ಸೈದ್ಧಾಂತಿಕ ನೆಲೆಗಟ್ಟು ಅಂತ್ಯವಾಗಬೇಕು


Team Udayavani, Oct 29, 2019, 5:48 AM IST

x-33

ಐಸಿಸ್‌ ಸ್ಥಾಪಕ ಹತ್ಯೆಯಾಗಿರುವುದರಿಂದ ಈ ಸಂಘಟನೆ ದುರ್ಬಲಗೊಳ್ಳುವುದು ನಿಶ್ಚಿತ. ಜಿಹಾದಿ ಸಂಘಟನೆಗಳಿಗೆ ಬಾಗ್ಧಾದಿ ಹತ್ಯೆ ದೊಡ್ಡ ಹೊಡೆತ ನೀಡಿದೆ. ಆದರೆ ಇಲ್ಲಿಗೆ ಐಸಿಸ್‌ ನಾಮಾವಶೇಷ ಆಗುತ್ತದೆ ಎನ್ನುವಂತಿಲ್ಲ. ಏಕೆಂದರೆ ಬಾಗ್ಧಾದಿ ಬಿತ್ತಿದ ವಿಷ ಬೀಜ ಜಗತ್ತಿನೆಲ್ಲೆಡೆ ಮೊಳಕೆಯೊಡೆದಿದೆ.

ಕಳೆದ ಸುಮಾರು ಒಂದು ದಶಕದಿಂದ ಲೋಕಕಂಟಕನಾಗಿ ಮೆರೆಯುತ್ತಿದ್ದ ಐಸಿಸ್‌ ಉಗ್ರ ಸಂಘಟನೆಯ ಸ್ಥಾಪಕ ಅಬು ಬಕ್ರ್ ಅಲ್‌ ಬಾಗ್ಧಾದಿಯನ್ನು ಸಾಯಿಸುವ ಮೂಲಕ ಅಮೆರಿಕ ಜಗತ್ತಿಗೆ ನೆಮ್ಮದಿ ನೀಡಿದೆ. ಪಾಕಿಸ್ಥಾನದಲ್ಲಿ ಅಡಗಿಕೊಂಡಿದ್ದ ಅಲ್‌-ಕಾಯಿದಾ ಸ್ಥಾಪಕ ಉಸಾಮ ಬಿನ್‌ ಲಾದೆನನ್ನು ಬೇಟೆಯಾಡಿದ ರೀತಿಯಲ್ಲೇ ಅಮೆರಿಕದ ಯೋಧರು ಬಾಗ್ಧಾದಿಯನ್ನು ಬೇಟೆಯಾಡಿದ್ದಾರೆ. ಈ ಮಾದರಿಯ ಕಾರ್ಯಾಚರಣೆಯಲ್ಲಿ ಅಮೆರಿಕದ ಯೋಧರಿಗೆ ಅವರೇ ಸಾಟಿ. ಮಾಹಿತಿ ಕಲೆ ಹಾಕುವುದು, ಕಾರ್ಯಾಚರಣೆಯ ರಹಸ್ಯ ಕಾಪಾಡುವುದು, ಕಾರ್ಯಾ ಚರಣೆಯ ತಯಾರಿ ನಡೆಸುವುದು ಹೀಗೆ ಎಲ್ಲ ರೀತಿಯಲ್ಲೂ ಅಮೆರಿಕದ ಯೋಧರು ಪರಿಪಕ್ವತೆಯನ್ನು ಕಾಯ್ದು ಕೊಂಡಿದ್ದರು. ಸುಮಾರು ಒಂದೂವರೆ ವರ್ಷದ ಹಿಂದೆಯೇ ಬಾಗ್ಧಾದಿ ಸಿರಿ ಯಾದ ವಾಯವ್ಯ ಭಾಗದಲ್ಲಿ ಅಡಗಿ ಕೊಂಡಿರುವ ಮಾಹಿತಿ ಸಿಕ್ಕಿದ ಬಳಿಕ ಗುಪ್ತಚರ ಪಡೆ ನಿರಂತರವಾಗಿ ಅವನ ಬೆನ್ನು ಬಿದ್ದಿತ್ತು. ಕೊನೆಗೂ ಶನಿವಾರ ಈ ನರರೂಪದ ರಕ್ಕಸನ ಕತೆ ಮುಗಿದಿದ್ದು, ಜಗತ್ತನ್ನು ದೊಡ್ಡದೊಂದು ಸಂಕಟ ದಿಂದ ಪಾರು ಮಾಡಿದ ಅಮೆರಿಕ ಯೋಧರ ಶೌರ್ಯವನ್ನು ಮೆಚ್ಚಲೇ ಬೇಕು.

