ಇನ್ನಾದರೂ ನಿಲ್ಲಲಿ ಸೆಲ್ಫಿ ಗೀಳು


Team Udayavani, Oct 5, 2017, 10:31 AM IST

05-14.jpg

ಕಳೆದ ವಾರ ವಿದ್ಯಾರ್ಥಿಗಳ ತಂಡವೊಂದು ಕೆರೆಯಲ್ಲಿ ಇಳಿದು ಮೊಬೈಲ್‌ನಲ್ಲಿ ಸೆಲ್ಫಿ ಫೋಟೊ ತೆಗೆಯುತ್ತಿರುವಾಗ ಓರ್ವ ವಿದ್ಯಾರ್ಥಿ ಮುಳುಗಿ ಮೃತಪಟ್ಟಿದ್ದಾನೆ. ಸೆಲ್ಫಿ ತೆಗೆಯುತ್ತಿರುವವರಿಗೆ ತಮ್ಮೊಂದಿಗಿದ್ದ ವ್ಯಕ್ತಿ ಬೆನ್ನ ಹಿಂದೆಯೇ ಮುಳುಗುತ್ತಿದ್ದರೂ ಸೆಲ್ಫಿ ಕ್ಲಿಕ್ಕಿಸುವ ಸಂಭ್ರಮದಲ್ಲಿ ಗೊತ್ತಾಗಿರಲಿಲ್ಲ. ಇದಾಗಿ ಒಂದು ವಾರದಲ್ಲಿ ಇದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ರೈಲು ಹಳಿಯಲ್ಲಿ ಸೆಲ್ಫಿ ತೆಗೆಯುವ ಸಾಹಸದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇವೆರಡು ಬರೀ 10 ದಿನಗಳ ಅಂತರದಲ್ಲಿ ಬೆಂಗಳೂರಿನಲ್ಲಿ ಸಂಭವಿಸಿರುವ ಘಟನೆಗಳು. ಈ ಮಾದರಿಯ ಸೆಲ್ಫಿ ಅವಘಡಗಳು ನಿತ್ಯ ಎಂಬಂತೆ ಸಂಭವಿಸುತ್ತಲೇ ಇರುತ್ತದೆ. ಬ್ಲೂವೇಲ್‌ ಗೇಮ್‌ನಂತೆ ಆಧುನಿಕ ತಂತ್ರಜ್ಞಾನ ತಂದೊಡ್ಡಿರುವ ಹೊಸ ಗಂಡಾಂತರವಿದು. ಮೊಬೈಲ್‌ ಫೋನಿನಲ್ಲಿ ಅಪಾಯಕಾರಿ ಸ್ಥಳದಲ್ಲಿ ನಿಂತು ಸ್ವಯಂ ಫೋಟೊ ತೆಗೆದುಕೊಳ್ಳುವ ಅಥವ ವೀಡಿಯೊ ಶೂಟ್‌ ಮಾಡಿಕೊಳ್ಳುವ ಸೆಲ್ಫಿ ಗೀಳು ಈಗ ಕಳವಳಕಾರಿಯಾಗಿ ಹೆಚ್ಚುತ್ತಿದೆ. ಬ್ಲೂವೇಲ್‌ ಗೇಮ್‌ನಂತೆಯೇ ಜಗತ್ತಿನಾದ್ಯಂತ ಸೆಲ್ಫಿ ಗೀಳು ಕೂಡ ಆತಂಕ ಸೃಷ್ಟಿಸಿದೆ. ಅದರಲ್ಲೂ ಭಾರತದಲ್ಲಿ ಅತ್ಯಧಿಕ ಸೆಲ್ಫಿ ಸಾವುಗಳು ಸಂಭವಿಸುತ್ತಿವೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತಿವೆ. 

ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಮತ್ತು ಮೊಬೈಲ್‌ ಬಳಕೆಯಲ್ಲಿ ಎಲ್ಲ ದೇಶಗಳನ್ನು ಹಿಂದಿಕ್ಕುವ ಧಾವಂತದಲ್ಲಿರುವ ಭಾರತದಲ್ಲಿ ಇಷ್ಟರ ತನಕ ಸೆಲ್ಫಿ ಹುಚ್ಚಿಗೆ ಬಲಿಯಾದವರ ಸಂಖ್ಯೆ ಚಿಕ್ಕದಾಗಿದ್ದರೂ ಈ ಅಪಾಯಕಾರಿ ಹವ್ಯಾಸ ತಂದೊಡ್ಡುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಸಮೀಕ್ಷಗಳು ಹೇಳುವಂತೆ ಜಗತ್ತಿನ ಒಟ್ಟು ಸೆಲ್ಫಿ ಸಾವುಗಳಲ್ಲಿ ಶೇ.60 ಭಾರತದಲ್ಲಿ ಸಂಭವಿಸಿದೆ. ಒಂದೂವರೆ ವರ್ಷದಲ್ಲಿ 127 ಮಂದಿ ಸೆಲ್ಫಿಗೆ ಬಲಿಯಾಗಿದ್ದು, ಈ ಪೈಕಿ 76 ಮಂದಿ ಭಾರತದವರು. ಸೆಲ್ಫಿ ಗೀಳು ಈಗ ಮಕ್ಕಳು, ಹರೆಯದವರು, ಮಹಿಳೆಯರು, ಪುರುಷರು ವೃದ್ಧರು ಎಂಬ ಬೇಧವಿಲ್ಲದೆ ಎಲ್ಲರನ್ನೂ ಆವರಿಸಿಕೊಂಡಿದೆ. ಅದರಲ್ಲೂ ಯುವ ಜನಾಂಗ ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುವು ಒಂದು ಲೈಕ್‌ ಅಥವಾ ಒಂದು ಕಮೆಂಟ್‌ಗಾಗಿ ಪ್ರಾಣವನ್ನೇ ಪಣಕ್ಕೊಡ್ಡಿ ಸೆಲ್ಫಿ ಫೊಟೊ ತೆಗೆಯುವ ಸಾಹಸಕ್ಕಿಳಿಯುತ್ತಿರುವುದು ನಿಜಕ್ಕೂ ಗಂಭೀರವಾಗಿ ಚಿಂತಿಸಬೇಕಾದ ವಿಷಯ. ಹೆಚ್ಚಿನ ಸೆಲ್ಫಿ ಸಾವುಗಳು ಸಂಭವಿಸಿರುವುದು ನೀರಿನಲ್ಲಿ. ಅತಿ ಎತ್ತರದ ಜಾಗ, ರೈಲು ಹಳಿ, ಕಡಿದಾದ ಪ್ರದೇಶಗಳು,ಜಲಪಾತ, ನದಿ, ಕೆರೆ, ಸಮುದ್ರ ಕಿನಾರೆ ಸಾಮಾನ್ಯವಾಗಿ ಸೆಲ್ಫಿ ತೆಗೆಯುವವರ ಮೆಚ್ಚಿನ ಜಾಗಗಳು. ಅದರಲ್ಲೂ ಈಗ ಚಲಿಸುತ್ತಿರುವ ರೈಲಿನ ಜತೆಗೆ ಸೆಲ್ಫಿ ತೆಗೆದು ಸೋಷಿಯಲ್‌ ಮೀಡಿಯಾಗಳಲ್ಲಿ ಹಾಕಿ ಮೆಚ್ಚುಗೆ ಪಡೆಯುವುದು ಹೊಸ ಪ್ರವೃತ್ತಿ. ಇದು ಅತ್ಯಂತ ಅಪಾಯಕಾರಿಯಾದ ಸೆಲ್ಫಿ ಸಾಹಸ. ಫೋಟೊ ತೆಗೆಯುವುದರಲ್ಲಿ ಮಗ್ನರಾಗಿರುವಾಗ ರೈಲು ಸಮೀಪ ಬಂದಿರುವುದು ತಿಳಿಯುವುದಿಲ್ಲ. ಬೆಂಗಳೂರಿನಲ್ಲಿ ಆಗಿರುವುದು ಇದೇ. ಇದೇ ರೀತಿಯಲ್ಲಿ ಡ್ರೈವಿಂಗ್‌ ಮಾಡುವಾಗ ಸೆಲ್ಫಿ ತೆಗೆಯುವ ಸಾಹಸ ಮಾಡುವವರೂ ಇದ್ದಾರೆ. ಮುಂಬೈನ ಸಮುದ್ರ ಕಿನಾರೆಯಲ್ಲಿ ಸೆಲ್ಫಿ ತೆಗೆಯುವವರು ನೀರುಪಾಲಾದ ಘಟನೆಗಳು ಸಂಭವಿಸಿದ ಬಳಿಕ  16 ಸ್ಥಳಗಳನ್ನು ಸೆಲ್ಫಿ ನಿಷೇಧಿತ ಪ್ರದೇಶವೆಂದು ಘೋಷಿಸಿದೆ. 

