ಡಿಜಿಟಲ್‌ ಆಗೋಣ ಸರಿ; ಆದರೆ ಅಗತ್ಯ ಮೂಲಸೌಕರ್ಯ ಎಲ್ಲಿ?


Team Udayavani, Jan 6, 2017, 3:45 AM IST

Digtal-india.jpg

ಜನರೆಲ್ಲ ಡಿಜಿಟಲ್‌ ಆಗಿ ಎಂದು ಹೇಳುವ ಕೇಂದ್ರ ಸರಕಾರ ಅದಕ್ಕೆ ಪೂರಕವಾದ ಜನಸ್ನೇಹಿ ವ್ಯವಸ್ಥೆಯನ್ನೂ ತರಬೇಕು. ಸೋವಿ ದರಕ್ಕೆ ಇಂಟರ್ನೆಟ್‌ ಕೊಡದೆ, ಎಲ್ಲೆಡೆ ಕನಿಷ್ಠ ಪಕ್ಷ ಬಿಎಸ್ಸೆನ್ನೆಲ್‌ನ ಇಂಟರ್ನೆಟ್ಟಾದರೂ ಸಿಗುವಂತೆ ಮಾಡದೆ ಎಲ್ಲರೂ ಆನ್‌ಲೈನಲ್ಲೇ ವ್ಯವಹರಿಸಿ ಎಂದು ಸರಕಾರ ಉಪದೇಶ ಮಾಡುವುದಕ್ಕೆ ಅರ್ಥವಿಲ್ಲ.

ಅಪನಗದೀಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಬೆನ್ನಿಗೇ ಎಲ್ಲರೂ ಮೊಬೈಲ್‌ ವ್ಯಾಲೆಟ್‌ಗಳ ಕಡೆಗೆ ಗಮನ ಹರಿಸತೊಡಗಿದ್ದಾರೆ. ಆದರೆ ಮೊಬೈಲ್‌ ಮೂಲಕ ಹಣ ಕಳುಹಿಸುವುದು ಎಷ್ಟು ಸುರಕ್ಷಿತ ಎಂದು ಚಿಂತಿಸಿ ಮುಂದಡಿಯಿಡಬೇಕಾದ ಸ್ಥಿತಿಯಿದೆ. ಇನ್ನು, ಗ್ರಾಮಾಂತರದ ಜನತೆಯ ಬವಣೆ ಕಡೆಗೆ ಸರಕಾರದ ಗಮನ ಕಡಿಮೆಯಾಗಿದೆ ಎಂಬ ಅಪವಾದವೂ ಇದೆ. 

ಪೇಟಿಎಂ, ಫ್ರೀಚಾರ್ಜ್‌, ಮೊಬಿಕ್ವಿಕ್‌ನಂತಹ ಅನೇಕ ಖಾಸಗಿ ಆ್ಯಪ್‌ಗ್ಳಿದ್ದು, ಇವುಗಳಲ್ಲಿನ ಆರ್ಥಿಕ ವ್ಯವಹಾರದ ಸುರಕ್ಷತೆ ಕುರಿತು ಸರಕಾರ ಹೇಗೆ ಭರವಸೆ ಕೊಡುತ್ತದೆ? ಈ ಮೊಬೈಲ್‌ ವ್ಯಾಲೆಟ್‌ನಲ್ಲಿ ಬ್ಯಾಂಕ್‌ನ ಎಟಿಎಂ, ಡೆಬಿಟ್‌/ ಕ್ರೆಡಿಟ್‌ ಕಾರ್ಡ್‌ ಮೂಲಕ ಹಣದ ವ್ಯವಹಾರ ಮಾಡಬಹುದು. ಇ-ಬ್ಯಾಂಕಿಂಗ್‌ ಮೂಲಕವೂ ಮಾಡಬಹುದು. ಹಣವನ್ನು ಆ್ಯಪ್‌ಗ್ಳಲ್ಲಿಯೇ ಸಂಗ್ರಹಿಸಿ ಇಡಬಹುದು. ಹೀಗೆ ಸಂಗ್ರಹಿಸಿದ ಹಣ ಪೇಟಿಎಂ, ಫ್ರೀಚಾರ್ಜ್‌, ಮೊಬಿಕ್ವಿಕ್‌ ಮುಂತಾದ ಸಂಸ್ಥೆಗಳ ಬ್ಯಾಂಕ್‌ ಖಾತೆಯಲ್ಲಿರುತ್ತದೆ. ಒಂದೊಳ್ಳೆ ದಿನ ಈ ಸಂಸ್ಥೆ ಬಾಗಿಲು ಹಾಕಿದರೆ ಲಕ್ಷಾಂತರ ಗ್ರಾಹಕರ ಹಣಕ್ಕೆ ಯಾರು ಹೊಣೆ? ತಲಾ 10 ಸಾವಿರ ರೂ.ಗಳಂತೆ ಕನಿಷ್ಠ 1 ಲಕ್ಷ ಮಂದಿ ಹಣ ಅದರಲ್ಲಿ ಕೂಡಿಟ್ಟರೂ ಒಟ್ಟಾಗುವ ಮೊತ್ತ 100 ಕೋಟಿ ರೂ.!

