ಮಲೆಯಾಳದ ಕಥೆಗಾರ್ತಿ ಗ್ರೇಸಿಯವರ ಕಥೆಗಳಲ್ಲಿ ಹೆಣ್ಣಿನ ಆಂತರಿಕ ಲೋಕ


Team Udayavani, Mar 14, 2021, 1:40 PM IST

Book review Of Mettalilidu Hoda Parvathi

ಹೆಣ್ಣಿನ ಆಂತರಿಕ ಲೋಕವನ್ನು ತುಂಬ ಭಿನ್ನವಾಗಿ ಚಿತ್ರಿಸುವ ಮಲೆಯಾಳದ ಕಥೆಗಾರ್ತಿ ಗ್ರೇಸಿ. ಸರಳ ಸಾಧಾರಣ ವಸ್ತುಗಳ ಮೂಲಕ ಅಸಾಧಾರಣವಾದ ಒಳನೋಟಗಳತ್ತ ಓದುಗರನ್ನು ಕೊಂಡೊಯ್ಯುವ ಅವರ ಕಥೆಗಳು ಹೆಣ್ಣೆಂದರೆ ಕೇವಲ ಭೋಗವಸ್ತು ಅಥವಾ ಶರೀರ ಮಾತ್ರವೆಂದು ಮತ್ತೆ ಮತ್ತೆ ಒತ್ತಿ ಹೇಳುವ ಸಾಂಪ್ರದಾಯಿಕ ಸಮಾಜದ ನಂಬಿಕೆಯನ್ನು ದಿಟ್ಟವಾಗಿ ಪ್ರಶ್ನಿಸುತ್ತವೆ.

 ‘ಮೆಟ್ಟಲಿಳಿದು ಹೋದ ಪಾರ್ವತಿ ಕಮಲಾ ಹೆಮ್ಮಿಗೆಯವರು ಅನುವಾದಿಸಿದ ಗ್ರೇಸಿಯವರ 18 ಸಣ್ಣ ಕತೆಗಳ ಸಂಕಲನ. ಗ್ರೇಸಿಯವರು ಅತ್ಯಂತ ಕಡಿಮೆ ಸ್ಪೇಸ್ನಲ್ಲಿ ಅತ್ಯಂತ ಹೆಚ್ಚು ಹೇಳುವವರು. ‘ಒಂದು ಸತ್ಯ ಸಂಧ ಪುಟದ ನಕಲು.’ ಕಥೆಯಲ್ಲಿ ಹೆಣ್ಣನ್ನು ತನಗೆ ಬೇಕಾದಂತೆ ಕಾಮ ತೃಷೆಯನ್ನು ಹಿಂಗಿಸಲು ಬಳಸಿ ಒಂದು ಮಗುವನ್ನೂ ಕೊಟ್ಟು  ಶಾಶ್ವತವಾಗಿ ಬಿಟ್ಟು ಹೋಗುವ ಮಹಾಭಾರತದ ಪರಾಶರನಂಥ ಒಬ್ಬ ವ್ಯಕ್ತಿ ಇದ್ದಾನೆ.

ಓದಿ :  ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗ್ಲಿ ಬಿಡಿ: ಸಿಡಿ ಪ್ರಕರಣದ ಬಗ್ಗೆ ಸಿದ್ದರಾಮಯ್ಯ