ಇರಾಕ್‌ನಲ್ಲಿ ಹುಟ್ಟಿದ್ದ ಐಸಿಸ್‌ ಕ್ಷಿಪ್ರವಾಗಿ ಉಳಿದೆಡೆಗಳಿಗೂ ತನ್ನ ಜಾಲ ವಿಸ್ತರಿಸಿತ್ತು. ಇರಾಕ್‌, ಸಿರಿಯ ಮಾತ್ರ ವಲ್ಲದೆ ಈಜಿಪ್ಟ್, ಸೌದಿ ಅರೆಬಿಯ, ಯೆಮೆನ್‌, ನೈಜೀರಿಯ, ಅಫ್ಘಾನಿಸ್ಥಾನ, ಶ್ರೀಲಂಕ, ಇಂಡೋನೇಷ್ಯಾ, ಫಿಲಿಪೈನ್ಸ್‌ ಸೇರಿದಂತೆ ತೃತೀಯ ಜಗತ್ತಿನ ಹಲವು ದೇಶಗಳಲ್ಲಿ ಈ ಉಗ್ರ ಸಂಘಟನೆ ಸಕ್ರಿಯವಾಗಿದೆ. ಭಾರತದಲ್ಲಿ ಐಸಿಸ್‌ ತಳವೂರಿದ್ದು 2014ರಲ್ಲೇ ದೃಢವಾಗಿತ್ತು.

ಕಾಶ್ಮೀರ, ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿದಂತೆ ಉತ್ತರ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಯುವಕರ ಬ್ರೈನ್‌ವಾಶ್‌ ಮಾಡಿ ಉಗ್ರ ಸಂಘಟನೆಗೆ ಸೇರಿಸಿಕೊಳ್ಳಲಾಗಿತ್ತು. ಕೇರಳದ 27 ಮಂದಿ ಐಸಿಸ್‌ ಸೇರಿದ್ದು ದೃಢವಾದಾಗ ಇಡೀ ದೇಶ ಬೆಚ್ಚಿ ಬಿದ್ದಿತ್ತು. ಅನಂತರವೂ ಐಸಿಸ್‌ ಸೇರುವವರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಈ ರಾಜ್ಯವೊಂದರಿಂದಲೇ 100ಕ್ಕೂ ಹೆಚ್ಚು ಮಂದಿ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದರು. ಇದಕ್ಕಿಂತಲೂ ಹೆಚ್ಚು ಗಾಬರಿಯಾಗಿದ್ದು ಮೊದಲೇ ಉಗ್ರರ ಉಪಟಳದಿಂದ ಹೈರಾಣಾಗಿದ್ದ ಕಾಶ್ಮೀರದಲ್ಲಿ ಐಸಿಸ್‌ ನೆಲೆಯೂರಿದ ವಿಚಾರ ಬಹಿರಂಗವಾದಾಗ. ಅನಂತರದ ದಿನಗಳಲ್ಲಿ ಅಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳಲ್ಲಿ ಐಸಿಸ್‌ನ ಕಪ್ಪು ಧ್ವಜ ಹಾರುವುದು ಸಾಮಾನ್ಯ ದೃಶ್ಯವಾಗಿತ್ತು.