ಕೈತಪ್ಪಿದ 10 ಸಾವಿರ ರೂ.ಗಾಗಿ ದೂರದ ರಾಜ್ಯಗಳಲ್ಲಿರುವ ಅಥವಾ ಬೇರೆ ದೇಶದಲ್ಲಿ ಕಾರ್ಪೊರೇಟ್‌ ಕಚೇರಿಗಳನ್ನು ಹೊಂದಿರುವ ಸಂಸ್ಥೆಯನ್ನು ಹುಡುಕಲಾಗುತ್ತದೆಯೇ? ಈಗಾಗಲೇ ಬೇರೆ ಬೇರೆ ಹೆಸರಿನ ಚೈನ್‌ ಸ್ಕೀಂ ನಡೆಸಿ ಹಣ ವಸೂಲಿ ಮಾಡಿದ ಅದೆಷ್ಟೋ ಸಂಸ್ಥೆಗಳು ತಮ್ಮ ವೆಬ್‌ಸೈಟ್‌ನ ಪ್ಲಗ್‌ ತಪ್ಪಿಸಿ ಆರಾಮವಾಗಿ ಇವೆ. ಇನ್ನು ಇಂತಹ ಖಾಸಗಿ ಆ್ಯಪ್‌ನವರ ಮೇಲೆ ಹೇಗೆ ನಂಬಿಕೆ ಇರಿಸುವುದು? ಬ್ಯಾಂಕುಗಳ ಆ್ಯಪ್‌ನಲ್ಲಿದ್ದಷ್ಟು ಕಠಿಣ ಹಾಗೂ ಸುರಕ್ಷೆ ಈ ಆ್ಯಪ್‌ಗ್ಳಲ್ಲಿ ಇಲ್ಲ. ಒಂದೊಮ್ಮೆ ಮೊಬೈಲ್‌ ಕಳೆದುಹೋದರೆ ಯಾರು ಬೇಕಾದರೂ ನಿಮ್ಮ ಹಣದಲ್ಲಿ ಮಜಾ ಉಡಾಯಿಸಬಹುದು. ಇದು ಯಾವುದೋ ಒಂದು ಖಾಸಗಿ ಮೊಬೈಲ್‌ ವ್ಯಾಲೆಟ್‌ ಕಂಪನಿಯ ಮೇಲಿನ ಅಪವಾದ ಅಲ್ಲ, ಉದಾಹರಣೆಯಾಗಿ ನೀಡಿ ಸಂಶಯ ನಿವಾರಣೆಗೆ ಬೇಡಿಕೆ ಅಷ್ಟೆ. ಇದೀಗ ಹೊಸದಾಗಿ ಈ ಮೊಬೈಲ್‌ ಆ್ಯಪ್‌ಗ್ಳ ಸಿಬ್ಬಂದಿಯ ಕರಾಮತ್ತಿನಿಂದಲೇ ಹಣ ದುರ್ಬಳಕೆಯಾದ ಕುರಿತು ಪ್ರಕರಣ ದಾಖಲಾಗಿದೆ. 

