ಕೊಲೆಗಾರ ಚಾರ್ಲ್ಸ್‌ ಹಿಂತಿರುಗಿ ನೋಡಿದಾಗ


Team Udayavani, Dec 24, 2022, 7:45 AM IST

ಕೊಲೆಗಾರ ಚಾರ್ಲ್ಸ್‌ ಹಿಂತಿರುಗಿ ನೋಡಿದಾಗ

ಚಾರ್ಲ್ಸ್‌ ಗುರುಮುಖ್‌ ಶೋಭರಾಜ್‌ ಹಾಟ್‌ಚಂದ್‌ ಭವಾನಿ… ಇದು ಯಾರ ಹೆಸರು ಎಂದು ಮೂಗಿನ ಮೇಲೆ ಬೆರಳು ಇರಿಸಿಕೊಂಡಿರಾ? ಹೌದು ಆತನೇ ಚಾರ್ಲ್ಸ್‌ ಶೋಭರಾಜ್‌. “ಬಿಕಿನಿ ಕಿಲ್ಲರ್‌’ ಎಂಬ ಕುಖ್ಯಾತಿಯ ಹೆಸರಿನಿಂದ ಕರೆಯಿಸಿಕೊಳ್ಳುವ ಈತನಿಗೆ ಭಾರತದ ಸಂಪರ್ಕವೂ ಇದೆ.

ಶೋಭರಾಜ್‌ ಹಾಟ್‌ಚಂದ್‌ ಭವಾನಿ ಮತ್ತು ವಿಯೆಟ್ನಾಂ ಮಹಿಳೆ ತರಣ್‌ ಲೊವಾಂಗ್‌ ಫ‌ುನ್‌ ಆತನ ಹೆತ್ತವರು. 1944ರಲ್ಲಿ ಆತನ ಜನನವಾಯಿತು. ಅಂದ ಹಾಗೆ ಆತನ ಹೆತ್ತವರು ಕಾನೂನು ಬದ್ಧವಾಗಿ ದಾಂಪತ್ಯ ಜೀವನ ನಡೆಸಿಯೇ ಇರಲಿಲ್ಲ. ಆತನಿಗೆ ಮೂರು ವರ್ಷವಾಗಿದ್ದಾಗ ಫ್ರಾನ್ಸ್‌ ಸೇನೆಯ ಹಿರಿಯ ಅಧಿಕಾರಿಯನ್ನು ವಿವಾಹವಾಗಿದ್ದಳು.

ಆತನಿಗೆ ತಂದೆಯ ಪ್ರೀತಿ ಸಿಗಲಿಲ್ಲ ಮತ್ತು ಸೇನಾಧಿಕಾರಿಯ ಜತೆಗೆ ಆತನ ತಾಯಿ ಇದ್ದರೂ ಬಾಲ್ಯದ ಜೀವನ ಕಠಿಣವಾಗಿತ್ತು. ಹೀಗಾಗಿ, ಆತನಿಗೆ ಆರಂಭದಿಂದಲೂ ಕಳವು ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದ್ದ. ಆತ ಪ್ರಾಪ್ತ ವಯಸ್ಕನಾಗುವ ವರೆಗೆ ಬಾಲಪರಾಧಿಗಳನ್ನು ಇರಿಸುವ ಕೇಂದ್ರದಲ್ಲಿಯೇ ಕಳೆದಿದ್ದ.

ಆತನ ಬಗ್ಗೆ ಪುಸ್ತಕ ಬರೆದ ರಿಚರ್ಡ್‌ ನೆವಿಲ್ಲೆ ಮತ್ತು ಜ್ಯೂಲಿ ಕ್ಲೆರ್ಕ್‌ ಅವರ ಪ್ರಕಾರ “ಎರಡು ಖಂಡಗಳ ನಡುವಿನ ಜೀವನದಂತೆ ಶೋಭರಾಜ್‌ನ ಬಾಲ್ಯದ ದಿನಗಳು ಇದ್ದವು’ ಎಂದು ಉಲ್ಲೇಖೀಸಿದ್ದರು. 20ನೇ ವಯಸ್ಸಿಗೇ ಆತನಿಗೆ ಭೂಗತ ಜಗತ್ತಿನ ಪರಿಚಯವೂ ಆಗಿತ್ತು. 1963ರಲ್ಲಿ ಪ್ಯಾರಿಸ್‌ನಲ್ಲಿ ಆತನಿಗೆ ಕಳವು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೊದಲ ಜೈಲು ಶಿಕ್ಷೆಯೂ ಆಗಿತ್ತು. ಬಿಡುಗಡೆಯ ಒಂದು ಸಂದರ್ಭದಲ್ಲಿ ಚಂತಾಲ್‌ ಕಂಪಗ್ನಾನ್‌ ಎಂಬಾಕೆಯ ಜತೆಗೆ ಪ್ರೇಮಾಂಕುರವೂ ಆಯಿತು. ಆಕೆಯ ಜತೆಗಿನ ದಾಂಪತ್ಯದಿಂದ ಉಷಾ ಎಂಬ ಪುತ್ರಿಯೂ ಇದ್ದಾಳೆ.

