ಹಿಂದಿರುಗುತ್ತಿರುವ ವಲಸೆ ಕಾರ್ಮಿಕರು! ಕಷ್ಟಕ್ಕೆ ಕೂಡಲೇ ಸ್ಪಂದಿಸಿ


Team Udayavani, Mar 30, 2020, 12:06 PM IST

ಹಿಂದಿರುಗುತ್ತಿರುವ ವಲಸೆ ಕಾರ್ಮಿಕರು! ಕಷ್ಟಕ್ಕೆ ಕೂಡಲೇ ಸ್ಪಂದಿಸಿ

ಕೋವಿಡ್ 19 ಸೋಂಕು ತಡೆಗಟ್ಟಲು ಜಾರಿಗೆ ತರಲಾಗಿರುವ 21 ದಿನಗಳ ಲಾಕ್‌ ಡೌನ್‌, ವಲಸಿಗ ಕಾರ್ಮಿಕರು ಮತ್ತು ಬಡವರ ಪಾಲಿಗೆ ದೊಡ್ಡ ಸಂಕಷ್ಟವಾಗಿ ಬದಲಾಗಿದೆ. ಅದರಲ್ಲೂ ಮಹಾನಗರಗಳಿಗೆ ದುಡಿಮೆಗಾಗಿ ಹಳ್ಳಿ – ಪಟ್ಟಣಗಳಿಂದ ವಲಸೆ ಹೋಗಿದ್ದವರೆಲ್ಲ, ಈಗ ಸಾಗರೋಪಾದಿಯಲ್ಲಿ ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದಾರೆ. ಬಹುತೇಕ ರಾಜ್ಯಗಳು ಅಂತಾರಾಜ್ಯ ಸಂಚಾರವನ್ನು ನಿಲ್ಲಿಸಿರುವುದರಿಂದ ಈಗ ಈ ವರ್ಗ ಗುಂಪು ಗುಂಪಾಗಿ ನಡಿಗೆಯಲ್ಲೇ ನೂರಾರು ಕಿಲೋ ಮೀಟರ್‌ ಸಂಚರಿಸುತ್ತಿದೆ. ರಾಜ್ಯದ ಒಳಗೂ ಈ ರೀತಿಯ ಚಿತ್ರಣ ವರದಿಯಾಗುತ್ತಲೇ ಇದೆ.

ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡು ದಿನದಿಂದ ನಡೆದ
ಘಟನಾವಳಿಗಳು ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಅಡಚಣೆಯಾಗಿ
ಪರಿಣಮಿಸಿದೆ. ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ, ಇತರೆ
ರಾಜ್ಯಗಳ ವಲಸೆ ಕೆಲಸಗಾರರು ತಮ್ಮ ಊರುಗಳಿಗೆ ಕಿಕ್ಕಿರಿದ ಸಂಖ್ಯೆಯಲ್ಲಿ
ಹಿಂದಿರುಗಲಾರಂಭಿಸಿದ್ದಾರೆ. ಕೆಲ ದಿನಗಳ ಹಿಂದೆ ದೆಹಲಿಯ ಸರ್ಕಾರಿ ಬಸ್‌ಸ್ಟಾಂಡುಗಳಲ್ಲಿ ಸಾವಿರಾರು ಜನರು ಸೋಂಕಿನ ಭಯವಿಲ್ಲದೇ ಕಿಕ್ಕಿರಿದು ತುಂಬಿದ್ದ ದೃಶ್ಯಗಳು ಭಯ ಹುಟ್ಟಿಸುವಂತಿದ್ದವು. ಊರು ಸೇರಿದರೆ ಸಾಕೆಂಬ ಚಿಂತೆಯಲ್ಲಿ ಬಸ್ಸುಗಳ ಒಳಗೆ ಹಾಗೂ ಟಾಪ್‌ನ ಮೇಲೆ ಹತ್ತಿ ಕೂತ ಇವರೆಲ್ಲರ ಮುಖದಲ್ಲಿ ಆತಂಕವೂ, ಅಸಹಾಯಕತೆಯೂ ತುಂಬಿ ತುಳುಕುತ್ತಿತ್ತು.

ಆದಾಗ್ಯೂ ಈಗ ದೆಹಲಿ ಮತ್ತು ಇತರೆ ರಾಜ್ಯಗಳ ನಡುವಿನ ಬಸ್‌ ಸಂಚಾರವನ್ನು ನಿಲ್ಲಿಸಲಾಗಿದೆಯಾದರೂ, ಆಗಬೇಕಾದ ಅನಾಹುತ ಆಗಿಹೋಗಿರಲೂಬಹುದು. ಈಗ ಜನ ಕಾಲ್ನಡಿಗೆಯಲ್ಲೇ ಸುಡುವ ಬಿಸಿಲಲ್ಲಿ, ನೀರು, ಆಹಾರವಿಲ್ಲದೇ ಊರಿಗೆ ತೆರಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ರಾಜ್ಯಗಳ ಗಡಿಗಳನ್ನು ಮುಚ್ಚಬೇಕು ಮತ್ತು ವಲಸಿಗ ಕಾರ್ಮಿಕರಿಗೆ ಅವರು ಇರುವ ಜಾಗದಲ್ಲೇ ಆಹಾರ, ಹಣ ನೀಡುವ ವ್ಯವಸ್ಥೆಯನ್ನು ಖಾತ್ರಿ ಪಡಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಹೇಳಿದೆ. ಮೇಲ್ನೋಟಕ್ಕೆ, ಈ ಪ್ರಮಾಣದಲ್ಲಿ ಜನ ಸೋಂಕಿನ ಬಗ್ಗೆ ಚಿಂತಿಸದೇ ಗುಂಪುಗಟ್ಟಿ ಊರು ತೊರೆಯುತ್ತಿರುವುದು ಅಸಡ್ಡೆಯಂತೆ ಕಾಣಿಸಬಹುದು. ಆದರೆ ಇದರ ಹಿಂದೆ ಅತೀವ ಅಸಹಾಯಕತೆ ಅಡಗಿದೆ.

ಕೆಲಸವಿಲ್ಲದೇ, ಊಟವಿಲ್ಲದೇ, ಭವಿಷ್ಯದ ದಿಕ್ಕು ತೋಚದೆ ಈ ವರ್ಗ ಕಂಗಾಲಾಗಿದೆ. ಕಟ್ಟಡ ಕಾಮಗಾರಿಗಳಿಂದ ಹಿಡಿದು, ಈ ವರ್ಗಕ್ಕೆ ಆಸರೆಯಾಗಿದ್ದ ಕೆಲಸಗಳೆಲ್ಲ ನಿಂತುಹೋಗಿವೆ. ಇವರನ್ನು ಕೇಳುವವರೇ ಇಲ್ಲವಾಗಿದೆ. ಆದಾಗ್ಯೂ, ಇದನ್ನು ಗಮನದಲ್ಲಿಟ್ಟುಕೊಂಡೇ ಇತ್ತೀಚೆಗೆ ಕೇಂದ್ರ ಸರಕಾರ 1.7 ಲಕ್ಷ ಕೋಟಿ ರೂಪಾಯಿ ಬೃಹತ್‌ ಪ್ಯಾಕೇಜು ಘೋಷಿಸಿದೆಯಾದರೂ, ಈ ಸಹಾಯವು ಫ‌ಲಾನುಭವಿಗಳಿಗೆ ತಲುಪಲು ಸಮಯ ಹಿಡಿಯಬಹುದು. ಹಾಗೆಂದು, ಇದು ಕೇವಲ ಕೇಂದ್ರ ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ… ರಾಜ್ಯ ಸರ್ಕಾರಗಳು ಹಾಗೂ ಉದ್ಯೋಗದಾತರೂ ಕೂಡ ಬಡ ವರ್ಗಕ್ಕೆ ಆಹಾರ ಮತ್ತು ಆರ್ಥಿಕ ಸಹಾಯವನ್ನು ನೀಡಲೇಬೇಕಿದೆ.

ಇದು ಮಾನವೀಯ ದೃಷ್ಟಿಯಿಂದ ಹಾಗೂ ವೈದ್ಯಕೀಯ ದೃಷ್ಟಿಯಿಂದ ತುರ್ತಾಗಿ ಆಗಲೇಬೇಕಾದ ಕೆಲಸ. ಕೊರೊನಾ ಸೋಂಕು ನಗರಗಳಿಂದ ಗ್ರಾಮಗಳಿಗೆ ಹರಡಲಾರಂಭಿಸಿಬಿಟ್ಟರೆ, ದೇಶ ಮತ್ತೆ ಎದ್ದು ನಿಲ್ಲುವುದೇ ಕಷ್ಟವಾಗಿಬಿಡುತ್ತದೆ. ಹೀಗಾಗಿ, ಈ ವಿಚಾರದಲ್ಲಿ ಅಸಡ್ಡೆ ಮಾಡುವುದು ಯಾವ ರೀತಿಯಿಂದಲೂ ಸರಿಯಲ್ಲ. ಕೂಡಲೇ ಕರ್ನಾಟಕ ಸರ್ಕಾರವೂ ಈ ವಿಚಾರದಲ್ಲಿ ಕಾರ್ಯೋನ್ಮುಖಆಗಲಿ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health-insure

GST Revise: ಆರೋಗ್ಯ ವಿಮೆ ಪ್ರಯೋಜನ ಜನಸಾಮಾನ್ಯರಿಗೂ ಕೈಗೆಟುಕಲಿ

Raichuru-Manvi

Raichuru Accident: ಶಾಲಾ ಬಸ್‌: ಬೇಜವಾಬ್ದಾರಿ ಚಾಲನೆಗೆ ಕಠಿನ ಕ್ರಮ ಅಗತ್ಯ

ಬಂಡುಕೋರರೊಂದಿಗೆ ಸಂಧಾನ ಫ‌ಲಿಸಿದ ಕೇಂದ್ರದ ಪ್ರಯತ್ನ

ಬಂಡುಕೋರರೊಂದಿಗೆ ಸಂಧಾನ ಫ‌ಲಿಸಿದ ಕೇಂದ್ರದ ಪ್ರಯತ್ನ

CBi

Investigation Agency: ಸಿಬಿಐ ಪ್ರಕರಣಗಳು ತ್ವರಿತ ವಿಲೇವಾರಿಯಾಗಲಿ

Film

South India Film Industry: ಸಿನೆಮಾ ರಂಗ ಕಳಂಕ ಮುಕ್ತವಾಗಲಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.