ಇನ್ನು ಈ ಆ್ಯಪ್‌ಗ್ಳಲ್ಲಿ ಬಳಕೆದಾರರ ಬ್ಯಾಂಕ್‌ ಖಾತೆ ಹಾಗೂ ಡೆಬಿಟ್‌/ ಕ್ರೆಡಿಟ್‌ ಕಾರ್ಡ್‌ಗಳ ಅಷ್ಟೂ ಮಾಹಿತಿ ದಾಖಲಾಗಿರುತ್ತದೆ. ಅದನ್ನು ಈ ಆ್ಯಪ್‌ಗ್ಳನ್ನು ನೋಡಿಕೊಳ್ಳುವ ಸಿಬ್ಬಂದಿ ಅಥವಾ ಒಂದು ವೇಳೆ ಆ ಮಾಹಿತಿ ದುಷ್ಕರ್ಮಿಗಳ ಕೈಗೆ ಸಿಕ್ಕಿದರೆ ಅವರು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಆನ್‌ಲೈನ್‌ ಹಣ ವಿನಿಮಯಕ್ಕೆ ಪೇಟಿಎಂ, ಫ್ರೀಚಾರ್ಜ್‌, ಮೊಬಿಕ್ವಿಕ್‌, ಇಟ್‌ಸಕ್ಯಾಶ್‌, ಆಕ್ಸಿಜನ್‌, ಆ್ಯರ್‌ಟೆಲ್‌ ಮನಿ, ವೊಡಾಫೋನ್‌ ಎಂಪೆಸಾ, ಜಿಯೊಮನಿ, ವೊಲಾ ಮನಿ ಮೊದಲಾದ ಅನೇಕ ಖಾಸಗಿ ಮೊಬೈಲ್‌ ಆ್ಯಪ್‌ಗ್ಳಿವೆ. 

ಸರಕಾರಿ ಆ್ಯಪ್‌ಗ್ಳ ದುರವಸ್ಥೆ
ಸರಿ, ಖಾಸಗಿ ಆ್ಯಪ್‌ಗ್ಳು ಬೇಡ ಎಂದಾದರೆ ಸರಕಾರಿ ಆ್ಯಪ್‌ ಉಪಯೋಗಿಸಿ ಎನ್ನಬಹುದು. ರಿಸರ್ವ್‌ ಬ್ಯಾಂಕ್‌ ಯುಪಿಐ ಎಂಬ ಆ್ಯಪ್‌ ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ 18 ಬ್ಯಾಂಕುಗಳಷ್ಟೇ ಇವೆ. ದೇಶದಲ್ಲಿ ನೂರಾರು ಬ್ಯಾಂಕುಗಳಿರುವಾಗ ಕೇವಲ 18 ಬ್ಯಾಂಕುಗಳಷ್ಟೇ ಈ ಆ್ಯಪ್‌ನ ಅಡಿಯಲ್ಲಿದ್ದರೆ ಸರ್ವಜನತೆ ಹೇಗೆ ಡಿಜಿಟಲ್‌ ವ್ಯವಹಾರ ಮಾಡುವುದು? ಇದೇನೂ ಕಷ್ಟದ ಕೆಲಸವಲ್ಲ. ರಿಸರ್ವ್‌ ಬ್ಯಾಂಕ್‌ ಒಂದು ಸುತ್ತೋಲೆ ಹೊರಡಿಸಿದರೆ ಸಾಕು, ಎಲ್ಲ ಬ್ಯಾಂಕುಗಳ ಸರ್ವರ್‌ಗಳೂ ಇದರ ಜತೆ ಲಿಂಕ್‌ ಮಾಡಿಕೊಳ್ಳಬಹುದು. ಈ ಕಾರ್ಯ ನಡೆಯದೇ ಡಿಜಿಟಲ್‌ ವ್ಯವಹಾರ ಮಾಡಿ ಎಂದರೆ ವ್ಯಾವಹಾರಿಕ ವಿಶ್ವಾಸ ಉಳಿಯುವುದು ಹೇಗೆ? ಈಗ ಕೇಂದ್ರ ಸರ್ಕಾರವೇ ಭೀಮ್‌ ಆ್ಯಪ್‌ ಬಿಡುಗಡೆ ಮಾಡಿ, ಇದರಲ್ಲಿ ವ್ಯವಹಾರ ಮಾಡಿ ಎಂದು ಪ್ರಚಾರ ಮಾಡುತ್ತಿದೆ. ಆದರೆ, ಈ ಆ್ಯಪ್‌ ಎಲ್ಲರ ಮೊಬೈಲ್‌ನಲ್ಲೂ ಇನ್‌ಸ್ಟಾಲ್‌ ಆಗುತ್ತಿಲ್ಲ. ಇದರಲ್ಲಿರುವ ಬಗ್‌ಗಳನ್ನು ಸರಿಪಡಿಸುವ ಗೋಜಿಗೆ ಸರ್ಕಾರ ಹೋದಂತಿಲ್ಲ. 
ಇಂಟರ್ನೆಟ್‌ ಇಲ್ಲದೆ ಏನು ಸಾಧ್ಯ?

