Landslide ಪ್ರಕೃತಿ ಜತೆ ಹೆಜ್ಜೆ ಹಾಕಿದರಷ್ಟೇ ಮನುಕುಲದ ಭವಿಷ್ಯ ಸುರಕ್ಷಿತ


Team Udayavani, Jul 31, 2024, 6:15 AM IST

Landslide ಪ್ರಕೃತಿ ಜತೆ ಹೆಜ್ಜೆ ಹಾಕಿದರಷ್ಟೇ ಮನುಕುಲದ ಭವಿಷ್ಯ ಸುರಕ್ಷಿತ

2018ರ ಆಗಸ್ಟ್‌ನಲ್ಲಿ ರಾಜ್ಯದ ಕೊಡಗು, ವಾರದ ಹಿಂದೆಯಷ್ಟೇ ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಮಾದರಿಯಲ್ಲೇ ಮಂಗಳವಾರ ಬೆಳ್ಳಂಬೆಳಗ್ಗೆ ನಮ್ಮ ನೆರೆ ರಾಜ್ಯವಾದ ಕೇರಳದ ವಯನಾಡ್‌ ಜಿಲ್ಲೆಯಲ್ಲಿ ಪ್ರಳಯಸದೃಶ ರೀತಿಯಲ್ಲಿ ಭೂಕುಸಿತ ಸಂಭವಿಸಿದೆ. ಈ ನೈಸರ್ಗಿಕ ದುರಂತ ಕೇವಲ ಕೇರಳ ಮಾತ್ರವಲ್ಲದೆ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಎಲ್ಲ ಊರುಗಳ ಜನರನ್ನು ಆತಂಕಕ್ಕೀಡು ಮಾಡಿದೆ.

ವಯನಾಡ್‌ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಭೂಕುಸಿತದಲ್ಲಿ ಗುಡ್ಡಗಳು ಕುಸಿದು ಈ ಊರುಗಳು ಸಂಪೂರ್ಣವಾಗಿ ಸಮಾಧಿಯಾಗಿವೆ. ಅಲ್ಲಲ್ಲಿ ಸಂತ್ರಸ್ತರು ಕೈಗಳನ್ನು ಮೇಲಕ್ಕೆತ್ತಿ ರಕ್ಷಣೆಗಾಗಿ ಯಾಚಿಸುತ್ತಿರುವ ದೃಶ್ಯಾವಳಿಗಳನ್ನು ಕಂಡಾಗ ಎಂಥ ಕಠೊರ ಹೃದಯವೂ ಒಂದು ಕ್ಷಣ ಕಂಪಿಸದೇ ಇರಲಾರದು. ಎಡೆಬಿಡದೆ ಸುರಿಯುತ್ತಿರುವ ಮಳೆಯ ಹೊರತಾಗಿಯೂ ರಕ್ಷಣ ಕಾರ್ಯಕರ್ತರು ನೂರಾರು ಮಂದಿಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಊರಿಗೆ ಊರೇ ಈ ದುರಂತದಲ್ಲಿ ಸಮಾಧಿ­ಯಾಗಿರುವ ಪರಿಣಾಮ ಒಟ್ಟು ಹಾನಿಯನ್ನು ಈಗಲೇ ಊಹಿಸುವುದು ಕಷ್ಟಸಾಧ್ಯ.

ಕರ್ನಾಟಕದಲ್ಲೂ ಪ್ರಕೃತಿ ಮುನಿದಿದೆ. ಕರಾವಳಿ ಮತ್ತು ಒಳನಾಡನ್ನು ಬೆಸೆಯುವ ಸಂಪಾಜೆ, ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆಗಳಲ್ಲಿ ಪದೇಪದೆ ಭೂಕುಸಿತ ಸಂಭವಿಸಿ ವಾಹನ ಸಂಚಾರಕ್ಕೆ ತಡೆಯಾಗುತ್ತಲೇ ಇದೆ. ಮಂಗಳೂರು-ಬೆಂಗಳೂರು ನಡು­ವಣ ರೈಲು ಸಂಪರ್ಕವೂ ಕಡಿತಗೊಂಡಿದೆ. ಇನ್ನು ಕೋಟ್ಯಂತರ ರೂ. ವ್ಯಯಿಸಿ ಅನುಷ್ಠಾನ­ಗೊಳಿಸಲಾದ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್‌ ಹಾದುಹೋದ ಪ್ರದೇಶದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕರ್ನಾಟಕದ ಪಾಲಿಗೆ ಇಂತಹ ಪ್ರಾಕೃತಿಕ ದುರಂತಗಳು ಇತ್ತೀಚಿನ ವರ್ಷಗಳಲ್ಲಿ ಮಾಮೂಲಿ ಎಂಬಂತಾಗಿದೆ.

