ಮುಕ್ತ ಸಂವಹನವೇ ಸುಮಧುರ ಸಂಬಂಧದ ಅಡಿಪಾಯ

ಅತ್ತೆ ವಿಷಯವನ್ನು ಗಂಡನಿಗೆ ಹೇಳುವುದಕ್ಕೆ ಮೊದಲು ಅತ್ತೆಯ ಬಳಿಯೇ ಹೇಳಬೇಕು.

Team Udayavani, Jul 3, 2021, 8:36 AM IST

ಮುಕ್ತ ಸಂವಹನವೇ ಸುಮಧುರ ಸಂಬಂಧದ ಅಡಿಪಾಯ

ಅವಿಭಕ್ತ ಕುಟುಂಬದ ಸೊಸೆಯಾಗಿ ವಿಭಕ್ತ ಕುಟುಂಬದಿಂದ ಬಂದವಳು ನಾನು. ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದೆ. ಒಂದೇ ಮನೆ, ಹಲವಾರು ಮಂದಿ. ಸುಖ, ಸಂತೋಷ, ನೆಮ್ಮದಿ ಇರಬಹುದು ಎಂದುಕೊಂಡಿದ್ದೆ. ಮದುವೆಯಾದ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು.

ಆದರೆ ನಾನು ಕೆಲಸಕ್ಕೆ ಹೋಗಲು ಶುರು ಮಾಡಿದ ಮೇಲೆ ಸ್ವಲ್ಪ ಸಮಸ್ಯೆಗಳಾಗುತ್ತಿದೆ. ನಾನು ಅಫೀಸ್‌ ಡ್ಯೂಟಿ ಮುಗಿಸಿ ಬಂದ ತಕ್ಷಣ ನನ್ನ ಅತ್ತೆ ನನಗೆ ನನ್ನ ಗಂಡನ ಬಗ್ಗೆ ಸಾಕಷ್ಟು ದೂರು ನೀಡುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದರೆ ಅಥವಾ ನಾನೇದರೂ ನನ್ನ ಸಮಸ್ಯೆಗಳನ್ನು ಹೇಳಿದರೆ ತಕ್ಷಣ ಅದನ್ನು ನನ್ನ ಗಂಡನಿಗೆ ಹೇಳಿ, ನಾನೂ ಅವರೊಂದಿಗೆ ಸಂತೋಷವಾಗಿಲ್ಲ ಎನ್ನುವಂತೆ ಹೇಳುತ್ತಾಳೆ. ಒಂದು ರೀತಿಯಲ್ಲಿ ಇದು ನನಗೆ ಕಿರಿಕಿರಿ ಉಂಟು ಮಾಡಿದೆ ಎಂದು ಸ್ನೇಹಿತೆಯೊಬ್ಬಳು ಹೇಳಿಕೊಂಡಾಗ ನನಗೂ ದುಃಖವಾಯಿತು. ಆ ಕ್ಷಣ ಅವಳಿಗೆ ಒಂದಷ್ಟು ಸಮಾಧಾನ ಹೇಳಿದೆ.

ಆದರೆ ಯಾಕೆ ಹೀಗೆ ಎಂಬ ಆಲೋಚನೆ ಸಾಕಷ್ಟು ಹೊತ್ತು ಕೊರೆಯಲಾರಂಭಿಸಿತು. ಸಾಮಾನ್ಯವಾಗಿ ಅವಿಭಕ್ತ ಕುಟುಂಬದ ವ್ಯವಸ್ಥೆಗಳು ಭಿನ್ನವಾಗಿರುತ್ತದೆ. ಇಲ್ಲಿ ಸಂವಹನವೇ ಎಲ್ಲರನ್ನೂ ಒಂದಾಗಿರಿಸಿರುತ್ತದೆ. ವಿಭಕ್ತ ಕುಟುಂಬದಿಂದ ಬಂದವರು ಇದಕ್ಕೆ ಹೊಂದಿ ಕೊಳ್ಳಲು ಸ್ವಲ್ಪ ಸಮಯ ಬೇಕಾಗ ಬಹುದು. ಇಂತ ಸಂದರ್ಭದಲ್ಲಿ ಕೆಲವೊಂದು ವಿಚಾರಗಳನ್ನು ರೂಢಿಸಿ ಕೊಳ್ಳಬೇಕಿದೆ. ಇದರಿಂದ ಮನೆ, ಮನಸ್ಸು ಸಂತೋಷವಾಗಿರಲು ಸಾಧ್ಯವಿದೆ.

