ನಿವೃತ್ತರಿಗೆ ಆಸರೆಯಾಗಬೇಕಲ್ಲವೇ ಸೈನಿಕ ಕಲ್ಯಾಣ ಇಲಾಖೆ?


Team Udayavani, Oct 4, 2019, 5:19 AM IST

sainikara-kalyana

ಮಾಜಿ ಸೈನಿಕರನ್ನು ಶಾಲಾ- ಕಾಲೇಜುಗಳು, ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸುತ್ತಿರುವುದನ್ನು ನಾವು ನಿತ್ಯ ಸುದ್ದಿ ಮಾಧ್ಯಮಗಳಲ್ಲಿ ಕಾಣಬಹುದು. ಆದರೆ ಇವೆಲ್ಲವುದರ ನಡುವೆಯೂ ಬೇಸರದ ವಿಷಯವೆಂದರೆ ರಾಜ್ಯ ಸರಕಾರದ ಅಧೀನದಲ್ಲಿರುವ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯ ಉದಾಸೀನ ಕಾರ್ಯವೈಖರಿ.

ಇತ್ತೀಚೆಗೆ ವಿಂಗ್‌ ಕಮಾಂಡರ್‌ ಮಿತ್ರಾ ಎನ್ನುವ 83 ವರ್ಷದ ನಿವೃತ್ತ ಯುದ್ಧ ವಿಮಾನ ಪೈಲಟ್‌ ಮೈಸೂರಿನಲ್ಲಿ ನಿಧನರಾದರು. ಯುದ್ಧ ವಿಮಾನದ ಹೆಸರಾಂತ ಪೈಲಟ್‌ ಓರ್ವರಿಗೆ ಅಂತಿಮ ನಮನ ಸಲ್ಲಿಸಲು ಜನರೇ ಇರಲಿಲ್ಲ ಎನ್ನುವ ಕುರಿತು ನಿವೃತ್ತ ವಿಂಗ್‌ ಕಮಾಂಡರ್‌ ಸುದರ್ಶನರವರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿ¨ªಾರೆ.

ಏರ್‌ಫೋರ್ಸ್‌ ಸೆಲೆಕ್ಷನ್‌ ಬೋರ್ಡ್‌ನಂತಹ ಪ್ರತಿಷ್ಠಿತ ಸಂಸ್ಥೆ ಇರುವ ಮೈಸೂರಿನಲ್ಲಿ ಏರ್‌ಫೋರ್ಸ್‌ನ ಉನ್ನತ ಅಧಿಕಾರಿಗಳು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಏರ್‌ಫೋರ್ಸ್‌ ಸಿಬ್ಬಂದಿ ಉಪಸ್ಥಿತರಿರುತ್ತಾರೆ. ಮೇಲಾಗಿ ಕರ್ನಾಟಕ ಸರಕಾರದ ಅಧೀನದ ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಸಹಾ ಮೈಸೂರಿನಲ್ಲಿ ಇದೆ. ಎಂದ ಮೇಲೆ ನಿವೃತ್ತ ಸೇನಾನಿಯ ಅಂತಿಮ ಯಾತ್ರೆಗೆ ಯಾರೊಬ್ಬರೂ ತಲುಪಲಿಲ್ಲ ಎನ್ನುವುದು ವಿಷಾದನೀಯ. ದೇಶಕ್ಕಾಗಿ ದುಡಿದ ಯೋಧರ ಬದುಕಿನ ಸಂಜೆ ದುರಂತವಾಗಬಾರದಲ್ಲವೇ?

