Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

ಕವಿ, ದಾರ್ಶನಿಕ, ಸಂತ, ಸಮಾಜ ಸುಧಾರಕ, ಸಂಗೀತಗಾರ, ಮಹಾನ್‌ ಚಿಂತಕ

Team Udayavani, Nov 18, 2024, 6:00 AM IST

1-kanaka

ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ..
15ಮತ್ತು16ನೇ ಶತಮಾನದಷ್ಟು ಹಿಂದೆಯೇ ಅದ್ಭುತವಾದ ಚಿಂತನೆಯನ್ನು ಸಮಾಜಕ್ಕೆ ಕೊಟ್ಟು ಹೋದ ಕವಿ, ದಾರ್ಶನಿಕ, ಸಂತ, ಸಮಾಜ ಸುಧಾ ರಕ, ತಣ್ತೀಜ್ಞಾನಿ, ಸಂಗೀತಗಾರ, ಮಹಾನ್‌ ಚಿಂತಕ ಎಲ್ಲವೂ ಆಗಿದ್ದ ಕನಕದಾಸರು ಹಾಗೂ ಅವರ ಸಂದೇಶಗಳು ಇಂದು ಹಿಂದೆಂದಿಗಿಂತ ಪ್ರಸ್ತುತ.

ಕನಕದಾಸರು ಕರ್ನಾಟಕದಲ್ಲಿ 15-16ನೇ ಶತ ಮಾನದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದರು. ತುಂಬು ಜೀವನ ನಡೆಸಿದ ಮಹಾನ್‌ ದಾರ್ಶನಿಕ ಕನಕದಾಸರ ಜೀವನದ ಒಂದೊಂದು ಸಾಧನೆ, ಘಟನೆಗಳನ್ನು ಅವಲೋಕಿಸಿದರೆ ಅವರೆಂತಹ ಅದ್ಭುತ ಸೃಷ್ಟಿ ಎನ್ನು ವುದನ್ನು ಅರಿಯಬಹುದು. ಸೌಹಾರ್ದತೆ, ಸಮಾ ನತೆ, ಆಧ್ಯಾತ್ಮಿಕ ಸಾಧನೆಗಳ ಬಗ್ಗೆ ಕನಕದಾಸರ ತತ್ತ್ವೋ ಪದೇಶಗಳು ಎಂದಿಗೂ ಪ್ರಸ್ತುತತೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ.

ಸಮಾನತೆ ತಣ್ತೀ ಸಾರಿದ ದಾರ್ಶನಿಕ
ವಿಜಯನಗರ ಅರಸರು 78 ಗ್ರಾಮಗಳ ಉಸ್ತು ವಾರಿ ಯನ್ನು ಕನಕದಾಸರಿಗೆ ವಹಿಸಿದ್ದರು. ವಾಹನ ಗಳೇ ಇಲ್ಲದ ಅಂದಿನ ಕಾಲದಲ್ಲಿ ಕಾಲ್ನಡಿಗೆಯಲ್ಲೇ ಸಂಚಾರ ಮಾಡುತ್ತ ವಹಿಸಿದ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುವ ಮೂಲಕ ಅರಸರ ಮೆಚ್ಚುಗೆಗೆ ಪಾತ್ರರಾದರು. ಯುದ್ದದಲ್ಲಿ ಅವಮಾನ ಕ್ಕೀಡಾದ ಬಳಿಕದಲ್ಲಿ ಇಡೀ ದೇಶವನ್ನೇ ಕಾಲ್ನಡಿಗೆ ಯಲ್ಲಿ ಸಂಚರಿಸುವ ಮೂಲಕ ದೇಶಕ್ಕೆ ಸಮಾನತೆಯ ಸಂದೇಶ ಸಾರಿದರು.