ಐಸಿಸ್‌ ತನ್ನ ಕಲ್ಪನೆಯ ಖಲೀಫಾ ಸಾಮ್ರಾಜ್ಯದಲ್ಲಿ ಭಾರತವನ್ನೂ ಸೇರಿಸಿತ್ತು ಹಾಗೂ ಇದನ್ನು ಸಾಕಾರಗೊಳಿಸಲು ನಿರಂತರವಾಗಿ ಪ್ರಯತ್ನ ಗಳನ್ನು ನಡೆಸಿತ್ತು. ಎಲ್ಲ ಆಧುನಿಕ ಸಂಪರ್ಕ ಮಾಧ್ಯಮಗಳ ಮೂಲಕ ಅದು ಯುವಕ-ಯುವತಿಯರನ್ನು ಸೆಳೆಯಲು ಪ್ರಯತ್ನಿಸುತ್ತಿತ್ತು.

ಐಸಿಸ್‌ ಸ್ಥಾಪಕ ಹತ್ಯೆಯಾಗಿರುವುದರಿಂದ ಈ ಸಂಘಟನೆ ದುರ್ಬಲಗೊಳ್ಳುವುದು ನಿಶ್ಚಿತ. ಜಿಹಾದಿ ಸಂಘಟನೆಗಳಿಗೆ ಬಾಗ್ಧಾದಿ ಹತ್ಯೆ ದೊಡ್ಡ ಹೊಡೆತ ನೀಡಿದೆ. ಆದರೆ ಇಲ್ಲಿಗೆ ಐಸಿಸ್‌ ನಾಮಾವಶೇಷವಾಗುತ್ತದೆ ಎನ್ನುವಂತಿಲ್ಲ. ಏಕೆಂದರೆ ಬಾಗ್ಧಾದಿ ಬಿತ್ತಿದ ವಿಷ ಬೀಜ ಜಗತ್ತಿನೆಲ್ಲೆಡೆ ಮೊಳಕೆಯೊಡೆದಿದೆ. ಅದರ ಉಗ್ರ ಸಿದ್ಧಾಂತ ಇನ್ನೂ ಜೀವಂತವಾಗಿದೆ. ಅದು ಇನ್ನೊಂದು ರೂಪದಲ್ಲಿ ಮೊಳಕೆಯೊಡೆಯಬಹುದು. ಈಗಲೂ ಸುಮಾರು 18,000 ಐಸಿಸ್‌ ಉಗ್ರರು ಜೀವಂತವಾಗಿದ್ದಾರೆ ಎಂಬ ಮಾಹಿತಿ ಕಳೆದ ತಿಂಗಳಷ್ಟೇ ಬಹಿರಂಗವಾಗಿತ್ತು. ಅಲ್ಲದೆ ಐಸಿಸ್‌ನ ನೂರಾರು ಸುಪ್ತ ಘಟಕಗಳು ಈಗಲೂ ಸಕ್ರಿಯವಾಗಿವೆ. ಕೆಲ ಸಮಯದ ಹಿಂದೆ ಶ್ರೀಲಂಕದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟವೇ ಈ ಸಂಘಟನೆ ಎಷ್ಟು ಅಪಾಯಕಾರಿ ಎನ್ನುವುದಕ್ಕೊಂದು ಉದಾಹರಣೆ. ಬಾಗ್ಧಾದಿ ಸತ್ತರೂ ಐಸಿಸ್‌ನ ಅಪಾಯ ಇನ್ನೂ ದೂರವಾಗಿಲ್ಲ. ಉಗ್ರ ಸಂಘಟನೆಗಳ ಸೈದ್ಧಾಂತಿಕ ನೆಲೆಗಟ್ಟನ್ನು ಸೋಲಿಸಿದಾಗಲೇ ಅವುಗಳಿಗೆ ಅಂತ್ಯ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.