Kannada literature; ಮನದ ಕದವ ತಟ್ಟಿ ಮುಟ್ಟಿ ಹೊರಟವರು ಕೆ.ಟಿ. ಗಟ್ಟಿ


Team Udayavani, Feb 20, 2024, 6:00 AM IST

1-sadasd

ಕನ್ನಡ ಸಾಹಿತ್ಯ ಕಣಜದಲ್ಲಿ ಕೆ.ಟಿ. ಗಟ್ಟಿಯವರು ಒಬ್ಬ ಗಟ್ಟಿ ಕಾಳು. ಸಾಹಿತ್ಯ, ವಿಚಾರ, ಶಿಕ್ಷಣ, ಅನುವಾದ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಹೀಗೆ ಬಂದು ಹೋದವರಲ್ಲ; ಬದಲಾಗಿ ಆಳವಾಗಿ ಕುಳಿತು ಕೃತಿಗಳ ತೋರಣ ಕಟ್ಟಿದವರು. ಬರೆಯುವುದೆಲ್ಲ ಮುಗಿದಿದೆ ಎನ್ನುತ್ತಿದ್ದ ಗಟ್ಟಿಯವರ ಮಾತು ನಿಜವೂ ಇರಬಹುದು. ಆದರೆ ಬರೆಯದೇ ಹೇಳಬೇಕಾದ್ದು ಇನ್ನೂ ಇತ್ತೇನೋ?

ಮಾನವೀಯತೆಯ ನಂದಾದೀಪ, ವೈಚಾರಿಕತೆಯ ಪ್ರದೀಪ, ಶಿಕ್ಷಣದ ಹೊಂಗಿರಣ ಕೆ.ಟಿ.ಗಟ್ಟಿ ಎಂಬ ಪ್ರಖರ ಸೂರ್ಯ ಇಂದು ಅಸ್ತಂಗತರಾಗಿದ್ದಾರೆ. ಗಟ್ಟಿ ಅವರು ತಮ್ಮ ಪ್ರಥಮ ಕೃತಿ “ಶಬ್ದಗಳು’ ಕಾದಂಬರಿಯಲ್ಲೇ ಮಾನವ ದೇಹದ ಸಾಧ್ಯತೆಗಳ ಬಗ್ಗೆ ವಿಚಾರ ಮಂಥನ ಮಾಡಿದವರು. ಆ ಕೃತಿಯ ಮೂಲಕ ಓದುಗರಲ್ಲಿ ಸಂಚಲನ ಮೂಡಿಸಿದ ಅದ್ವಿತೀಯರು.

ಬಳಿಕ ದೂರದ ಇಥಿಯೋಪಿಯಾದಲ್ಲಿ ಇದ್ದು, “ಕರ್ಮಣ್ಯೇ ವಾಧಿಕಾರಸ್ತೇ’ “ಅಬ್ರಾಹ್ಮಣ’, “ಯುಗಾಂತರ’, “ಯುದ್ಧ’ ಕಾದಂಬರಿಗಳನ್ನು ಹರಿಯ ಬಿಟ್ಟವರು. ತಾಯ್ನಾಡಿಗೆ ಮರಳಿದ ಬಳಿಕ “ರಾಗಲಹರಿ’, “ಸ್ವರ್ಣಮೃಗ’, “ನಿರಂತರ’, “ಕೆಂಪು ಕಳವೆ’ ಮುಂತಾದ ಹಲವು ಕಾದಂಬರಿಗಳನ್ನೂ, ಶಿಕ್ಷಣ ಸಂಬಂಧಿ ಕೃತಿಗಳನ್ನೂ, ವೈಚಾರಿಕತೆಯ ಉದ್ದೀ ಪಕ ಉತ್ಕೃಷ್ಟ ಸಾಹಿತ್ಯವನ್ನೂ ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಬೆಳಗಿದವರು. ಕವನ ಸಂಕಲನ, ಅನುವಾದ, ಮಕ್ಕಳ ನಾಟಕ, ತುಳು ಭಾಷೆಯಲ್ಲೂ ಕೃತಿಗಳು, ಅನುವಾದವನ್ನೂ ಕೈಗೊಂಡು ಭಾಷಾ ಸಿರಿಯನ್ನು ಮೆರೆದ ಅವರು, ಸ್ವಶಿಕ್ಷಿತರಾದವರಷ್ಟೇ ಅಲ್ಲ, ತಾನೇ ಒಂದು ವಿಶ್ವವಿದ್ಯಾನಿಲಯ ಎನ್ನುವಂತೆ ಇದ್ದ ವರು. ಭಾಷಾ ಶಾಸ್ತ್ರದ, ಪ್ರಗಲ್ಭ ಪಂಡಿತರು. ಆಂಗ್ಲ ವಿಶ್ವ ಸಾಹಿತ್ಯವನ್ನು ಅರಗಿಸಿಕೊಂಡವರು.

