ಆರ್ಥಿಕತೆಯನ್ನು ಹಳಿಯೇರಿಸುವ ಕಸರತ್ತು


Team Udayavani, Feb 2, 2020, 6:05 AM IST

kat-56

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ 2020-21ನೇ ಸಾಲಿನ ಬಜೆಟ್‌ ಮಹತ್ವಾಕಾಂಕ್ಷಿ ಭಾರತ, ಎಲ್ಲರನ್ನೂ ತಲುಪುವ ಆರ್ಥಿಕ ಅಭಿವೃದ್ಧಿ ಮತ್ತು ಕಾಳಜಿಯುಕ್ತ ಸಮಾಜ ಎಂಬ ಮೂರು ಧ್ಯೇಯಗಳ ಸುತ್ತ ತಿರುಗುತ್ತದೆ. ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದ ಆರ್ಥಿಕತೆಯಿಂದ 11 ವರ್ಷಗಳಲ್ಲೇ ಕಡಿಮೆ ಅಭಿವೃದ್ಧಿಗೊಂಡ ಆರ್ಥಿಕತೆಯ ಸ್ಥಾನಕ್ಕೆ ದೇಶ ಜಾರಿದ ಹಿನ್ನೆಲೆಯಲ್ಲಿ ಆರ್ಥಿಕತೆಯನ್ನು ಹಳಿಗೆ ತರಲು ಸರಕಾರ ಯಾವ ಕಸರತ್ತು ಮಾಡುತ್ತದೆ ಎಂಬ ಕುತೂಹಲ ಇತ್ತು.

ಆರ್ಥಿಕ ಹಿಂಜರಿತದ ಬಿಸಿ ಸರಕಾರಕ್ಕೆ ತಟ್ಟಿರುವುದು ಬಜೆಟ್‌ನಲ್ಲಿ ವ್ಯಕ್ತವಾಗುತ್ತದೆ. ಸಾಮಾನ್ಯವಾಗಿ ಯಾವುದೇ ಸರಕಾರವಾದರೂ ಆಡಳಿತದ ಮೊದಲ ವರ್ಷದಲ್ಲಿ ಆಯ-ವ್ಯಯದಲ್ಲಿ ತುಸು ಬಿಗುವನ್ನು ಕಾಯ್ದುಕೊಳ್ಳುತ್ತದೆ. ಆದರೆ ಆರ್ಥಿಕ ಪರಿಸ್ಥಿತಿ ಪ್ರತಿಕೂಲವಾಗಿರುವ ಕಾರಣ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ತುಸು ಧಾರಾಳತನವನ್ನು ತೋರಿಸಿದ್ದಾರೆ. ಅದರಲ್ಲೂ ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿದ ಕೊಡುಗೆಗಳು ಸಿಕ್ಕಿವೆ. ಮಧ್ಯಮ ವರ್ಗವನ್ನು ಖುಷಿಪಡಿಸುವ ಉಪಕ್ರಮಗಳು ಬೇಕಾದಷ್ಟು ಇವೆ.

ಆದಾಯ ಕರ ದರಗಳ ಕಡಿತ, ಕೃಷಿಕರ ಆದಾಯವನ್ನು ಹೆಚ್ಚಿಸುವ ಉಪಕ್ರಮಗಳು, ಕಾರ್ಪೊರೇಟ್‌ ಜಗತ್ತಿಗೆ ನೀಡಿದ ಕೊಡುಗೆಗಳು, ಸ್ಟಾರ್ಟ್‌ ಅಪ್‌ಗಳಿಗೆ ಇನ್ನಷ್ಟು ಉತ್ತೇಜನ ಹೀಗೆ ಎಲ್ಲ ವಲಯಗಳಿಗೂ ಅನ್ವಯಿಸುವಂತೆ ವಿವಿಧ ರೀತಿಯ ಕೊಡುಗೆಗಳು, ರಿಯಾಯಿತಿಗಳನ್ನು ನೀಡುವ ಮೂಲಕ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಲಾಗಿದೆ. ಒಟ್ಟಾರೆಯಾಗಿ ಸುಧಾರಣಾವಾದಿ ನೆಲೆಯ ಬಜೆಟ್‌ ಎಂದೇ ಹೇಳಬಹುದಾದರೂ ಕೆಲವೊಂದು ಘೋಷಣೆಗಳು ಮಾತ್ರ ತುಸು ಕಳವಳಕಾರಿಯಾಗಿವೆ.