ಬೇಸಿಗೆಯಲ್ಲೊಂದು ಮಳೆ ಹನಿ ..’ಹುಡುಗಿಯೊಬ್ಬಳು ಅಪರಿಚಿತ ಯುವಕನ ಜತೆಗೆ  ಅವನ ಸ್ಕೂಟರಿನಲ್ಲಿ ಹೋಗಿ ಅವನ ಜತೆಗೆ ಹೋಟೆಲ್ ರೂಮಿನಲ್ಲಿ ತಂಗಿ ಅವನ ಜತೆಗೆ ಸಂಭೋಗ ನಡೆಸಿ, ಅವನು ಅವಳ ಕನ್ಯತ್ವದ ಬಗ್ಗೆ ಪ್ರಶ್ನಿಸಿದಾಗ ತಾನು ಕುಂತಿಯಂತೆ ಪ್ರತಿ ಸಂಭೋಗದ ನಂತರ ಕನ್ಯೆಯಾಗುವವಳು ಅನ್ನುತ್ತಾಳೆ. ಇಲ್ಲಿ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಸದಾ ಸಂದೇಹ ಪಡುವ ಸಮಾಜದ ಬಗ್ಗೆ ವ್ಯಂಗ್ಯವಿದೆ.

ದೂರದಿಂದ ಬಂದ ಜಾದೂಗಾರ  ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳನ್ನು ಮರುಳು ಮಾಡಿ ವಶಪಡಿಸಿಕೊಳ್ಳುವ ನಗರದ ಪುರುಷರ ಸ್ವಾರ್ಥವಂಚನೆಗಳ ಚಿತ್ರಣವಿದೆ. ‘ಅಳಿದ ಮೇಲೆ ಯಲ್ಲಿ ಬದುಕಿನಲ್ಲಿ ಅಪಾರವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಒಬ್ಬ ಹೆಣ್ಣಿನ ಶವವು ಇದ್ದಕ್ಕಿಂದ್ದಂತೆ ಕಣ್ಣು ತೆರೆದು ತನ್ನ ಗಂಡ, ಅತ್ತೆ, ಮಾವ, ಅಕ್ಕ, ಅಮ್ಮ ಯಾರೂ ತನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲವೆಂದು ರೋದಿಸುವ ಕಥೆಯಿದೆ. ಸೂಕ್ಷ್ಮ ಮನಸ್ಸಿನ ಒಬ್ಬ ಹೆಣ್ಣು ತನ್ನ ಜೀವನದಲ್ಲಿ ಸಂಬಂ ಪಟ್ಟವರಿಮದಲೇ ಅವಗಣಿಸಲ್ಪಟ್ಟು  ಹೇಗೆ ಒಂಟಿತನದ ಸಂಕಟ ಅನುಭವಿಸುತ್ತಾಳೆ ಅನ್ನುವುದನ್ನು ಚಿತ್ರಿಸುವುದು ಗ್ರೇಸಿಯವರ ಗುರಿ ಅನ್ನಿಸುತ್ತದೆ.  ‘ಹೀಗೊಂದು ಜಾಗ ಕಥಾನಾಯಕಿ  ಚಿಕ್ಕ ಹುಡುಗಿ. ತನ್ನ ಅಮ್ಮನ ನಡತೆ ಸರಿಯಿಲ್ಲವೆಂದು ಅಸಮಾಧಾನದಿಂದ  ಆಕೆಯಿಂದ ಮಾನಸಿಕವಾಗಿ ದೂರವಾಗಿ, ಪಕ್ಕದ ಮನೆಯ ಗಂಡಹೆಂಡಿರ  ನಡುವಣ ಪ್ರೀತಿ ಕಂಡು ಸಂತೋಷ ಪಟ್ಟರೂ ಮುಂದೆ ಗಂಡ ಮನೆ ಕೆಲಸದಾಕೆಯ ಜತೆಗೆ ಸಂಬಂ ಬೆಳೆಸಿದ್ದನ್ನು ಕಂಡು ದಂಗಾಗುತ್ತಾಳೆ.  ‘ಬೆಕ್ಕು ಕತೆಯಲ್ಲಿ ಒಬ್ಬ ಯುವಕ ತಾನು ಮದುವೆಯಾದ ಹೆಣ್ಣಿಗೆ ಬೆಕ್ಕಿನ ಕಣ್ಣುಗಳು ಅನ್ನುವ ಕಾರಣಕ್ಕೆ ಅವಳ ಬಗ್ಗೆ ಪೂರ್ವಗ್ರಹೀತನಾಗಿ ಅವಳನ್ನು  ಮಾನಸಿಕ ಹಿಂಸೆಗೆ ಗುರಿ ಮಾಡುತ್ತಾನೆ.  ‘ಪರದೇಶಿಯ ಪ್ರಸಂಗ ಒಬ್ಬ ತೃತೀಯ ಲಿಂಗಿಯ ಜತೆಗೆ ಪುರುಷನೊಬ್ಬ ಅಮಾನವೀಯವಾಗಿ ವರ್ತಿಸಿದಾಗ  ಸ್ವಾಭಿಮಾನಿಯಾದ ಆಕೆ ತನಗೆ ಯಾರ ಸಂಗವೂ ಬೇಡ, ತಾನಿನ್ನು ಮುಂದೆ ಪುಸ್ತಕಗಳ ನಡುವೆ ಬದುಕುತ್ತೇನೆಂದು ನಿರ್ಧರಿಸುವ ಕಥೆ.

