ಆಕ್ಸಿಜನ್‌ ಯಂತ್ರ ಖರೀದಿ, ದೇಣಿಗೆ ಸಂಗ್ರಹಿಸುತ್ತಿರುವ ಯುಕೆ ಕನ್ನಡಿಗರು


Team Udayavani, Jun 5, 2021, 1:15 PM IST

Buy Oxygen Machine

ಕೊರೊನಾ ಸಂಕಷ್ಟವನ್ನು ಎದುರಿಸುತ್ತಿರುವ ಭಾರತಕ್ಕೆ ವಿಶ್ವದೆಲ್ಲೆಡೆ ಯಿಂದ ನೆರವಿನ ಮಹಾಪೂರ ಹರಿದುಬರುತ್ತಿದೆ. ತಮ್ಮ ತಾಯ್ನಾಡಿನ ಬವಣೆಯನ್ನು ಹಂಚಿಕೊಳ್ಳಲು ಪಣ ತೊಟ್ಟು ನಿಂತಿರುವ ಯುಕೆ ಕನ್ನಡಿಗರು ಈ ಬವಣೆಯಿಂದ ಎಲ್ಲರೂ ಪಾರಾಗಲಿ ಎಂದು ಪ್ರಾರ್ಥಿಸುವುದರೊಂದಿಗೆ ವಿವಿಧ ರೀತಿಯಲ್ಲಿ ನೆರವು ನೀಡಲು ಜನರನ್ನು ಒಗ್ಗೂಡಿಸಿ ಕರ್ನಾಟಕದ ಮೂಲೆ ಮೂಲೆಗೂ ಸಹಾಯ ತಲುಪುವಂತೆ ಮಾಡಲು ಪ್ರಯತ್ನಿಸುತ್ತಿದೆ.

ಚಾರಿಟಿ ಸಂಸ್ಥೆಯಾದ ಕನ್ನಡ ಬಳಗ ಯುಕೆಯು  ರೋಟರಿ ಕ್ಲಬ್‌ ಬೆಂಗಳೂರು ಸಹಯೋಗದಿಂದ ಆಕ್ಸಿಜನ್‌ ಮೆಶಿನ್‌ಗಳ ಪೂರೈಕೆಯ ಸಲುವಾಗಿ ಈಗಾಗಲೇ 31,000 ಕ್ಕೂ ಹೆಚ್ಚು ಪೌಂಡ್‌  ದೇಣಿಗೆ ಸಂಗ್ರಹಿಸಿದ್ದು, ಈಗಾಗಲೇ 70 ಪ್ರೀಮಿಯಂ ಗ್ರೇಡ್‌ ಆಕ್ಸಿಜನ್‌ ಕಾನ್ಸಂಟ್ರೇಶನ್‌ಗಳನ್ನು ಬೆಂಗಳೂರಿಗೆ ಕಳುಹಿಸಿದೆ. ಇಲ್ಲಿಯವರಿಗೆ ಕನ್ನಡಿಗರು ಯುಕೆ ವತಿಯಿಂದ ಹತ್ತು ಸಾವಿರ ಪೌಂಡ್‌ಗಳಿಗಿಂತಲೂ ಹೆಚ್ಚು ಮೊತ್ತ ಸೇರಿದ್ದು, ಇದನ್ನು ಈ ರೀತಿ ಉಪಯೋಗಿಸುವ ಯೋಜನೆ ರೂಪಿಸಿದೆ. ಅರ್ಧದಷ್ಟು ಹಣವನ್ನು ಮುಖ್ಯಮಂತ್ರಿಗಳ ಕೋವಿಡ್‌-19 ಪರಿಹಾರ ನಿಧಿಗೆ ವರ್ಗಾಯಿಸುವುದು,

ಯುಕೆಯಲ್ಲಿನ ಕನ್ನಡ  ಸಮುದಾಯವು ನೀಡಿದ ಉಳಿದ ನಿಧಿಯನ್ನು ಆಸ್ಪತ್ರೆಗಳಿಗೆ ನೇರವಾಗಿ ಆಕ್ಸಿಜನ್‌ ಕಾನ್ಸಂಟ್ರೇಶನ್‌ಮತ್ತು ಇನ್ನಿತರ ಉಪಕರಣಗಳನ್ನು ಪಡೆಯಲು ಬಳಸುವುದು ಹಾಗೂ  ಹೆಚ್ಚು ಅಗತ್ಯವಿರುವ ಜಿÇÉೆಗಳಿಗೆ ಕಳುಹಿಸುವುದು.  ಆಕ್ಸಿಜನ್‌ ಕಾನ್ಸಂಟ್ರೇಶನ್‌ ಮತ್ತು ಇನ್ನಿತರ ಉಪಕರಣಗಳನ್ನು ಆಸ್ಪತ್ರೆ ಉಪಕರಣಗಳ ಉತ್ಪಾದನೆಯ ಕುರಿತಾಗಿ ಭಾರತ ಹಾಗೂ ಹೊರದೇಶದ ಕಂಪೆನಿಗಳ ಸಂಪರ್ಕದಲ್ಲಿದ್ದು, ಇವುಗಳ  ವ್ಯವಸ್ಥೆ ಮಾಡುವಲ್ಲಿ ಶ್ರಮಿಸುತ್ತಿದೆ.

