ಸೂರ್ಯ ಸಿಡಿಯುತ್ತಿದ್ದಾನೆ!


Team Udayavani, Feb 14, 2023, 6:05 AM IST

ಸೂರ್ಯ ಸಿಡಿಯುತ್ತಿದ್ದಾನೆ!

ವಿಜ್ಞಾನಿಗಳ ಊಹೆಗೂ ಮೀರಿ ಈಗ ಕೆಲವು ದಿನಗಳಿಂದ ಸೂರ್ಯ ಸಿಡಿಯುತ್ತಿದ್ದಾನೆ. ಫೆ. 7ರಿಂದ ಇದೀಗ ಎರಡು ಗಜಗಾತ್ರದ ಸೂರ್ಯಕಲೆಗಳನ್ನು ಗಮನಿಸಿ ಬೃಹತ್‌ ಸಿಡಿತಗಳನ್ನು ಊಹಿಸಿ ಮುಂಬರಬಹುದಾದ ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಅತ್ಯಾಶ್ಚರ್ಯ, ಮೊನ್ನೆ ಕಂಡ ಸೂರ್ಯನ ಕಲೆ ಎಆರ್‌3213 ಫೆಬ್ರವರಿ 11 ಪುನಃ ಸಿಡಿದು ಸೌರ ಜ್ವಾಲೆಯನ್ನು ಬಿತ್ತರಿಸಿದೆ. ಕೊತಕೊತ ಕುದಿವ ಪ್ಲಾಸ್ಮಾದ ಸೂರ್ಯ ಉತ್ತರ ಧ್ರುವದ ಸಮೀಪ ಸಿಡಿಯುತ್ತಲೇ ಇದ್ದಾನೆ.

ಫೆಬ್ರವರಿ 9ರಂದು ಬೃಹತ್‌ ಸೂರ್ಯನ ಕಲೆ ಕಾಣಿಸಿಕೊಂಡ ಬೆನ್ನಲ್ಲೇ ಸೂರ್ಯ ಉತ್ತರ ಧ್ರುವ ಸಮೀಪ ಕಾಂತೀಯ ಸುಂಟರಗಾಳಿಯೊಂದಿಗೆ ಸಿಡಿಯುತ್ತಿರುವುದನ್ನು ನಾಸಾ ಗಮನಿಸಿದೆ. ಈ ಅಯಸ್ಕಾಂತೀಯ ಸುಳಿ ಇಡೀ ಧ್ರುವಕ್ಕೆ ಸುತ್ತಿದಂತೆ ಕಂಡ ವಿಜ್ಞಾನಿಗಳು ಸೂರ್ಯನ ಚಿಪ್ಪೇ ಸಿಡಿದಂತೆ ಎಂದು ವರ್ಣಿಸಿದ್ದಾರೆ.

ಈ ರೀತಿಯ ಕಾಂತೀಯ ನರ್ತನ ಸೂರ್ಯನಿದ ಹೊರನಡೆದಾಗ ವಿದ್ಯುತ್‌ ಕಂತೀಯ ಕಿರಣಗಳು ಚಿಮ್ಮುತ್ತವೆ. ಇವನ್ನು ಸೌರಮಾರುತಗಳು ಎನ್ನುವರು. ಭೂಮಿಯಲ್ಲಿದ್ದವರಿಗೆ ಇದು ಸೂರ್ಯಕಲೆಯಾಗಿ ಕಾಣಿಸುತ್ತದೆ.

ಕಾಂತೀಯ ಸುಳಿಯಲ್ಲಿ ವಿದ್ಯುತ್‌ ಕಾಂತೀಯ ಕಿರಣಗಳ ಪ್ರವಾಹದಲ್ಲಿ ರೇಡಿಯೋ ಅಲೆಗಳಿಂದ ಪ್ರಾರಂಭಿಸಿ ಶಕ್ತಿಯುತ ಗಾಮಾ ಅಲೆಗಳ ವರೆಗೆ ಎಲ್ಲವೂ ಇರಬಹುದು. ದಶದಿಶೆಗೆ ಚಿಮ್ಮುವ ಇವಕ್ಕೆ ಸನ್‌ ಫ್ಲೇರ್‌ ಸೂರ್ಯ ಮಾರುತ ಎನ್ನುವರು. ಇವುಗಳಲ್ಲಿ ಶಕ್ತಿಯುತ ಅತಿನೇರಳೆ ಹಾಗೂ ಎಕ್ಸ್ ಕಿರಣಗಳನ್ನು ಎಂ ಹಾಗೂ ಎಕ್ಸ್ ಸನ್‌ ಫ್ಲೇರ್‌ ಎನ್ನುವರು. ಎಮ್‌ ಸೂರ್ಯ ಮಾರುತಗಳಿಂದ ಭೂಮಿಯಲ್ಲಿ ಕೆಲ ಅವ್ಯವಸ್ಥೆಗಳು ನಡೆದರೆ ಎಕ್ಸ್ ಮಾರುತಗಳು ಗಂಡಾಂತರಕಾರಿ.