ಬದುಕು ಎಂದರೆ ಬರಹವೇ ಆಗಿರುವ ಗಟ್ಟಿಯವರ ಅಗಾಧ ಸಾಹಿತ್ಯ ಕೃಷಿ ಅವರ ಚಿಂತನಶೀಲ ಮನಸ್ಸಿನ ಪ್ರತಿಕೃತಿ. ಶಿಕ್ಷಕನೂ ಆಗಿದ್ದ ಈ ಸಾಹಿತಿಯಲ್ಲಿ ಶಿಕ್ಷಣ ಪ್ರಜ್ಞೆ ಪ್ರಖರವಾಗಿತ್ತು. ಅವರ ಆತ್ಮಕಥನ “ತೀರ’ದ ಮುಖ್ಯ ವಿಚಾರಸೆಲೆಯೂ ಶಿಕ್ಷಣವೇ. ಅದನ್ನು ಆತ್ಮಚಿಂತನವೆಂದು ಅವರು ಕರೆದುಕೊಂಡಿದ್ದಾರೆ. ನಿಜಕ್ಕೂ ಬಹುಮೂಲ್ಯ ಕೃತಿಯದು. ಒಟ್ಟು 49 ಕಾದಂಬರಿಗಳು, ಆತ್ಮಕಥನ, ನಾಲ್ಕು ಕಥಾ ಸಂಕಲನಗಳು, ಆರು ಪ್ರಬಂಧ ಸಂಕಲನಗಳು, ಒಂದು ಪ್ರವಾಸ ಸಾಹಿತ್ಯ, ಮೂರು ಕವನ ಸಂಕಲನಗಳು, ಹದಿನೇಳು ಬಾನುಲಿ ನಾಟಕಗಳು, ಹತ್ತೂಂಬತ್ತು ರಂಗನಾಟಕಗಳು, ಶಿಶು ಸಾಹಿತ್ಯದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಒಟ್ಟು ನಲವತ್ತು ನಾಟಕಗಳು, ತುಳುವಿನಲ್ಲಿ ಒಂದು ಕಾದಂಬರಿ, ಇಂಗ್ಲಿಷ್‌ ಕವಿತೆಗಳ ಅನುವಾದ, ಇಂಗ್ಲಿಷ್‌-ಕನ್ನಡ ಉಭಯ ಭಾಷಾಧ್ಯಯನದ ಎರಡು ಕೃತಿಗಳು, ಶಿಕ್ಷಣದ ಬಗ್ಗೆ ಗುರುಗಳಾಗಿ, ತಂದೆ-ತಾಯಿ ಹಾಗೂ “ಪೇರೆಂಟ್ಸ್‌ ಆಸ್‌ ಎಜುಕೇಟರ್’ ಎಂಬ ಮಹತ್ವದ ಕೃತಿಗಳು, ಇಂಗ್ಲಿಷ್‌ ವ್ಯಾಕರಣ ಹಾಗೂ ಉಪಯೋಗದ ಬಗ್ಗೆ ಐದು ಕೃತಿಗಳು..ಇಂತಹ ಮಹತ್ವಪೂರ್ಣ, ಅಗಾಧ ಸಾಹಿತ್ಯ ಸೃಷ್ಟಿಯ ಹಿಂದಿನ ಕತೃìತ್ವ ಶಕ್ತಿಗೆ ಸಮನಾದುದು ಬೇರೇನಿದ್ದೀತು ? “ನಿನ್ನೆ- ಇಂದು- ನಾಳೆ’ ರಾಜಕೀಯ ಪ್ರಜ್ಞೆಯ ಬೃಹತ್‌ ಕಾದಂಬರಿ ಬಹಳ ಮುಖ್ಯವಾಗಿ ಉಲ್ಲೇಖೀಸಲೇಬೇಕಾದದ್ದು.