 ‘ಪಾಂಚಾಲಿಯಂತೂ ಗ್ರೇಸಿಯವರು ನಿರ್ಮಿಸಿದ ಅದ್ಭುತ ಶಿಲ್ಪನೆರೆಮನೆಯಲ್ಲಿ ಬಾಡಿಗೆಗಿದ್ದ  ಐವರನ್ನು ಏಕಕಾಲದಲ್ಲಿ ಪ್ರೀತಿಸಿ, ಅರ್ಯಾರಿಗೂ ಪರಸ್ಪರ ಗೊತ್ತಾಗದ ಹಾಗೆ ಐವರನ್ನೂ ಮದುವೆಯಾಗುವ ಕೃಷ್ಣೆ ಅವರು ಐವರ ಜತೆಗೂ ಬೇರೆ ಬೇರೆಯಾಗಿ ರಾತ್ರಿಗಳನ್ನು ಕಳೆಯುತ್ತಾಳೆಆದರೆ ಅವರು ಹೆಂಡತಿಯನ್ನು  ಭೋಗಿಸುವ ರೀತಿ ಅವಳಿಗೆ ಇಷ್ಟವಾಗುವುದಿಲ್ಲಪ್ರತಿಯೊಬ್ಬರಲ್ಲೂ ಅವಳು ಒಂದಿಲ್ಲೊಂದು ದೋಷಗಳನ್ನು ಕಾಣುತ್ತಾಳೆ. ಕೊನೆಗೆ ಐವರನ್ನೂ ಬಿಟ್ಟು ದೋಷರಹಿತನಾದ ಪೀತಾಂಬರಧಾರಿಯನ್ನು ಹುಡುಕುತ್ತ ಹೋಗುತ್ತಾಳೆ. ಹೆಣ್ಣು ಪುರುಷನಿಂದ ಬಯಸುವ ನಿಜವಾದ ಪ್ರೀತಿಯ ಅಂತ್ಯವಿಲ್ಲದ ಹುಡುಕಾಟವನ್ನು ಕತೆ ಚಿತ್ರಿಸುತ್ತದೆ. ‘ಮೆಟ್ಟಲಿಳಿದು ಹೋದ ಪಾರ್ವತಿ ಪುಸ್ತಿಕದ ಶೀರ್ಷಿಕೆ ಕಥೆಅಪಾರವಾದ ಜೀವನಾಸಕ್ತಿಯುಳ್ಳ  ನಿರೂಪಕಿಯ ಗೆಳತಿ ಪಾರ್ವತಿ  ರಾಮನಾಥನನ್ನು ಮದುವೆಯಾದ ನಂತರ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿ ಆಕೆಗೆ ಡ್ರೈವಿಂಗ್ ಕಲಿಸುವ  ಉಣ್ಣಿಚೇಟನಿಂದ ಆಕರ್ಷಿತಳಾಗಿ , ಕೊನೆಗೆ ಅವನ ಕಾಮವಾಸನೆಯ ಅರಿವಾದ ತಕ್ಷಣ ಅವನನ್ನು ಬಿಡುತ್ತಾಳೆಆದರೆ ಆತ ಅವಳನ್ನು ಬ್ಲಾಕ್ ಮೇಲ್ ಮಾಡುತ್ತಾನೆಕೆಲವು ಕಾಲದ ನಂತರ ನಿರೂಪಕಿ ಪಾರ್ವತಿಯನ್ನು ಇನ್ನೊಮ್ಮೆ ಭೇಟಿಯಾದಾಗ  ಅವಳು ಇಪ್ಪತ್ತರ ಹರೆಯದ  ತರುಣನ ಪ್ರೀತಿಯಲ್ಲಿ ಸಿಲುಕಿರುತ್ತಾಳೆ. ಅಂದಿನಿಂ ನಿರೂಪಕಿಗೆ ಅವಳ ಮೇಲಿನ ಗೌರವ ಮಾಯವಾಗುತ್ತದೆ. ಕತೆಯಲ್ಲಿ ಹೆಣ್ಣಿನ ದೌರ್ಬಲ್ಯವೇ ಕಥೆಗಾರ್ತಿಯ ಸಮಸ್ಯೆಯಾದಂತೆ ಕಾಣುತ್ತದೆ. ಅಥವಾ ಇದೂ ಪ್ರೀತಿಗಾಗಿ ಹೆಣ್ಣಿನ ನಿರಂತರ ಹುಡುಕಾಟದ ಚಿತ್ರಣವೇ ಇರಬಹುದು.