ಸೆಲ್ಫಿ ಗೀಳಿಗೆ ಬುದ್ಧಿವಂತರು, ದಡ್ಡರು, ಅಮಾಯಕರು, ವಿದ್ಯಾವಂತರು, ಅವಿದ್ಯಾವಂತರೂ ಎಂಬ ಬೇಧವಿಲ್ಲ. ಭಾರೀ ಬುದ್ಧಿವಂತರೂ ಕೂಡ ಸೆಲ್ಫಿ ತೆಗೆಯಲು ಹೋಗಿ ಎಡವಟ್ಟು ಮಾಡಿಕೊಂಡಿರುವ ಹಲವು ಉದಾಹರಣೆಗಳಿವೆ.  ಪುರುಷರಿಗಿಂತಲೂ ಮಹಿಳೆಯರಿಗೆ ಸೆಲ್ಫಿ ಹುಚ್ಚು ಹೆಚ್ಚು. ಆದರೆ ಅಪಾಯಕಾರಿ ಸೆಲ್ಫಿ ತೆಗೆಯುವುದರಲ್ಲಿ ಮಹಿಳೆಯರಿಗಿಂತ ಪುರುಷರು ಮುಂದು. ಮನಶಾÏಸ್ತ್ರಜ್ಞರ ಪ್ರಕಾರ ಮನುಷ್ಯನೊಳಗಿರುವ ತನ್ನನ್ನು ಪ್ರಚಾರಪಡಿಸಿಕೊಳ್ಳುವ ಬಯಕೆ ಕಾರಣ. ತಮ್ಮನ್ನು ಉಳಿದವರು ಮೆಚ್ಚಿಕೊಳ್ಳಬೇಕು, ಹೊಗಳಬೇಕು ಎಂದು ಸಾಮಾನ್ಯವಾಗಿ ಎಲ್ಲರೂ ಬಯಸುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆಗಳು, ಸಿಗುವುದರಿಂದ ಎಷ್ಟೇ ಅಪಾಯವಿದ್ದರೂ ಲೆಕ್ಕಿಸದೆ ಸೆಲ್ಫಿ ಫೋಟೊ ತೆಗೆಯುತ್ತಾರೆ. ಬಹುತೇಕ ಸೆಲ್ಫಿ ಹುಚ್ಚಿಗೆ ಬಲಿಯಾದವರು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು ಎನ್ನುವ ಅಂಶ ಈ ವಿಷಯವನ್ನು ದೃಢಪಡಿಸುತ್ತದೆ. ನಾನು ಮಹಾನ್‌ ವ್ಯಕ್ತಿ ಎಂಬ ಅತಿಯಾದ ಮೇಲರಿಮೆಯ ಭಾವನೆ ಅಥವ ನಾನೇನೂ ಅಲ್ಲ ಎಂಬ ತೀರಾ ಕೀಳರಿಮೆಯ ಭಾವನೆ ಇರುವ ವ್ಯಕ್ತಿಗಳೇ ಹೆಚ್ಚಾಗಿ ಅಪಾಯಕಾರಿ ಸೆಲ್ಫಿ ತೆಗೆಯಲು ಮುಂದಾಗುತ್ತಾರೆ ಎನ್ನುವುದು ಈ ಕುರಿತು ಅಧ್ಯಯನ ಮಾಡಿದವರು ಕಂಡುಕೊಂಡಿರುವ ವಿಚಾರ. ಏನೇ ಆದರೂ ಕಾನೂನು ಮಾಡಿ ಸೆಲ್ಫಿ ಹುಚ್ಚು ಬಿಡಿಸುವುದು ಅಸಾಧ್ಯ. ಅಪಾಯಕಾರಿ ಸೆಲ್ಫಿ ತೆಗೆಯುವುದೆಂದರೆ ನಮ್ಮ ಪ್ರಾಣವನ್ನು ನಾವೇ ತೆಗೆಯುವುದು ಎಂಬ ಅರಿವು ಮೂಡಿದರೆ ಈ ಹುಚ್ಚಿಗೆ ತುಸು ಅಂಕುಶ ಹಾಕಬಹುದು.

