ಭಾರತದ ಬಗ್ಗೆ ನೇಪಾಲದ ಅಪಸ್ವರ ವಿವಾದ ಬಗೆಹರಿಯಲಿ


Team Udayavani, May 21, 2020, 6:04 AM IST

ಭಾರತದ ಬಗ್ಗೆ ನೇಪಾಲದ ಅಪಸ್ವರ ವಿವಾದ ಬಗೆಹರಿಯಲಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕಳೆದ ಕೆಲವು ದಿನಗಳಿಂದ ಭಾರತ ಮತ್ತು ನೇಪಾಲದ ನಡುವಿನ ಸಂಬಂಧದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿಬಿಟ್ಟಿದೆ.

ಅದರಲ್ಲೂ ಲಿಂಪಿಯಾಧುರಾ, ಲಿಪುಲೇಖ್‌ ಮತ್ತು ಕಾಲಾಪಾನಿ ಪ್ರದೇಶಗಳ ವಿಚಾರವಾಗಿ ಎರಡೂ ದೇಶಗಳ ನಡುವಿನ ವಿವಾದ ಹೆಚ್ಚಾಗಲಾರಂಭಿಸಿದೆ.

ನೇಪಾಲವು ಹೊಸ ನಕ್ಷೆಯನ್ನು ಜಾರಿಗೊಳಿಸುವ ಘೋಷಣೆ ಮಾಡುತ್ತಿದ್ದಂತೆಯೇ, ಆ ದೇಶದ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಒಲಿ ಕೂಡ ಭಾರತದ ಮೇಲೆ ಹರಿಹಾಯ್ದಿದ್ದಾರೆ.

ಭೂ ವಿವಾದವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು “ಭಾರತ ಸತ್ಯಮೇವ ಜಯತೇ’ ಎಂಬುದಕ್ಕೆ ವಿರುದ್ಧವಾಗಿ ಹೋಗಬಾರದು ಎಂದು ಎಚ್ಚರಿಸಿದ್ದಾರೆ. ಇದಷ್ಟೇ ಅಲ್ಲದೇ, ಚೀನದ ಕೋವಿಡ್ ಗಿಂತಲೂ ಕ್ಕಿಂತಲೂ ಭಾರತದ ಕೋವಿಡ್ ಅಪಾಯಕಾರಿ ಎಂದು ಕೊಂಕು ನುಡಿದಿದ್ದಾರೆ.

ನೇಪಾಳ ಸರಕಾರದ ಈ ಹಠಾತ್‌ ಅಸಮಾಧಾನದ ಹಿಂದೆ ಹಲವು ಕಾರಣಗಳಿವೆ. ಈ ತಿಂಗಳ ಆರಂಭದಿಂದಲೂ ನೇಪಾಲ – ಭಾರತದ ನಡುವೆ ಕಾಲಾಪಾನಿ, ಲಿಪುಲೇಖ್‌ ವಿಚಾರವಾಗಿ ವಿವಾದ ನಡೆದೇ ಇದೆ.

ಇತ್ತೀಚೆಗಷ್ಟೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ವೀಡಿಯೋ ಕಾನ್ಫರೆನ್ಸ್‌ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಸುಗಮಗೊಳಿಸುವ 80 ಕಿ.ಮೀ ರಸ್ತೆಯನ್ನು ಉದ್ಘಾಟಿಸಿದ್ದರು.

ಭಾರತ ಈ ವಿಚಾರದಲ್ಲಿ ತನ್ನ ಅನುಮತಿ ಪಡೆದಿಲ್ಲ, ಉತ್ತರಾಖಂಡದಿಂದ ಲಿಪುಲೆಖ್‌ ಪಾಸ್‌ವರೆಗಿನ ಈ ರಸ್ತೆ ತನ್ನ ಗಡಿಯಲ್ಲೂ ಹಾದು ಹೋಗಿದೆ ಎಂದು ನೇಪಾಳ ತಗಾದೆ ತೆಗೆಯಿತು.

