ವಿವಿ ಆಡಳಿತ: ಕೇಂದ್ರ-ರಾಜ್ಯಗಳ ನಡುವೆ ಸಮನ್ವಯ ಅಗತ್ಯ


Team Udayavani, Jan 25, 2025, 6:06 AM IST

PHD

ರಾಜ್ಯ ಮತ್ತು ಕೇಂದ್ರ ಸರಕಾರ‌ಗಳ ನಡುವೆ ಕಳೆದೊಂದು ವರ್ಷದಿಂದ ನಡೆಯು ತ್ತಿರುವ ಸಂಘರ್ಷ ಈಗ ಮತ್ತೂಂದು ಆಯಾಮ ಪಡೆದುಕೊಳ್ಳುವ ಸಾಧ್ಯತೆ­ಯಿದೆ. ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ತಾರ­ತಮ್ಯ ಮಾಡು­ತ್ತಿದ್ದು, ವಿಪಕ್ಷ ಮೈತ್ರಿಕೂಟ ಆಡಳಿತವಿರುವ ರಾಜ್ಯ­ಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಕೇಂದ್ರದ ವಿರುದ್ಧ ಬಹಿರಂಗ ಸಮರ ಸಾರಿದ್ದ ರಾಜ್ಯ ಸರಕಾರ‌ವೀಗ ಉನ್ನತ ಶಿಕ್ಷಣ ಸಂಸ್ಥೆಗಳ ಆಡಳಿತದ ವಿಷಯ­ವನ್ನು ಮುಂದಿಟ್ಟು ಕೇಂದ್ರದ ವಿರುದ್ಧ ಮತ್ತೂಂದು ಸುತ್ತಿನ ಹೋರಾಟಕ್ಕೆ ಅಣಿಯಾಗಿದೆ.

ಕೇಂದ್ರ ಸರಕಾರ‌ದ ಅಧೀನದಲ್ಲಿರುವ ವಿಶ್ವವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ)ವು ದೇಶದ ಎಲ್ಲ ವಿಶ್ವವಿದ್ಯಾನಿಲಯಗಳ ಕುಲಪತಿ ಮತ್ತು ಬೋಧನಾ ಸಿಬಂದಿ ಹಾಗೂ ಕಾಲೇಜುಗಳ ಬೋಧನಾ ಸಿಬಂದಿಯ ನೇಮಕಕ್ಕೆ ಸಂಬಂಧಿಸಿ ರೂಪಿಸಿರುವ ಕರಡು ನಿಯಮಾವಳಿಯ ಬಗೆಗೆ ರಾಜ್ಯ ಸರಕಾರ‌ ತೀವ್ರ ವಿರೋಧ ವ್ಯಕ್ತಪಡಿಸಿದೆ. ಯುಜಿಸಿಯನ್ನು ಬಳಸಿಕೊಂಡು ಕೇಂದ್ರ ಸರಕಾರ‌ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲಣ ರಾಜ್ಯ ಸರಕಾರ‌ಗಳ ಅಧಿಕಾರವನ್ನು ಕಿತ್ತುಕೊಳ್ಳಲು ನಡೆಸಿರುವ ಹುನ್ನಾರ ಇದಾಗಿದೆ ಎಂಬ ಗಂಭೀರ ಆರೋಪವನ್ನು ರಾಜ್ಯದ ಉನ್ನತ ಶಿಕ್ಷಣ ಸಚಿವರು ಮಾಡಿದ್ದಾರೆ. ದೇಶದ ಹಲವು ರಾಜ್ಯ ಸರಕಾರ‌ಗಳು ಅದರಲ್ಲೂ ಮುಖ್ಯವಾಗಿ ವಿಪಕ್ಷ ಮೈತ್ರಿಕೂಟದ ಪಾಲುದಾರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರಕಾರ‌ಗಳು ಕೂಡ ಯುಜಿಸಿ ರೂಪಿಸಿರುವ ಕರಡು ನಿಯಮಾವಳಿಯ ವಿರುದ್ಧ ಅಪಸ್ವರ ಎತ್ತಿವೆ. ಈ ಹಿನ್ನೆಲೆಯಲ್ಲಿ ವಿಪಕ್ಷ ಮೈತ್ರಿಕೂಟ ಅಧಿಕಾರವಿರುವ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಭೆ ಕರೆದು ಯುಜಿಸಿ ಹೊರಡಿಸಿರುವ ಕರಡು ನಿಯಮಾವಳಿಗಳ ಸಾಧಕ-ಬಾಧಕಗಳ ಕುರಿತಂತೆ ಚರ್ಚಿಸಿ, ಸಹಮತದ ನಿರ್ಧಾರವೊಂದನ್ನು ಕೈಗೊಂಡು ಅದನ್ನು ಯುಜಿಸಿ ಮತ್ತು ಕೇಂದ್ರ ಸರಕಾರ‌ದ ಮುಂದಿಡುವ ನಿರ್ಧಾರಕ್ಕೆ ಬಂದಿದೆ.