ಮುಖ್ಯವಾಗಿ ಜೀವ ವಿಮಾ ನಿಗಮಲ್ಲಿರುವ ಸರಕಾರದ ಹಿಡಿತವನ್ನು ಸಡಿಲಗೊಳಿಸುವ ಘೋಷಣೆ ಇಳಿಗಾಲದ ಜೀವನ ಭದ್ರತೆಗಾಗಿ ಎಲ್‌ಐಸಿಯಲ್ಲಿ ಹೂಡಿಕೆ ಮಾಡಿರುವ ಬಡ ಮತ್ತು ಮಧ್ಯಮ ವರ್ಗದವರನ್ನು ಆತಂಕಕ್ಕೆ ದೂಡಿದೆ. ಪಬ್ಲಿಕ್‌ ಇಶ್ಯೂ ಮೂಲಕ ಎಲ್‌ಐಸಿಯಲ್ಲಿರುವ ತನ್ನ ಶೇ. 100 ಬಂಡವಾಳದ ಪೈಕಿ ಕೆಲವು ಪಾಲನ್ನು ಹಿಂದೆಗೆದುಕೊಳ್ಳಲು ಸರಕಾರ ಮುಂದಾಗಿದೆ. ಇದು ಪರೋಕ್ಷವಾಗಿ ಎಲ್‌ಐಸಿಯನ್ನು ಖಾಸಗೀಕರಣಗೊಳಿಸುವ ಹುನ್ನಾರದಂತೆ ಕಾಣಿಸುತ್ತದೆ. ದೇಶದ ಅತಿ ದೊಡ್ಡ ಹಣಕಾಸು ಸಂಸ್ಥೆ, ಅತಿ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿರುವ ಸಂಸ್ಥೆ ಮಾತ್ರವಲ್ಲದೆ ಜನರ ಅತೀವ ವಿಶ್ವಾಸಕ್ಕೆ ಪಾತ್ರವಾದ ಸಂಸ್ಥೆಯೊಂದನ್ನು ಹೀಗೆ ಹಿಂಬಾಗಿಲಿನ ಮೂಲಕ ಖಾಸಗೀಕರಣಗೊಳಿಸುವ ತುರ್ತು ಅಗತ್ಯವೇನಿದೆ ಎಂಬ ಪ್ರಶ್ನೆಗೆ ಉತ್ತರಿಸುವ ಬಾಧ್ಯತೆ ಸರಕಾರಕ್ಕಿದೆ.

ಶಿಕ್ಷಣಕ್ಕೆ ಸುಮಾರು 99 ಸಾವಿರ ಕೋ.ರೂ. ಅನುದಾನವನ್ನು ಘೋಷಿಸಿರುವುದು ಅಪೇಕ್ಷಣೀಯವೇ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಎನ್ನಬಹುದಾದ ಸುಧಾರಣೆಗಳು ಆಗಬೇಕಾಗಿರುವುದು ನಿಜ. ಇದೇ ವೇಳೆ ಶಿಕ್ಷಣದಲ್ಲಿ ವಿದೇಶಿ ಹೂಡಿಕೆಗೆ ಅವಕಾಶ ನೀಡಿರುವ ಪ್ರಸ್ತಾವವನ್ನು ಇಟ್ಟಿರುವುದು ತುಸು ಕಳವಳಕಾರಿ ಸಂಗತಿ. ಇಂಥ ಅಪಾಯಕಾರಿ ಸಾಹಸಕ್ಕಿಳಿಯುವ ಮೊದಲು ಅದರ ಸಾಧಕಬಾಧಕಗಳ ಬಗ್ಗೆ ಸಮಗ್ರವಾದ ಚರ್ಚೆ ನಡೆಯಬೇಕು.