ಮೊದಲಿನಿಂದಲೂ ನೇಪಾಳ ಭಾರತದೊಂದಿಗಿರುವ ಪಶ್ಚಿಮ ಗಡಿಯ ಕಾಲಾಪಾನಿ ಒಳಗೊಂಡಂತೆ ಸುತ್ತಮುತ್ತಲಿನ ಸಂಪೂರ್ಣ ಪ್ರದೇಶಗಳು ತನ್ನದೆಂದು ಹೇಳುತ್ತಾ ಬಂದಿದೆ.

ಆದಾಗ್ಯೂ ನೇಪಾಲದ ಈ ಆರ್ಭಟದ ಹಿಂದೆ ಚೀನದ ಕುಮ್ಮಕ್ಕೂ ಆಡಗಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. 2015ರಲ್ಲಿ ನೇಪಾಳ ತನ್ನ ಸಂವಿಧಾನದಲ್ಲಿ ಬದಲಾವಣೆ ಮಾಡಿದಾಗಿನಿಂದಲೂ ಭಾರತದೊಂದಿಗಿನ ಅದರ ಸಂಬಂಧ ಸಮತೋಲನ ಕಳೆದುಕೊಂಡಿದೆ. ಇದರ ಲಾಭ ಪಡೆದು ಚೀನ ನೇಪಾಲವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಂದು ನೇಪಾಲವು ಸಂವಿಧಾನದಲ್ಲಿ ಮಾಡಿದ ಬದಲಾವಣೆಗಳ ಬಗ್ಗೆ ಭಾರತಕ್ಕೆ ಸಹಮತವಿರಲಿಲ್ಲ.

ನೇಪಾಲದಲ್ಲಿರುವ ಮಧೇಸಿಯರೊಂದಿಗೆ (ಭಾರತೀಯ ಮೂಲದ ಜನ) ಅಲ್ಲಿನ ಸಂವಿಧಾನ ತಾರತಮ್ಯ ಮಾಡುತ್ತದೆ ಎನ್ನುವುದು ಭಾರತದ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಈ  ವಿರೋಧಕ್ಕೆ ನೇಪಾಳ ಕ್ಯಾರೆ ಎನ್ನದಿದ್ದಾಗ, ನಮ್ಮ ದೇಶ ನೇಪಾಲದ ವಿರುದ್ಧ ಅಘೋಷಿತ ನಾಕಾಬಂದಿ ಹಾಕಿಬಿಟ್ಟಿತು.

ಇದರಿಂದಾಗಿ, ಹಠಾತ್ತನೆ ಆ ದೇಶದಲ್ಲಿ ಅಗತ್ಯ ವಸ್ತುಗಳ ಭಾರೀ ಕೊರತೆ ಎದುರಾಯಿತು. ಆಗ ನೇಪಾಳ ಸರಕಾರ ಚೀನದೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿತು. ಚೀನ ತನ್ನ ಬಂದರು ಬಳಸಿಕೊಳ್ಳಲೂ ನೇಪಾಲಕ್ಕೆ ಅನುಮತಿ ನೀಡಿತು. ಅಲ್ಲದೇ, ತನ್ನ ಮಹತ್ವಾಕಾಂಕ್ಷಿ ಬಿಆರ್‌ಐ ಕಾರ್ಯಕ್ರಮದಲ್ಲೂ ಸೇರಿಸಿಕೊಂಡಿತು.

ಅಂದಿನಿಂದಲೂ ಕಟ್ಟರ್‌ ಕಮ್ಯೂನಿಷ್ಟರಾಗಿರುವ ಕೆ.ಪಿ.ಶರ್ಮಾ ಚೀನದ ತಾಳಕ್ಕೆ ತಕ್ಕಂತೆ ಕುಣಿಯಲಾರಂಭಿಸಿದ್ದಾರೆ. ಯಾವ ಮಟ್ಟಕ್ಕೆ ಎಂದರೆ, ಈಗ ನೇಪಾಲದ ಹಲವು ಶಾಲೆಗಳಲ್ಲಿ ಚೀನಿ ಭಾಷೆಯನ್ನೂ ಬೋಧಿಸಲಾಗುತ್ತಿದೆ. ಇದೆಲ್ಲದರ ಹೊರತಾಗಿಯೂ, ನೇಪಾಲಕ್ಕೆ ಹೆಚ್ಚು ದಿನ ಭಾರತದ ವಿರೋಧ ಕಟ್ಟಿಕೊಂಡು ಇರುವುದಕ್ಕೆ ಸಾಧ್ಯವಿಲ್ಲ.