ಮೊಬೈಲ್‌ ಬ್ಯಾಂಕಿಂಗ್‌ ಅಥವಾ ಇಂಟರ್ನೆಟ್‌ ಬ್ಯಾಂಕಿಂಗ್‌ ಉಪಯೋಗಿಸಿ, ಡಿಜಿಟಲ್‌ ಹಣ ವಿನಿಯೋಗಿಸಿ ಎಂದು ಏಕಾಏಕಿ ಕಠಿಣ ನಿಯಮ ಮಾಡಿದ ಸರಕಾರ ಹಳ್ಳಿ ಹಳ್ಳಿಗೆ ಇಂಟರ್‌ನೆಟ್‌ ಕೊಡುವ ಕುರಿತು ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ? ಅಥವಾ ಈಗ ಇರುವ ಸರಕಾರಿ ಸ್ವಾಮ್ಯದ ದೂರವಾಣಿಯಲ್ಲಿ ಉತ್ತಮ ಇಂಟರ್ನೆಟ್‌ ನೀಡಲು ಯಾಕೆ ಮುತುವರ್ಜಿ ವಹಿಸಿಲ್ಲ? ಎಕ್ಸ್‌ಚೇಂಜ್‌ನ ಹತ್ತಿರವೇ ಸಮರ್ಪಕವಾಗಿ ಸೇವೆ ನೀಡಲು ಬಿಎಸ್ಸೆನ್ನೆಲ್‌ನವರಿಗೆ ಸಾಧ್ಯವಾಗುತ್ತಿಲ್ಲ. ಇನ್ನು ಬಿಎಸ್ಸೆನ್ನೆಲ್‌ನ ಕೇಂದ್ರ ಕಚೇರಿಯವರೇನೋ ಅತ್ಯಂತ ಕಡಿಮೆ ಬೆಲೆಗೆ ಲ್ಯಾಂಡ್‌ಲೈನ್‌ ಹಾಗೂ ಇಂಟರ್ನೆಟ್‌ ಸಂಪರ್ಕ ನೀಡುತ್ತೇವೆ ಎಂದು ಜಾಹೀರಾತು ಕೊಡುತ್ತಾರೆ. ಆದರೆ ಸ್ಥಳೀಯ ಏಕ್ಸ್‌ಚೇಂಜ್‌ಗೆ ಹೋಗಿ ಕೇಳಿದರೆ ನಿಮ್ಮ ಏರಿಯಾದಲ್ಲಿ ನಮ್ಮ ಲೈನ್‌ ಇಲ್ಲ, ಫೈಬರ್‌ನೆಟ್‌ ತೆಗೆದುಕೊಳ್ಳಿ ಎನ್ನುತ್ತಾರೆ. ಅದು ಬಹಳ ದುಬಾರಿ ಕನೆಕ್ಷನ್‌. ತಿಂಗಳಿಗೆ ಸಾವಿರ ರೂ.ಗಿಂತ ಹೆಚ್ಚು ಬಿಲ್‌ ಬರುತ್ತದೆ. ಹಾಗಾಗಿ ಜನರು ಖಾಸಗಿ ದೂರಸಂಪರ್ಕ ಕಂಪನಿಗಳಿಗೆ ಮೊರೆ ಹೋಗಬೇಕು. ಅವೂ ದುಬಾರಿ. ಇವೆಲ್ಲ ಶ್ರೀಸಾಮಾನ್ಯನ ಕಿಸೆಗೆ ಹೊರೆಯಾಗದೇ?

