ಮತಗಳಿಗೆ ಹೆದರಿ ನಿಯಮಗಳಿಗೆ ತಿದ್ದುಪಡಿ

ಯಥಾ ಪ್ರಜಾ, ತಥಾ ರಾಜ

Team Udayavani, Sep 23, 2019, 5:35 AM IST

rules

ದೇಶದ ರಸ್ತೆಗಳನ್ನು ಹೆಚ್ಚು ಸುರಕ್ಷಿತ ಮತ್ತು ಶಿಸ್ತುಬದ್ಧವಾಗಿಸಬೇಕು ಎಂಬ ಆಶಯದಿಂದ ರೂಪಿಸಲಾಗಿದ್ದ ಹೊಸ ಸಾರಿಗೆ ನಿಯಮವನ್ನು ಕರ್ನಾಟಕದಲ್ಲೂ ದುರ್ಬಲಗೊಳಿಸಲಾಗಿದೆ. ಹೊಸ ನಿಯಮದಲ್ಲಿ ಇದ್ದ ದಂಡದ ಮೊತ್ತಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರ ಅಧಿಸೂಚನೆ ಮೂಲಕ ಕೆಲವು ದಂಡದ ಮೊತ್ತಗಳನ್ನು ಕಡಿಮೆ ಮಾಡಿದೆ. ಇದಕ್ಕೂ ಮೊದಲು ಗುಜರಾತ್‌ನಲ್ಲೂ ಇದೇ ಮಾದರಿಯಲ್ಲಿ ಕೆಲವು ದಂಡಗಳನ್ನು ಕಡಿತಗೊಳಿಸಲಾಗಿತ್ತು. ಕರ್ನಾಟಕಕ್ಕೆ ಗುಜರಾತ್‌ ಸರಕಾರ ಕೈಗೊಂಡ ಕ್ರಮವೇ ಮಾದರಿಯಾಯಿತು. ವಿಪಕ್ಷಗಳ ಆಳ್ವಿಕೆಯಿರುವ ರಾಜಸ್ಥಾನ, ಮಧ್ಯ ಪ್ರದೇಶ ಸೇರಿ ಕೆಲವು ರಾಜ್ಯಗಳು ಜನರಿಗೆ ಸಮಸ್ಯೆಯಾ ಗಬಹುದು ಎಂಬ ನೆಪ ಹೇಳಿ ಹೊಸ ಕಾನೂನನ್ನು ಅನುಷ್ಠಾನಿಸಲೇ ಇಲ್ಲ.

ಒಂದು ಉತ್ತಮ ಬದಲಾವಣೆಗೆ ಕಾರಣವಾಗಬಹುದಾಗಿದ್ದ ಕಾನೂನನ್ನು ಯಾವ ರೀತಿ ನಿಷ್ಪ್ರಯೋಜಕಗೊಳಿಸಬಹುದು ಎನ್ನುವುದಕ್ಕೆ ವಿವಿಧ ರಾಜ್ಯ ಸರಕಾರಗಳು ಕೈಗೊಂಡಿರುವ ಈ ಕ್ರಮವೇ ಸಾಕ್ಷಿ. ಹೊಸ ಕಾನೂನಿನಲ್ಲಿ ದಂಡದ ಮೊತ್ತ ವಿಪರೀತವಾಗಿತ್ತು ಎನ್ನುವುದು ನಿಜ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿತ್ತು ಎನ್ನುವುದು ನಿಜವೇ.ಹೀಗಾಗಿ ದಂಡದ ಮೊತ್ತವನ್ನು ತುಸು ಇಳಿಕೆ ಮಾಡಿದ್ದು ಸರಿಯಾದ ಕ್ರಮವೇ. ಆದರೆ ಈ ಮೂಲಕ ಸರಕಾರ ಜನರಿಗೆ ನೀಡುವ ಸಂದೇಶ ಮಾತ್ರ ಭವಿಷ್ಯದಲ್ಲಿ ಪ್ರತಿಕೂಲ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ. ಏನನ್ನೇ ಆದರೂ ದೊಡ್ಡ ಬಾಯಿಯಲ್ಲಿ ವಿರೋಧಿಸಿದರೆ ಅದೆಷ್ಟೇ ಒಳ್ಳೆಯದೇ ಆಗಿದ್ದರೂ ಸರಕಾರ ಮಣಿಯುತ್ತದೆ ಎಂಬ ಸಂದೇಶ ಈ ನಿರ್ಧಾರದಿಂದ ರವಾನೆಯಾಗುವ ಅಪಾಯವಿದೆ.