24 ಮರ್ಡರ್‌:
ತನ್ನ ಜೀವನದ ಅವಧಿಯಲ್ಲಿ ಒಟ್ಟು 24 ಕೊಲೆಗಳನ್ನು ಮಾಡಿದ್ದಾನೆ ಚಾರ್ಲ್ಸ್‌. ಇರಿತ, ಗುಂಡು ಹಾರಿಸಿ ಹೀಗೆ ಹಲವು ವಿಧಗಳಲ್ಲಿ ಆತ ಕೊಲೆ ಮಾಡಿದ್ದ. 1976ರಿಂದ 1997ರ ವರೆಗೆ ಆತನಿಗೆ ಭಾರತದಲ್ಲಿ ಶಿಕ್ಷೆಯೂ ಆಗಿತ್ತು. 1975ರಲ್ಲಿ ನೇಪಾಳದಲ್ಲಿ ಇಬ್ಬರು ಅಮೆರಿಕದವರನ್ನು ಕೊಲೆ ಮಾಡಿದ್ದಕ್ಕಾಗಿ 2003ರಲ್ಲಿ ಬಂಧನಕ್ಕೆ ಒಳಗಾಗಿ, ಡಿ.23ರಂದು ಬಿಡುಗಡೆಯಾಗಿದ್ದ. ಭಾರತದ ನೆರೆಯ ರಾಷ್ಟ್ರದಲ್ಲಿ 19 ವರ್ಷಗಳ ಶಿಕ್ಷೆ ಅನುಭವಿಸಿದ್ದಾನೆ.

ಈಗ 78:
ಸದ್ಯ ನೇಪಾಳ ರಾಜಧಾನಿ ಕಠ್ಮಂಡುವಿನ ಜೈಲಿನಿಂದ ಬಿಡುಗಡೆಯಾಗಿರುವ ಶೋಭರಾಜ್‌ಗೆ 78 ವರ್ಷ. “ನಾನು ಫ್ರಾನ್ಸ್‌ಗೆ ಹೋಗಲು ಇಚ್ಛಿಸುತ್ತೇನೆ. ಮುಂದಿನ ಹಲವು ವರ್ಷಗಳ ಕಾಲ ಕುಟುಂಬದ ಜತೆಗೆ ಜೀವಿಸುತ್ತೇನೆ ಎಂಬ ನಂಬಿಕೆ ನನಗೆ ಇದೆ’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾನೆ.

ಮೂರು ಪುಸ್ತಕಗಳು:
ಶೋಭರಾಜ್‌ನ ಸರಣಿ ಕೊಲೆಗಳನ್ನು ಆಧರಿಸಿ ಪುಸ್ತಕಗಳನ್ನೂ ಬರೆಯಲಾಗಿದೆ. ಈ ಪೈಕಿ ಪ್ರಮುಖವಾದದ್ದು ಎಂದರೆ 1979ರಲ್ಲಿ ಪತ್ರಕರ್ತ-ಲೇಖಕ ಬರೆದ “ಸಪೆìಂಟೈನ್‌’, 1980ರಲ್ಲಿ ರಿಚರ್ಡ್‌ ನೆವಿಲ್ಲೆ ಮತ್ತು ಜ್ಯೂಲಿ ಕ್ಲೆರ್ಕ್‌ ಬರೆದ “ದ ಲೈಫ್ ಆ್ಯಂಡ್‌ ಕ್ರೈಮ್ಸ್‌ ಆಫ್ ಚಾರ್ಲ್ಸ್‌ ಶೋಭರಾಜ್‌’, ನೊಯೆಲ್‌ ಬಾರ್ಬರ್‌ ಬರೆದ “ದ ಬಿಕಿನಿ ಮರ್ಡರ್‌’ ಹೆಚ್ಚಿನ ಸಂಖ್ಯೆಯಲ್ಲಿ ಜಗತ್ತಿನ ಓದುಗರನ್ನು ಸೆಳೆದಿತ್ತು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.