ಇಂದು ದೇಶದ 75ನೇ ಗಣರಾಜ್ಯೋತ್ಸವ: ಗೌರವ ವಂದನೆ ಸ್ವೀಕರಿಸಲಿರುವ ರಾಷ್ಟ್ರಪತಿ ಮುರ್ಮು

ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವಲ್‌ ಮ್ಯಾಕ್ರನ್‌ ಅತಿಥಿ

Team Udayavani, Jan 26, 2024, 8:16 AM IST

ಇಂದು ದೇಶದ 75ನೇ ಗಣರಾಜ್ಯೋತ್ಸವ: ಗೌರವ ವಂದನೆ ಸ್ವೀಕರಿಸಲಿರುವ ರಾಷ್ಟ್ರಪತಿ ಮುರ್ಮು

ನವದೆಹಲಿ: ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಗಿ 75 ವರ್ಷಗಳು ಪೂರ್ತಿಗೊಂಡ ಅಮೃತಕಾಲದ ಸಂಭ್ರಮದಲ್ಲಿ ಇರುವಂತೆಯೇ ಶುಕ್ರವಾರ 75ನೇ ವರ್ಷದ ಗಣರಾಜ್ಯ ದಿನವನ್ನು ಆಚರಿಸಿಕೊಳ್ಳಲಿದೆ. ಈ ಬಾರಿಯ ಗಣರಾಜ್ಯ ದಿನಕ್ಕೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರನ್‌ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ. ಅವರು ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೇನಾಪಡೆಗಳಿಂದ ಗೌರವ ವಂದನೆ ಸ್ವೀಕರಿಸಲಿದ್ದಾರೆ.

ಒಟ್ಟು 90 ನಿಮಿಷಗಳ ಈ ಬಾರಿಯ ಗಣರಾಜ್ಯ ಕಾರ್ಯಕ್ರಮದಲ್ಲಿ ಸೇನೆಯ 3 ವಿಭಾಗಗಳು ಹೊಂದಿರುವ ಶಸ್ತ್ರಾಸ್ತ್ರಗಳ ಸಂಗ್ರಹ, ತಾಂತ್ರಿಕ ಮತ್ತು ಸಂಶೋಧನಾ ವಿಭಾಗದಲ್ಲಿ ಮಾಡಿರುವ ಸಾಧನೆಗಳನ್ನು ಪ್ರದರ್ಶಿಸಲಾಗುತ್ತದೆ. ಕ್ಷಿಪಣಿಗಳು, ಡ್ರೋನ್‌ ಜ್ಯಾಮರ್‌ಗಳು, ವಾಹನಗಳ ಮೂಲಕ ಯುದ್ಧಭೂಮಿ ಯಲ್ಲಿ ನಿರ್ವಹಿಸುವ ಮೋರ್ಟಾರ್‌ಗಳನ್ನು ಪ್ರದರ್ಶಿಸಲಾಗುತ್ತದೆ.

ಹಲವು ಪ್ರಥಮಗಳು: ದೇಶದ ವಿವಿಧ ರಾಜ್ಯಗಳ ಸಾಂಸ್ಕೃತಿಕ ಮತ್ತು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳ ಸ್ತಬ್ದ ಚಿತ್ರಗಳ ಜತೆಗೆ ಹಲವು ಪ್ರಥಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಯೋಧರ ತುಕಡಿ ಪಂಥಸಂಚನಲದಲ್ಲಿ ಭಾಗಿಯಾಗಲಿದ್ದಾರೆ. ಆರ್ಟಿಲಿಯರಿ ರೆಜಿಮೆಂಟ್‌ಗೆ ನಿಯುಕ್ತಿಯಾಗಿರುವ 10 ಮಹಿಳಾ ಲೆಫ್ಟಿನೆಂಟ್‌ ಅಧಿಕಾರಿಗಳಲ್ಲಿ ಇಬ್ಬರಾ ಗಿರುವ ಲೆ.ದೀಪ್ತಿ ರಾಣಾ ಮತ್ತು ಲೆ.ಪ್ರಿಯಾಂಕಾ ಸೇವ್ಡ ಅವರು ಪಥಸಂಚನದಲ್ಲಿ ಭಾಗಿಯಾಗಲಿದ್ದಾರೆ.

ಇದಲ್ಲದೆ ಕೇಂದ್ರ ಸಂಸ್ಕೃತಿ ಸಚಿವಾಲಯದ ವತಿಯಿಂದ ಶಂಖ, ನಾದಸ್ವರ, ನಗಾರಿ ಸೇರಿದಂತೆ ದೇಶದ ಸಾಂಪ್ರದಾಯಿಕ ಸಂಗೀತ ಉಪ ಕÃ  ‌ ಣ  ಗಳನ್ನು ನುಡಿಸುವ 100 ಮಹಿಳಾ ಕಲಾವಿದರು ಭಾಗಿಯಾಗ ಲಿದ್ದಾರೆ. ಇದಲ್ಲದೆ, ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್), ಐಎಎಫ್ನ 15 ಮಹಿಳಾ ಪೈಲಟ್‌ಗಳೂ ಪಥ ಸಂಚಲನದಲ್ಲಿ ಭಾಗಿಯಾಗಲಿದ್ದಾರೆ. ದೇಶಿಯವಾಗಿಯೇ ನಿರ್ಮಿಸಲಾಗಿ ರುವ ಯುದ್ಧ ವಿಮಾನ ತೇಜಸ್‌ ಕೂಡ ಭಾಗಿಯಾಗಲಿದೆ.

