ಆದ್ಯತೆಯಲ್ಲಿ ಸಮಸ್ಯೆ ಬಗೆಹರಿಸಿ: ನಗದು ಅಭಾವ


Team Udayavani, Apr 19, 2018, 7:00 AM IST

16.jpg

ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳ ಎಟಿಎಂಗಳಲ್ಲಿ ನಗದು ಅಭಾವ ಕಾಣಿಸಿಕೊಂಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಮುಖ್ಯವಾಗಿ ಚುನಾವಣೆಯ ಹೊಸ್ತಿಲಲ್ಲಿರುವ ನಮ್ಮ ರಾಜ್ಯದ ಕೆಲ ನಗರಗಳ ಎಟಿಎಂಗಳಲ್ಲಿ ಹಣವಿಲ್ಲ. ಎಟಿಎಂಗಳ ಎದುರು ಇರುವ ಜನರ ಸರತಿ ಸಾಲು ನೋಟು ಅಪನಗದೀಕರಣ ಸಂದರ್ಭದ ಪರಿಸ್ಥಿತಿಯನ್ನು ನೆನಪಿಸುತ್ತಿದೆ. ಕೆಲವು ಎಟಿಎಂಗಳನ್ನು ನಗದು ಇಲ್ಲ ಎಂಬ ಕಾರಣಕ್ಕೆ ಖಾಯಂ ಆಗಿ ಮುಚ್ಚಲಾಗಿದೆ. ಜನರು ದೈನಂದಿನ ಖರ್ಚುವೆಚ್ಚದ ಹಣಕ್ಕಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಮಧ್ಯ ಪ್ರದೇಶ, ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ, ದಿಲ್ಲಿಯಲ್ಲೂ ನಗದು ಅಭಾವ ತಲೆದೋರಿರುವ ಕುರಿತು ವರದಿಯಾಗಿದೆ. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಕಳೆದೊಂದು ತಿಂಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿವೆ. 

ಹೀಗೆ ದಿಢೀರ್‌ ಎಂದು ನಗದಿನ ಕೊರತೆ ಉಂಟಾಗಲು ಕಾರಣ ಏನು ಎನ್ನುವುದು ಜನರನ್ನು ಕಾಡುತ್ತಿರುವ ಪ್ರಶ್ನೆ. ಸದ್ಯದಲ್ಲಿಯೇ ಚುನಾವಣೆ ಎದುರಿಸಲಿರುವ ಕೆಲವು ರಾಜ್ಯಗಳಲ್ಲಿಯೇ ನಗದು ಕೊರತೆ ಹೆಚ್ಚಿದೆ. ಜತೆಗೆ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆಯೂ ನಡೆಯವಲಿರುವುದರಿಂದ ನಗದು ಸಂಗ್ರಹ ಪ್ರಾರಂಭವಾಗಿರುವ ಗುಮಾನಿಯೂ ಇದೆ. ಸಾಮಾನ್ಯವಾಗಿ ಜನವರಿಯಿಂದ ಮೇ ತನಕ ಹೆಚ್ಚು ಆರ್ಥಿಕ ವಹಿವಾಟುಗಳು ನಡೆಯುವ ಕಾಲ. ಸಹಜವಾಗಿ ಈ ಸಂದರ್ಭದಲ್ಲಿ ಹಣದ ಚಲಾವಣೆಯೂ ಹೆಚ್ಚಿರುತ್ತದೆ. ಹೀಗಾಗಿ ಕೆಲವು ಕಡೆ ನಗದು ಕೊರತೆ ಉಂಟಾಗಿರುವ ಸಾಧ್ಯತೆ ಇದೆ ಎನ್ನುವುದು ಸರಕಾರ ನೀಡುತ್ತಿರುವ ಸಮಜಾಯಿಷಿ. ಕಳೆದ ಮೂರು ತಿಂಗಳಲ್ಲಿ ಎಟಿಎಂಗಳಿಂದ ನಗದು ಹಿಂದೆಗೆತ ಹೆಚ್ಚಾಗಿದೆ ಎನ್ನುವ ಅರುಣ್‌ ಜೈಟ್ಲೀ ಹೇಳಿಕೆ ಇದನ್ನು ಪುಷ್ಟೀಕರಿಸುತ್ತದೆ. ಆದರೆ ಆರ್ಥಿಕತೆಯಲ್ಲಿ ಬರೀ 13 ದಿನಗಳಲ್ಲಿ 45,000 ಕೋ. ರೂ. ನಗದಿಗೆ ಬೇಡಿಕೆಯಿತ್ತು ಎಂಬ ಅಂಕಿಅಂಶ ಮಾತ್ರ ಬೇರೆಯದ್ದೇ ಕತೆ ಹೇಳುತ್ತಿದೆ. ಹೀಗೆ ಬೇಡಿಕೆ ದಿಢೀರ್‌ ಏರಿಕೆಯಾಗಲು ಕಾರಣ ಏನು ಎನ್ನುವುದನ್ನು ಸರಕಾರ ಪತ್ತೆ ಹಚ್ಚಬೇಕು. 

