Anarkali Tulu Movie: ಅನರ್‌ಕಲಿ ಕೋಸ್ಟಲ್‌ವುಡ್‌ಗೆ ಶುಕ್ರದೆಸೆ!


Team Udayavani, Aug 18, 2024, 6:55 AM IST

Anarkali Tulu Movie: ಅನರ್‌ಕಲಿ ಕೋಸ್ಟಲ್‌ವುಡ್‌ಗೆ ಶುಕ್ರದೆಸೆ!

ಕೋಸ್ಟಲ್‌ನಲ್ಲಿ ತುಳು ಸಿನೆಮಾ ಸದ್ದು ಮಾಡುತ್ತಿಲ್ಲ ಎಂಬ ಸಾಮಾನ್ಯ ಅಪವಾದ ಇತ್ತೀಚೆಗೆ ಕೊಂಚ ದೂರವಾದಂತಿದೆ. ಬೆನ್ನು ಬೆನ್ನಿಗೆ ಬಂದ ಒಂದೊಂದು ಸಿನೆಮಾಗಳು ಈಗ ತುಳುವರನ್ನು ಥಿಯೇಟರ್‌ಗೆ ಕರೆ ತರುತ್ತಿದೆ. ಹೀಗಾಗಿಯೇ ಕಳೆದ 2-3 ಸಿನೆಮಾಗಳ ಬಗ್ಗೆ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಾಡಿದ್ದು ಆ.23ಕ್ಕೆ ತೆರೆ ಕಾಣುವ “ಅನರ್‌ ಕಲಿ’ ಕರಾವಳಿಗರಲ್ಲಿ ಸಾಕಷ್ಟು ನಿರೀಕ್ಷೆ  ಮೂಡಿಸಿದೆ.

ಲಕುಮಿ ಸಿನಿ ಕ್ರಿಯೇಶನ್‌ ಮತ್ತು ಲೋ ಬಜೆಟ್‌ ಪ್ರೊಡಕ್ಷನ್‌ ನಿರ್ಮಾಣದಲ್ಲಿ ಹರ್ಷಿತ್‌ ಸೋಮೇಶ್ವರ ನಿರ್ದೇಶನದಲ್ಲಿ “ಅನರ್‌ಕಲಿ’ ರೂಪುಗೊಂಡಿದೆ. ಪೊಳಲಿ, ಕಟೀಲು, ಸೋಮೇಶ್ವರ, ಉಳ್ಳಾಲ, ಉಳಿಯ, ನೀರುಮಾರ್ಗ ಹಾಗೂ ಕಳಸ ಸಹಿತ ವಿವಿಧ ಸ್ಥಳಗಳಲ್ಲಿ 18 ದಿನಗಳಲ್ಲಿ ಶೂಟಿಂಗ್‌ ನಡೆಸಲಾಗಿದೆ. ಸೀಮಿತ ಬಜೆಟ್‌ನಲ್ಲಿ ಮಾಡಿದ ರಿಚ್‌ ಸಿನೆಮಾ ಎಂದೇ ಸದ್ಯ ಮಾತು ಕೇಳಿಬರುತ್ತಿದೆ. ಈಗಾಗಲೇ ನಡೆದ ಇದರ ಪ್ರೀಮಿಯರ್‌ ಶೋ ಹಲವರ ಮೆಚ್ಚುಗೆ ಪಡೆದದ್ದು ವಿಶೇಷ.

ನವೀನ್‌ ಡಿ. ಪಡೀಲ್‌, ಅರವಿಂದ್‌ ಬೋಳಾರ್‌, ರವಿ ರಾಮಕುಂಜ, ರಂಜನ್‌ ಬೋಳೂರು, ದೀಪಕ್‌ ರೈ ಪಾಣಾಜೆ, ಪುಷ್ಪ ರಾಜ್‌ ಸಹಿತ ಹಲವರು ಈ ಸಿನೆಮಾದಲ್ಲಿ ಕಾಮಿಡಿ ಕಮಾಲ್‌ ಮಾಡಿದ್ದಾರೆ. ದೇವದಾಸ್‌ ಕಾಪಿಕಾಡ್‌ ಗರಡಿಯಲ್ಲಿ ಪಳಗಿದ ಶೋಭರಾಜ್‌ ಈ ಸಿನೆಮಾದಲ್ಲಿ ಹೊಸ ಗೆಟಪ್‌ನಲ್ಲಿದ್ದರೆ, ಆರ್‌ಜೆ ಮಧುರ ಅವರು ಕ್ಯೂಟ್‌ ಆಗಿ ಮೋಡಿ ಮಾಡಿದ್ದಾರೆ.

