Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….


Team Udayavani, Jul 14, 2024, 3:08 PM IST

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

ಪ್ರಕೃತಿಯ ಮಡಿಲಿನಲ್ಲಿ ಅದೆಷ್ಟೋ ಪ್ರವಾಸಿ ತಾಣಗಳಿವೆ. ಕೆಲವೊಂದು ಚಾರಣ ತಾಣಗಳು ಇನ್ನಷ್ಟು ಪ್ರವಾಸಿಗರನ್ನು ಗಮನ ಸೆಳೆಯುತ್ತವೆ. ಹೌದು ಪುಣ್ಯಕ್ಷೇತ್ರವೆಂದೇ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಬಳಿ ಪುಷ್ಪಗಿರಿ ಎಂದು ಕರೆಯಲ್ಪಡುವ ಕುಮಾರ ಪರ್ವತ ಚಾರಣಕ್ಕೆ ಸೂಕ್ತವಾದ ಸ್ಥಳವಾಗಿದೆ ಹಾಗೆ ಹೆಸರುವಾಸಿಯಾದ ಪ್ರವಾಸಿ ತಾಣವಾಗಿದೆ.

ನಾನು ಹಲವಾರು ಕಡೆ ಚಾರಣ ಕೈಗೊಂಡಿದ್ದೇನೆ ಹಾಗೆಯೇ ಅದರ ಅನುಭವ ಪಡೆದಿದ್ದೇನೆ. ಆದರೆ ಕೊನೆತನಕ ಮನಸ್ಸಿನಲ್ಲಿ ಮಾಸಿ ಹೋಗಲಾರದಂತಹ ಚಾರಣವೆಂದರೆ ಅದು ಕುಮಾರ ಪರ್ವತ ಚಾರಣ. ಕರ್ನಾಟಕದ ಅತಿ ಎತ್ತರದ ಹಾಗೂ ಸವಾಲಿನ ಪರ್ವತದಲ್ಲಿ ಕುಮಾರ ಪರ್ವತ ಚಾರಣವೂ ಒಂದು ಇಂತಹ ಕಠಿಣವಾದ ಚಾರಣವನ್ನು ಕೈಗೊಂಡು ಏರಿರುವುದು ನನಗಿನ್ನು ವಿಸ್ಮಯವೆನಿಸುತ್ತದೆ.

ಹೀಗೊಂದು ದಿನ ಕೆಲ ಸಂಬಂಧಿಕರು ಸೇರಿ ಕುಮಾರ ಪರ್ವತ ಚಾರಣಕ್ಕೆ ಹೋಗಲು ಸಿದ್ದರಾದೆವು. ಅಷ್ಟು ದೀರ್ಘವಾದ ಚಾರಣದ ಅನುಭವವಂತು ನನಗಿರಲಿಲ್ಲ. ಅನುಮಾನದಿಂದಲೇ ಚಾರಣವನ್ನು ಪ್ರಾರಂಭಿಸಿದೆವು. ಒಂದೊಂದೇ ಹೆಜ್ಜೆ ಹಾಕುತ್ತಾ ಸುತ್ತಲಿನ ಹಚ್ಚ ಹಸಿರಿನಿಂದ ಕೂಡಿದ ಸುತ್ತಲಿನ  ಪರಿಸರವನ್ನು ಕಣ್ತುಂಬಿಕೊಂಡು ಅಲ್ಲೊಂದು ಇಲ್ಲೊಂದು ಸಿಕ್ಕ ಜಿಗಣೆಗಳಿಂದ ತಪ್ಪಿಸಿಕೊಂಡು ಭಯಂಕರವಾದ ಕಠಿಣಕರ ದಾರಿಯನ್ನು ಹಾದು ಹೋಗಿ ಸುಮಾರು 7ಕಿ.ಮೀ ದೂರದ ಗಿರಿಗದ್ದೆ ಎನ್ನುವಂತ ಪ್ರದೇಶವನ್ನು ತಲುಪಿದ್ದು ನಮ್ಮ ಅರಿವಿಗೆ ಬಂದಿರಲಿಲ್ಲ. ನಂತರ ನಾವು ಹೋಗಿರುವ 9 ಮಂದಿ ರಾತ್ರಿ ಟೆಂಟ್ ನ ಮೂಲಕ ಉಳಿದುಕೊಂಡೆವು.