ಆದರೆ ಒಟ್ಟಾರೆ ಪರಿಸ್ಥಿತಿಯನ್ನು ಗಮನಿಸುವಾಗ ಜನರು ಆತಂಕಕ್ಕೀಡಾಗುವ ಅಗತ್ಯವಿಲ್ಲ ಎಂದೆನಿಸುತ್ತಿದೆ. ಪ್ರಸ್ತುತ 18 ಲಕ್ಷ ಕೋ. ರೂ. ಚಲಾವಣೆಯಲ್ಲಿದೆ. ಇದು ಅಪನಗದೀಕರಣದ ಸಂದರ್ಭದಲ್ಲಿ ಇದ್ದ ನಗದು ಚಲಾವಣೆಗಿಂತ ಹೆಚ್ಚಿನ ಮೊತ್ತ.ಅಂದರೆ ಚಲಾವಣೆಯಲ್ಲಿರುವ ಒಟ್ಟು ನಗದು ತೃಪ್ತಿಕರ ಮಟ್ಟದಲ್ಲಿದೆ. ಹೀಗಾಗಿ ದೇಶದ ಕೆಲವು ಕಡೆ ಮಾತ್ರ ನಗದು ಕೊರತೆ ಕಾಣಿಸಿಕೊಂಡಿರುವುದಕ್ಕೆ ಬೇರೆಯೇ ಕಾರಣಗಳಿರಬಹುದು ಎಂಬ ವಾದವನ್ನು ಒಪ್ಪಿಕೊಳ್ಳಬಹುದು.ಸರಕಾರವೇ ಹೇಳಿರುವಂತೆ ನಗದಿನ ಅಸಮಾನ ಹಂಚಿಕೆಯೂ ಆಗಿರಬಹುದು. ಇದನ್ನು ಮೂರು ದಿನಗಳಲ್ಲಿ ಸರಿಪಡಿಸುತ್ತೇವೆ ಎಂದು ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಭರವಸೆ ನೀಡಿರುವುದರಿಂದ ಸದ್ಯ ನೆಮ್ಮದಿಯಿಂದಿರಬಹುದು. ಅದೇ ರೀತಿ ಸಮಸ್ಯೆಯ ಮೂಲವನ್ನು ಪತ್ತೆಹಚ್ಚಲು ಆರ್‌ಬಿಐ ಸಮಿತಿ ರಚನೆ ಮಾಡಿರುವುದು ಕೂಡಾ ಸ್ವಾಗತಾರ್ಹ. 

ಡಿಜಿಟಲ್‌ ವಹಿವಾಟಿಗೆ ಹೆಚ್ಚಿನ ಉತ್ತೇಜನ ನೀಡಬೇಕೆಂಬ ಉದ್ದೇಶದಿಂದ ಪ್ರಧಾನಿ ಮೋದಿ 2016ರ ನವಂಬರ್‌ನಲ್ಲಿ 500 ಮತ್ತು 1000 ರೂ. ನೋಟುಗಳ ಚಲಾವಣೆ ರದ್ದುಪಡಿಸುವ ನಿರ್ಧಾರ ಘೋಷಿಸಿದ್ದರು. ಈ ಸಂದರ್ಭದಲ್ಲಿ ಕೆಲ ದಿನಗಳ ಮಟ್ಟಿಗೆ ಡಿಜಿಟಲ್‌ ವಹಿವಾಟಿನತ್ತ ಜನರು ವಾಲಿದರೂ ಇದರಲ್ಲಿರುವ ಹಲವು ಅಡೆತಡೆಗಳಿಂದ ಬೇಸತ್ತು ನಗದು ವಹಿವಾಟಿನತ್ತ ಮರಳಿದ್ದಾರೆ. ಹೀಗಾಗಿ ವ್ಯವಸ್ಥೆಯಲ್ಲಿ ನಗದು ಸರಾಗವಾಗಿ ಹರಿದಾಡದಿದ್ದರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮದುವೆ, ಹಬ್ಬಹರಿದಿನಗಳಂತಹ ದಿನಗಳಲ್ಲಿ ನಗದು ಬೇಡಿಕೆ ಹೆಚ್ಚಳವನ್ನು ಮುಂದಾಗಿಯೇ ಅಂದಾಜಿಸಿ ಸಮರ್ಪಕ ವ್ಯವಸ್ಥೆ ಮಾಡುವುದು ಆರ್‌ಬಿಐ ಕರ್ತವ್ಯ. ಆದರೆ ಆರ್‌ಬಿಐ ಇದಕ್ಕೆ ತದ್ವಿರುದ್ಧವಾಗಿ ಸಮಸ್ಯೆ ಉಲ್ಬಣಿಸಿದ ಬಳಿಕ 500 ರೂ. ನೋಟನ್ನು ಹೆಚ್ಚು ಮುದ್ರಿಸುವಂತಹ ಪರಿಹಾರೋಪಾಯಗಳನ್ನು ಹುಡುಕುತ್ತಿದೆ. ಇದೇ ವೇಳೆ ನಗದು ಹಣವನ್ನು ಹಿಡಿದಿಡುವ ಪ್ರಯತ್ನಗಳಾಗುತ್ತಿರುವ ಸಂದೇಹವೂ ಇದೆ.