ಈ ಕೆಲವು ದಿನಗಳ ವಿದ್ಯಮಾನದಲ್ಲಿ ಎಂ ಕಿರಣಗಳು ಚೆಲ್ಲಿವೆ. ಹಾಗೆ ಎಕ್ಸ್ ಕಿರಣಗಳೂ ಬರಬಹುದೆಂದು ಅಂದಾಜಿಸಿದ್ದಾರೆ. ಇವುಗಳಿಂದ ಭೂಮಿಯ ಕೆಲ ಭಾಗಗಳಲ್ಲಿ ವಿದ್ಯುತ್‌ ನಲ್ಲಿ ವ್ಯತ್ಯಯ, ಗ್ಲೋಬಲ್‌ ಇಂಟರ್ನೆಟ್‌ಗಳ ಮೇಲೆ ರೇಡಿಯೊ ಅಲೆಗಳು ಸೇಲ್ಫೋನ್, ಮೊಬೈಲ್‌ ಸಿಗ್ನಲ್‌ಗ‌ಳ ಮೇಲೂ ಈ ಕೆಲ ದಿನ ಪರಿಣಾಮ ಬೀರಬಹುದೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಕಾಂತೀಯ ಕಿರಣಗಳ ಪ್ರವಾಹದ ಹಿಂದಿಂದ ಮೆರವಣಿಗೆಯೋಪಾದಿಯಲ್ಲಿ ಶಕ್ತಿಯುತಕಣಗಳ ಸಿಡಿತ ಸಂಭವಿಸುತ್ತದೆ. ಇವನ್ನು ಕೊರೋನಲ್‌ ಮಾಸ್‌ ಇಜೆಕ್ಸನ್‌ ಎನ್ನುವರು.
ಭೂಮಿಯ ಧ್ರುವ ಪ್ರದೇಶಗಳಲ್ಲಿ ಅತಿಯಾದ ಬಣ್ಣಬಣ್ಣದ ಧ್ರುವ ಪ್ರಭೆ ಯಥೇತ್ಛವಾಗಿ ಕಾಣಿಸಬಹುದು.

ಸುಮಾರು 11 ವರ್ಷಕ್ಕೊಮ್ಮೆ ಸೂರ್ಯ ಕಲೆಗಳ ಆವರ್ತನ ನಡೆಯುತ್ತಿದೆ. ಈಗ 25ನೇ ಆವರ್ತನ ಡಿಸೆಂಬರ್‌ 2019ರಿಂದ ಪ್ರಾರಂಭ. ಪ್ರತೀ 11 ವರ್ಷಗಳಲ್ಲಿ ಕೆಲ ವರ್ಷ ಅತೀ ಕಡಿಮೆ ಕಲೆಗಳು, ಕೆಲ ವರ್ಷ ಅತೀ ಹೆಚ್ಚು ಕಲೆಗಳನ್ನು ಗಮನಿಸುತ್ತಲೇ ಇದ್ದಾರೆ. ಈ ಸಾರಿಯ 25ನೇ ಆವರ್ತದಲ್ಲಿ 2023ರಿಂದ 2026ರ ವರೆಗೆ ಹೆಚ್ಚಿಗೆ ಸೌರಕಲೆಗಳನ್ನು ಕಾಣಬಹುದೆಂದು ಅಂದಾಜಿಸಿದ್ದರು. ಹಾಗೆಯೇ ಈಗ ನಡೆಯುತ್ತಿರುವ 25ನೇ ಸೈಕಲ್‌ ಹೆಚ್ಚೇನೂ ವಿಶೇಷವಿರುವುದಿಲ್ಲವೆಂದು ವಿಜ್ಞಾನಿಗಳು ಅಂದಾಜಿಸಿದ್ದರು. ಆದರೆ ಸೂರ್ಯ, ಈಗ ಅದೆಲ್ಲವನ್ನೂ ತಲೆಕೆಳಗೆ ಮಾಡಿಸಿ ಈ 25ನೇ ಸೈಕಲ್‌ ತುಂಬಾ ವಿಚಿತ್ರವೆಂಬಂತೆ ಸೂರ್ಯ ವಿಜ್ಞಾನಿಗಳನ್ನು ದಿಗ½$›ಮೆಗೊಳಿಸುತ್ತ ಸಿಡಿಯುತ್ತಿದ್ದಾನೆ.

ಸೂರ್ಯನ ಕಾಂತೀಯ ಧ್ರುವಗಳು ಭೂಮಿಯಂತೆ ಯಾವಾಗಲೂ ಒಂದೇಕಡೆ ಸ್ಥಿರವಲ್ಲ. 11 ವರ್ಷಕ್ಕೊಮ್ಮೆ ಕಾಂತೀಯ ಧ್ರುವಗಳು ಉತ್ತರದಿಂದ ದಕ್ಷಿಣಕ್ಕೆ ಪರಿವರ್ತನೆ ಗೊಳಗಾಗುತ್ತವೆ. ಇದಕ್ಕೆ ಸೂರ್ಯನ ಸಂಕೀರ್ಣ ಅಯಸ್ಕಾಂತೀಯ ವ್ಯವಸ್ಥೆಯೇ ಕಾರಣ. ಈಗ ನಡೆಯುತ್ತಿರುವ ಮಾಮೂಲಿನಂತಿರದ ವಿಚಿತ್ರ ಅಯಸ್ಕಾಂತೀಯ ರುದ್ರ ನರ್ತನಕ್ಕೆ ಕಾರಣ ತಿಳಿಯಬೇಕಿದೆಯಷ್ಟೇ. ಇದೊಂದು ಸೂರ್ಯನ ವಿಚಿತ್ರ ವಿಸ್ಮಯ.

– ಡಾ| ಎ.ಪಿ. ಭಟ್‌, ಉಡುಪಿ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.