ಮರುದಿನ ಪುನಃ ಬೇಗನೆ ಚಾರಣ ಆರಂಭ ಮಾಡಿದೆವು. ಈ ಹಿಂದೆ ದಟ್ಟ ಅರಣ್ಯದ ಮಧ್ಯೆಯಿಂದ ಕಲ್ಲಿನ ಸಾಹಸದ ದಾರಿ ದಾಟಿದ ನಮಗೆ ನಂತರ ಕಂಡಿದ್ದು ಹಚ್ಚಹಸಿರಿನಿಂದ ಕೂಡಿದ ಹುಲ್ಲುಗಾವಲಿನ ನಡುವೆಯ ದಾರಿ. ಸುತ್ತಲೂ ಸ್ವರ್ಗಮಯವಾದಂತಹ ಪ್ರಕೃತಿಯ ಸುಂದರ ನೋಟ ಇಂಪಾಗಿ ಕೇಳುವ ಪಕ್ಷಿಗಳ ಚಿಲಿಪಿಲಿ ಕಲರವ. ಪ್ರಕೃತಿಯನ್ನು ಬೆಚ್ಚಗೆ ಹೊದ್ದುಕೊಂಡಿರುವ ಮಂಜಿನ ಹನಿಗಳು ಇವೆಲ್ಲವನ್ನು ಸವಿಯುತ್ತಾ ಅಲ್ಲಲ್ಲಿ ಕೆಲವೊಮ್ಮೆ ವಿಶ್ರಾಂತಿ ಪಡೆದು ಒಂದೊಂದೇ ಬೆಟ್ಟವನ್ನು ಹತ್ತಲಾರಂಬಿಸಿದೆವು. ನಮಗೆ ಆಶ್ಚರ್ಯವಾಗುವಂತೆ ಮುಂದೆ ಸಾಗಲು ಪ್ರಾರಂಭಿಸಿದೆವು.

ಹೇಗೂ ಕೊನೆಗೆ ಸವಾಲೆನಿಸಿದ ಪರ್ವತದ ಕೊನೆಯ ಘಟ್ಟವನ್ನು ತಲುಪುತ್ತಿದ್ದಂತೆ ಎಲ್ಲಿಲ್ಲದ ತಂಪಾದ ಗಾಳಿ ನಮ್ಮೆಡೆಗಿ ಬೀಸಿ ನಮ್ಮ ದಣಿವನ್ನು ನೀಗಿಸಿದಂತಾಯಿತು. ಕೊನೆಗೂ ತುತ್ತ ತುದಿಯಿಂದ ಪ್ರಕೃತಿ ನೋಟವನ್ನು ಕಣ್ತುಂಬಿಕೊಳ್ಳುವ ಮಜವೇ ಬೇರೆಯಾಗಿತ್ತು. ಆ ಅನುಭವ ಇನ್ನು ನನ್ನಮನಸಿನಲ್ಲಿ ಅಚ್ಚು ಹೊಡೆದಂತಿದೆ.

ಇದಂತ್ತು ನನ್ನ ಜೀವನದಲ್ಲಿ ಹೊಸ ಅನುಭವವನ್ನು ಕೊಟ್ಟ ಚಾರಣ ಹಾಗೂ ಇನ್ನಷ್ಟು ಹುರುಪನ್ನು ನೀಡಿದ ವಿಶೇಷವಾದ ಚಾರಣವೆಂದರೆ ತಪ್ಪಾಗಲಾರದು.

ಚರಿಷ್ಮ ಕಾನವು

ಎಸ್.ಡಿ.ಎಂ ಉಜಿರೆ

ಟಾಪ್ ನ್ಯೂಸ್

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

Mangaluru-BjP

Nagamangala Riots: ಕದ್ರಿ: ಗಣೇಶೋತ್ಸವ ಸಮಿತಿಗಳ ಒಕ್ಕೂಟದಿಂದ ಪ್ರತಿಭಟನೆ

udUdupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

Udupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

PROTEST

Udupi: ನಾಗಮಂಗಲ ಘಟನೆ ಖಂಡಿಸಿ ವಿವಿಧೆಡೆ ಪ್ರತಿಭಟನೆ

Tulunadu-utsava

Mangaluru: ತುಳುನಾಡ ಉತ್ಸವ ಪಿಲಿಕುಳ ಕಂಬಳ: ಬೆಂಗಳೂರಿನಲ್ಲಿ ಸಭೆ

police

Udupi: ನಾಪತ್ತೆಯಾಗಿದ್ದ ಬಾಲಕನ ರಕ್ಷಣೆ, ಮಕ್ಕಳ ರಕ್ಷಣ ಘಟಕಕ್ಕೆ ಹಸ್ತಾಂತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Oline Classes

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

Ready to ride space pod

ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

18-11

ಮನಸ್ಸಿನ ಮಾತು… ವಿಷಾದದ ಪಕ್ಕದಲ್ಲೇ ಆನಂದ ಇದೆ..!

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

congress

Haryana ಚುನಾವಣೆ: 89 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಣಕ್ಕೆ, ಸಿಪಿಎಂಗೆ 1 ಸ್ಥಾನ

suicide (2)

Kanpur:ಮಹಿಳೆಯ ಬೆತ್ತಲೆ, ರುಂಡವಿಲ್ಲದ ಮೃತದೇಹ ಪತ್ತೆ

1bbb

Baahubali; ನೆರೆ ನೀರಲ್ಲಿ ತಲೆ ಮೇಲೆ ಬೈಕ್‌ ಹೊತ್ತು ನಡೆದ ‘ಬಾಹುಬಲಿ’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.