ಭಾರತದ ಮೇಲಿನ ಅವಲಂಬನೆಯನ್ನು ಸಂಪೂರ್ಣ ತಗ್ಗಿಸಿ ಚೀನದ ಕೈ ಹಿಡಿದುಕೊಳ್ಳಬೇಕು ಎಂಬ ನೇಪಾಳ ಸರಕಾರ‌ದ ಯೋಚನೆ, ಅಪಾಯಕಾರಿಯಾಗಿದ್ದು, ಟಿಬೆಟ್‌ – ಹಾಂಕಾಂಗ್‌ನಲ್ಲಿ ಚೀನ ಹೇಗೆ ದಾರ್ಷ್ಟ್ಯ ಮೆರೆಯುತ್ತಿದೆ ಎನ್ನುವುದನ್ನು ಅದು ಮರೆಯಬಾರದು. ಕೆ.ಪಿ. ಶರ್ಮಾಗೆ ಚೀನ ಆಪ್ತವಾಗಿರಬಹುದು, ಆದರೆ ನೇಪಾಲ-ಭಾರತದ ನಡುವಿನ ಸಾಂಸ್ಕೃತಿಕ ಸಂಬಂಧ-ಸಾಮ್ಯತೆ ಬಹಳ ಗಾಢವಾಗಿದ್ದು, ಭಾರತದೊಂದಿಗಿನ ಸ್ನೇಹವೇ ಅದಕ್ಕೆ ಶ್ರೀರಕ್ಷೆಯಾಗಬಲ್ಲದು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ರಾಮೀಣರ ಆರೋಗ್ಯ ಸುರಕ್ಷೆ ಮಹತ್ವಾಕಾಂಕ್ಷೆ ಈಡೇರಲಿ

State Govt: ಗ್ರಾಮೀಣರ ಆರೋಗ್ಯ ಸುರಕ್ಷೆ ಮಹತ್ವಾಕಾಂಕ್ಷೆ ಈಡೇರಲಿ

ವಾಯುಮಾಲಿನ್ಯ ನಿಯಂತ್ರಣ ಕಠಿನ ನಿಲುವು ಅನಿವಾರ್ಯ

India: ವಾಯುಮಾಲಿನ್ಯ ನಿಯಂತ್ರಣ ಕಠಿನ ನಿಲುವು ಅನಿವಾರ್ಯ

Flight: ಹುಸಿ ಬಾಂಬ್‌ ಬೆದರಿಕೆ: ಕಠಿನ ಶಿಕ್ಷೆ ಅಗತ್ಯ

Flight: ಹುಸಿ ಬಾಂಬ್‌ ಬೆದರಿಕೆ: ಕಠಿನ ಶಿಕ್ಷೆ ಅಗತ್ಯ

ARMY (2)

Jammu and Kashmir; ಉಗ್ರರ ದಮನದ ಜತೆಯಲ್ಲಿ ನಾಗರಿಕರ ರಕ್ಷಣೆಯೂ ಮುಖ್ಯ

Server Down: ಪಡಿತರ ವಿತರಣ ವ್ಯವಸ್ಥೆಯ ಸಮಸ್ಯೆ ಶೀಘ್ರ ಬಗೆಹರಿಯಲಿ

Server Down: ಪಡಿತರ ವಿತರಣ ವ್ಯವಸ್ಥೆಯ ಸಮಸ್ಯೆ ಶೀಘ್ರ ಬಗೆಹರಿಯಲಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.