ಉಜಿರೆಯ ಗುಡ್ಡಗಾಡಿನ ವನಶ್ರೀಯಲ್ಲಿ ಕೃಷಿಕನಾಗಿಯೂ ವಿಜೃಂಭಿಸಿದವರು ಗಟ್ಟಿಯವರು. ಸಾಹಿತ್ಯ ಕ್ಷೇತ್ರದ ಗಟ್ಟಿಗನನ್ನು ಮಣಿಸಿದುದು ಅಲ್ಲಿನ ಮಂಗಗಳು. ಕರಿಮೆಣಸು ಬಿಟ್ಟು ಬೇರೇನೂ ಕೈಗೆ ಸಿಗದಂತೆ ಎಲ್ಲವನ್ನೂ ಧ್ವಂಸವಾಗಿಸುವ ಮಂಗಗಳಿಗೆ ಕೊನೆಗೂ ಸೋತು ಅವರು ಕೈಚೆಲ್ಲಿದ್ದರು. ಮಂಗಗಳಿಲ್ಲದಿದ್ದರೆ ಸಾಹಿತ್ಯದೊಡನೆ ಆ ವನಶ್ರೀಯಲ್ಲಿ ಹಸುರಿನ ಕೃಷಿಯೂ ಪುಷ್ಕಳವಾಗಿರುತ್ತಿತ್ತು. ಹೋಮಿ ಯೋಪತಿ ವೈದ್ಯಕೀಯ ದಲ್ಲಿ ಶ್ರದ್ಧೆ ಮತ್ತು ಅನುಸರಣೆ ಅವರ ಇನ್ನೊಂದು ವೈಶಿಷ್ಟ್ಯ. ಹೀಗೆ ಹಲವು ವಿಷಯಗಳಲ್ಲಿ ಆಸಕ್ತಿ ತಳೆದವರು ಗಟ್ಟಿಯವರು.
ಮಾನವೀಯತೆಯ ಸಾಕಾರವಾಗಿದ್ದ ಕೆ.ಟಿ.ಗಟ್ಟಿ ಅವರಲ್ಲಿ ದೇವರು, ದಿಂಡರು, ಪೂಜೆ ಪುನಸ್ಕಾರಗಳಿರಲಿಲ್ಲ. ಇದ್ದುದು ಮಾನವೀಯ ಸಂಬಂಧಗಳು ಮತ್ತು ಪುಸ್ತಕಗಳ ನಂಟು. ನೆಹರೂ ಅವರಂತೆ ಪುಟಗಳನ್ನು ಬಿಡಿ ಬಿಡಿ ವಾಕ್ಯಗಳನ್ನು ಓದದೆ ಇಡಿಯ ಪುಟವನ್ನು ಶೀಘ್ರವಾಗಿ ಗ್ರಹಿಸುವ ಬಗೆ ಅವರ ಅನನ್ಯತೆ. ಅದನ್ನು ಎಲ್ಲರಿಗೂ ತಿಳಿಸಿ ಕೊಟ್ಟಿದ್ದರು. ಭಾಷಾ ಶಾಸ್ತ್ರದ ಅರಿವಿದ್ದ ಅವರು ಇಂಗ್ಲಿಷ್‌ ಉಚ್ಚಾರದ ಬಗೆಗೂ ಉತ್ತಮ ಪರಿಜ್ಞಾನ ಹೊಂದಿದ್ದರು. ಅವರ “ಅಬ್ರಾಹ್ಮಣ’, “ಕರ್ಮಣ್ಯೇ ವಾಧಿಕಾರಸ್ತೇ’ ಕೃತಿಗಳು ಸಾಮಾಜಿಕ ಸಂಚಲನವನ್ನೇ ಉಂಟು ಮಾಡಿದ್ದವು ಎನ್ನಲಡ್ಡಿಯಿಲ್ಲ. ಅವರ ಅಷ್ಟೂ ಕಾದಂಬರಿಗಳಲ್ಲಿ ಜನರ ಹೆಸರಾಗಲಿ, ಸ್ಥಳನಾಮಗಳಾಗಲೀ ಎಲ್ಲೂ ಪುನರಾವರ್ತನೆ ಆದುದು ಎಂಬುದೇ ಇಲ್ಲ. ಪಯಣದ ಆರಂಭದಲ್ಲಿ ಶುರುವಾಗುವ ಕಥೆ, ಕಾದಂಬರಿಯ ಮೊಳಕೆ ಬಸ್‌ ಇಳಿಯುವಾಗ ಪೂರ್ಣ ಹಂದರವಾಗಿ ರೂಪುಗೊಳ್ಳುತ್ತದೆ. ಅತ್ಯಂತ ಬಡ ಹಿನ್ನೆಲೆಯಿಂದ ಬಂದ ಗಟ್ಟಿಯವರ ಬೌದ್ಧಿಕ ಶ್ರೀಮಂತಿಕೆ ಅಪಾರ. ಅವರ “ಕೆಂಪು ಕಳವೆ’ ಕಾದಂಬರಿ ರೇಡಿಯೋದಲ್ಲಿ ಪ್ರಸಾರವಾಗಿ ಅಪಾರ ಜನಮನ್ನಣೆ ಪಡೆದಿತ್ತು.

