ಸಾಹಿತ್ಯದ ಸಸಿಗೆ ನೀರೆರೆದವಳು

ನಮ್ಮ ಉದಯವಾಣಿ, ನಮ್ಮ ಹೃದಯವಾಣಿ

Team Udayavani, Feb 22, 2020, 5:02 AM IST

kala-41

ಓದುಗರ ಭಾವನಾತ್ಮಕ ಸಂಬಂಧ ತಿಳಿಸುವ ಪತ್ರಗಳ ಸರಣಿ

ಬಾಲ್ಯ ಜೀವನದಲ್ಲಿ ವಾರ್ತಾಪತ್ರಿಕೆಗಳ ಓದುವುದು, ಬರೆಯುವ ಹವ್ಯಾಸಗಳಿರಲಿಲ್ಲ. ಸಾಫ್ಟ್ವೇರ್‌ ಉದ್ಯೋಗಿಯಾಗಿದ್ದ ನಾನು ಮದುವೆಯಾಗಿ, ಬಳಿಕ ಮನೆಯಲ್ಲೇ ಮಗುವಿನ ಆರೈಕೆಯಲ್ಲಿ ನಿರತನಾದೆ. ನಾನು ಕೆಲಸಕ್ಕೆ ರಾಜೀನಾಮೆ ನೀಡುವಾಗ “ಕೆಲಸ ಬಿಡಬೇಡ’ ಎಂದವರು ಕಡಿಮೆ ಏನಲ್ಲ. ಆದರೆ ಕೆಲಸ ಬಿಟ್ಟಿದ್ದೇ ನಾನು ಮಾಡಿದ ಒಳ್ಳೆಯ ಗಳಿಗೆ. ನನ್ನ ಜೀವನಕ್ಕೆ ಉದಯವಾಣಿ ಬಂದಳು. ನನ್ನ ಓದುವ, ಬರೆಯುವ ಹವ್ಯಾಸ ಅಲ್ಲಿಂದ ಆರಂಭವಾಯಿತು. ಮಾವ ಪತ್ರಿಕೆಗೆ ಲೇಖನ ಕಳುಹಿಸಿ ನೋಡು ಪ್ರಕಟವಾಗಬಹುದು ಎಂದರು.

ಪ್ರತಿ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವಂತೆಯೇ ನನ್ನ ಸಾಹಿತ್ಯದ ಕೂಸಿನ ಅಂಬೆಗಾಲಿಡುವ ಯಶಸ್ಸಿನ ಶ್ರೇಯಸ್ಸು “ಮಹಿಳಾ ಸಂಪದ’ ದದ್ದು. ಅನಂತರ ಸಣ್ಣ ಸಣ್ಣ ಲೇಖನಗಳನ್ನು ಬರೆದಾಗ ಪೊರೆದವಳು “ಅವಳು’. ನಾಗತಿಹಳ್ಳಿಯವರ “ನನ್ನ ಪ್ರೀತಿಯ ಹುಡುಗಿಗೆ’ ಪುಸ್ತಕ ಓದಿ ಪ್ರೇಮಪತ್ರ ಪ್ರಬಂಧ ಬರೆಯಲು ಶುರುಮಾಡಿದಾಗ “ಜೋಶ್‌’ ಜಾಗ ಮಾಡಿ ಕೊಟ್ಟಿತು. “ಚಿನ್ನಾರಿ’ ಪುಟಕ್ಕೂ ಪ್ರಯತ್ನಿಸಿದ್ದೇನೆ.

ನಾನು ಹೈಸ್ಕೂಲು ಓದುವಾಗ ಗುರುನಾಥ ಎಂಬ ಶಿಕ್ಷಕರು ಬರೆಯುವ ಮನಸ್ಸುಳ್ಳವರು ಸಾಕಷ್ಟು ಓದಬೇಕು ಎನ್ನುತ್ತಿದ್ದರು. ಈಗ ಉದಯವಾಣಿಯ ಪ್ರತಿ ಪುರವಣಿ ಓದುವುದೇ ನನಗೆ ಬಹಳ ಅಚ್ಚುಮೆಚ್ಚು. ಲೇಖನದ ಆಡಿಯೋ ಕೇಳುತ್ತ ಮನೆಕೆಲಸಗಳ ಪೂರ್ತಿಗೊಳಿಸಿದ್ದು ಉಂಟು. “ಉದಯವಾಣಿ ಆ್ಯಫ್’ ಈ ನಿಟ್ಟಿನಲ್ಲಿ ನನಗೆ ಉತ್ತಮ ಗೆಳತಿ.

ಮಗನ ತುಂಟಾಟಗಳನ್ನು ನೋಡುತ್ತ, ನನಗೆ ದೊರೆತ ಸ್ವಲ್ಪ ಸಮಯದಲ್ಲಾದರೂ ಓದಲು ಅವಕಾಶ ಸಿಕ್ಕಿರುವುದು “ಆ್ಯಪ್‌’ ನಿಂದ. ಓದು ಶಬ್ದ ಭಂಡಾರವನ್ನು ಬೆಳೆಸುತ್ತದೆ ಎಂಬ ಮಾತು ಸುಳ್ಳಲ್ಲ.
ನಾನು ಸಾಹಿತ್ಯ ಕ್ಷೇತ್ರದಲ್ಲಿ ಒಂದು ಸಣ್ಣ ಕೂಸು. ಉದಯವಾಣಿಯೆಂಬ ಮಹಾತಾಯಿಯ ಪ್ರೀತಿ 50 ವರುಷಗಳಿಂದ ಪಸರಿಸಿದರೂ, ನನ್ನ ಅವಳ ನಂಟು 2-3 ವರುಷಗಳಿಂದ ಇರಬಹುದು. ಆದರೆ ತಾಯಿಯ
ಪ್ರೀತಿ ತಡವಾಗಿ ಸಿಕ್ಕರೂ ಅಮೃತದಂತಲ್ಲವೇ? ಅವಳ ಪ್ರೀತಿ, ಆಶೀರ್ವಾದ ನನ್ನ ಮೇಲಷ್ಟೇ ಅಲ್ಲ ನಾಡಿನ ಜನತೆಯ ಮೇಲೆ ನಿತ್ಯ ನಿರಂತರವಾಗಿರಲಿ ಎಂಬುದೇ ನನ್ನ ಆಶಯ.

ಸಾವಿತ್ರಿ ಶ್ಯಾನುಭಾಗ್‌, ಕುಂದಾಪುರ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.