ಲಂಕಾ ಸಮಸ್ಯೆ ಭಾರತ ಸರಕಾರಕ್ಕೂ ಸವಾಲು


Team Udayavani, Jul 11, 2022, 6:00 AM IST

lanka

ಶ್ರೀಲಂಕಾದಲ್ಲಿ ಉಂಟಾಗಿರುವ ಬಿಕ್ಕಟ್ಟು ತಲ್ಲಣ ಹುಟ್ಟಿಸುವಂಥದ್ದೇ ಆಗಿದೆ. ಆರ್ಥಿಕವಾಗಿ ಬಿಕ್ಕಟ್ಟು ಆ ದೇಶದ್ದೇ ಆಗಿದ್ದರೂ ಭಾರತ ಸರಕಾರ ಕಣ್ಣುಮುಚ್ಚಿ ಕುಳಿತುಕೊಳ್ಳುವಂತೆಯೇ ಇಲ್ಲ ಎನ್ನುವುದು ಗಮನಾರ್ಹ ವಾಗಿರುವ ಅಂಶ. ಇಂಥ ಒಂದು ಅಂಶವನ್ನು ಉಲ್ಲೇಖೀಸಲು ಬಲವಾ ಗಿರುವ ಕಾರಣಗಳು ಇವೆ. ದ್ವೀಪ ರಾಷ್ಟ್ರದ ಸರಕಾರ ವಿಫ‌ಲ ಹೊಂದಲು ಪ್ರಮುಖ ಕಾರಣವೇನೆಂದರೆ ಅಲ್ಲಿ ಆಡಳಿತ ಇರುವ ರಾಜಪಕ್ಸ ಕುಟುಂಬದ ದುರಾಡಳಿತ ಮತ್ತು ನಯವಾಗಿ ಮಾತನಾಡಿ ವಂಚಿಸುವ ಚೀನದ ಸಾಲದ ಸುಳಿಗೆ ಬಿದ್ದದ್ದು.

ಪ್ರಸಕ್ತ ವರ್ಷದ ಆರಂಭದಿಂದಲೇ ಆ ದೇಶದಲ್ಲಿ ಹಲವು ರೀತಿಯ ಬಿಕ್ಕಟ್ಟುಗಳು ಶುರುವಾಗುತ್ತಾ ಋಣಾತ್ಮಕವಾಗಿಯೇ ಸುದ್ದಿಯಾಗ ಲಾರಂಭಿಸಿತ್ತು. ಆ ದೇಶದ ಆಡಳಿತ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾವ ರೀತಿಯ ಕ್ರಮವನ್ನೂ ಕೈಗೊಂಡಿಲ್ಲ ಎಂಬುದು ದುರದೃಷ್ಟಕರ ವಾಗಿರುವ ಸಂಗತಿ. ಕೊಲಂಬೋದ ಕೇಂದ್ರ ಭಾಗದಲ್ಲಿ ಇರುವ
ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ಜನರಿಗೆ ಕೋಟ್ಯಂತರ ಮೌಲ್ಯದ ಶ್ರೀಲಂಕಾ ರೂಪಾಯಿ ನೋಟುಗಳು ಸಿಕ್ಕಿವೆ ಎಂದು ವರದಿಯಾಗಿದೆ. ಅದು ಸತ್ಯವೇ ಆಗಿದ್ದರೆ, ಚೀನ ಮತ್ತು ಇತರ ರಾಷ್ಟ್ರಗಳಿಂದ ಆ ದೇಶದ ಸರಕಾರ ಪಡೆದುಕೊಂಡಿದ್ದ ಸಾಲದ ಮೊತ್ತ ಎಲ್ಲಿಗೆ ಹೋಯಿತು, ದೇಶದ ಅರ್ಥ ವ್ಯವಸ್ಥೆ ಏಕೆ ಕುಸಿಯಿತು ಎಂಬ ಬಗ್ಗೆ ಉತ್ತರಗಳು ಯಾರೂ ಹೇಳದೆಯೇ ಸಿಗುತ್ತದೆ.