ಯುಕೆ ಮತ್ತು ಯುರೋಪ್‌ನಲ್ಲಿ ಜಾರಿಗೆ ತರಲಾದ ವಿಭಿನ್ನ ಮಾಹಿತಿ ತಂತ್ರದ ಬಗ್ಗೆ ಸಂಶೋಧನೆ, ಅಧ್ಯಯನ ಮತ್ತು ಕೋವಿಡ್‌ ಸೂಕ್ತ ನಡವಳಿಕೆಯನ್ನು ಉತ್ತೇಜಿಸಲು ಮತ್ತು ಕರ್ನಾಟಕದಲ್ಲಿ ಕೋವಿಡ್‌ ಲಸಿಕೆಯ  ಪ್ರಯೋಜನಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಸ್ವಯಂ ಪ್ರೇರಿತ ತಂಡವು ಈಗಾಗಲೇ ಕೆಲಸ ಮಾಡುತ್ತದೆ. ಕರ್ನಾಟಕದ ಜನರನ್ನು ತಲುಪಲು ವಿವಿಧ ಸಾಮಾಜಿಕ ಮಾಧ್ಯಮ ಮತ್ತು ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ರಚಿಸಲಾದ ಮೇಲಾಧಾರಗಳನ್ನು ಹಂಚಿಕೊಂಡು, ಅನುಷ್ಠಾನದಲ್ಲಿ ಯೋಜನೆ ಮತ್ತು ತಾಂತ್ರಿಕ ಒಳಹರಿವುಗಳಿಗೆ ಸಹಾಯ ಮಾಡಿ ಸಾಮಾನ್ಯ ಜನರಿಗೆ ನೆರವಾಗುವಂತೆ ಕೆಲವು ಯೋಜನೆಗಳನ್ನು ಹಮ್ಮಿಕೊಂಡಿದೆ.

ಅಷ್ಟೇ ಅಲ್ಲದೆ ಯೋಜನಾ ಇಲಾಖೆ, ಕರ್ನಾಟಕ ಸರಕಾರ ಸಿಎಸ್‌ ಆರ್‌ ಸಹಯೋಗಯೊಂದಿಗೆ ನೆರವು ನೀಡುವವರಿಗೆ ತಾಲೂಕು ಆಸ್ಪತ್ರೆಗಳ ವಿವರಗಳು ಮತ್ತು ಕರ್ನಾಟಕದ ಅವಶ್ಯಕತೆಗಳು ಬಗ್ಗೆ ಹೆಚ್ಚು ವಿವರಗಳು ಕನ್ನಡಿಗರು ಯುಕೆ ಜಾಲತಾಣದಲ್ಲಿ ದೊರಕುತ್ತದೆ. ಆಯಾ ಜಿÇÉಾ ಆರೋಗ್ಯಾಧಿಕಾರಿ ಮತ್ತು ಡಿಸಿಯೊಡನೆ ಆಸಕ್ತ ದಾನಿಗಳಿಗೆ ನೇರ ಸಂಪರ್ಕ ಕಲ್ಪಿಸುವಲ್ಲಿ   ಕನ್ನಡಿಗರು ಯುಕೆ  ಸೇತುವೆಯಾಗಿದೆ.

ಈ ಎಲ್ಲ ನಿಧಿ ಸಂಗ್ರಹ ಹಾಗೂ ಕರ್ನಾಟಕ ಸರಕಾರದೊಂದಿಗೆ ಸಮಾಲೋಚನೆ ನಡೆಸುತ್ತಿರುವ ಅನಿವಾಸಿ ಕನ್ನಡಿಗರ (ಕನ್ನಡಿಗರು ಯುಕೆ) ಪರವಾಗಿ ಗಣಪತಿ ಭಟ್‌ ಅವರು ತಮ್ಮ ಸಂಸ್ಥೆಯ ಕೆಲವು ಯೋಜನೆಗಳಾದ ಯುಎನ್‌ ಅಭಿವೃದ್ಧಿ ಕಾರ್ಯಕ್ರಮ,  ಖಈಎs ಸಹಯೋಗದಿಂದ  ಸ್ಥಳೀಯ ಸಂಘಗಳನ್ನು ಕಟ್ಟಿ ಆಂಗ್ಲ ಕನ್ನಡಿಗರ ಸಹಯೋಗದೊಂದಿಗೆ ಜನಜಾಗೃತಿಯನ್ನು ಮೂಡಿಸುತ್ತಿದ್ದಾರೆ.

ಯುಕೆ ಭಾರತೀಯ ಸಮುದಾಯದ ಪರವಾಗಿ ಕೆಲವು ಸಂಘ ಸಂಸ್ಥೆಗಳಾದ ಅಮಿತ್‌ ಕಚ್ಚಾ ಮತ್ತು ಅವರ ತಂಡದಿಂದ  5 ಕೋಟಿಗಿಂತಲೂ ಹೆಚ್ಚು, ಆಅಕಐO ಇಂಡಿಯಾ ವತಿಯಿಂದ 1 ಕೋಟಿಗಿಂತಲೂ ಅಧಿಕ ಹಣ ಸಂಗ್ರಹವಾಗಿದೆ. ಬ್ರಿಟಿಷ್‌ ಏಶಿಯನ್‌ ಟ್ರÓr… ಕೂಡ ಹಣ ಸಂಗ್ರಹದಲ್ಲಿ ನಿರತವಾಗಿದೆ. ಒಟ್ಟಿನಲ್ಲಿ ಕರ್ನಾಟಕದ ಜನರಿಗೆ ಯಾವುದೇ ರೀತಿಯ ಸಹಾಯ ಬೇಕಾದರೂ ಮಾಡಲು ಯುಕೆ ಕನ್ನಡಿಗರು ಸಿದ್ಧತೆ ನಡೆಸಿದ್ದಾರೆ.

– ರಾಧಿಕಾ ಜೋಶಿ, ಲಂಡನ್‌

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.