ಚೀನಿ ಆ್ಯಪ್‌ಗಳ ನಿಷೇಧ ಸ್ಪಷ್ಟ ಸಂದೇಶ


Team Udayavani, Jul 1, 2020, 5:57 AM IST

ಚೀನಿ ಆ್ಯಪ್‌ಗಳ ನಿಷೇಧ ಸ್ಪಷ್ಟ ಸಂದೇಶ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಭಾರತ ಮತ್ತು ಚೀನ ನಡುವೆ ಗಡಿ ಭಾಗದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವ ವೇಳೆಯಲ್ಲೇ ಭಾರತವು ಚೀನಕ್ಕೆ ಸ್ಪಷ್ಟ ಸಂದೇಶ ಕಳುಹಿಸಲಾರಂಭಿಸಿದೆ.

ಈಗ ದೇಶವು ಚೀನದ 59 ಆ್ಯಪ್‌ಗಳನ್ನು ನಿಷೇಧಿಸುವ ಮೂಲಕ ಚೀನಕ್ಕೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದೆ.

ಇಂಥದ್ದೊಂದು ದಿಟ್ಟ ಹೆಜ್ಜೆ ಅತ್ಯಗತ್ಯವಾಗಿತ್ತು ಎನ್ನುವುದು ನಿರ್ವಿವಾದ. ಚೀನ ಒಂದೆಡೆಯಿಂದ ಭಾರತಕ್ಕೆ ಗಡಿಭಾಗದಲ್ಲಿ ತೊಂದರೆಯುಂಟುಮಾಡುತ್ತಲೇ ಇನ್ನೊಂದೆಡೆಯಿಂದ ತನ್ನ ಆರ್ಥಿಕ ಬಾಹುಗಳನ್ನು ಭಾರತಾದ್ಯಂತ ಚಾಚಿದೆ.

ಇಂದು ದೇಶದಲ್ಲಿ ಪ್ಲಾಸ್ಟಿಕ್‌ ಸಾಮಗ್ರಿಗಳಿಂದ ಹಿಡಿದು ಆ್ಯಪ್‌ಗಳವರೆಗೆ ಮೊಬೈಲ್‌ ಫೋನುಗಳಿಂದ ಹಿಡಿದು ಔಷಧ ವಲಯದವರೆಗೆ ಚೀನ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದೆ. ಯಾವ ಮಟ್ಟಕ್ಕೆಂದರೆ, ಭಾರತದ ಪ್ರಮುಖ ಯೂನಿಕಾರ್ನ್ ಸ್ಟಾರ್ಟ್‌­­­­­­­­ಅಪ್‌ಗಳಲ್ಲೂ ಚೀನದ ಹೂಡಿಕೆಯಿದೆ.

ಆದಾಗ್ಯೂ ಭದ್ರತೆ, ಡೇಟಾ ಸುರಕ್ಷತೆಯ ದೃಷ್ಟಿಯಿಂದ ಭಾರತ ಸರಕಾರ ಈ ನಡೆಗೆ ಮುಂದಾಗಿದೆಯಾದರೂ, ಇದನ್ನು ಚೀನ ಸರಕಾರದ ಉದ್ಧಟತನಕ್ಕೆ ನೀಡಲಾಗುತ್ತಿರುವ ಸಂದೇಶ ಎಂದೇ ವಿಶ್ಲೇಷಕರು ಹೇಳುತ್ತಿದ್ದಾರೆ.

ಭಾರತ ಸರಕಾರದ ಈ ಕ್ರಮದ ಅನಂತರ, ನಿಷೇಧಕ್ಕೊಳಗಾಗಿರುವ ಚೀನದ ಆ್ಯಪ್‌ಗಳು ಸ್ಪಷ್ಟನೆ ನೀಡಲಾರಂಭಿಸಿವೆ. ಅದರಲ್ಲೂ ಭಾರತದಲ್ಲಿ ಜನಪ್ರಿಯವಾಗಿದ್ದ ಟಿಕ್‌ಟಾಕ್‌ ಸಂಸ್ಥೆ, ತಾನು ಭಾರತೀಯರ ಡೇಟಾವನ್ನು ಚೀನ ಆಡಳಿತ ಸೇರಿದಂತೆ, ಯಾವುದೇ ಸರಕಾರದೊಂದಿಗೂ ಹಂಚಿಕೊಂಡಿಲ್ಲ.

ಭಾರತೀಯ ಕಾನೂನಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದೆ. ಆ್ಯಪ್‌ ನಿಷೇಧವೆನ್ನುವುದು ಚಿಕ್ಕ ನಡೆಯೇನೂ ಅಲ್ಲ ಎನ್ನುವುದನ್ನು ಗಮನಿಸಬೇಕು. ಏಕೆಂದರೆ ಬಹುಕೋಟಿ ಉದ್ಯಮ.

