Foreign ವ್ಯವಹಾರ ನಿಪುಣ: ಹೆನ್ರಿ ಕಿಸಿಂಜರ್‌


Team Udayavani, Dec 1, 2023, 6:00 AM IST

1-sadsadsa

ಅಮೆರಿಕ ರಾಜಕಾರಣದಲ್ಲಿ ಮಾತ್ರವಲ್ಲ, ಸಮಕಾಲೀನ ವಿದೇಶಾಂಗ ವ್ಯವಹಾರಗಳ ವಲಯದಲ್ಲಿ  ಹೆನ್ರಿ ಕಿಸಿಂಜರ್‌ ಅವರದ್ದು ಬಹುದೊಡ್ಡ ಹೆಸರು. ಸತತ ಎಂಟು ವರ್ಷಗಳ ಕಾಲ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ, ಅದಕ್ಕೂ ಮುನ್ನ ವಿದೇಶಾಂಗ ಇಲಾಖೆ ಸಲಹೆಗಾರರಾಗಿ ಕೆಲಸ ಮಾಡಿದ ಕಿಸಿಂಜರ್‌, ಡೆಮಾಕ್ರೆಟಿಕ್‌ ಮತ್ತು ರಿಪಬ್ಲಿಕನ್‌ ಪಕ್ಷದ ಸರಕಾರಗಳಿಗೂ ಖಾಯಂ ಸಲಹೆಗಾರರಾಗಿದ್ದರು.

ಅಮೆರಿಕದ ಇತಿಹಾಸದಲ್ಲಿ ಅಲ್ಲಿನ ಅಧ್ಯಕ್ಷರಷ್ಟೇ ಪ್ರಸಿದ್ಧಿ ಪಡೆದವರೆಂದರೆ ಅದು ಕಿಸಿಂಜರ್‌ ಅವರೇ ಇರಬೇಕು. ಒಂದೆಡೆ ಯುದ್ಧದಾಹಿ ಎಂಬ ಹೆಸರು ಪಡೆದಿರುವಂತೆಯೇ, ಇನ್ನೊಂದೆಡೆ ನೊಬೆಲ್‌ ಶಾಂತಿ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡವರು. ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಘೋಷಿಸಿದಾಗ, ಅದನ್ನು ವಿರೋಧಿಸಿ ನೊಬೆಲ್‌ ಸಮಿತಿಯ ಇಬ್ಬರು ರಾಜೀನಾಮೆ ಸಲ್ಲಿಸಿದ್ದರು. ಆದರೆ ಕಾಂಬೋಡಿಯಾ ದೇಶದ ಆಂತರಿಕ ಕದನ ಮತ್ತು ಅದರ ಮೇಲಿನ ಬಾಂಬ್‌ ದಾಳಿಗೂ ಇವರೇ ಕಾರಣ ಎಂಬ ಮಾತುಗಳೂ ಇವೆ. ಅಲ್ಲದೆ ಅಮೆರಿಕದ ಸುದೀರ್ಘ‌ ಕಾಲದ ವಿಯೆಟ್ನಾಂ ಕದನಕ್ಕೆ ಇತಿಶ್ರೀ ಹಾಡಿ ಅಮೆರಿಕದ ಮುಖ ಉಳಿಸಿದವರು. ಯುದ್ಧವನ್ನು ದೀರ್ಘ‌ಕಾಲ ನಡೆಸಲು ಬಿಟ್ಟು ಸಾವಿರಾರು ಮಂದಿ ಬದುಕಿಗೆ ಎರವಾದ ಆರೋಪದಲ್ಲಿ ಇವರ ವಿರುದ್ಧ ಯುದ್ಧಾಪರಾಧದ ಬಗ್ಗೆ ತನಿಖೆ ನಡೆಸಬೇಕಿತ್ತು ಎಂಬ ಮಾತುಗಳೂ ಕೇಳಿಬಂದಿದ್ದವು.