ನಾನು ಎನ್ನುವುದನ್ನು ಕಳೆದುಕೊಂಡವನು ಮಾತ್ರ ಮೋಕ್ಷಕ್ಕೆ ಹೋಗುತ್ತಾನೆ ಎಂದು ಕನಕ ದಾಸರು ವಿದ್ವತ್‌ ಸಭೆಯಲ್ಲಿ ಪ್ರತಿಪಾದಿಸಿದ ರೀತಿಗೆ ಪಂಡಿತರೇ ಬೆರಗಾಗುತ್ತಾರೆ. ನಾನು ಎನ್ನುವುದು ಅಹಂ, ಅಹಂಕಾರವನ್ನು ತ್ಯಜಿಸಿದವ ಮಾತ್ರ ಮೋಕ್ಷ ಕಾಣಲು ಸಾಧ್ಯ ಎನ್ನುವುದು ಅವರ ಅಭಿಪ್ರಾಯ ವಾಗಿತ್ತು. ಪಾಂಡಿತ್ಯದ ಸಾಮರ್ಥ್ಯ ಏನೇ ಇದ್ದರೂ, ಅಹಂಕಾರವನ್ನು ತೊಲಗಿಸುವವರೆಗೆ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಸ್ವತಃ ಗುರು ವ್ಯಾಸತೀರ್ಥರೇ ಬೆರಗಾಗುವ ರೀತಿಯಲ್ಲಿ ಪ್ರತಿ ಪಾದಿಸಿದರು. ಅವರ ಇಂತಹ ಚಿಂತನೆಗಳೇ ಇಂದಿಗೂ ನಮ್ಮನ್ನು ಅವರತ್ತ ಸೆಳೆಯುತ್ತವೆ.

ಕೃಷ್ಣನನ್ನೇ ಒಲಿಸಿಕೊಂಡ ಮಹಾನ್‌ ಭಕ್ತ
ಕನಕದಾಸರು ಶ್ರೀಕೃಷ್ಣನ ಪರಮ ಭಕ್ತರಾಗಿದ್ದರಿಂದ ಅವರಿಗೂ ಉಡುಪಿ ಕೃಷ್ಣ ಮಠಕ್ಕೂಅವಿನಾಭಾವ ಸಂಬಂಧವಿದೆ.ಕನಕದಾಸರು ಮೂಲತಃ ಕುರುಬ ಸಮುದಾಯಕ್ಕೆ ಸೇರಿದವರು. ಶ್ರೀಕೃಷ್ಣನನ್ನು ಪೂಜಿ ಸಲು ಬಯಸಿದ ಕನಕದಾಸರಿಗೆ ಉಡುಪಿಯ ದೇವಾ ಲಯ ಪ್ರವೇಶ ನಿರಾಕರಿಸಲಾಯಿತು. ಅಂದಿನ ಸಮಾಜದಲ್ಲಿ ಜಾತಿ ಪದ್ಧತಿ ಬಲವಾಗಿ ಬೇರೂ ರಿದ್ದರಿಂದ ದೇವಸ್ಥಾನದ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಹಾಗಾಗಿ ಕೃಷ್ಣನ ದರ್ಶನ ಭಾಗ್ಯ ಪಡೆಯದೇ ಹತಾಶೆಯಿಂದ ದೇವಸ್ಥಾನದಿಂದ ಹೊರ ಡುತ್ತಿದ್ದ ಕನಕದಾಸರಿಗೆ ಸಾಕ್ಷಾತ್‌ ಶ್ರೀಕೃಷ್ಣನೇ ಅವರ ದಿಕ್ಕಿಗೆ ತಿರುಗಿದನೆಂದೂ, ಗೋಡೆಗೆ ಕಿಂಡಿ ಕೊರೆದು ಕೃಷ್ಣ ಕನಕನಿಗೆ ದರ್ಶನ ನೀಡಿದನೆಂದೂ ಪ್ರತೀತಿ ಇದೆ. ಪೂರ್ವಾಭಿಮುಖವಾಗಿದ್ದ ವಿಗ್ರಹವು ಅಂದಿನಿಂದ ಪಶ್ಚಿಮಾಭಿಮುಖವಾಗಿದೆ ಎನ್ನುವ ಪ್ರತೀತಿ ಇದೆ.ಇಂದಿಗೂ ಕನಕನ ಕಿಂಡಿ ಎಂದೇ ಪ್ರಸಿದ್ಧಿಯಾದ ಅದೇ ಕಿಂಡಿಯ ಮೂಲಕವೇ ಭಕ್ತರಿಗೆ ಶ್ರೀಕೃಷ್ಣನ ದರ್ಶನ ಭಾಗ್ಯ ಸಿಗುತ್ತಿದೆ.