“ಧರ್ಮದೈವ’ ಸಿನೆಮಾ ಈಗ 50ನೇ ದಿನದತ್ತ ಹೆಜ್ಜೆ ಇಟ್ಟಿರುವುದು ನಿರ್ಮಾಪಕರಲ್ಲಿ ಮಂದಹಾಸ ಮೂಡಿಸಿದೆ. ಹೀಗಾಗಿ ಇದೇ ತಂಡ ಹೊಸ ಸಿನೆಮಾ ಮಾಡಲು ಸಿದ್ಧತೆಯಲ್ಲಿ ತೊಡಗಿಕೊಂಡಿದೆ. “ತುಡರ್‌’ ಸಿನೆಮಾ ಈಗಾಗಲೇ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ!

ಅರ್ಜುನ್‌ ಕಾಪಿಕಾಡ್‌ ಅಭಿನಯದ “ಕಲ್ಜಿಗ’ ಸಿನೆಮಾ ಸೆ.13ರಂದು ರಿಲೀಸ್‌ ಆಗುವುದು ಪಕ್ಕಾ ಆಗಿದೆ. ರಾಜ್‌ ಸೌಂಡ್ಸ್‌ ಆ್ಯಂಡ್‌ ಲೈಟ್ಸ್‌ ತಂಡದ “ಮಿಡ್ಲ್ ಕ್ಲಾಸ್‌ ಫ್ಯಾಮಿಲಿ’ ಸಿನೆಮಾ ಅ.31ರಂದು ಬಿಡುಗಡೆ ಆಗಲಿದೆ. ಇವೆರಡು ನಿರೀಕ್ಷೆಯ ಪಟ್ಟಿಯಲ್ಲಿದೆ. ರೂಪೇಶ್‌ ಶೆಟ್ಟಿ ನಿರ್ದೇಶನದ ಹೊಸ ಸಿನೆಮಾದ ಟೈಟಲ್‌ ರವಿವಾರ ಸಂಜೆ ಬಿಡುಗಡೆಯಾಗಲಿದೆ. ಅನೀಶ್‌ ಪೂಜಾರಿ ವೇಣೂರು ನಿರ್ದೇಶನ “ದಸ್ಕತ್‌’ ಹೊಸ ತುಳು ಸಿನೆಮಾ ಕೆಲವೇ ದಿನದಲ್ಲಿ ಸೆಟ್ಟೇರಲಿದೆ.

ಅಂದಹಾಗೆ, ನವೆಂಬರ್‌-ಡಿಸೆಂಬರ್‌ ಕಾಲಕ್ಕೆ ಹಲವು ತುಳು ಸಿನೆಮಾಗಳು ಶೂಟಿಂಗ್‌ ಕಾಣಲಿರುವುದು ಮತ್ತೂಂದು ಸುದ್ದಿ. ಅಂತೂ-ಇಂತೂ ನಾಡಿದ್ದಿನ “ಅನರ್‌ಕಲಿ’ ಬಳಿಕ ಬೇರೆ ಬೇರೆ ಸಿನೆಮಾಗಳ ಮೂಲಕ ಕೋಸ್ಟಲ್‌ವುಡ್‌ಗೆ ಮತ್ತೂಮ್ಮೆ ಶುಕ್ರದೆಸೆ ಆರಂಭವಾಗುವ ಲಕ್ಷಣ ಕಂಡುಬರುತ್ತಿದೆ.

ದಿನೇಶ್‌ ಇರಾ

ಟಾಪ್ ನ್ಯೂಸ್

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.