ಬ್ಯಾಂಕುಗಳಲ್ಲಿ ದುರ್ವರ್ತನೆ
ಅಪನಗದೀಕರಣದ ಪೂರ್ವಭಾವಿಯಾಗಿ ಸರ್ಕಾರ ಜನ್‌ಧನ್‌ ಖಾತೆ ಮಾಡಿಸಿದೆ. ಇನ್ನೂ ಕೂಡಾ ಅದೆಷ್ಟೋ ಮಂದಿ ಖಾತೆ ತೆರೆದಿಲ್ಲ. ಆದ್ದರಿಂದ ಮನೆ ಮನೆಗೆ ತೆರಳಿ ಕನಿಷ್ಠ ಮನೆಗೊಂದಾದರೂ ಜನ್‌ಧನ್‌ ಅಥವಾ ಬ್ಯಾಂಕ್‌ ಖಾತೆ ಇರುವಂತೆ ಮಾಡಬೇಕಿತ್ತು. ಎಟಿಎಂ ಕಾರ್ಡ್‌ ಪ್ರತೀ ಖಾತೆದಾರರಿಗೂ ನೀಡಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ. ಈ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯ ನಡೆಯಬೇಕಿದೆ. 
ಡಿಸಿಸಿ ಬ್ಯಾಂಕುಗಳಲ್ಲಿ, ಸಹಕಾರಿ ಸಂಸ್ಥೆಗಳಲ್ಲಿ ನೋಟು ಸ್ವೀಕಾರಕ್ಕೆ ಅನುಮತಿ ನೀಡಿಲ್ಲ. ಆದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉತ್ತಮ ಸೇವೆ ನೀಡಬೇಕು ಎಂಬ ನಿಯಮ ಜಾರಿಯಾಗಿಲ್ಲ ಏಕೆ? ಭಾಷೆ ಅರಿಯದ ಅಧಿಕಾರಿಗಳು, ಸಿಬ್ಬಂದಿ ಗ್ರಾಮಾಂತರದ ಜನತೆಯ ಜತೆ ತೋರಿಸುವ ಅತಿರೇಕದ ಅಹಂಕಾರದ ಪರಮಾವಧಿಯ ವರ್ತನೆಗಳು ಅದೆಷ್ಟೋ ಮಂದಿ ಮತ್ತೆ ರಾಷ್ಟ್ರೀಕೃತ ಬ್ಯಾಂಕುಗಳ ಮೆಟ್ಟಿಲು ತುಳಿಯದಂತೆ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ವ್ಯವಹಾರ ಸೀಮಿತ ಮಾಡಿದರೆ ಹಳ್ಳಿ ಹಳ್ಳಿಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಶಾಖೆ ತೆರೆಯಲೂ ಕಡ್ಡಾಯ ಮಾಡಬೇಕು. ಆಯಾ ರಾಜ್ಯದ ಸಿಬಂದಿಯೇ ಇರಬೇಕೆಂದು ತಾಕೀತು ಮಾಡಬೇಕು. ಗ್ರಾಹಕಸ್ನೇಹಿ ವರ್ತನೆ ಕಡ್ಡಾಯ, ಅನುಚಿತ ವರ್ತನೆಗೈದರೆ ಇಂತಹವರಿಗೆ ದೂರು ಕೊಡಿ ಎಂಬ ದೊಡ್ಡ ಫಲಕ ತೂಗುಹಾಕುವ ಕೆಲಸವಾದರೂ ನಡಿಯಬೇಕು. 

