ಸಂತುಲಿತ ತೀರ್ಪು


Team Udayavani, Nov 10, 2019, 5:55 AM IST

teerpu

ಶತಮಾನಗಳಿಂದ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದ ಅಯೋಧ್ಯೆ ವಿವಾದವನ್ನು ಸುಪ್ರೀಂ ಕೋರ್ಟ್‌ ಕೊನೆಗೂ ಬಗೆಹರಿಸಿದೆ. ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಸಾಧ್ಯವಾದಷ್ಟು ಸೌಹಾರ್ದಯುತವಾಗಿ ವಿವಾದವನ್ನು ಮುಕ್ತಾಯಗೊಳಿಸಲು ನ್ಯಾಯಾಲಯ ಶ್ರಮಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕಿಂತ ಉತ್ತಮ ತೀರ್ಪನ್ನು ನೀಡುವುದು ಸಾಧ್ಯವಿರಲಿಲ್ಲ. ತೀರ್ಪಿನಿಂದ ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಎಲ್ಲ ಪಕ್ಷಗಳು ತೀರ್ಪನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿವೆ. ಇಂದಿನ ದಿನ ದೇಶದ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿ ದಾಖಲಾಗಿದೆ. ಯಾವುದೇ ಅತಿರೇಕಗಳಿಗೆ ಅವಕಾಶ ಇಲ್ಲದಂತೆ ಸಮಚಿತ್ತದ ಮತ್ತು ಸಂತುಲಿತವಾದ ತೀರ್ಪನ್ನು ನೀಡಿದ ಮುಖ್ಯ ನ್ಯಾಯಾಧೀಶ ರಂಜನ್‌ ಗೊಗೋಯ್‌ ನೇತೃತ್ವದ ಪಂಚ ಸದಸ್ಯ ಪೀಠವನ್ನು ಈ ದೇಶ ಅಭಿನಂದಿಸಬೇಕು.
ಹಾಗೆ ನೋಡಿದರೆ ತೀರ್ಪಿನಲ್ಲಿ ಜಟಿಲ ಅಥವಾ ಕ್ಲಿಷ್ಟ ಎನ್ನುವಂಥ ಅಂಶಗಳು ಇಲ್ಲ. ಬಹಳ ಸರಳ ಮತ್ತು ನೇರವಾಗಿರುವ ತೀರ್ಪು ಇದು. ರಾಮ ಜನಿಸಿದ ಸ್ಥಳ ಎಂದು ಹಿಂದುಗಳು ನಂಬುತ್ತಿರುವ ಸ್ಥಳದಲ್ಲಿ ಮಂದಿರ ನಿರ್ಮಿಸುವುದು, ಮುಸ್ಲಿಮರಿಗೆ ಮಸೀದಿ ನಿರ್ಮಿಸಲು ಅಯೋಧ್ಯೆಯಲ್ಲೇ ಪ್ರಮುಖವಾದ ಪ್ರದೇಶವೊಂದರಲ್ಲಿ ಐದು ಎಕರೆ ನಿವೇಶನ ನೀಡುವುದು. ಇಷ್ಟೇ ತೀರ್ಪಿನಲ್ಲಿರುವ ಮುಖ್ಯ ಅಂಶ. ಇಷ್ಟು ಸರಳವಾಗಿ ಮುಗಿದು ಹೋದ ಒಂದು ವಿವಾದಕ್ಕಾಗಿ ನಾವು ಕಾಲು ಶತಮಾನದಷ್ಟು ಕಾಲ ನ್ಯಾಯಾಲಯದಲ್ಲಿ ಹೋರಾಡಿ ವ್ಯರ್ಥಗೊಳಿಸಿದ್ದೇವಲ್ಲ! ಇದಕ್ಕಾಗಿ ವ್ಯಯವಾದ ಸಂಪನ್ಮೂಲವೆಷ್ಟು?ಕಳೆದು ಹೋದ ನ್ಯಾಯಾಲಯದ ಅಮೂಲ್ಯ ಸಮಯವೆಷ್ಟು? ಎಷ್ಟು ಜನ ಪ್ರಾಣ ಕಳೆದುಕೊಳ್ಳಬೇಕಾಯಿತು? ಏನೇ ಆದರೂ ಕೊನೆಗೂ ವಿವಾದ ಸೌಹಾರ್ದಯುತವಾಗಿ ಮುಗಿದು ಹೋಯಿತಲ್ಲ ಎನ್ನುವ ಸಮಾಧಾನ ಮಾತ್ರ ಈಗ ಇದೆ.
