಇದಾಗಿದ್ದು ಆಸಕ್ತ ನಾಟಕ ಕಲಾಭಿಮಾನಿಗಳು ಗೂಗಲ್ ಮೀಟ್ ಅಥವಾ ಫೇಸ್ಬುಕ್ ಮೂಲಕವೂ ನೇರವಾಗಿ ಕಾರ್ಯಕ್ರಮ ವೀಕ್ಷಿಸಬಹುದು ಎಂದು ಮೈಸೂರು ಅಸೋಸಿಯೇಶನ್ನ ವಕ್ತಾರರು ಹಾಗೂ ರಂಗತಜ್ಞ ಡಾ| ಭರತ್ಕುಮಾರ್ ಪೊಲಿಪು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.