ನೋಟು ನಿಷೇಧದಂತಹ ದೊಡ್ಡ ಕೆಲಸದ ಮಧ್ಯೆ ಇದೆಲ್ಲ ಸಣ್ಣ ವಿಷಯಗಳು. ಆದರೆ ಇವುಗಳ ಕಡೆಗೆ ಗಮನ ಹರಿಸಿದರೆ ಜನರ ಬಾಯಲ್ಲಿ ಹರಿಯುವ ಕಟುಮಾತುಗಳಿಂದ ತಪ್ಪಿಸಿಕೊಳ್ಳಬಹುದು. ಜನ ಬ್ಯಾಂಕುಗಳ ಮುಂದೆ ಕ್ಯೂ ನಿಲ್ಲುವುದು ತಪ್ಪಬಹುದು. ಜತೆಗೆ ಡಿಜಿಟಲ್‌ ಜ್ಞಾನ ಇದ್ದವರು ಮೊಬೈಲ್‌ ಆ್ಯಪ್‌ಗ್ಳ ಕುರಿತು ಮಾಹಿತಿ ಇಲ್ಲದವರಿಗೆ, ಇಂಟರ್ನೆಟ್‌ ಮೂಲಕ ಬ್ಯಾಂಕ್‌ ವ್ಯವಹಾರ ಮಾಡಲು ಅರಿಯದವರಿಗೆ ಮಾಹಿತಿ ಕೊಡಿಸುವ ಕೆಲಸ ಆಂದೋಲನ ರೂಪದಲ್ಲಿಯೇ ನಡೆಯಬೇಕಿದೆ. ಎಟಿಎಂ ಕಾರ್ಡ್‌ ಮೂಲಕ ಹಣ ಪಾವತಿ ವ್ಯವಸ್ಥೆ (ಪಿಒಎಸ್‌: ಪಾಯಿಂಟ್‌ ಆಫ್‌ ಸೇಲ್‌ ಯಂತ್ರ) ಇನ್ನಷ್ಟು ಕಡೆ ಅನುಷ್ಠಾನಕ್ಕೆ ಬರಬೇಕು. ಹಾಗಾದಾಗ ಗ್ರಾಮೀಣ ಭಾರತ ಶ್ರೇಷ್ಠ ಭಾರತ ಎಂಬ ವಾಕ್ಯಕ್ಕೆ ಅರ್ಥ ಬರುತ್ತದೆ. 

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರೀಕ್ಷೆ ಎನ್ನುವುದು ಅಗ್ನಿಪರೀಕ್ಷೆಯಂತಾಗದಿರಲಿ

ಪರೀಕ್ಷೆ ಎನ್ನುವುದು ಅಗ್ನಿಪರೀಕ್ಷೆಯಂತಾಗದಿರಲಿ

ಮಾನವ ತ್ಯಾಜ್ಯದ ಉಗ್ರಾಣವಾಗುತ್ತಿದೆ ಕಡಲು!

ಮಾನವ ತ್ಯಾಜ್ಯದ ಉಗ್ರಾಣವಾಗುತ್ತಿದೆ ಕಡಲು!

ಅನುದಾನಿತ ಶಾಲೆಗಳಿಗೆ ಬೇಕಿದೆ ಕಾಯಕಲ್ಪ

ಅನುದಾನಿತ ಶಾಲೆಗಳಿಗೆ ಬೇಕಿದೆ ಕಾಯಕಲ್ಪ

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.