ಪ್ರಧಾನಿ ಭೇಟಿಯಿಂದ ಶುರು: ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ಹುತಾತ್ಮರಿಗೆ ಗೌರವ ಸಲ್ಲಿಸುವ ಮೂಲಕ ನವದೆಹಲಿಯಲ್ಲಿ ಗಣರಾಜ್ಯದ ಕಾರ್ಯಕ್ರಮಗಳು ಶುರುವಾಗಲಿವೆ.

40 ವರ್ಷಗಳ ಬಳಿಕ: ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮುಖ್ಯ ಅತಿಥಿ ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವೆಲ್‌ ಮ್ಯಾಕ್ರನ್‌ ಅವರು 40 ವರ್ಷಗಳ ಬಳಿಕ ಮೊದಲ ಬಾರಿಗೆ ಸಾರೋಟಿನಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಆಗಮಿ ಸಲಿದ್ದಾರೆ. ಕರ್ತವ್ಯ ಪಥದಲ್ಲಿ ಕುಳಿತಿರುವ ಅತಿಥಿಗಳ ಮೇಲೆ ಸೇನೆಯ ನಾಲ್ಕು ಹೆಲಿಕಾಪ್ಟರ್‌ಗಳ ಮೂಲಕ ಪುಷ್ಪವೃಷ್ಟಿ ಮಾಡಲಾಗುತ್ತದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ನವದೆಹಲಿಯಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕರ್ನಾಟಕದಿಂದ ಐವರಿಗೆ ಆಹ್ವಾನ
ಈ ಬಾರಿಯ ಗಣರಾಜ್ಯ ದಿನದ ಕಾರ್ಯ ಕ್ರಮಕ್ಕೆ 13 ಸಾವಿರ ಮಂದಿ ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಈ ಪೈಕಿ ಕರ್ನಾಟಕದ ಶಿರಸಿಯ ಜೇನು ಕೃಷಿಕ ಮಧುಕೇಶ್ವರ ಹೆಗಡೆ, ಗದಗ್‌ನ ಸಾಹಿತಿ, ಹೊಟೇಲ್‌ ಉದ್ಯಮಿ ಕಾ.ವೆಂ.ಶ್ರೀನಿವಾಸ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಕಸಬಾ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಿದ ನಾಗರಾಜು, ಇದರ ಜತೆಗೆ ಜೋಗುಳ ಹಾಡಿನಿಂದ ಖ್ಯಾತಿ ಪಡೆದ ಬಿ.ಎಂ.ಮಂಜು ನಾಥ್‌ ಅವರಿಗೆ ಕೂಡ ಆಹ್ವಾನ ಲಭಿಸಿದೆ.

ಈ ಬಾರಿಯ ಪ್ರಥಮಗಳು ಏನು?
– ಆರ್ಟಿಲರಿ ರೆಜಿಮೆಂಟ್‌ಗೆ ಸೇರ್ಪಡೆಯಾಗಿರುವ ಲೆ.ದೀಪ್ತಿ ರಾಣಾ, ಲೆ.ಪ್ರಿಯಾಂಕಾ ಸೇವಾx ಪಥ ಸಂಚಲನದಲ್ಲಿ ಭಾಗಿ.
– ಸೇನೆಯ ಮೂರು ವಿಭಾಗಗಳ ಮಹಿಳಾ ಯೋಧರ ಉಪಸ್ಥಿತಿ ಮತ್ತು ಭಾಗಿ
– ಇಸ್ರೋದ ಚಂದ್ರಯಾನ-3 ಯಶಸ್ಸಿನ ಬಗೆಗಿನ ಸ್ತಬ್ದ ಚಿತ್ರ
– ವಿವಿಧ ಕ್ಷೇತ್ರಗಳಲ್ಲಿ ಬುದ್ಧಿಮತ್ತೆಯ ಬಳಕೆಯ ಬಗ್ಗೆ ಇಲೆಕ್ಟ್ರಾನಿಕ್ಸ್‌ ಸಚಿವಾಲಯದ ಸ್ತಬ್ದಚಿತ್ರ.
– ಫ್ರಾನ್ಸ್‌ ಸೇನೆಯ 95 ಸದಸ್ಯರ ತುಕಡಿ, 2 ರಫೇಲ್‌ ಯುದ್ಧ ವಿಮಾನ, ಏರ್‌ಬಸ್‌ಎ330 ಬಹೂಪಯೋಗಿ ಸರಕು ಸಾಗಣೆ ವಿಮಾನ ಪ್ರದರ್ಶನ.
– ಭಾರತೀಯ ಪಾರಂಪರಿಕ ವಾದ್ಯಗಳನ್ನು ನುಡಿಸುವ ಮಹಿಳಾ ಕಲಾವಿದರು.
– ಸಿಎಪಿಎಫ್, ಐಎಎಫ್ನ ಮಹಿಳಾ ಯೋಧರು ಭಾಗಿ.
– 40 ವರ್ಷಗಳ ಬಳಿಕ ಸಾರೋಟಿನಲ್ಲಿ ರಾಷ್ಟ್ರಪತಿ ಮುರ್ಮು, ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವಲ್‌ ಮ್ಯಾಕ್ರನ್‌ ಆಗಮನ
– ದೇಶಿವಾಗಿಯೇ ನಿರ್ಮಾಣಗೊಂಡ ತೇಜಸ್‌ ಯುದ್ಧ ವಿಮಾನದ ಪ್ರದರ್ಶನ.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.