ನೋಟು ರದ್ದು ಘೋರ ವೈಫ‌ಲ್ಯವಂತೂ ಅಲ್ಲ: ಇನ್ನೂ ಸಮಯ ಬೇಕು


Team Udayavani, Sep 1, 2017, 8:56 AM IST

01-ANKANA-3.jpg

ಆಹಾರವಸ್ತುಗಳು ಬೆಲೆ ಇಳಿದಿರುವುದು, ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿರುವುದು ಮತ್ತು ಕಪ್ಪುಹಣದ ಸೃಷ್ಟಿಗೆ ಲಗಾಮು ಬಿದ್ದಿರುವುದೆಲ್ಲ ನೋಟು ರದ್ದತಿಯ ಪರಿಣಾಮಗಳು. 

ಕಳೆದ ವರ್ಷ ನ.8ರಂದು ಪ್ರಧಾನಿ ಮೋದಿ ಕೈಗೊಂಡ ಕಪ್ಪುಹಣದ ಮೇಲಿನ ಸರ್ಜಿಕಲ್‌ ಸ್ಟ್ರೈಕ್‌ ಎಂದು ಬಣ್ಣಿಸಲಾಗಿದ್ದ ನೋಟು ರದ್ದು ನಿರ್ಧಾರ ಫ‌ಲಿತಾಂಶವನ್ನು ಆರ್‌ಬಿಐ ನಿನ್ನೆ ಬಹಿರಂಗಪಡಿಸಿದೆ. ರದ್ದು ಮಾಡಲಾದ 500 ಮತ್ತು 1000 ನೋಟುಗಳ ಪೈಕಿ ಶೇ.99 ನೋಟುಗಳು ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿ ಬಂದಿದೆ ಎಂದು ಆರ್‌ಬಿಐಯ ವಾರ್ಷಿಕ ವರದಿ ತಿಳಿಸಿದೆ. ನೋಟು ರದ್ದು ಮಾಡುವಾಗ 15.44 ಲಕ್ಷ ಕೋಟಿ 500 ಮತ್ತು 1000 ರೂ. ನೋಟುಗಳು ಚಲಾವಣೆಯಲ್ಲಿದ್ದವು. ಆರ್‌ಬಿಐ ವರದಿ ಪ್ರಕಾರ ಈ ಪೈಕಿ 15.28 ಲಕ್ಷ ಕೋಟಿ ನೋಟುಗಳು ವಾಪಸು ಬಂದಿದೆ. ಅಂದರೆ ಶೇ.98.96 ನೋಟುಗಳನ್ನು ಜನರು ಮರಳಿ ಬ್ಯಾಂಕುಗಳಿಗೆ ನೀಡಿದ್ದಾರೆ ಎಂದಾಯಿತು. ಇನ್ನುಳಿದಿರುವುದು ಬರೀ 26,000 ನೋಟುಗಳು ಮಾತ್ರ. ಚಲಾವಣೆಯಲ್ಲಿದ್ದ ಎಲ್ಲ ಕರೆನ್ಸಿ ನೋಟುಗಳು ವಾಪಸು ಬಂದಿರುವುದರಿಂದ ಕಪ್ಪು ಹಣ ಎಲ್ಲಿದೆ ಎಂಬ ಪ್ರಶ್ನೆ ಈಗ ಎದುರಾಗಿದೆ. ಆರ್‌ಬಿಐ ಅಂಕಿಅಂಶಗಳು ಬಹಿರಂಗಗೊಂಡಂತೆಯೇ ವಿಪಕ್ಷಗಳೆಲ್ಲ ಪ್ರಧಾನಿ ಮೇಲೆ ಮುಗಿಬಿದ್ದಿವೆ. ಕಪ್ಪುಹಣ ನಿಗ್ರಹಿಸುವ ಉದ್ದೇಶವೇ ವಿಫ‌ಲವಾಗಿದೆ ಎಂದು ವಿಪಕ್ಷಗಳು ಟೀಕಿಸುತ್ತಿವೆ. ಸಿಪಿಎಂ ಅಂತೂ ಇದು ದೇಶ ಎಂದಿಗೂ ಕ್ಷಮಿಸದ ಅಪರಾಧ ಎಂದಿದೆ. ಶೇ.1 ಕಪ್ಪು ಹಣ ಪತ್ತೆಗೆ ಇಡೀ ದೇಶವನ್ನು ತಿಂಗಳು ಗಟ್ಟಲೆ ಬ್ಯಾಂಕ್‌-ಎಟಿಎಂಗಳೆದುರು ಹಗಲು ರಾತ್ರಿ ಕ್ಯೂ ನಿಲ್ಲಿಸುವ ಅಗತ್ಯವಿತ್ತೇ? ಜುಜುಬಿ 26,000 ನೋಟುಗಳನ್ನು ಪತ್ತೆ ಹಚ್ಚಲು 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳಬೇಕಿತ್ತೆ? ಎಂಬಿತ್ಯಾದಿ ಪ್ರಶ್ನೆಗಳು ಈಗ ಎದುರಾಗಿವೆ.  