ರಾಜಕಾರಣಿಗಳು, ಸಿನಿಮಾ ತಾರೆಯರು, ಮಠಾಧೀಶರು ನಿಧನರಾದಾಗ ಸಂಪೂರ್ಣ ಆಡಳಿತ ವ್ಯವಸ್ಥೆಯೇ ಅವರ ಅಂತಿಮ ಯಾತ್ರೆಯ ಏರ್ಪಾಡಿಗಾಗಿ ಟೊಂಕ ಕಟ್ಟಿ ನಿಲ್ಲುತ್ತದೆ. ದೇಶಕ್ಕಾಗಿ ತಮ್ಮ ಯೌವನವನ್ನೇ ತ್ಯಾಗ ಮಾಡಿದ ಸೇನಾನಿಗೆ ಗೌರವಪೂರ್ಣ ವಿದಾಯ ನೀಡಲು ನಮ್ಮ ಸಮಾಜಕ್ಕೆ ಏಕೆ ಸಾಧ್ಯವಾಗುತ್ತಿಲ್ಲ?

ಸೇವಾ ಕಾಲದಲ್ಲಿ ಸೇನೆ ತನ್ನ ಸೈನಿಕರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ. ದೇಶದ ರಕ್ಷಣೆಗಾಗಿ ದುಡಿದ ಯೋಧರ ನಿವೃತ್ತಿಯ ನಂತರದ ಯೋಗಕ್ಷೇಮವನ್ನು ನೋಡಿಕೊಳ್ಳುವುದು ನಾಗರಿಕ ಸಮಾಜ ಹಾಗೂ ಸರಕಾರದ ಜವಾಬ್ದಾರಿ. ಇತ್ತೀಚಿನ ವರ್ಷಗಳಲ್ಲಿ ಸರಕಾರ ಮಾಜಿ ಸೈನಿಕರ ಗೌರವಾದರಗಳನ್ನು ಹೆಚ್ಚಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಮಾಜಿ ಸೈನಿಕರನ್ನು ಶಾಲಾ- ಕಾಲೇಜುಗಳು, ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸುತ್ತಿ ರುವುದನ್ನು ಸುದ್ದಿ ಮಾಧ್ಯಮಗಳಲ್ಲಿ ಕಾಣಬಹುದು. ಇವೆಲ್ಲವುದರ ನಡುವೆಯೂ ಬೇಸರದ ವಿಷಯವೆಂದರೆ ರಾಜ್ಯ ಸರಕಾರದ ಅಧೀನದಲ್ಲಿರುವ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯ ಉದಾಸೀನ ಕಾರ್ಯವೈಖರಿ.

ಸೇವಾ ನಿವೃತ್ತ ಸೈನಿಕರ ಯೋಗಕ್ಷೇಮ ನೋಡಿಕೊಳ್ಳಲೆಂದೇ ಸೈನಿಕ ಕಲ್ಯಾಣ ಇಲಾಖೆ ಇದೆ. ಬೆಂಗಳೂರಿನಲ್ಲಿ ಮುಖ್ಯಾಲಯ ವನ್ನು ಹೊಂದಿದ ಇಲಾಖೆ 13 ಜಿಲ್ಲಾ ಸೈನಿಕ ಕಚೇರಿಗಳನ್ನೂ ಹೊಂದಿದೆ. 35-40ರ ಕಡಿಮೆ ವಯಸ್ಸಿನಲ್ಲಿ ಸೇವೆಯಿಂದ ಮುಕ್ತರಾಗುವ ನಿವೃತ್ತ ಸೈನಿಕರಿಗೆ ಪುನರ್ವಸತಿ ಕಲ್ಪಿಸುವ, ಅವರಿಗೆ ಬೇಕಾದ ಮಾರ್ಗದರ್ಶನ ಹಾಗೂ ಸಹಾಯ ನೀಡುವುದು ಜಿಲ್ಲಾ ಸೈನಿಕ ಕಚೇರಿಯ ಸ್ಥಾಪನೆಯ ಮೂಲ ಉದ್ದೇಶ. ಆದರೆ ಈ ಕಚೇರಿಗಳ ಉನ್ನತ ಅಧಿಕಾರಿಯಿಂದ ಹಿಡಿದು ಸಾಮಾನ್ಯ ಸಿಬ್ಬಂದಿಯವರೆಗೆ ತಮ್ಮ ಕರ್ತವ್ಯದ ಕುರಿತಾದ ಸ್ಪಷ್ಟ ಕಲ್ಪನೆ ಯಾರಿಗೂ ಇದ್ದಂತಿಲ್ಲ ಎನ್ನುವುದು ವಿಷಾದನೀಯ.