ಚಿಲ್ಲರೆ ಮತ್ತು ಅಸಂಘಟಿತ  ವಲಯದ ಶೇ.90ಕ್ಕಿಂತಲೂ ಹೆಚ್ಚಿನ ವಹಿವಾಟುಗಳು ನಗದನ್ನು ಅವಲಂಬಿಸಿವೆ. ನಗದು ಪೂರೈಕೆಯಲ್ಲಾಗುವ ವ್ಯತ್ಯಯದ ಮೊದಲ ಪರಿಣಾವಾಗುವುದೇ ಈ ವಲಯಗಳ ಮೇಲೆ. ಈ ವಲಯಗಳು ಹದತಪ್ಪಿದರೆ ಇಡೀ ಆರ್ಥಿಕ ವ್ಯವಸ್ಥೆಯೇ ಅಸ್ತವ್ಯಸ್ತವಾಗಬಹುದು. ಏಕೆಂದರೆ ನಮ್ಮ ಆರ್ಥಿಕತೆಯ ದೊಡ್ಡ ಪಾಲು ಈ ವಲಯಗಳದ್ದು.  ಈಗ ಕಾಣಿಸಿಕೊಂಡಿರುವ ನಗದು ಕೊರತೆಯ ಖಚಿತ ಕಾರಣ ಏನೇ ಇದ್ದರೂ ಈಗ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವುದು ಸರಕಾರದ ಮುಖ್ಯ ಆದ್ಯತೆಯಾಗಬೇಕು. 

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಐಪಿ ಭದ್ರತೆಯಿಂದ ಎನ್‌ಎಸ್‌ಜಿಗೆ ಮುಕ್ತಿ: ಸಮುಚಿತ ನಿರ್ಧಾರ

National Security Guard: ವಿಐಪಿ ಭದ್ರತೆಯಿಂದ ಎನ್‌ಎಸ್‌ಜಿಗೆ ಮುಕ್ತಿ: ಸಮುಚಿತ ನಿರ್ಧಾರ

Islamabad: ಪಾಕ್‌ನ ಇಬ್ಬಂದಿತನಕ್ಕೆ ಕಿಡಿ: ಜೈಶಂಕರ್‌ ನಡೆ ಶ್ಲಾಘನೀಯ

ಕ್ಯಾನ್ಸರ್‌ ಕಾಯಿಲೆ: ನಿರಂತರ ಜಾಗೃತಿ ಅಗತ್ಯಕ್ಯಾನ್ಸರ್‌ ಕಾಯಿಲೆ: ನಿರಂತರ ಜಾಗೃತಿ ಅಗತ್ಯ

India: ಕ್ಯಾನ್ಸರ್‌ ಕಾಯಿಲೆ; ನಿರಂತರ ಜಾಗೃತಿ ಅಗತ್ಯ

Canada: ಜಸ್ಟಿನ್‌ ಟ್ರಾಡೊ ಉದ್ಧಟತನಕ್ಕೆ ತಕ್ಕ ಪ್ರತಿಕ್ರಿಯೆ

Canada: ಜಸ್ಟಿನ್‌ ಟ್ರಾಡೊ ಉದ್ಧಟತನಕ್ಕೆ ತಕ್ಕ ಪ್ರತಿಕ್ರಿಯೆ

BAnga

Bangladesh Unrest: ಹಿಂದೂ ಸಮುದಾಯದ ರಕ್ಷಣೆ: ಬಾಂಗ್ಲಾ ಸರಕಾರ ಬದ್ಧತೆ ತೋರಲಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.