ಜನರ ಜೇಬಿಗೆ ಹೆಚ್ಚು ಹಣ ಹಾಕಬೇಕು ಎನ್ನುವ ನಿರ್ಮಲಾ ಮಾತು ಸತ್ಯ. ಈಗಿನ ಆರ್ಥಿಕ ಹಿಂಜರಿತದ ಮೂಲ ಕಾರಣವೇ ಜನರ ಖರ್ಚು ಮಾಡುವ ಸಾಮರ್ಥ್ಯ ಕಡಿಮೆಯಾಗಿರುವುದು. ಇದರಿಂದಾಗಿ ಬೇಡಿಕೆ ಕುಸಿದು ಎಲ್ಲ ವಲಯಗಳು ಕುಂಟತೊಡಗಿವೆ. ಜನರ ಕೈಯಲ್ಲಿ ಹಣ ಓಡಾಡತೊಡಗಿದರೆ ಚೇತರಿಕೆ ತನ್ನಿಂದ ತಾನೇ ಆಗುತ್ತದೆ.

ಸಾರಿಗೆ, ಎಲೆಕ್ಟ್ರಾನಿಕ್‌ ವಸ್ತುಗಳ ಉತ್ಪಾದನೆಗೆ ಉತ್ತೇಜನ, ಗ್ರಾಮೀಣ ಭಾಗಗಳಿಗೆ ನೀಡಿದ ಕೊಡುಗೆಗಳು ಇತ್ಯಾದಿಗಳಿಂದ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಿದಂತಾಗಿದೆ. ಆದರೆ ಕೃಷಿ ಕ್ಷೇತ್ರಕ್ಕೆ ಘೋಷಿಸಿರುವ ಕೆಲವು ಕೊಡುಗೆಗಳಿಂದ ಬಡ ರೈತನಿಗಿಂತ ಕಾರ್ಪೋರೇಟ್‌ ವಲಯಕ್ಕೆ ಹೆಚ್ಚು ಲಾಭವಾಗಬಹುದು ಎಂಬ ಅನುಮಾನವಿದ್ದು, ಈ ಬಗ್ಗೆ ಗಮನ ಹರಿಸುವುದು ಅಗತ್ಯ. ಸಣ್ಣ ಮತ್ತು ಮಧ್ಯಮ ಹಿಡುವಳಿದಾರರ ಆದಾಯ ಇಮ್ಮಡಿಯಾಗಬೇಕೆ ಹೊರತು ಕೃಷಿ ವಲಯದಲ್ಲಿ ತೊಡಗಿಸಿಕೊಂಡಿರುವ ಕಾರ್ಪೊರೇಟ್‌ ಕಂಪೆನಿಗಳದ್ದಲ್ಲ. ಆರ್ಥಿಕತೆಯ ಬಂಡಿಯ ಗಾಲಿಯೆಂದು ಭಾವಿಸಲಾಗಿರುವ ರಿಯಲ್‌ ಎಸ್ಟೇಟ್‌ ವಲಯವನ್ನು ಕಡೆಗಣಿಸಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಅಂತೆಯೇ ಕುಸಿದಿರುವ ರಫ್ತು ಹೆಚ್ಚಿಸಲು ಯಾವ ಉಪಕ್ರಮವೂ ಕಾಣಿಸುತ್ತಿಲ್ಲ. ರಸಗೊಬ್ಬರ, ಬ್ಯಾಂಕಿಂಗ್‌, ಲಾಜಿಸ್ಟಿಕ್ಸ್‌ ಕಡೆಗಣಿಸಲ್ಪಟ್ಟ ಇನ್ನೂ ಕೆಲವು ವಲಯಗಳು. ಒಟ್ಟಾರೆಯಾಗಿ ಆರ್ಥಿಕತೆಯನ್ನು ಹಳಿಯೇರಿಸಲು ಸಾಕಷ್ಟು ಕಸರತ್ತು ಮಾಡಿರುವುದು ಢಾಳಾಗಿ ಗೋಚರಿಸುತ್ತಿದೆ.

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.