ಬರೀ 40 ದಿನಗಳಲ್ಲಿ ನ್ಯಾಯಾಲಯ ವಿಚಾರಣೆ ಮುಗಿಸಿ ತೀರ್ಪು ನೀಡಿರುವುದು ಕೂಡಾ ಒಂದು ಗಮನಾರ್ಹ ವಿಚಾರವೇ. ನಮ್ಮ ವ್ಯವಸ್ಥೆ ಸಂಕಲ್ಪ ಮಾಡಿದರೆ ಯಾವ ಕೆಲಸವೂ ಅಸಾಧ್ಯವಲ್ಲ ಎನ್ನುವುದು ಇದರಿಂದ ಸಾಬೀತಾಗುತ್ತದೆ. ದೇಶದಲ್ಲಿ ಈಗ ಇರುವ ರಾಜಕೀಯ ಸ್ಥಿರತೆ ಮತ್ತು ಆಳುವವರ ಇಚ್ಚಾಶಕ್ತಿಯೂ ಹೀಗೊಂದು ದೃಢವಾದ ತೀರ್ಪು ಹೊರಬರುವಲ್ಲಿ ಪೂರಕ ಪಾತ್ರ ನಿಭಾಯಿಸಿದೆ ಎನ್ನುವುದನ್ನು ಅಲ್ಲಗಳೆಯಲಾಗದು.
ಪ್ರಧಾನಿ ಮೋದಿಯವರು ಹೇಳಿರುವಂತೆ ನ್ಯಾಯಾಂಗ ಹೋರಾಟದಲ್ಲಿ ಯಾರೂ ಗೆದ್ದೂ ಇಲ್ಲ, ಯಾರು ಸೋತೂ ಇಲ್ಲ. ಅಂತಿಮವಾಗಿ ನ್ಯಾಯ ಗೆದ್ದಿದೆ. ಈ ಭಾವದಿಂದಲೇ ಎಲ್ಲರೂ ತೀರ್ಪನ್ನು ಸ್ವೀಕರಿಸಬೇಕು. ಆರ್ಥಿಕ ಅಭಿವೃದ್ಧಿಯ ನಾಗಾಲೋಟದಲ್ಲಿರುವ ದೇಶವೊಂದು ಪುರಾತನವಾದ ಧಾರ್ಮಿಕ ವಿವಾದವೊಂದನ್ನು ಹಿಡಿದು ಇನ್ನೂ ನ್ಯಾಯಾಲಯದಲ್ಲಿ ಜಗ್ಗಾಡುವುದು ಯಾವ ರೀತಿಯಲ್ಲೂ ಆರೋಗ್ಯಕಾರಿ ವಿಚಾರವಲ್ಲ.
ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ತ್ಯಾಗ ಮಾಡಬೇಕು ಎನ್ನುವುದೇ ಎಲ್ಲ ಧರ್ಮಗಳ ತತ್ವ‌. ಅಯೋಧ್ಯೆ ವಿಚಾರದಲ್ಲಿ ಈ ತತ್ವ ಹೆಚ್ಚು ಪ್ರಸ್ತುತವಾಗುತ್ತದೆ. ದೇಶದ ಅಭಿವೃದ್ಧಿ, ಸಾಮಾಜಿಕ ಭಾವೈಕ್ಯ, ಧಾರ್ಮಿಕ ಸಹಿಷ್ಣುತೆ ಇತ್ಯಾದಿ ಉದಾತ್ತ ವಿಚಾರಗಳು ಪ್ರಚಲಿತದಲ್ಲಿ ಇರಬೇಕಾದರೆ ಈ ತತ್ವದ ತಳಹದಿ ಗಟ್ಟಿಯಾಗಿರಬೇಕು.