ಲಂಕಾ ಸರಕಾರ ಚೀನದಿಂದ ಸಾಲ ಪಡೆದು ಮಾಡಿಕೊಂಡ ತಪ್ಪಿಗೆ ಕೊಲಂಬೋ ಬಂದರು ಪ್ರದೇಶವನ್ನು ಚೀನಕ್ಕೆ ಭೋಗ್ಯಕ್ಕೆ ನೀಡಲಾಗಿದೆ. ಈಗಾಗಲೇ ಆ ನಿರ್ಧಾರದ ಪ್ರತಿಕೂಲ ಪರಿಣಾಮ ಆ ದೇಶದಲ್ಲಿ ಉಂಟಾಗುತ್ತಿದೆ. ನೆರೆಯ ದೇಶಗಳಲ್ಲಿ ಚೀನದ ಹಸ್ತಕ್ಷೇಪ ಹೆಚ್ಚಿದಷ್ಟು ನಮ್ಮ ದೇಶಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ. ಅದನ್ನು ತಪ್ಪಿಸುವ ನಿಟ್ಟಿನಲ್ಲಿಯೇ ದ್ವೀಪರಾಷ್ಟ್ರದ ಹಂಬಂತೋಟ ಬಂದರು ಸಮೀಪ ಇರುವ ಮಟ್ಟಾಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 2017ರಲ್ಲಿ ಭಾರತ ಸರಕಾರ ಖರೀದಿಸಿ, ಅದನ್ನು ಪುನರ್‌ ನಿರ್ಮಾಣ ಮಾಡುತ್ತಿದೆ. ಇದರ ಜತೆಗೆ ಕೊಲಂಬೋ ಬಂದರಿನಲ್ಲಿ 700 ಮಿಲಿಯ ಡಾಲರ್‌ ವೆಚ್ಚದಲ್ಲಿ ಜೆಟ್ಟಿಯೊಂದನ್ನು ನಿರ್ಮಾಣ ಮಾಡುತ್ತಿದೆ.

ಏಕೆಂದರೆ ಶ್ರೀಲಂಕಾದಲ್ಲಿ ಮುಂದೆ ಅಸ್ತಿತ್ವಕ್ಕೆ ಬರುವ ಸರಕಾರ ಬಹುಸ್ತರದ ಸವಾಲುಗಳನ್ನು ಹೊಂದಿದೆ. ಆ ದೇಶದ ಅರ್ಥ ವ್ಯವಸ್ಥೆ ಸುಧಾರಿಸುವುದು, ಸದ್ಯದ ಉದ್ರಿಕ್ತತೆಯನ್ನು ಶಮನಗೊಳಿಸುವುದು, ಚೀನದ ಹಸ್ತಕ್ಷೇಪ ತಗ್ಗಿಸುವಂತೆ ಮಾಡುವಲ್ಲಿ ಮಾರ್ಗೋಪಾಯಗಳ ಅನುಸರಣೆ, ಆಂತರಿಕ ಭದ್ರತೆ ಮೇಲ್ದರ್ಜೆಗೆ ಏರಿಸುವುದು ಸವಾಲುಗಳು. ಇಂಥ ಸಂದರ್ಭವನ್ನು ಭಾರತ ಸರಕಾರ ತನಗೆ ಅನುಕೂಲವನ್ನಾಗಿ ಮಾರ್ಪಡಿಸಲು ಸುವರ್ಣಾವಕಾಶವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಅಲ್ಲಿ ಬಿಕ್ಕಟ್ಟು ಕೈಮೀರಿ ಹೋದ ದಿನದಿಂದಲೂ ಭಾರತ ಸರಕಾರ ವಿತ್ತೀಯ ನೆರವು, ಪೆಟ್ರೋಲ್‌, ಡೀಸೆಲ್‌, ಅಕ್ಕಿ ಮತ್ತು ಇತರ ನೆರವು ನೀಡುತ್ತಾ ಬಂದಿದೆ. ಅದನ್ನು ಇನ್ನೂ ಹೆಚ್ಚಿಸುವ ಮೂಲಕ ದ್ವೀಪರಾಷ್ಟ್ರದ ಸದ್ಯದ ಆಡಳಿತ ಪಕ್ಷ ಮತ್ತು ವಿಪಕ್ಷಗಳ ಮುಖಂಡರ ವಿಶ್ವಾಸ ಗಳಿಸಬೇಕು. ಮುಂದಿನ ದಿನಗಳಲ್ಲಿ ಚೀನ ಸಾಲ ನಂಬಿಕೊಂಡರೆ ಏನು ಆಗುತ್ತದೆ. ಅದಕ್ಕೆ ಸದ್ಯ ನಡೆಯುತ್ತಿರುವ ವಿದ್ಯಮಾನ ಸಾಕ್ಷಿ ಎಂದು ಮನವರಿಕೆ ಮಾಡಿದಲ್ಲಿ ದಕ್ಷಿಣ ಏಷ್ಯಾದಲ್ಲಿ ಭಾರತವೇ ಕಿಂಗ್‌ ಆಗುವುದರಲ್ಲಿ ಸಂಶಯವಿಲ್ಲ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.