ಆರ್‌ಬಿಐ ಅಂಕಿ ಅಂಶಗಳಿಂದಲೇ ಹೇಳುವುದಾದರೆ ಮೇಲ್ನೋಟಕ್ಕೆ ನೋಟು ನಿಷೇಧ ವಿಫ‌ಲವಾಗಿರುವುದು ನಿಜವೆಂದು ಅನ್ನಿಸುತ್ತಿದೆ. ಏಕೆಂದರೆ ನೋಟು ರದ್ದುಗೊಳಿಸುವಾಗ ಪ್ರಧಾನಿ ಇದು ಕಪ್ಪುಹಣದ ವಿರುದ್ಧದ ಬೃಹತ್‌ ಸಮರ ಎಂದಿದ್ದರು. ತಾವು ಸಂಗ್ರಹಿಸಿಟ್ಟ ನೋಟಿನ ಕಂತೆಗಳೆಲ್ಲ ರದ್ದಿ ಕಾಗದವಾಗಿ ಕಾಳಧನಿಕರೆಲ್ಲ ದಿವಾಳಿ ಎದ್ದು ಹೋಗಿ ಬೀದಿಗೆ ಬಂದು ನಿಲ್ಲುತ್ತಾರೆ. ಕಪ್ಪುಹಣ ಕುಳಗಳ ಲೋಡುಗಟ್ಟಲೆ ಹಣ ಮೌಲ್ಯ ಕಳೆದುಕೊಂಡು ಬೀದಿಗೆ ಬೀಳುತ್ತದೆ ಎಂಬ ಅತಿರೇಕದ ಕಲ್ಪನೆಯನ್ನು ಇಟ್ಟುಕೊಂಡವರಿಗೆ ಭ್ರಮನಿರಸನವಾಗಿರುವುದು ನಿಜ. ನೋಟು ರದ್ದು ಪಡಿಸಿದ ನಿರ್ಧಾರವನ್ನು ಅನುಷ್ಠಾನಿಸುವಲ್ಲಿ ಸರಕಾರ ಎಡವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆರ್‌ಬಿಐ ಇಂತಹ ಒಂದು ಬೃಹತ್‌ ಆರ್ಥಿಕ ಸುಧಾರಣೆಗೆ ಏನೇನೂ ತಯಾರಿ ಮಾಡಿಕೊಂಡಿರಲಿಲ್ಲ ಎಂದು ಅನಂತರ ತಿಂಗಳುಗಟ್ಟಲೆ ಅನುಭವಿಸಿದ ಅಧ್ವಾನಗಳಿಂದಲೇ ಸ್ಪಷ್ಟವಾಗಿದೆ. ನಿಜವಾಗಿ ನೋಟು ರದ್ದು ಎನ್ನುವುದು ಹಳೇ ನೋಟುಗಳನ್ನು ಹಿಂದಿರುಗಿಸಿ ಹೊಸ ನೋಟುಗಳನ್ನು ಪಡೆಯುವ ಒಂದು ಸರಳ ಪ್ರಕ್ರಿಯೆಯಾಗಿತ್ತು. ಚಲಾವಣೆಯಲ್ಲಿದ್ದ ಶೇ. 86 ನೋಟು ಕ್ಷಣಾರ್ಧದಲ್ಲಿ ಮೌಲ್ಯ ಕಳೆದುಕೊಂಡಾಗ ಆರ್‌ಬಿಐ ಬಳಿ ಇಷ್ಟೇ ಮೌಲ್ಯದ ಹೊಸ ನೋಟುಗಳ ಸಂಗ್ರಹವೇ ಇರಲಿಲ್ಲ. ಆಗ ಇದ್ದದ್ದು ಬರೀ 94,660 ಕೋ. ರೂ. ಮೌಲ್ಯದ 2,000 ನೋಟುಗಳು ಮಾತ್ರ. 500 ರೂ. ಮುದ್ರಣವಾಗಿರಲೇ ಇಲ್ಲ. ಹೀಗೆ ಬ್ಯಾಂಕುಗಳಲ್ಲಿ ಹಣ ಇಲ್ಲ ಎಂದು ತಿಳಿದಾಗ ಜನರು ಕಂಗಾಲಾಗಿದ್ದು ಸಹಜವಾಗಿತ್ತು. ಆದರೆ ವಿಪಕ್ಷಗಳು ಟೀಕಿಸಿರುವಂತೆ ನೋಟು ರದ್ದು ಘೋರ ವೈಫ‌ಲ್ಯವಂತೂ ಅಲ್ಲ. 