ಟಿಕ್‌ ಟಾಕ್‌ನ ಮಾತೃಸಂಸ್ಥೆ ಬೈಟ್‌ ಡ್ಯಾನ್ಸ್‌ನಂಥ ಕಂಪೆನಿಗಳು ಈ ರೀತಿಯ ಆ್ಯಪ್‌ಗಳ ಮೂಲಕ ಸಹಸ್ರಾರು ಕೋಟಿ ರೂಪಾಯಿ ಲಾಭ ಮಾಡಿಕೊಳ್ಳುತ್ತಿವೆ.  ಭಾರತ ಸೇರಿದಂತೆ ಜಗತ್ತಿನಾದ್ಯಂತ ಆ್ಯಪ್‌ ಆರ್ಥಿಕತೆಯ ವ್ಯಾಪ್ತಿ ಅಗಾಧವಾಗಿ ವಿಸ್ತರಿಸುತ್ತಲೇ ಸಾಗಿದೆ.

ಆದರೆ ಇದೇ ವೇಳೆಯಲ್ಲೇ ದೇಶದ ಹಿತದೃಷ್ಟಿಯಿಂದ ಬಹುಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳುವುದೂ ಅಗತ್ಯವಾಗುತ್ತದೆ. ಆತ್ಮನಿರ್ಭರತೆಯೆಡೆಗಿನ ಪಯಣದಲ್ಲಿ ಈ ರೀತಿಯ ನಿರ್ಣಯಗಳು ಅಗತ್ಯ ಎನ್ನುವುದನ್ನು ನಾವು ಮನಗಾಣಬೇಕು.

ಆದಾಗ್ಯೂ, ಆ್ಯಪ್‌ಗಳನ್ನು ನಿಷೇಧಿಸಬಹುದು ಆದರೆ ಚೀನದ ಮೊಬೈಲ್‌ಗಳು ಇವೆಯಲ್ಲ ಎಂಬ ವಾದವೂ ಕೇಳಿಬರುತ್ತಿದೆ. ಈ ನಿಟ್ಟಿನಲ್ಲೂ ದೇಶ ಸ್ವಾವಲಂಬನೆಯ ಹಾದಿಯಲ್ಲಿ ಸಾಗಬೇಕಾದ ಅಗತ್ಯವಿದ್ದು, ಅತ್ಯುನ್ನತ ಗುಣಮಟ್ಟದ ಬ್ರಾಂಡ್‌ಗಳು ನಮ್ಮಲ್ಲೇ ತಯಾರಾದರೆ ನಿಸ್ಸಂಶಯವಾಗಿಯೂ ಗ್ರಾಹಕರು ಭಾರತೀಯ ಪ್ರಾಡಕ್ಟ್ ಗಳನ್ನೇ ತೆಗೆದುಕೊಳ್ಳಲು ವಿಚಾರ ಮಾಡುವುದಿಲ್ಲ.

ದೇಶದಲ್ಲಿ ಕೌಶಲದ ಕೊರತೆಯೇನೂ ಇಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವವೇ ನಿಬ್ಬೆರಗಾಗುವಂತೆ ನಾವು ಮುನ್ನಡೆಯುತ್ತಿದ್ದೇವೆ. ಇಂಥ ಸಮಯದಲ್ಲಿ ಆವಿಷ್ಕಾರಗಳ ಪ್ರಮಾಣವೂ ಅಧಿಕವಾಗಬೇಕಾದ ಅಗತ್ಯವಿರುತ್ತದೆ.

ಚೀನದ ಆ್ಯಪ್‌ಗಳಿಗೆ ಸವಾಲೊಡ್ಡುವಂಥ ಆ್ಯಪ್‌ಗಳಾಗಲಿ, ಉತ್ಪನ್ನಗಳಾಗಲಿ ನಮ್ಮಲ್ಲೇ ನಿರ್ಮಾಣವಾಗಲೇಬೇಕು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯೆಂದರೆ, ಇಂಥ ಕ್ಷೇತ್ರಗಳಲ್ಲಿ ಮತ್ತೂಂದು ದೇಶದ ಮೇಲಿನ ಅವಲಂಬನೆಯನ್ನು ತಗ್ಗಿಸುವತ್ತ ಸಾಗುವುದು.

ಟಾಪ್ ನ್ಯೂಸ್

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

Tiger-Hunasuru

Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

1-ammi

J&K Assembly polls; ಈಗ ಪಾಕಿಸ್ಥಾನವು ಮೋದಿಗೆ ಹೆದರುತ್ತಿದೆ: ಅಮಿತ್ ಶಾ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

subharamaya-Swamiji

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ಪದಾರ್ಥಗಳ ಬಳಕೆ: ಸುಬ್ರಹ್ಮಣ್ಯ ಸ್ವಾಮೀಜಿ ಕಳವಳ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

R Ashok (2)

BJP; ವಿಪಕ್ಷ ನಾಯಕ ಆರ್‌. ಅಶೋಕ್‌ ನಡೆಗೆ ಕಾಂಗ್ರೆಸ್‌ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.