ಒಟ್ಟಾರೆ ಪಶ್ಚಿಮಘಟ್ಟ ತಪ್ಪಲಿನ ಬೆಟ್ಟಗುಡ್ಡಗಳು ಕಳೆದೆರಡು ದಶಕಗಳಿಂದೀಚೆಗೆ ಪ್ರತೀ ಮಳೆಗಾಲದಲ್ಲಿ ಕುಸಿದು ಸ್ಥಳೀಯ ಜನಜೀವನವನ್ನು ಆತಂಕದ ಮಡುವಿಗೆ ತಳ್ಳುತ್ತಲೇ ಇವೆ.

ಪ್ರತೀ ಬಾರಿ ಇಂತಹ ದುರ್ಘ‌ಟನೆಗಳು ಸಂಭವಿಸಿದಾಗಲೆಲ್ಲ ಪ್ರಕೃತಿ ಮಾನವರ ಮೇಲೆ ಇಷ್ಟೊಂದು ಮುನಿಸಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಇದಕ್ಕೆ ಮಾನವನ ಸ್ವಯಂಕೃತ ಅಪರಾಧಗಳೇ ಕಾರಣವೇ ವಿನಾ ಈ ದುರ್ಘ‌ಟನೆಗಳಿಗೆ ಪ್ರಕೃತಿಯನ್ನು ದೂರಿ ಒಂದಿಷ್ಟೂ ಪ್ರಯೋಜನವಿಲ್ಲ. ಪಶ್ಚಿಮಘಟ್ಟ ಪ್ರದೇಶವನ್ನು ಸಂಪೂರ್ಣವಾಗಿ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ, ಗಣಿಗಾರಿಕೆ, ಕೈಗಾರಿಕೆಗಳ ಸ್ಥಾಪನೆ, ಹೆದ್ದಾರಿಗಳ ವಿಸ್ತರಣೆ ಆದಿಯಾಗಿ ಯಾವುದೇ ನಿರ್ಮಾಣ ಕಾಮಗಾರಿಗಳನ್ನು ನಡೆಸುವುದನ್ನು ನಿರ್ಬಂಧಿಸಬೇಕು ಎಂದು ಕೇಂದ್ರ ಸರಕಾರದಿಂದ ನೇಮಕವಾಗಿದ್ದ ಮಾಧವ ಗಾಡ್ಗಿàಳ್‌ ನೇತೃತ್ವದ ಪಶ್ಚಿಮಘಟ್ಟಗಳ ಕುರಿತಾಗಿನ ಪರಿಸರ ತಜ್ಞರ ಸಮಿತಿ 2011ರಲ್ಲಿಯೇ ಶಿಫಾರಸು ಮಾಡಿತ್ತು. ಆದರೆ ಇತ್ತ ಕೇಂದ್ರ ಅಥವಾ ರಾಜ್ಯ ಸರಕಾರಗಳಾಗಲೀ ತಲೆಕೆಡಿಸಿಕೊಳ್ಳದೆ ಬುಡಕಟ್ಟು ಸಮುದಾಯಗಳನ್ನು ಮುಂದಿಟ್ಟು ಈ ವರದಿಯನ್ನು ಸರಾಸಗಟಾಗಿ ತಿರಸ್ಕರಿಸಿದವು. ಆ ಬಳಿಕ ರಚನೆಯಾದ ಕಸ್ತೂರಿರಂಗನ್‌ ಸಮಿತಿ ನಿರ್ಬಂಧದ ಮಿತಿಯನ್ನು ಒಂದಿಷ್ಟು ಸಡಿಲಗೊಳಿಸಿತ್ತಾದರೂ ಪಶ್ಚಿಮಘಟ್ಟ ಪ್ರದೇಶದಲ್ಲಿನ ಎಲ್ಲ ತೆರನಾದ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ ಹೇರುವಂತೆ ಸರಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ಸರಕಾರಗಳು ಈ ವರದಿಯ ಜಾರಿಗೂ ಆಸಕ್ತಿ ತೋರಲಿಲ್ಲ.