ಮೊದಲಾಗಿ ಶೇ. 99 ಹಳೇ ನೋಟುಗಳು ಬ್ಯಾಂಕಿಗೆ ಮರಳಿ ಬಂದಿದ್ದರೂ ಇದರಲ್ಲಿ ಕಪ್ಪೆಷ್ಟು, ಬಿಳಿ ಎಷ್ಟು ಎನ್ನುವ ಲೆಕ್ಕ ಇನ್ನೂ ಸಿಕ್ಕಿಲ್ಲ. ನೋಟು ರದ್ದಾದ ಬಳಿಕ ನಡೆದ ಐಟಿ ದಾಳಿಗಳಲ್ಲಿ ಕಂತೆ ಕಂತೆ 2,000 ನೋಟುಗಳು ಸಿಕ್ಕಿರುವುದು ಕಪ್ಪುಹಣ ಇದ್ದವರು ಅಡ್ಡದಾರಿಯಿಂದ ಬಿಳಿ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ. 29,000 ಕೋ. ರೂ. ಅಘೋಷಿತ ಆದಾಯವನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. 18 ಲಕ್ಷ ಅನುಮಾನಾಸ್ಪದ ಖಾತೆಗಳಲ್ಲಿ 3 ಲಕ್ಷ ಕೋ. ರೂ. ಹಣ ಇರುವುದು ಪತ್ತೆಯಾಗಿದೆ. ಹಣದುಬ್ಬರ ಮತ್ತು ಆಹಾರವಸ್ತುಗಳು ಬೆಲೆ ಇಳಿದಿರುವುದು, ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿರುವುದು, ಡಿಜಿಟಲ್‌ ವ್ಯವಹಾರಗಳಿಗೆ ಪ್ರೋತ್ಸಾಹ ಸಿಕ್ಕಿರುವುದು ಮತ್ತು ಕಪ್ಪುಹಣದ ಸೃಷ್ಟಿಗೆ ಲಗಾಮು ಬಿದ್ದಿರುವುದೆಲ್ಲ ನೋಟು ರದ್ದತಿಯ ಪರಿಣಾಮಗಳು. ತತ್‌ಕ್ಷಣಕ್ಕೆ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮಗಳಾಗಿದ್ದರೂ ಭವಿಷ್ಯದಲ್ಲಿ ಅನೇಕ ಪ್ರಯೋಜನಗಳಿವೆ ಎಂದು ದೇಶವಿದೇಶಗಳ ಆರ್ಥಿಕ ತಜ್ಞರೇ ಹೇಳುತ್ತಿದ್ದಾರೆ.

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.