ಮಾಜಿ ಸೈನಿಕರ ಮಕ್ಕಳಿಗೆ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ದಾಖಲಾತಿ ಪಡೆಯಲು ಸಹಾಯ ಮಾಡುವ, ಸ್ಕಾಲರ್‌ಶಿಪ್‌ ಪಡೆಯಲು ಸಹಕರಿಸುವ, ಯುದ್ಧ ವಿಧವೆಯರ ಸಮಸ್ಯೆಗಳಿಗೆ ದನಿಯಾಗಬೇಕಾದ ಜಿಲ್ಲಾ ಸೈನಿಕ ಬೋರ್ಡ್‌ ಗಳಲ್ಲಿ ಕುಳಿತವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ಕುರಿತು ದೂರು ಎÇÉೆಡೆಯಿಂದ ಕೇಳಿ ಬರುತ್ತಿದೆ. ಮಾಜಿ ಸೈನಿಕರ ಫೋನ್‌ ಕರೆಗಳಿಗೂ ಸೌಜನ್ಯದಿಂದ ಉತ್ತರಿಸುವುದಿಲ್ಲ. ಸಾಹೇಬರು ಈಗ ಬಿಜಿಯಾಗಿ¨ªಾರೆ ಆಮೇಲೆ ಕರೆ ಮಾಡಿ ಎಂದು ಉದ್ಧಟತನದಿಂದ ಉತ್ತರಿಸುತ್ತಾರೆ.

ಬೆಂಗಳೂರಿನಲ್ಲಿರುವ ಸೈನಿಕ ಕಲ್ಯಾಣ ಇಲಾಖೆಯ ನಿರ್ದೇಶಕರು ಕರ್ನಾಟಕದವರಾಗಿರಬೇಕೆಂಬ ನಿಯಮವಿದೆ. ಪ್ರಸ್ತುತ ನಿರ್ದೇಶಕರು ಪರಭಾಷೆಯವರಾಗಿದ್ದು, ಕನ್ನಡಿಗ ಮಾಜಿ ಸೈನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ . ಇತರ ಜಿಲ್ಲಾ ಸೈನಿಕ ಬೋರ್ಡ್‌ಗಳಲ್ಲೂ ಹೆಚ್ಚು ಕಡಿಮೆ ಇದೇ ಸ್ಥಿತಿ ಇದೆ. ನಿವೃತ್ತ ಸೈನಿಕರ ಮಕ್ಕಳಿಗೆ ಕೊಡಮಾಡುವ ಅಲ್ಪ ಮೊತ್ತದ ಸ್ಕಾಲರ್‌ಶಿಪ್‌ ಹಣಕ್ಕಾಗಿ ದೂರದ ಊರುಗಳಿಂದ ಸ್ವತಃ ಹಾಜರಾಗಬೇಕೆಂದು ಒತ್ತಾಯಿಸಲಾಗುತ್ತದೆ. ಇನ್ನು ಕೆಲವೆಡೆ ನೌಕರಿ ಕೊಡಿಸುವುದಾಗಿ ಹೇಳಿ ನಿವೃತ್ತ ಸೈನಿಕರನ್ನು ಶೋಷಿಸಲಾಗುತ್ತದೆ. ಮಾಜಿ ಸೈನಿಕರು ಮೃತರಾದ ಸಂದರ್ಭದಲ್ಲಿ ಅವರ ಪತ್ನಿಗೆ ನ್ಯಾಯೋಚಿತವಾಗಿ ಪೆನ್ಶನ್‌ ಸಿಗಬೇಕು. ಆ ಕುರಿತು ಕುಟುಂಬಕ್ಕೆ ಸಹಾಯ ಮಾಡಬೇಕಾದದ್ದು ಜಿಲ್ಲಾ ಸೈನಿಕ ಬೋರ್ಡಿನ ಕರ್ತವ್ಯ. ಸಹಾಯ ಮಾಡುವ ಬದಲಾಗಿ ಉದ್ಯೋಗಸ್ಥ ಮಹಿಳೆಗೆ ಆಕೆಯ ಪತಿಯ ಪೆನ್ಶನ್‌ ನೀಡಲು ಬರುವುದಿಲ್ಲ ಎಂದು ವೃಥಾ ಕಿರುಕುಳ ನೀಡಿದ ಉದಾಹರಣೆ ಇದೆ.