ಜನಸಾಮಾನ್ಯರಿಗಾಗಿ ಹಾಡು ರಚನೆ
ಅತ್ಯಂತ ಚಿಕ್ಕ ವಯಸ್ಸಿನಲ್ಲೆ ಹಲವಾರು ಕೃತಿಗಳನ್ನು ರಚಿಸಿದ್ದ ಕನಕದಾಸರು ಜೀವನದ ಕೊನೆಯುಸಿರಿರುವವರೆಗೂ ಸಂಗೀತ, ಸಾಹಿತ್ಯದ ದಾಸರಾದರು. ತತ್ವಶಾಸ್ತ್ರದೊಂದಿಗೆ ಸಂಗೀತ ಮತ್ತು ಸಾಹಿತ್ಯವನ್ನು ರಚಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ, ಅತ್ಯಂತ ಸರಳವಾದ ಭಾಷೆಯನ್ನು ಬಳಸಿ ಕೃತಿಗಳನ್ನು ರಚಿಸಿ¨ªಾರೆ. ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಪುರಂದರ ದಾಸರೊಂದಿಗೆ ಕನಕ ದಾಸರ ಕಾಣಿಕೆಯೂ ಸಲ್ಲುತ್ತದೆ. ಹಲವಾರು ಕೃತಿಗಳ ರಚನೆಯ ಮೂಲಕ ಕರ್ನಾಟಕ ಸಂಗೀತಕ್ಕೆ ಅದ್ಭುತವಾದ ಕೊಡುಗೆಯನ್ನು ನೀಡಿದರು.  ಸುಮಾರು 316 ಕೀರ್ತನೆಗಳನ್ನು ಅವರು ರಚಿಸಿದ್ದಾರೆ ಎನ್ನುವ ದಾಖಲೆಗಳು ಸಿಗುತ್ತವೆ.

ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗಡೆಯನ್ನು ಮಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಅವರ ಕೀರ್ತನೆಯಷ್ಟೇ ಸಾಹಿತ್ಯ ಕೂಡ ಶ್ರೇಷ್ಟ. ಮೋಹನತರಂಗಿಣಿ, ಹರಿ ಭಕ್ತಿ ಸಾರ, ನಳ ಚರಿತ್ರೆ, ರಾಮಧಾನ್ಯ ಚರಿತ್ರೆ ಪ್ರಮುಖ ಕೃತಿಗಳು.

ಜಾತಿ ಪದ್ಧತಿ ತೊಡೆಯಲು ನಿಂತ ಸುಧಾರಕ

16ನೇ ಶತಮಾನದಲ್ಲಿ ಜಾತಿ ಪದ್ಧತಿಯನ್ನು ಹೋಗ ಲಾಡಿಸಲು ಹೋರಾಡಿದವರಲ್ಲಿ ಕನಕದಾಸರು ಅತ್ಯಂತ ಪ್ರಮುಖರು. ಕುಲ ಕುಲ ಕುಲವೆಂದು ಬಡಿದಾಡಬೇಡಿ, ನಿಮ್ಮ ಕುಲದ ನೆಲೆಯನೇ ನಾದರೂ ಬಲ್ಲಿರಾ…. ಎನ್ನುವ ಅದ್ಭುತ ಸಂದೇಶವನ್ನು ನೀಡಿದ್ದರು. ಆದರೆ ಇಂದಿಗೂ ನಾವು ಜಾತಿಯನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಜಾತಿ ಪದ್ಧತಿಯನ್ನು ಇಟ್ಟುಕೊಂಡು ಕನಕದಾಸರನ್ನು ಆರಾಧಿಸುವುದು ವಿರೋಧಾಭಾಸವೇ ಸರಿ. ಇಂದು ಪ್ರತಿಯೊಂದರಲ್ಲಿ ನಾವು ಜಾತೀಯತೆಯನ್ನು ಕಾಣುತ್ತಿದ್ದೇವೆ. ಅದರಿಂದ ಹೊರಬರಲು ನಮಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಹಿಂದೆಂದಿಗಿಂತ ಇಂದು ಅವರ ಸಂದೇಶ ಹೆಚ್ಚು ಪ್ರಸ್ತುತವಾಗುತ್ತದೆ.

ಕನಕದಾಸರು ಇಂದು ನಮ್ಮ ನಡುವೆ ಇಲ್ಲದಿದ್ದರೂ ಅವರ ಕೀರ್ತನೆಗಳು, ಹಾಡುಗಳು ಹಾಗೂ ಸಂದೇಶಗಳ ಮೂಲಕ ಶಾಶ್ವತವಾಗಿ ನಮ್ಮೊಂದಿಗೆ ಇರುತ್ತಾರೆ.

ಲಕ್ಷ್ಮೀ ಹೆಬ್ಟಾಳ್ಕರ್‌ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು

ಟಾಪ್ ನ್ಯೂಸ್

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.