ಸೂಕ್ಷ್ಮವಾಗಿ ಗಮನಿಸಿದರೆ ಸರಕಾರಗಳು ಹೆದರಿದ್ದು ಜನರ ಅಭಿಪ್ರಾಯಗಳಿಗೆ ಅಲ್ಲ. ಬದಲಾಗಿ ಕೈತಪ್ಪಿ ಹೋಗಬಹುದಾದ ಮತಗಳಿಗೆ ಎನ್ನುವುದು ಅರಿವಾಗುತ್ತದೆ. ಇದರಲ್ಲಿ ವಿಪಕ್ಷಗಳ ಬೇಜವಾಬ್ದಾರಿತನವೂ ಇದೆ. ಭಾರೀ ದಂಡದ ಮೂಲಕ ಬಡವರನ್ನು ಶೋಷಿಸಲಾಗುತ್ತಿದೆ. ದಂಡದಿಂದಾಗಿ ಬಡಪಾಯಿ ಜನರ ಹೆಂಡತಿ ಮಕ್ಕಳು ಉಪವಾಸ ಮಲಗುವ ಸ್ಥಿತಿ ಸೃಷ್ಟಿಯಾಗಿದೆ. ಇದು ಭೀಕರ, ಕರಾಳ ಶಾಸನ ಎಂಬ ನಂಬಿಕೆಯನ್ನು ಹುಟ್ಟಿಸುವಲ್ಲಿ ವಿಪಕ್ಷಗಳು ಸಫ‌ಲವಾಗಿದ್ದವು.ಜತೆಗೆ ಸ್ಕೂಟರ್‌ ಸವಾರನಿಗೆ 15,000 ರೂ. ದಂಡ ಹಾಕಿದ್ದು, ಲಾರಿ ಚಾಲಕನಿಗೆ 6 ಲ. ರೂ. ದಂಡ ಹಾಕಿದಂಥ ಸುದ್ದಿಗಳು ಅತಿರಂಜಿತವಾಗಿ ವರದಿಯಾದವು. ಎಲ್ಲರೂ ಚರ್ಚಿಸಿದ್ದು ವಿಪರೀತ ದಂಡದ ಮೊತ್ತದ ಬಗ್ಗೆಯೇ ಹೊರತು ಅದರ ಉದ್ದೇಶ ಹಾಗೂ ಭವಿಷ್ಯದಲ್ಲಿ ಅದು ಬೀರಬಹುದಾದ ಪರಿಣಾಮದ ಬಗ್ಗೆ ಅಲ್ಲ. ಎಲ್ಲ ದಾಖಲೆಪತ್ರಗಳನ್ನು ಸರಿಯಾಗಿಟ್ಟುಕೊಂಡು, ಸಂಚಾರ ನಿಯಮಗಳನ್ನೆಲ್ಲ ಸಮರ್ಪಕವಾಗಿ ಪಾಲಿಸಿದರೆ ಯಾಕಾದರೂ ಪೊಲೀಸರು ದಂಡ ಹಾಕುತ್ತಾರೆ ಎಂದು ಯಾರೂ ಕೇಳಲೂ ಇಲ,É ಹೇಳಲೂ ಇಲ್ಲ.