ಮುಕ್ತ ಸಂವಹನ
ಅವಿಭಕ್ತ ಕುಟುಂಬದಲ್ಲಿ ಮುಕ್ತ ಸಂವಹನ ಬಹುಮುಖ್ಯವಾಗುತ್ತದೆ. ಯಾಕೆಂದರೆ ಒಬ್ಬರ ವಿಚಾರ ಇನ್ನೊಬ್ಬರಿಗೆ ಹೇಳಿ, ಅದು ಮತ್ತೂಬ್ಬರನ್ನು ತಲುಪುವಾಗ ಭಿನ್ನವಾಗಿರಬಹುದು. ಹೇಳದೇ ಇರುವ ವಿಷಯಗಳು ಅದರಲ್ಲಿ ಸೇರಿರಬಹುದು ಅಥವಾ ಹೇಳಬೇಕಾದ ಮುಖ್ಯ ವಿಷಯವೇ ಇರದೇ ಇರಬಹುದು. ಇಂಥ ಸಂದರ್ಭದಲ್ಲಿ ಮುಕ್ತ ಸಂವಹನ ನಡೆಸುವುದು ಅತೀ ಅಗತ್ಯವಾಗುತ್ತದೆ. ಇಲ್ಲಿ ಯಾವುದೇ ಅನುವಾನಕ್ಕೆ ಅವಕಾಶ ಸಿಗಲಾರದು. ಏನೇ ಇದ್ದರೂ ನೇರಾನೇರ ಮಾತನಾಡಿ ಸಮಸ್ಯೆ ಬಗೆ ಹರಿಸಿಕೊಳ್ಳಬಹುದು.

ದೃಢವಾಗಿರಿ
ಸಂಬಂಧಗಳ ವಿಚಾರಗಳಲ್ಲಿ ನಿಮ್ಮ ಮಾತು ಮತ್ತು ನಡತೆಯ ಮೇಲೆ ದೃಢವಾಗಿರಬೇಕು. ಸಂವಹನದ ವೇಳೆಯೂ ದೃಢತೆಯಿಂದ ಇರಬೇಕು. ಆಗ ಯಾವುದೇ ತಪ್ಪುಗಳಾಗಲು ಸಾಧ್ಯವಿಲ್ಲ.

ದೃಷ್ಟಿಕೋನ ಪರಿಶೀಲಿಸಿ
ಸಂಬಂಧಗಳಲ್ಲಿ ಯಾರೇ ಆಗಿರಲಿ ತಂದೆ, ತಾಯಿ, ಮಗ, ಸೊಸೆ, ಮಗಳು,ಅಳಿಯ… ಹೀಗೆ ಎಲ್ಲರ ದೃಷ್ಟಿಕೋನವನ್ನು ಪರಿಶೀಲಿಸುವುದು ಅವಿಭಕ್ತ ಕುಟುಂಬದಲ್ಲಿ ಮುಖ್ಯವಾಗಿರುತ್ತದೆ. ಮಗ ಮತ್ತು ಸೊಸೆಯ ನಡುವೆ ಮಧ್ಯಸ್ಥಿಕೆ ವಹಿಸುವುದು ಅತ್ತೆ, ಮಾವನ ಜವಾಬ್ದಾರಿ ಎಂದು ಅಂದುಕೊಂಡಿರುತ್ತಾರೆ. ಅದೇ ರೀತಿ ಅತ್ತೆಯ ಕಾಳಜಿ, ಮಾವನ ಆರೈಕೆ ತನ್ನ ಕರ್ತವ್ಯವೆಂದು ಸೊಸೆ ಅಂದುಕೊಂಡಿರುತ್ತಾಳೆ. ಇದರ ನಡುವೆ ಬೇರೆ ವಿಚಾರಗಳು ಬಂದರೆ ಅವರಿಗೆ ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ.ಹೀಗಾಗಿ ಎಲ್ಲರ ದೃಷ್ಟಿಕೋನವನ್ನು ಪರಿಶೀಲಿಸಿಯೇ ಮುನ್ನಡೆಯುವುದು ಅತ್ಯುತ್ತಮ ಸಂಬಂಧಕ್ಕೆ ಭದ್ರ ಅಡಿಪಾಯ ಹಾಕಿದಂತಾಗುತ್ತದೆ.

ಗಡಿ ನಿಯಂತ್ರಣವಿರಲಿ
ಮನೆಯಲ್ಲಿ ಯಾರ ವಿಷಯ ಯಾರಲ್ಲಿ ಹೇಳಬೇಕು ಎನ್ನುವ ಅರಿವು ಇರಲಿ. ಗಂಡನ ವಿಷಯವನ್ನು ಅತ್ತೆಯ ಬಳಿ ಹೇಳುವುದಕ್ಕಿಂತ ಮೊದಲು ಗಂಡನಿಗೆ ಹೇಳಬೇಕು. ಅತ್ತೆ ವಿಷಯವನ್ನು ಗಂಡನಿಗೆ ಹೇಳುವುದಕ್ಕೆ ಮೊದಲು ಅತ್ತೆಯ ಬಳಿಯೇ ಹೇಳಬೇಕು. ಅವರವರ ತಪ್ಪುಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಸಬೇಕು. ಅಲ್ಲದೇ ಅತ್ತೆಯು ಗಂಡನ ವಿರುದ್ಧ ಏನಾದರೂ ಹೇಳಲು ಬಂದರೆ ಅವರ ಗಡಿಗಳ ಪ್ರಾಮುಖ್ಯತೆಯನ್ನು ವಿವರಿಸಿ ಮತ್ತು ಅವುಗಳನ್ನು ಗೌರವಿಸಲು ತಿಳಿಸಿ. ಒಂದು ವೇಳೆ ಅದನ್ನು ಅವರು ಮತ್ತೆ ಮುಂದುವರಿಸಿದರೆ ಇದು ತಾಯಿ, ಮಗನ ಸಂಬಂಧದ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಿ. ಇದನ್ನು ಆಕೆ ಅರ್ಥ ಮಾಡಿಕೊಳ್ಳುತ್ತಾರೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.