ವರ್ಷಗಳ ಹಿಂದೆ ಮೆದುಳಿನ ಸ್ಟ್ರೋಕ್‌ಗೆ ಒಳಗಾಗಿದ್ದ ಅವರು ಸುರಕ್ಷಿತವಾಗಿ ಹೊರಬಂದರೂ ಇತ್ತೀಚಿನ ವರ್ಷಗಳಲ್ಲಿ ಅದರ ಪರಿಣಾಮ ಅವರ ಚಿತ್ತ, ದೇಹದ ಮೇಲೆ ಆಗದಿರಲಿಲ್ಲ. ಇನ್ನು ಬರೆಯುವುದು ಏನೂ ಇಲ್ಲ, ಬರೆದು ಮುಗಿದಿದೆ ಎಂದು ನಾಲ್ಕು ವರ್ಷಗಳಿಂದ ಅವರು ಹೇಳುತ್ತಲೇ ಇದ್ದರು. ಕೊನೆಯವರೆಗೂ ಅವರ ಲೇಖನಿ ನಿಲ್ಲದಿರಲಿ ಎಂಬುದೇ ನನ್ನ ಹಾರೈಕೆಯಾಗಿತ್ತು. ಆದರೆ ಆ ಆಶಯ ಈಡೇರಲಿಲ್ಲ ಎಂಬುದೇ ನನಗೆ ತೀರಾ ದುಃಖ ವನ್ನುಂಟು ಮಾಡಿದೆ.

1977ರಲ್ಲಿ ನನ್ನ ಪತ್ರಕ್ಕೆ ಉತ್ತರವಾಗಿ ನಮ್ಮ ಮನೆ ಬಾಗಿಲಲ್ಲಿ ಪ್ರತ್ಯಕ್ಷರಾದವರು. ಉಜಿರೆಯ ವನಶ್ರೀಯಲ್ಲಿ¨ªಾಗ ಸಾಹಿತ್ಯ, ತೋಟದ ಕೃಷಿಯಲ್ಲಿ ನಿರಂತರ ತೊಡಗಿಕೊಂಡಿರುತ್ತಿದ್ದ ಗಟ್ಟಿಯವರು ನನ್ನನ್ನು ಕಂಪ್ಯೂಟರ್‌ ಬಳಕೆಗೂ ಪ್ರೇರೇಪಿಸಿದವರು. ಅರ್ಧಗಂಟೆಯಲ್ಲಿ ನೀವದರಲ್ಲಿ ಮಾಸ್ಟರ್‌ ಆಗ ಬಹುದು ಎಂದು ಹುರಿ ದುಂಬಿಸಿ ದವರು. ಹಾಗೆ ಆಧುನಿಕ ತಾಂತ್ರಿಕತೆ ಬಗ್ಗೆ ಮನದ ಮೂಲೆಯಲ್ಲೋ ಕುತೂಹಲದ ಕಿಂಡಿ ತೆರೆದಿಟ್ಟುಕೊಂಡಿದ್ದವರು. ಅಂಥವರು ಈ ಕೊನೆಯ ವರ್ಷಗಳಲ್ಲಿ ಸ್ಮಾರ್ಟ್‌ ಫೋನ್‌ ಆದರೂ ಉಪಯೋಗಿ ಸುತ್ತಿದ್ದರೆ ಕ್ರಿಯಾ ಶೀಲವಾಗಿರುತ್ತಿದ್ದರೇನೋ ಎಂದು ನಾನು ಅಂದು ಕೊಳ್ಳುವುದಿದೆ. ಅದು ಪೂರ್ಣ ಸತ್ಯವೋ ತಿಳಿದಿಲ್ಲ.

