Language identity: ಭಾಷಾ ಅಸ್ಮಿತೆ ಎಂಬ ಭಾವಲೋಕ


Team Udayavani, Oct 12, 2023, 11:17 AM IST

tdy-5

ತಾಯ್ತನಕ್ಕೂ ತಾಯ್ನುಡಿಗೂ ನೇರವಾದ ನಂಟಿದೆ. ಮಗು ಭಾಷೆಯನ್ನು ಕಲಿ ಯುವುದೇ ತನ್ನ ತಾಯಿಯ ಒಡನಾಟದ ಮೂಲಕ. ಆದರೆ ಭಾಷಾಬಹುತ್ವದ ಆಧುನಿಕ ಕಾಲದಲ್ಲಿ ತಾಯ್ನುಡಿಯೊಂದಿಗಿನ ನಮ್ಮ ನಂಟನ್ನು, ಅದರ ಸ್ವರೂಪವನ್ನು ಸ್ಪಷ್ಟಪಡಿಸಿಕೊಳ್ಳಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿದೆ.

ಯಾವುದೇ ಭಾಷೆ ಜೀವಂತವಾಗಿರಲು ಮಾತು ಮತ್ತು ಬರಹ ಅವಶ್ಯ. ಮಣ್ಣು ಮತ್ತು ಭಾಷೆಗೆ ಭಾವುಕತೆ ಬಹು ಬೇಗನೆ ಅಂಟಿಕೊಂಡು ಬಿಡುತ್ತದೆ. ಸಾಮಾನ್ಯವಾಗಿ ನಾವು ನಮ್ಮ ತಾಯ್ನುಡಿಯ ಬಗ್ಗೆ ಅಪಾರವಾದ ಒಲವನ್ನು ಹೊಂದಿರುತ್ತೇವೆ. ಆದರೆ ನಾವೀಗ ಕನ್ನಡದ ಬಗೆಗೆ ಅಂದಿನ ಒಲವು ಹಾಗೂ ಆತ್ಮೀಯತೆಯನ್ನು ಹೊಂದಿಲ್ಲವೆಂಬುದೂ ವಿಷಾದದ ಸಂಗತಿ. ನಮ್ಮ ಪಾರಂಪರಿಕ ಸಂಪತ್ತನ್ನು ಉಳಿಸಿಕೊಳ್ಳಲು ಭಾಷೆಯಷ್ಟು ಪರಿಣಾಮಕಾರಿ ಯಾದ ಉಪಕರಣ ಮತ್ತೂಂದಿಲ್ಲ. ಶಿಕ್ಷಣದಲ್ಲಿ ತಾಯ್ನುಡಿಗೆ ಪ್ರಾಮುಖ್ಯವಿರಬೇಕಾದುದು ಅತ್ಯ ಗತ್ಯ. ಮಾತೃಭಾಷಾ ಶಿಕ್ಷಣವು ವಿಷಯ ವನ್ನು ಮನಸ್ಸಿಗೆ ನಾಟಿಸಲು, ಸೃಜನ ಶೀಲತೆಯನ್ನು ಅರಳಿಸಲು ಸಹಕಾರಿ.    ಹಿಂದೆ ಬಳಕೆಯಲ್ಲಿದ್ದ ಅದೆಷ್ಟೋ ಭಾಷೆಗಳು ಇಂದು ಜಗತ್ತಿನಿಂದಲೇ ಕಣ್ಮರೆಯಾಗಿ ಹೋಗಿವೆ. ತಜ್ಞರ ಪ್ರಕಾರ, ಪ್ರತೀ ವಾರವೂ ಸುಮಾರು ಎರಡು ಭಾಷೆಗಳು ಕಣ್ಮರೆಯಾಗು ತ್ತಿವೆ. ಹೀಗೆ ನುಡಿಯ ಮರಣ ಒಂದು ಸಮುದಾಯದ ಅದುವರೆಗಿನ ಬದುಕು, ಸಾಧನೆಗಳ ಕುರುಹನ್ನೇ ನಿರ್ನಾಮವಾಗಿಸುತ್ತದೆ. ಯಾವುದೇ ಭಾಷೆಯಾಗಲೀ ಅಥವಾ ಸಾಹಿತ್ಯವಾಗಲೀ ಬೆಳೆಯಲು ಅನ್ಯಭಾಷಾ ಸಂಸರ್ಗ ಅಗತ್ಯ. ನಮ್ಮ ಕನ್ನಡವೂ ಇದಕ್ಕೆ ಹೊರತಾಗಿಲ್ಲ. ಅನ್ಯಭಾಷೆಯನ್ನು ಆಶ್ರಯಿಸುವುದರ ಮೂಲಕ ಭಾಷೆಯೊಂದು ತನ್ನ ಒಡಲನ್ನು ತುಂಬಿಕೊಳ್ಳುತ್ತದೆ. ಹಾಗೆಯೇ ಕನ್ನಡವೂ ಪೂರ್ವದಲ್ಲಿ ಸಂಸ್ಕೃತ, ಪ್ರಾಕೃತಗಳಿಂದಲೂ, ಅನಂತರ ಮರಾಠಿ, ಹಿಂದೂಸ್ಥಾನಿ, ಪೋರ್ಚುಗೀಸ್‌ ಮೊದಲಾದ ಭಾಷೆ ಗಳ ಸಂಸರ್ಗದ ಮೂಲಕ ಬೆಳೆದು ಬಂದಿದೆ. ಹೊಸತನ್ನು ಸೇರಿಸಿಕೊಂಡು ಬೆಳೆಯುವುದು ಯಾವುದೇ ಜೀವಂತ ಭಾಷೆಯ ಲಕ್ಷಣವೂ ಹೌದು.            ಜನರ ನುಡಿಗಳಲ್ಲಿ ಅನ್ಯಭಾಷಾ ಪದಗಳು ಅಪ್ರಜ್ಞಾಪೂರ್ವಕವಾಗಿ ನುಸುಳುತ್ತವೆ. ಕೊನೆಗೊಮ್ಮೆ ಅವು ಅನ್ಯಭಾಷಾ ಪದಗಳು ಎಂಬ ಸಂದೇಹಕ್ಕೂ ಎಡೆ ಇಲ್ಲದಂತೆ ನಮ್ಮ ಬದುಕಿನ ಭಾಗವಾಗಿ ಬಿಡುತ್ತವೆ. ಕನ್ನಡವನ್ನು ಅಚ್ಚಗನ್ನಡವನ್ನಾಗಿ ಉಳಿಸುವ ಪ್ರಯತ್ನಗಳು ಎಲ್ಲ ಕಾಲ ದಲ್ಲಿಯೂ ನಡೆದಿವೆ. ಆದರೆ ಅವೆಲ್ಲ ವನ್ನೂ ಮೀರಿ ಭಾಷೆಯು ಬೆಳೆ ಯುತ್ತದೆ. ಅಂತೆಯೇ ಕನ್ನಡವೂ ಸಹ ಶುದ್ಧ-ಅಶುದ್ಧತೆಗಳ ಮಡಿವಂತಿಕೆ ಯನ್ನು ಬದಿಗೊತ್ತಿ ಬೆಳೆದಿದೆ.

ಇಂದು ವಿವಿಧ ಭಾಷೆಗಳ ಪದಗಳು ಕನ್ನಡದಲ್ಲಿ ಸೇರಿ ಹೋಗಿವೆ. ಅವು ಕನ್ನಡದ ಮನಸುಗಳನ್ನು ಪೋಷಿಸಿವೆ. ಆದರೆ ಅನ್ಯಭಾಷೆಯ ಬಗೆಗಿನ ಕನ್ನಡದ ಈ ಸ್ವಭಾವವೇ ಅದಕ್ಕೆ ಮಾರಕವಾಗದಂತೆ ಎಚ್ಚರ ವಹಿಸ ಬೇಕಾಗಿದೆ. ಈ ಅನ್ಯಭಾಷಾ