ಟಾಪ್ ನ್ಯೂಸ್

Munirathna

Legal Action: ಮುನಿರತ್ನ ವಿಧಾನಸಭೆ ಸದಸ್ಯತ್ವ ಅಮಾನತು?

BJP-Meeting

By Election: ಚನ್ನಪಟ್ಟಣ ಬಿಜೆಪಿಗೆ ಕೇಳಲು ಕೋರ್‌ಕಮಿಟಿ ಸೂತ್ರ!

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

Murder-Represent

Bengaluru: ಅಕ್ರಮ ಸಂಬಂಧವೇ ನೇಪಾಲಿ ಮಹಿಳೆಯ ಕೊಲೆಗೆ ಕಾರಣ

Tirupati ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ತುಪ್ಪ ಗುಣಮಟ್ಟ ಪರಿಶೀಲನೆ ಆರಂಭ

Tirupati ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ತುಪ್ಪ ಗುಣಮಟ್ಟ ಪರಿಶೀಲನೆ ಆರಂಭ

Train: ಮಂಗಳೂರು-ಸುಬ್ರಹ್ಮಣ್ಯ “ಮೆಮು’ ರೈಲು ಪುನರಾರಂಭ?

Train: ಮಂಗಳೂರು-ಸುಬ್ರಹ್ಮಣ್ಯ “ಮೆಮು’ ರೈಲು ಪುನರಾರಂಭ?

Fish: ಬಂಗುಡೆಗೆ ಬರ; ಮತ್ಸ್ಯೋದ್ಯಮಕ್ಕೆ ಹೊಡೆತ; 2 ತಿಂಗಳಾದರೂ ಸುಧಾರಣೆ ಇಲ್ಲ

Fish: ಬಂಗುಡೆಗೆ ಬರ; ಮತ್ಸ್ಯೋದ್ಯಮಕ್ಕೆ ಹೊಡೆತ; 2 ತಿಂಗಳಾದರೂ ಸುಧಾರಣೆ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreme-Court

Supreme Court: ಪೋಕ್ಸೋ ವ್ಯಾಪ್ತಿ ವಿಸ್ತರಣೆ: ಸುಪ್ರೀಂ ತೀರ್ಪು ಐತಿಹಾಸಿಕ

Karnataka: ಶಾಲೆಗಳು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಪರಿಹರಿಸಿ

Karnataka: ಶಾಲೆಗಳು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಪರಿಹರಿಸಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Munirathna

Legal Action: ಮುನಿರತ್ನ ವಿಧಾನಸಭೆ ಸದಸ್ಯತ್ವ ಅಮಾನತು?

BJP-Meeting

By Election: ಚನ್ನಪಟ್ಟಣ ಬಿಜೆಪಿಗೆ ಕೇಳಲು ಕೋರ್‌ಕಮಿಟಿ ಸೂತ್ರ!

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

Murder-Represent

Bengaluru: ಅಕ್ರಮ ಸಂಬಂಧವೇ ನೇಪಾಲಿ ಮಹಿಳೆಯ ಕೊಲೆಗೆ ಕಾರಣ

Tirupati ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ತುಪ್ಪ ಗುಣಮಟ್ಟ ಪರಿಶೀಲನೆ ಆರಂಭ

Tirupati ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ತುಪ್ಪ ಗುಣಮಟ್ಟ ಪರಿಶೀಲನೆ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.