ಈ ಸಂದರ್ಭದಲ್ಲಿ ವರ್ಷಕ್ಕೆ ರಸ್ತೆ ಅಪಘಾತವೊಂದಕ್ಕೆ 1.5 ಲಕ್ಷ ಜನರು ಬಲಿಯಾಗುತ್ತಾರೆ, 5 ಲಕ್ಷದಷ್ಟು ಮಂದಿ ಅಂಗವಿಕಲರಾಗುತ್ತಾರೆ ಎಂಬಿತ್ಯಾದಿ ಬೆಚ್ಚಿಬೀಳಿಸುವ ಅಂಕಿಅಂಶಗಳು ಯಾರಿಗೂ ಮುಖ್ಯ ಎಂದೆನಿಸಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯಡಿಯಲ್ಲಿ 2020ಕ್ಕಾಗುವಾಗ ರಸ್ತೆ ಅಪಘಾತಗಳನ್ನು ಶೇ. 50 ಕಡಿಮೆಗೊಳಿಸುವ ಬದ್ಧತೆಗೆ ಭಾರತ ಅಂಕಿತ ಹಾಕಿದೆ. ಈ ಗುರಿಯನ್ನು ಸಾಧಿಸಲು ಹೊಸ ಸಾರಿಗೆ ನಿಯಮ ಪೂರಕವಾಗಿತ್ತು.

ನಮ್ಮ ದೇಶದಲ್ಲಿ ರಸ್ತೆಗಳು ಹೊಂಡಗುಂಡಿಗಳಿಂದ ಕೂಡಿದೆ, ಅವೈಜ್ಞಾನಿಕವಾಗಿ ರಸ್ತೆಗಳನ್ನು ನಿರ್ಮಿಸುತ್ತಾರೆ, ನಿಯಮ ಅನುಷ್ಠಾನಕರು ಚಾಲಕರನ್ನು ಪೀಡಿಸುತ್ತಾರೆ ಎಂಬಿತ್ಯಾದಿ ಕಾರಣಗಳನ್ನು ವಿಪರೀತ ದಂಡದ ಮೊತ್ತವನ್ನು ವಿರೋಧಿಸಲು ಬಳಸಿಕೊಳ್ಳಲಾಗಿದೆ. ನಮ್ಮ ರಸ್ತೆಗಳು ಸರಿಯಿಲ್ಲ, ಕೆಲವೊಮ್ಮೆ ನಿಯಮ ಅನುಷ್ಠಾನಕರೇ ನಿಯಮಗಳನ್ನು ಮುರಿಯುತ್ತಾರೆ ಎನ್ನುವುದೆಲ್ಲ ನಿಜವೇ. ಹಾಗೆಂದು ಇದು ನಾವು ನಿಯಮ ಉಲ್ಲಂ ಸಲು ನೆಪವಾಗಬಾರದು. ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಸರಿಯಾದ ರಸ್ತೆ ನಿರ್ಮಿಸಿಕೊಡಿ ಎಂದು ಕೇಳುವ ನಮ್ಮ ನೈತಿಕ ಧ್ವನಿಗೆ ಇನ್ನಷ್ಟು ಬಲ ಬರುತ್ತಿತ್ತು.ಆದರೆ ಜನರಿಗೆ ನಿಯಮ ಪಾಲನೆಯ ಅಗತ್ಯವಿಲ್ಲ ಎಂದಾದರೆ ಆಳುವವರು ಏಕೆ ತಲೆಕೆಡಿಕೊಳ್ಳುತ್ತಾರೆ. ಪ್ರಜಾಪ್ರಭುತ್ವದಲ್ಲಿ ಯಥಾ ಪ್ರಜಾ ತಥಾ ರಾಜ ಅಲ್ಲವೆ? ನಾವು ಹೇಗಿರುತ್ತೇವೋ ಅದೇ ರೀತಿ ನಮ್ಮನ್ನು ಆಳುವವರು ಇರುತ್ತಾರೆ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Supreme Court: ವರದಕ್ಷಿಣೆ ತಡೆ ಕಾಯ್ದೆ ದುರ್ಬಳಕೆ ಸುಪ್ರೀಂ ಸಲಹೆಗಳು ಸಮುಚಿತ

Supreme Court: ವರದಕ್ಷಿಣೆ ತಡೆ ಕಾಯ್ದೆ ದುರ್ಬಳಕೆ ಸುಪ್ರೀಂ ಸಲಹೆಗಳು ಸಮುಚಿತ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.