ಮರೆತು ಹೋ(ಗ)ದ ಮೈಸೂರಿನ ಪುಟಗಳನ್ನು ತಿರುವುತ್ತಾ…


Team Udayavani, Apr 25, 2021, 1:21 PM IST

Book Review, College Campus

ಮೈಸೂರು ಎಂಬುದು ಒಂದು ಸೋಜಿಗ ನನಗೆ‌. ಹುಟ್ಟಿದ ಊರು ಅಲ್ಲದಿದ್ದರು, ಬದುಕಿನ ಸಂಭ್ರಮವನ್ನು ಕಲಿಸಿಕೊಟ್ಟ ನೆಲ. ಬುದ್ಧಿ ಬೆಳೆದು, ನಾನು ಬೆಳೆಯುತ್ತಿರುವಾಗಿಂದಲೂ ಈಗಿನವರೆಗೂ ಮೈಸೂರಿಗೆ, ನನ್ನವರ ಮನೆಗೆ ಪ್ರತಿ ವರ್ಷ ಹಾಜರಿಯಿದ್ದದ್ದೆ. ಕಾಲ ಮುಂದೆ ಹೋದ ಹಾಗೆ ಮೈಸೂರು ಅಮ್ಮನ ತವರೂರಾಗಿ, ಅವಳ ಒಡಹುಟ್ಟಿದವರ ನೆಲೆಯಾಯಿತು. ಹಾಗಾಗಿ ಮೈಸೂರಿಗೆ ಪ್ರತಿ ಬಾರಿ ಕಾಲಿಡಲು ಅಜ್ಜಿ ಮನೆ ನೆಪವಾಯಿತು.

ಈ ಊರು ಇಷ್ಟವಾಗುವುದು ಅಲ್ಲಿರುವ ಶಬ್ದದೊಳಗಿನ ನಿಶ್ಯಬ್ದತೆಗೆ, ಜೀವನ ಪ್ರೀತಿಗೆ. ಮೈಸೂರಿನ ಅರಮನೆ, ಕೆ. ಆರ್‌.ಎಸ್ ಕಾರಂಜಿ, ಅಲ್ಲಿನ ಹಬ್ಬ, ಅದರ ಸಂಭ್ರಮ, ತಿಂಡಿಗಳು ಇವೆಲ್ಲವೂ ನನಗೆ ಪ್ರತಿಬಾರಿಯೂ ಹೊಸತಾಗೇ ಕಾಣಿಸುತ್ತದೆ.

ಈ ಸುಂದರ ಮೈಸೂರಿನ ಇತಿಹಾಸದ ಪುಟಗಳನ್ನು ತೆಗೆದಾಗ ಓದಲು ಸಿಗುವ ಅದೆಷ್ಟೋ ಅರಿಯದ ವಿಷಯಗಳಿವೆ  ವಿಸ್ಮಯದ ಸಂಗತಿಗಳಿವೆ. ಇವೆಲ್ಲವನ್ನೂ ತೆರೆದಿಡುವ ಪುಸ್ತಕವೇ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರ ‘ಮರೆತು ಹೋದ ಮೈಸೂರಿನ ಪುಟಗಳು’.

ಓದಿ : ಮೂಲ ಕಸ್ಟಮ್ಸ್‌ ಸುಂಕ-ಆರೋಗ್ಯ ಸೆಸ್‌ ಮನ್ನಾ ಸ್ವಾಗತಾರ್ಹ: ಜೋಶಿ

ಮೈಸೂರು ಮಹಾರಾಜರ ವಂಶಾವಳಿಯಿಂದ ಹಿಡಿದು, ರಾಜನಿಷ್ಠೆಯವರೆಗೆ ಇತಿಹಾಸದ ಸುಮಾರು 50 ಸಂಗತಿಗಳನ್ನು, ವಿಚಾರಗಳನ್ನು ಈ ಪುಸ್ತಕ ತೆರೆದಿಡುತ್ತದೆ.