ಕಿಸಿಂಜರ್‌ ಅಮೆರಿಕ ಅಧ್ಯಕ್ಷರಾದ ರಿಚರ್ಡ್‌ ನಿಕ್ಸನ್‌ ಮತ್ತು ಗೆರಾಲ್ಡ್‌ ಫೋರ್ಡ್‌ ಅಧ್ಯಕ್ಷರಾಗಿದ್ದ ಕಾಲದಲ್ಲಿ ವಿದೇಶಾಂಗ ಸಚಿವರಾಗಿದ್ದರು.   ಇವರ ಬಗ್ಗೆ ತೀರಾ ವಿಶೇಷವೆನ್ನಿಸುವ ಸಂಗತಿಗಳಿವೆ. ಕಿಸಿಂಜರ್‌ ಅವರನ್ನು “ಶಟಲ್‌ ಡಿಪ್ಲೋಮಸಿ’ಯ ವಿದೇಶಾಂಗ ಸಚಿವ ಎಂದೇ ಕರೆಯಲಾಗುತ್ತಿತ್ತು. ಇದಕ್ಕೆ ಕಾರಣಗಳೂ ಇವೆ. ಮಧ್ಯಪ್ರಾಚ್ಯ ದೇಶಗಳಲ್ಲಿನ ಅಶಾಂತಿ ನಿಲ್ಲಿಸುವ ಕಾರಣದಿಂದ ರಹಸ್ಯವಾಗಿ ಹಲವಾರು ನಾಯಕರನ್ನು ಭೇಟಿ ಮಾಡಿ ಅವರ ಮನವೊಲಿಕೆ ಮಾಡಿದ್ದರು. ಅಷ್ಟೇ ಅಲ್ಲ, ರಷ್ಯಾದೊಂದಿಗಿನ ಶೀತಲ ಸಮರಕ್ಕೆ ಹೊಸ ಆಯಾಮ ನೀಡಿದ ಇವರು, ಕಾಲದಲ್ಲಿ ಅಮೆರಿಕ ಮತ್ತು ಚೀನ ನಡುವಿನ ಸಂಬಂಧ ಸುಧಾರಣೆಗೆ ಆದ್ಯತೆ ನೀಡಿದ್ದರು. ಅಮೆರಿಕದ ವಾಟರ್‌ಗೇಟ್‌ ಹಗರಣದ ವೇಳೆ ನಿಕ್ಸನ್‌ ಬದಲಿಗೆ ಅರೆ ಅಧ್ಯಕ್ಷೀಯ ಜವಾಬ್ದಾರಿಯನ್ನೂ ಹೊಂದಿದ್ದರು.

1970ರ ಪಾಕಿಸ್ಥಾನ ಯುದ್ಧದ ವೇಳೆಯಲ್ಲಿ ಪಾಕಿಸ್ಥಾನವನ್ನು ಬೆಂಬಲಿಸಿದ ಇವರು, ಭಾರತ ವಿರೋಧಿ ಭಾವನೆ ಹೊಂದಿದ್ದರಲ್ಲದೆ, ಒಂದು ಹಂತದಲ್ಲಿ  ಭಾರತೀಯರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿ ವಿವಾದಕ್ಕೀಡಾಗಿದ್ದರು. 2014ರಲ್ಲಿ ಮೋದಿ ಪ್ರಧಾನಿಯಾದ ಮೇಲೆ ಅಮೆರಿಕ ಮತ್ತು ಭಾರತದ ಸಂಬಂಧ ಹೆಚ್ಚು ಸುಧಾರಣೆಯಾಗಬೇಕು ಎಂದು ಹೇಳುತ್ತಿದ್ದರು. ಇತ್ತೀಚೆಗಷ್ಟೇ ಮೋದಿಯವರು ಅಮೆರಿಕದ ಆತಿಥ್ಯದ ಮೇಲೆ ಹೋಗಿದ್ದಾಗ, ಪ್ರಧಾನಿ ಭಾಷಣ ಕೇಳಲೆಂದೇ ವೈಟ್‌ಹೌಸ್‌ಗೆ ಹೋಗಿದ್ದರು. ಆಗ ಮೋದಿಯವರನ್ನೂ ಭೇಟಿ ಮಾಡಿದ್ದರು.

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ganapa

Ganesha Festival: ಇಂದು ಗಣೇಶ ಚತುರ್ಥಿ; ವಿಘ್ನ ನಿವಾರಕ ವಿನಾಯಕ ವಿಶ್ವನಾಯಕನೂ ಹೌದು

ETTINAHOLE

Ettinahole Drinking Water Project: ದಶಕದ ಬಳಿಕ ಎತ್ತಿನಹೊಳೆ ಯೋಜನೆ ಸಾಕಾರ

Gouri-Puja-

Gowri Festival: ಇಂದು ಗೌರಿ ತದಿಗೆ: ಭಾದ್ರಪದ ಶುಕ್ಲ ತೃತೀಯಾ ಹರಿತಾಲಿಕಾ ವ್ರತಂ

ETTINAHOLE1

Ettinahole Project: ಬತ್ತಿದ ಕನಸುಗಳಿಗೆ ಎತ್ತಿನಹೊಳೆ ಜೀವಜಲ ಧಾರೆ!

10-uv-fusion

Teacher’s Day: ಆದರ್ಶ ಬದುಕಿಗೆ ದಾರಿ ತೋರುವ ಗುರು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.