ವಿವಾದ ನಮ್ಮ ಕಾಲದಲ್ಲಿ ಇತ್ಯರ್ಥವಾಗಿರುವುದು ಭವಿಷ್ಯದ ತಲೆಮಾರಿಗೆ ನಾವು ಕೊಟ್ಟ ದೊಡ್ಡದೊಂದು ಕೊಡುಗೆ. ಯಾವುದೋ ಕಾಲದಲ್ಲಿ ನಡೆದು ಹೋದ ಧಾರ್ಮಿಕ ಪ್ರಮಾದವೊಂದು ಎಷ್ಟು ಪೀಳಿಗೆಯ ತನಕ ಮುಂದುವರಿದುಕೊಂಡು ಹೋಗಬಹುದು? ಈಗಾಗಲೇ ಅಯೋಧ್ಯೆಗಾಗಿ ಸಾಕಷ್ಟು ನೆತ್ತರು ಹರಿದಿದೆ. ಭಿನ್ನ ಸಮುದಾಯಗಳ ನಡುವೆ ಎದ್ದಿದ್ದ ಅಪನಂಬಿಕೆಯ ಗೋಡೆಯೊಂದನ್ನು ಕೆಡವಿ ಹಾಕಲೇಬೇಕಿತ್ತು. ಆ ಮೂಲಕ ಸರ್ವರಿಗೂ ನೆಮ್ಮದಿಯ ಸಾಮಾಜಿಕ ವ್ಯವಸ್ಥೆಯೊಂದನ್ನು ನೀಡುವ ಜವಾಬ್ದಾರಿ ನಮ್ಮ ಮೇಲಿತ್ತು. ಅದು ಇಂದು ಸಾಕಾರಗೊಂಡಿದೆ.
ನ್ಯಾಯಾಲಯದ ವ್ಯಾಜ್ಯ ಎಂದರೇ ಹಾಗೆಯೇ. ಇಲ್ಲಿ ಯಾರಾದರೊಬ್ಬರಿಗೆ ಹಿನ್ನಡೆಯಾಗಲೇ ಬೇಕು. ಅದಾಗ್ಯೂ ನ್ಯಾಯಾಲಯ ಎರಡೂ ಸಮುದಾಯಗಳ ನಂಬಿಕೆಗಳಿಗೆ ಹೆಚ್ಚು ಹಾನಿಯಾಗದ ರೀತಿಯಲ್ಲಿ ಸಮಚಿತ್ತದ ತೀರ್ಪೋಂದನ್ನು ನೀಡಿದೆ. ಆದರೆ ಗೆಲುವು ಅಥವಾ ಸೋಲನ್ನು ವೈಯಕ್ತಿಕ ನೆಲೆಯಲ್ಲಾಗಿರುವ ಲಾಭ -ನಷ್ಟ ಎಂದು ಪರಿಭಾವಿಸದೆ ಒಟ್ಟಾರೆ ದೇಶದ ಹಿಂತಚಿಂತನೆಯ ವಿಶಾಲ ದೃಷ್ಟಿಕೋನದಿಂದ ಸ್ವೀಕರಿಸಬೇಕು. ಎಲ್ಲರನ್ನೂ ಒಳಗೊಂಡ ನವ ಭಾರತದ ನಿರ್ಮಾಣಕ್ಕೆ ಈ ತೀರ್ಪು ವೇದಿಕೆಯಾಗಲಿ.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.