ಇದು ಕೇವಲ ಕೇರಳ, ಕರ್ನಾಟಕದ ಭವಿಷ್ಯದ ಪ್ರಶ್ನೆ ಮಾತ್ರವಾಗಿರದೆ ಇಡೀ ದೇಶದ ಮುಂದಿರುವ ಗುರುತರ ಸವಾಲು. ಆದಾಯ ಹೆಚ್ಚಳ, ಅಭಿವೃದ್ಧಿಯ ಸೋಗಿನಲ್ಲಿ ನಡೆಯುತ್ತಿರುವ ಈ ಎಲ್ಲ ದೂರದೃಷ್ಟಿರಹಿತ ಯೋಜನೆಗಳಿಗೆ, ಕೆಲಸ ಕಾರ್ಯಗಳಿಗೆ ಇನ್ನಾದರೂ ಕಡಿವಾಣ ಬೀಳಬೇಕು. ವಿಜ್ಞಾನ, ತಂತ್ರಜ್ಞಾನ ಬಳಸಿಕೊಂಡು ಪ್ರಕೃತಿಯ ವಿರುದ್ಧ ದುಸ್ಸಾಹಸಕ್ಕಿಳಿಯುವ ಬದಲಾಗಿ ಪ್ರಕೃತಿಯ ಜತೆಗೆ ಹೆಜ್ಜೆ ಹಾಕುವ ಮನೋಭಾವವನ್ನು ನಮ್ಮ ಸಮಾಜ, ಆಡಳಿತ ವ್ಯವಸ್ಥೆ ಮೈಗೂಡಿಸಿಕೊಳ್ಳಬೇಕಾಗಿರುವುದು ಇಂದಿನ ತುರ್ತು.

ಟಾಪ್ ನ್ಯೂಸ್

Renukaswamy Case ಅನಾಮಿಕ ವಕೀಲನಿಂದ ನಟ ದರ್ಶನ್‌ಗೆ “ಕಾನೂನು ಸಲಹೆ’

Renukaswamy Case ಅನಾಮಿಕ ವಕೀಲನಿಂದ ನಟ ದರ್ಶನ್‌ಗೆ “ಕಾನೂನು ಸಲಹೆ’

Anantha-Padnabha-Swamy

Anant Chaturdashi; ಅನಂತವ್ರತ ಅನಂತಕಲ್ಪನೆ…

1-rrr

Baramulla ಉಗ್ರನ ಹತ್ಯೆ ಡ್ರೋನ್‌ ವೀಡಿಯೋ ವೈರಲ್‌

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

taliban

Afghanistan; ಪೋಲಿಯೋ ಲಸಿಕೆಗೆ ತಾಲಿಬಾನ್‌ ತಡೆ: ವಿಶ್ವಸಂಸ್ಥೆ ಆರೋಪ

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

ಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವುಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವು

ಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವು

ಗ್ರಾಮೀಣ ಬಡಜನರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರಕಾರ

ಗ್ರಾಮೀಣ ಬಡಜನರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರಕಾರ

Jammu-Kashmir ಗಡಿಯಲ್ಲಿ ಉದ್ಧಟತನ: ಪಾಠ ಕಲಿಯದ ಪಾಕ್‌

Jammu-Kashmir ಗಡಿಯಲ್ಲಿ ಉದ್ಧಟತನ: ಪಾಠ ಕಲಿಯದ ಪಾಕ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Renukaswamy Case ಅನಾಮಿಕ ವಕೀಲನಿಂದ ನಟ ದರ್ಶನ್‌ಗೆ “ಕಾನೂನು ಸಲಹೆ’

Renukaswamy Case ಅನಾಮಿಕ ವಕೀಲನಿಂದ ನಟ ದರ್ಶನ್‌ಗೆ “ಕಾನೂನು ಸಲಹೆ’

Anantha-Padnabha-Swamy

Anant Chaturdashi; ಅನಂತವ್ರತ ಅನಂತಕಲ್ಪನೆ…

1-rrr

Baramulla ಉಗ್ರನ ಹತ್ಯೆ ಡ್ರೋನ್‌ ವೀಡಿಯೋ ವೈರಲ್‌

congress

Congress Manifesto; ಕಣಿವೆ ರಾಜ್ಯದ ಭೂರಹಿತ ಕೃಷಿಕರಿಗೆ 99 ವರ್ಷ ಭೂಗುತ್ತಿಗೆ

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.