Friendship Day: “ಮಚ್ಚ ನಾನಿದೀನಿ” ಅನ್ನೋ ಒಬ್ಬ ಸ್ನೇಹಿತ ಸಾಕು!

ಒಬ್ಬ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ!

Team Udayavani, Aug 6, 2023, 2:55 PM IST

Friendship Day: “ಮಚ್ಚ ನಾನಿದೀನಿ” ಅನ್ನೋ ಒಬ್ಬ ಸ್ನೇಹಿತ ಸಾಕು!

ಸಾಂದರ್ಭಿಕ ಚಿತ್ರ

ರಕ್ತ ಸಂಬಂಧವಿಲ್ಲದಿದ್ದರೂ ಎಲ್ಲರ ಜೀವನದಲ್ಲಿ ಬರುವ, ಏನನ್ನಾದರೂ ತರುವ ಬಂಧವೇ ಸ್ನೇಹ. ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತರ ಪಾತ್ರ ಅತ್ಯಂತ ನಿರ್ಣಾಯಕವಾಗಿರುತ್ತದೆ. ಸ್ನೇಹವೆಂದರೆ ಇವತ್ತಿದ್ದು ನಾಳೆ ಹೋಗುವಂತದ್ದಲ್ಲ. ಬದಲಾಗಿ ಎಂತಹ ಕಷ್ಟದ ಸಮಯದಲ್ಲೂ ಕೊನೆ ತನಕ ಬಿಟ್ಟುಕೊಡದೆ ಜೊತೆಗಿರುವುದು.

ಮನೆಯವರು, ಸಹೋದರ- ಸಹೋದರಿಯರು ಅದೆಷ್ಟೇ ಪ್ರೀತಿಪಾತ್ರರಾಗಿರಬಹುದು. ಕೆಲವೊಮ್ಮೆ ಕೆಲವೊಂದು ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗದಿರಬಹುದು. ಅವರಿರುವ ಸ್ಥಿತಿ, ನಮ್ಮ ಬಗ್ಗೆ ಅವರು ಹೊಂದಿರುವ ಭಾವನೆ ಒಂದು ಮುಕ್ತ ಮಾತುಕತೆಗೆ ಅಡ್ಡಿಯಾಗಬಹುದು. ಆಗ ನಮ್ಮ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳುವವರು ಸ್ನೇಹಿತರು ಮಾತ್ರ.

ಗೆಳೆತನ ಎಂದರೆ ಕೃಷ್ಣ- ಸುದಾಮನಂತೆ ಇರಬೇಕಂತೆ. ಸುದಾಮ ಕೃಷ್ಣನ ಬಳಿ ಏನೂ ಕೇಳಲಿಲ್ಲ. ಕೃಷ್ಣ ಎಲ್ಲಾ ಕೊಟ್ಟು ಏನೂ ಹೇಳಲಿಲ್ಲ. ಅದೆಷ್ಟು ಸುಂದರ ಸಂಬಂಧ ಅಲ್ಲವೇ?… ಯಾವುದೇ ಸ್ವಾರ್ಥವಿಲ್ಲದ ನಿಷ್ಕಲ್ಮಶ ಬಾಂಧವ್ಯ. ಎಂತಹ ಪರಿಸ್ಥಿತಿಯಲ್ಲೂ ಜೊತೆಗಿರುವುದು. ಭೌತಿಕ ಸಂತೋಷ, ಸೌಂದರ್ಯಕ್ಕಿಂದ ಮಿಗಿಲಾದ ಮಾನಸಿಕ ಸಂಬಂಧ. ಅದು ಸಹಾಯ, ಅವಲಂಬನೆಗಳೆಂಬ ಸ್ವಾರ್ಥವನ್ನು ಮೀರಿದುದು…

ಗೆಳೆತನ ಎಂಬುದು ಹುಟ್ಟುವುದು ಬೆಳೆಯುವುದು ಶಾಲಾ-ಕಾಲೇಜುಗಳಲ್ಲಿ. ಗೆಳೆತನವಿಲ್ಲದೆ ಕಾಲೇಜು ದಿನಗಳನ್ನು ಕಳೆದವರು ಯಾವುದೇ ನೆನಪುಗಳಿಲ್ಲದೆ ಕಾಲೇಜಿನಿಂದ ಹೋಗಬೇಕಾಗುತ್ತದೆ. ಕಾಲೇಜು ಶುರುವಾದ ಹೊಸತರಲ್ಲಿ ಒಬ್ಬರಿಗೊಬ್ಬರ ಪರಿಚಯವೇ ಇರುವುದಿಲ್ಲ. ನಂತರ ಪರಿಚಯವಾಗಿ, ಅದು ಸ್ನೇಹವಾಗಿ, ಕೊನೆಗೆ ಬಿಟ್ಟಿರೆವು ಎಂಬಷ್ಟು ಬಂಧ ಬಿಗಿಯಾಗುತ್ತದೆ.

ಕಾಲೇಜಿನಲ್ಲಿ ಗೆಳೆಯರೊಂದಿಗಿನ ಅದೆಷ್ಟೊ ತರ್ಲೆ ಮಾತುಗಳು, ಕ್ಲಾಸ್ ಬಂಕ್ ಮಾಡಿ ಹರಟೆ ಹೊಡೆದ ಕ್ಷಣಗಳು, ತಾನು ಸಿಕ್ಕಿ ಬಿದ್ದಾಗ ತನ್ನ ಸ್ನೇಹಿತರನ್ನೂ ಸಿಕ್ಕಿ ಬೀಳಿಸಿ ತಮಾಷೆ ನೋಡುವುದು, ಬೇಜಾರಲ್ಲಿ ಇದ್ದಾಗ ಎರಡು ಹೊಡೆದಾದರೂ ಅದನ್ನು ಬಾಯಿ ಬಿಡಿಸುವ ಗೆಳೆಯರಿಗಿಂತ ಮಿಗಿಲಾದುದು ಯಾವುದೂ ಇಲ್ಲ. ಕೈ ಕುಲುಕಿ ಹೋಗುವ ಸಾವಿರ ಸ್ನೇಹಿತರಿಗಿಂತ ಕಷ್ಟಕ್ಕೆ ಸ್ಪಂದಿಸಿ “ಮಚ್ಚ ನಾನಿದೀನಿ” ಅನ್ನೋ ಒಬ್ಬ ಸ್ನೇಹಿತ ಇದ್ದರೆ ಸಾಕು.

ನಿಜವಾದ ಸ್ನೇಹಿತರು ನಮ್ಮ ಅತ್ಯುತ್ತಮ ಆಸ್ತಿ. ʼಭಾರತರತ್ನʼ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಹೇಳಿದಂತೆ, “ಒಂದು ಪುಸ್ತಕ ನೂರು ಸ್ನೇಹಿತರಿಗೆ ಸಮ, ಆದರೆ ಒಬ್ಬ ಸ್ನೇಹಿತ ಇಡೀ ಗ್ರಂಥಾಲಯಕ್ಕೆ ಸಮ” ಎಂಬಂತೆ,  ಉತ್ತಮ ಸ್ನೇಹಿತರಿರುವ ಪ್ರತಿಯೊಬ್ಬರೂ ಅದೃಷ್ಟಶಾಲಿಗಳು.

ಪ್ರಜ್ವಲ್.ಸಿ

ಅಂತಿಮ ಬಿ.ಎ, ಪತ್ರಿಕೋದ್ಯಮ

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

ಟಾಪ್ ನ್ಯೂಸ್

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.