ಮೈಸೂರಿನ ಗುರುತಾದ ಮೈಸೂರು ಪಾಕ್ ನ ಹುಟ್ಟು, ಜೋರು ಮಳೆಯ ಚಳಿ ಹುಟ್ಟಿಸುವ ಸಮಯದಲ್ಲಿ ನಾಲಿಗೆ ಬಯಸುವ ಹುರುಳಿ ಕಟ್ಟಿನ ಸಾರು ಮಹರಾಜರಿಗೆ ರುಚಿ ಹಿಡಿಸಿದ್ದು, ಮಹಾರಾಜರ ವಂಶಕ್ಕೆ ಶಾಪ ನೀಡಿ ಕಾವೇರಿಯಲ್ಲಿ ವಿಲೀನಳಾದ ಅಲಮೇಲಮ್ಮನ ಕಥೆ, ನಾಲ್ವಡಿ ಕೃಷ್ಣರಾಜರ ಸಂಗೀತ ವಿದ್ವತ್ತ್, ಶಿವಮೊಗ್ಗದ ಮೆಗಾನ್ ಆಸ್ಪತ್ರೆ, ಬೆಂಗಳೂರಿನ ಲಾಲ್ ಬಾಗ್, ಮೈಸೂರಿನ ಜಗನ್ಮೋಹನ ಪ್ಯಾಲೇಸ್ ಹೆಸರುಗಳ ನಾಂದಿಯ ಹಿಂದಿನ ಕಾರಣವನ್ನು ಈ ಕೃತಿ ಎಳೆಎಳೆಯಾಗಿ ತಿಳಿಸುತ್ತದೆ.

ಇವೆಲ್ಲದರ ಜೊತೆಗೆ ವೀಣೆಯ ಬೆಡಗಾದ ಮೈಸೂರಿನ ಸಯ್ಯಾಜಿ ರಾವ್ ರಸ್ತೆ, ಅಲ್ಲಿನ ಅರಮನೆ ಬ್ಯಾಂಡ್ ನ ನಾದ ದಿಲ್ಲಿಯವರೆಗೂ ಕೇಳಿಸಿದ್ದು, ಝಾನ್ಸೀ ರಾಣಿಗೆ ಸಹಾಯ ಹಸ್ತ ಚಾಚಿದ್ದು, ಮೈಸೂರಿನಲ್ಲಿ ಎದ್ದು ನಿಂದಿರುವ ಅಂಚೆ ಬಸಪ್ಪ, ಜೇಮ್ಸ್ ಗೋರ್ಡಾನ್ ಹಾಗೂ ದೊಡ್ಡ – ಚಿಕ್ಕ ಗಡಿಯಾರದ ನಡುವೆ ಇರುವ ಅಪ್ಪ – ಮಗನ ನಂಟು, ಮಹಾರಾಣಿ ಕಾಲೇಜಿನ ಸ್ಥಾಪನೆಗೆ ಕಾರಣರಾದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು, ತಮ್ಮ ತೊಂಭತ್ತರ ಇಳಿ ವಯಸ್ಸಿನಲ್ಲೂ ಸರಳತೆಯನ್ನು ತೋರಿದ ಸರ್.ಎಮ್. ವಿಶ್ವೇಶ್ವರಯ್ಯನವರು ಮತ್ತು ಕೊನೆಯುಸಿರವರೆಗೂ ರಾಜನಿಷ್ಠೆ ಪಾಲಿಸಿದ ನರ್ತಕಿ.

ಇಂತಹದ್ದೇ ಸೋಜಿಗದಿಂದ ಕೂಡಿದ ಮೈಸೂರಿನ ಪುಟಗಳನ್ನು ಈ ಪುಸ್ತಕದಲ್ಲಿ ತೆರೆದಷ್ಟು ಖುಷಿ ಕೊಡುತ್ತದೆ. ಮೈಸೂರೇ ಸುಂದರ ಅದರ ಇತಿಹಾಸವೂ ಅಷ್ಟೇ ವೈಭವಯುತವಾಗಿದೆ.

ವಿಧಾತ್ರಿ ಭಟ್

ಎಸ್.ಡಿ.ಎಮ್. ಕಾಲೇಜು ಉಜಿರೆ.

ಓದಿ : ಕರ್ಫ್ಯೂ ಇದ್ದರೂ ಹುಟ್ಟುಹಬ್ಬ ಆಚರಿಸಿ ಪಟಾಕಿ ಸಿಡಿಸಿದ ಪೊಲೀಸ್ ಮಗ : 14 ಮಂದಿ ಬಂಧನ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Oline Classes

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

Ready to ride space pod

ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.