ಜಿಲ್ಲಾ ಸೈನಿಕ ಕಚೇರಿಯ ಉಪ ನಿರ್ದೇಶಕರು ಸಾಮಾನ್ಯವಾಗಿ ಮಾಜಿ ಸೇನಾಧಿಕಾರಿಗಳೇ ಆಗಿರುತ್ತಾರೆ. ಆದರೆ ಅವರಲ್ಲಿ ಹೆಚ್ಚಿನವರು ಸಕ್ರಿಯ ಸೇನಾ ಸೇವೆಯ ಗುಂಗಿನÇÉೇ ಇದ್ದಂತೆ ಕಾಣುತ್ತಾರೆ. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕಚೇರಿಯಲ್ಲಿ ತಮ್ಮ ಅಧಿಕಾರದ ದರ್ಪ ತೋರಿಸುವುದನ್ನು ನಿಲ್ಲಿಸಬೇಕಾಗಿದೆ. ತಾವಿರುವುದು ಮಾಜಿ ಸೈನಿಕರಿಗೆ ಸಹಾಯ ಮಾಡಲು ಎನ್ನುವ ವಾಸ್ತವವನ್ನು ಅವರು ಅರಿಯಲಿ. ಸರಕಾರ ಕನ್ನಡಿಗ ಮಾಜಿ ಸೈನಿಕ ಅಧಿಕಾರಿಗಳನ್ನೇ ನಿರ್ದೇಶಕ ಮತ್ತು ಉಪ ನಿರ್ದೇಶಕ ಹು¨ªೆಗಳಿಗೆ ಪರಿಗಣಿಸಲಿ. ನೌಕರಿ, ಸಹಾಯ, ಮಾರ್ಗದರ್ಶನ ನಿರೀಕ್ಷಿಸಿ ಬರುವ ಮಾಜಿ ಸೈನಿಕ ಹಾಗೂ ಅವರ ಅವಲಂಬಿತರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಸೈನಿಕ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಕೇಳುವಂತಾಗಲಿ. ಉದ್ಧಟತನದಿಂದ ವರ್ತಿಸುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿ.

– ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರೀಕ್ಷೆ ಎನ್ನುವುದು ಅಗ್ನಿಪರೀಕ್ಷೆಯಂತಾಗದಿರಲಿ

ಪರೀಕ್ಷೆ ಎನ್ನುವುದು ಅಗ್ನಿಪರೀಕ್ಷೆಯಂತಾಗದಿರಲಿ

ಮಾನವ ತ್ಯಾಜ್ಯದ ಉಗ್ರಾಣವಾಗುತ್ತಿದೆ ಕಡಲು!

ಮಾನವ ತ್ಯಾಜ್ಯದ ಉಗ್ರಾಣವಾಗುತ್ತಿದೆ ಕಡಲು!

ಅನುದಾನಿತ ಶಾಲೆಗಳಿಗೆ ಬೇಕಿದೆ ಕಾಯಕಲ್ಪ

ಅನುದಾನಿತ ಶಾಲೆಗಳಿಗೆ ಬೇಕಿದೆ ಕಾಯಕಲ್ಪ

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.