ಓದಿ :  ಎಲ್ಲವನ್ನೂ ಎಸ್ ಐಟಿ ಯವರೇ ನೋಡಿಕೊಳ್ಳುತ್ತಾರೆ: ಗೃಹ ಸಚಿವ ಬೊಮ್ಮಾಯಿ

ಒಟ್ಟಿನಲ್ಲಿ ಇದರಲ್ಲಿರುವ 18 ಕತೆಗಳೂ ಸ್ತ್ರೀ ಕೇಂದ್ರಿತವಾಗಿದ್ದು  ಪುರುಷ ಪ್ರಧಾನ ವ್ಯವಸ್ಥೆಯಲ್ಲಿ  ಸ್ತ್ರೀಯರನ್ನು ಸುತ್ತಿಕೊಳ್ಳುವ ಹತ್ತಾರು ಸಮಸ್ಯೆಗಳನ್ನು ಚಿತ್ರಿಸುತ್ತವೆಗ್ರೇಸಿಯವರ ಕತೆಗಳ ರಚನಾ ಬಂಧವು ಎಷ್ಟು ಬಿಗಿಯಾಗಿದೆ ಅಂದರೆ  ಅವುಗಳಿಂದ ಒಂದೇ ಒಂದು ಶಬ್ದವನ್ನು ಸಹ ತೆಗೆಯುವಂತಿಲ್ಲಕಥೆಗಳಲ್ಲಿ ಪ್ರತಿಮೆಸಂಕೇತಗಳು ಯಥೇಷ್ಟವಾಗಿವೆ. ಮುಖ್ಯವಾಗಿ ಅವರು ಮಹಾಭಾರತದ ಪಾತ್ರಗಳನ್ನುಕುಂತಿ, ದ್ರೌಪದಿ, ಪಂಚಪಾಂಡವರು, ಪರಾಶರ ಮೊದಲಾದವರನ್ನು ಪ್ರತಿಮೆಗಳಾಗಿಸುತ್ತಾರೆ.

–ಡಾ. ಪಾರ್ವತಿ ಜಿ. ಐತಾಳ್

ಹಿರಿಯ ಸಾಹಿತಿಗಳು, ಅನುವಾದಕರು.

ಓದಿ : ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್‍ನಿಗೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಬೆಂಬಲ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.