ಮೋಹವೇ ಸ್ವಭಾಷೆಗೆ ಮುಳು ವಾಗುವ ಸಾಧ್ಯತೆಯಿದೆ. ಕನ್ನಡದ ಮನಸ್ಸುಗಳು ಜಾಗೃತಗೊಂಡು ಬದುಕಿನ ಓಟದಲ್ಲಿ ನಮ್ಮ ತಾಯ್ನುಡಿಯನ್ನು ಸಾಕಾರಗೊಳಿಸಿ ಕೊಳ್ಳಬೇಕಾಗಿದೆ. ಏಕೆಂದರೆ ನಮ್ಮ ಮಾತೃಭಾಷೆಯ ಒಳಗೆ ನಮಗೇ ತಿಳಿಯದಂತೆ ನಿತ್ಯವೂ ಪರಿವರ್ತನೆಗಳಾಗಿವೆ ಹಾಗೂ ಆಗುತ್ತಲೇ ಇರುತ್ತವೆ.

ಒಟ್ಟಿನಲ್ಲಿ “ತಾಯ್ನುಡಿ’ ಅಥವಾ “ಮಾತೃಭಾಷೆ’ ಎನ್ನುವುದು ಭಾಷೆ ಮತ್ತು ಭಾಷಿಕರ ನಡುವಿನ ಸಂಬಂಧ. ತಾಯಿ ಮತ್ತು ಮಗುವಿನ ಸಂಬಂಧದಷ್ಟೇ ಜೀವಂತವಾದುದು ಹಾಗೂ ಸೃಷ್ಟಿಶೀಲವಾದುದು ಎಂಬುದನ್ನು ಸೂಚಿಸುತ್ತದೆ. ಭಾಷೆ ಯು ಕೇವಲ ಸಂವಹನದ ಮಾಧ್ಯ ಮವಲ್ಲ; ಅದು ಪರಸ್ಪರ ಸಾಂಸ್ಕೃತಿಕ ಸಂಬಂಧವನ್ನು ಬೆಸೆಯುವ ಅರಿವಿನ ವಿಸ್ತಾರವೂ ಹೌದು.

ಭಾಷೆ ಎನ್ನುವುದು ಸಮಾಜ ವಿಜ್ಞಾ ನಿಗಳು ಭಾವಿಸುವಂತೆ ನಮ್ಮ ಅಸ್ಮಿತೆ ಹೌದಾದರೆ, ನಾವೇ ಭಾಷೆಯನ್ನು ಆಯ್ದುಕೊಂಡರೂ ಅಥವಾ ಭಾಷೆ ಯೇ ನಮ್ಮನ್ನು ಆಯ್ದುಕೊಂಡರೂ ಒಂದಂತೂ ನಿಜ; ಬದುಕಿನ ಭಾಗ ವಾಗದ ಹೊರತು ಯಾವ ಭಾಷೆಯೂ ನಮ್ಮದಾಗುವುದಿಲ್ಲ!

-ಡಾ| ಮೈತ್ರಿ ಭಟ್‌, ವಿಟ್ಲ

ಟಾಪ್ ನ್ಯೂಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupati: ಲಡ್ಡು ಪ್ರಸಾದ ಪ್ರಮಾದ!

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mangaluru: ಬಾಲಕಿಯ ಅತ್ಯಾಚಾರ; ಆರೋಪಿಗೆ 20 ವರ್ಷ ಕಠಿನ ಶಿಕ್ಷೆ

Mangaluru: ಬಾಲಕಿಯ ಅತ್ಯಾಚಾರ; ಆರೋಪಿಗೆ 20 ವರ್ಷ ಕಠಿನ ಶಿಕ್ಷೆ

1-weewqe

Road roller ಅಡಿಯಲ್ಲಿ ಸಿಲುಕಿ ಇಬ್ಬರು ದಾರುಣ ಸಾ*ವು

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.