ಕೊರೊನಾ ಕಾಲದ ನಿರ್ಬಂಧ ಹಲವರನ್ನು ಮೂಲೆಗುಂಪಾಗಿಸಿದಂತೆ ನಮ್ಮ ಗಟ್ಟಿಯವರೂ ನಿಶ್ಚೇತನರಾಗುತ್ತಾ ನಡೆದರು. ನನ್ನ ಸಾಹಿತ್ಯ ಸ್ನೇಹ ಬಂಧ, ನನ್ನೆಲ್ಲ ಸಾಧನೆಗಳಿಗೆ ಮೂಲಾಧಾರವಾಗಿದ್ದ ಅವರ ಅಗಲಿಕೆ ನನ್ನ ಪಾಲಿಗಂತೂ ತುಂಬಲಾರದ ನಷ್ಟ.
ಗಟ್ಟಿಯವರು ನಮ್ಮ ಸಾಹಿತ್ಯ ಕ್ಷೇತ್ರದ ಅನರ್ಘ್ಯ ನಿಧಿ. ಅವರನ್ನು ಕನ್ನಡ ನಾಡು ಹೇಗೆ ಕಂಡಿತು ಎಂಬ ಬಗ್ಗೆ ಮಾತು ಅನಗತ್ಯ. ಅವರು ಅಂತಹ ವಿಚಾರಗಳಿಗೆ ಹೊರತಾಗಿ ಬದುಕಿದವರು. ಕೇವಲ ಸಾಹಿತ್ಯವನ್ನೇ ಕೊನೆವರೆಗೂ ಉಸಿರಾಡಿ ಇಲ್ಲಿಂದ ಹೊರಟವರು. ಆದರೆ ಅವರ ಸಾಹಿತ್ಯ ಕೃತಿಗಳು, ವಿಚಾರಧಾರೆ ಮೂಲಕ ಸಾಹಿತ್ಯಾಸಕ್ತರೆಲ್ಲರ ಹೃದಯಗಳಲ್ಲಿ ಸದಾ ಜ್ವಲಂತರಾಗಿರುವವರು. ಅದರಲ್ಲಿ ಎರಡು ಮಾತಿಲ್ಲ.

ಶ್ಯಾಮಲಾ ಮಾಧವ

ಟಾಪ್ ನ್ಯೂಸ್

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ವಿಕಸಿತ ಭಾರತದ ಕನಸು ಸಾಕಾರದತ್ತ ದಿಟ್ಟ ಹೆಜ್ಜೆ

ವಿಕಸಿತ ಭಾರತದ ಕನಸು ಸಾಕಾರದತ್ತ ದಿಟ್ಟ ಹೆಜ್ಜೆ

1-rrrr

Yakshagana;ನೋಡಿ ಕಲಿಯುವುದು ಬಹಳಷ್ಟಿದೆ: ಶಿವರಾಮ ಜೋಗಿ ಬಿ.ಸಿ.ರೋಡು

Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು

Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು

ಇ-ತ್ಯಾಜ್ಯ ತಗ್ಗಿಸಲು ಸರಕಾರದ ಐಡಿಯಾ! ಯಶಸ್ಸು ತಂದೀತೇ ಕರ್ನಾಟಕ ಸರಕಾರದ ಹೊಸ ಹೆಜ್ಜೆ?

Electronic Waste ತಗ್ಗಿಸಲು ಸರಕಾರದ ಐಡಿಯಾ!ಯಶಸ್ಸು ತಂದೀತೇ ಕರ್ನಾಟಕ ಸರಕಾರದ ಹೊಸ ಹೆಜ್ಜೆ?

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.