ಯುಜಿಸಿ ಕರಡು ನಿಯಮಾವಳಿಯ ಪ್ರಕಾರ ವಿಶ್ವವಿದ್ಯಾನಿಲಯಗಳ ಕುಲಪ­ತಿಗಳು ಮತ್ತು ಬೋಧಕ ಸಿಬಂದಿಯ ನೇಮಕದಲ್ಲಿ ಕುಲಾಧಿಪತಿ ಗಳಾಗಿರುವ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಕುಲಪತಿ ನೇಮಕಕ್ಕಾಗಿನ ಶೋಧನಾ ಸಮಿತಿಯಲ್ಲಿ ರಾಜ್ಯ ಸರಕಾರ‌ದ ಏಕೈಕ ಪ್ರತಿನಿಧಿಗೂ ಅವಕಾಶ ನೀಡಲಾಗಿಲ್ಲ. ತನ್ಮೂಲಕ ಕುಲಪತಿ ನೇಮಕದ ಅಧಿಕಾರವನ್ನು ರಾಜ್ಯಗಳಿಂದ ಕಸಿದುಕೊಳ್ಳಲು ಕೇಂದ್ರ ಸರಕಾರ‌ ಮುಂದಾಗಿರುವಂತೆ ತೋರುತ್ತಿದೆ. ಕುಲಪತಿ ಹುದ್ದೆಗೆ ಪಿಎಚ್‌.ಡಿ. ಮತ್ತು ಬೋಧನೆಯ ಅನುಭವ ಇಲ್ಲದವರನ್ನು ಪರಿಗಣಿ­ಸಲು ಹಾಗೂ ಬೋಧಕರ ನೇಮಕ ಮತ್ತು ಭಡ್ತಿಗೆ ಸಂಬಂಧಿಸಿದ ನಿಯ­ ಮಾವಳಿಗಳನ್ನು ಬದಲಾಯಿಸುವ ಪ್ರಸ್ತಾವವನ್ನು ಈ ನಿಯಮಾವಳಿ ಒಳಗೊಂಡಿದೆ. ಇವೆಲ್ಲವನ್ನು ಗಮನಿಸಿದಾಗ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲಣ ರಾಜ್ಯ ಸರಕಾರ‌ಕ್ಕಿದ್ದ ಅಲ್ಪ ಅಧಿಕಾರಕ್ಕೂ ಕತ್ತರಿ ಹಾಕಲು ಯುಜಿಸಿ ಮುಂದಾ ಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.

ಉನ್ನತ ಶಿಕ್ಷಣದಲ್ಲಿ ಕೇಂದ್ರದ ಅಧಿಕಾರ, ಹೊಣೆಗಾರಿಕೆ ಹೆಚ್ಚಿನದಾಗಿದ್ದರೂ ಆಯಾ ರಾಜ್ಯಗಳಿಗೂ ಕೆಲವು ಪ್ರಮುಖ ಜವಾ ಬ್ದಾರಿಗಳಿವೆ. ಇವ್ಯಾವುವನ್ನೂ ಪರಿಗಣಿಸದೆ ಕೇಂದ್ರ, ರಾಜ್ಯಗಳಿಗಿರುವ ಸಂವಿಧಾನಾತ್ಮಕ ಅಧಿಕಾರವನ್ನು ಕಸಿ­ಯಲು ಮುಂದಾಗಿರುವುದು ಒಕ್ಕೂಟ ವ್ಯವಸ್ಥೆಗೆ ಅಪಚಾರವೇ ಸರಿ. ಶಿಕ್ಷಣದ ಗುಣಮಟ್ಟ ವರ್ಧನೆ, ಸುಧಾರಣೆಗಾಗಿನ ಯಾವುದೇ ಉಪಕ್ರ­ಮಗಳು ವ್ಯವಸ್ಥೆಯ ಬಲವರ್ಧನೆಗೆ ಪೂರಕವಾಗಿರಬೇಕೇ ಹೊರತು ದುರ್ಬಲಗೊಳಿಸುವಂತಿರ ಬಾರದು. ಸದ್ಯ ಯುಜಿಸಿ ಹೊರಡಿಸಿರುವ ಕರಡು ನಿಯಮಾವಳಿ ಜಾರಿಯಾ­ಗುವುದಕ್ಕೂ ಮುನ್ನ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ, ಒಕ್ಕೂಟ ವ್ಯವಸ್ಥೆ­ಯನ್ನು ಎತ್ತಿ ಹಿಡಿಯುವ ಸಮತೋಲಿತ ನಿರ್ಧಾರವನ್ನು ಕೇಂದ್ರ ಸರಕಾರ‌ ಕೈಗೊಳ್ಳಬೇಕು. ಶಿಕ್ಷಣದಂತಹ ವಿಷಯದಲ್ಲೂ ರಾಜಕೀಯ ಸಂಘರ್ಷದ ವಾತಾ­ವರಣ ಸೃಷ್ಟಿಸುವುದು ಕೇಂದ್ರ ಅಥವಾ ರಾಜ್ಯ ಸರಕಾರ‌ಗಳಿಗೆ ಶೋಭೆ ತಾರದು.

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.