ನಮ್ಮ ನೀಲಕುರುಂಜಿ 


Team Udayavani, Sep 9, 2021, 6:20 AM IST

ನಮ್ಮ ನೀಲಕುರುಂಜಿ 

ಪಶ್ಚಿಮ ಘಟ್ಟಗಳ ಕೊಡಗು ಪರ್ವತ ಶ್ರೇಣಿಯ ಹಸುರು ಹುಲ್ಲುಗಾವಲುಗಳು ನೀಲಿವರ್ಣ­ಮಯವಾಗುತ್ತಾ ನೀಲಕುರುಂಜಿ ಹೂ ಅರಳಿರುವ ಬಲು ಅಪರೂಪದ ಸನ್ನಿವೇಶವೊಂದನ್ನು ಸಾರಿ ಹೇಳುತ್ತಿವೆ.

ಕೊಡಗಿನ ವನ ಪರ್ವತ ಶ್ರೇಣಿಗಳು ಈ ಐತಿಹಾಸಿಕ ಕ್ಷಣಗಳಿಗಾಗಿ ಕಳೆದ ಏಳು ವರ್ಷಗಳಿಂದ ಕಾದಿರುತ್ತದೆ. ಸುಮಾರು 1,600 ಕಿ.ಮೀ. ಉದ್ದಕ್ಕೂ ಚಾಚಿಕೊಂಡಿರುವ ಈ ಪರ್ವತ ಶ್ರೇಣಿ­ಗಳಲ್ಲಿ 5,000ಕ್ಕೂ ಹೆಚ್ಚಿನ ಸಸ್ಯ ಪ್ರಭೇದಗಳು, 139 ಸಸ್ತನಿಗಳು, 508 ಪಕ್ಷಿ ಪ್ರಭೇದ­ಗಳು, 179ಕ್ಕೂ ಹೆಚ್ಚು ಉಭಯ­ವಾಸಿಗಳಿಂದ ತುಂಬಿ­ರುವ ಜೀವ ವೈವಿಧ್ಯ­ತೆಯ ಮಹಾ­ಕೇಂದ್ರಗಳಾ­ಗಿವೆ. ಇದನ್ನು ಆಂಗ್ಲ ಭಾಷೆಯಲ್ಲಿ ಬಯೊ­ಡೈವರ್ಸಿಟಿ ಹಾಟ್‌ಸ್ಪಾಟ್‌ ಎನ್ನಲಾ­ಗು­ತ್ತದೆ. ಪ್ರಪಂಚದ 35 ಜೀವ ವೈವಿಧ್ಯತೆ ಮಹಾ­ಕೇಂದ್ರ­ಗಳಲ್ಲಿ ಪಶ್ಚಿಮ ಘಟ್ಟಗಳು ಸೇರಿದ್ದು ಇದೊಂದು ಜೈವ ಸಂಶೋಧನ ಶಾಲೆಯಾ­ಗಿದೆ. ಮೂಲ ಆವಾಸಸ್ಥಾನದ ಸುತ್ತಮುತ್ತ ಮಾತ್ರ ಕಂಡುಬರುವ ಈಗ ಅರಳಿನಿಂತಿರುವ ಸ್ಟ್ರೊಬಿಲಾಂತಸ್‌ ಸೆಸ್ಸೆ„ಲಿಸ್‌ ಪ್ರಭೇದಗಳು ಕೊಡಗು ಜಿಲ್ಲೆಯ ಮಡಿಕೇರಿಯಿಂದ 25-30 ಕಿ. ಮೀ. ದೂರದ ಮಾಂದಲ್‌ ಪಟ್ಟಿ ಎಂಬ ಪ್ರವಾಸಿ ತಾಣದಲ್ಲಿದೆ.

ಸ್ಟ್ರೊಬಿಲಾಂತಸ್‌ ಸಸ್ಯಗಳು: ನೀಲಕುರುಂಜಿ ಎಂದು ಹೆಸರುವಾಸಿ­ಯಾಗಿರುವ ಸ್ಟ್ರೊಬಿಲಾಂತಸ್‌ ಪ್ರಭೇದಗಳು ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ಹೂ ಬಿಡುತ್ತದೆ. ಆದರೆ ಈಗ ಕೊಡಗಿನಲ್ಲಿ ಹೂ ಬಿಟ್ಟಿರುವುದು ಸ್ಟ್ರೊಬಿಲಾಂತಸ್‌ ಸೆಸ್ಸೆ„ಲಿಸ್‌ ಎಂಬ ಪ್ರಭೇದ ಎಂದು ಸ್ಟ್ರೊಬಿಲಾಂತಸ್‌ ತಜ್ಞರಾದ ಡಾ| ಐಐ ಜೋಮಿ ಅಗಸ್ಟಿನ್‌ ಅವರು ಖಾತ್ರಿಪಡಿಸಿದ್ದಾರೆ. ಅಕಾಂತೇಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಸ್ಟ್ರೊಬಿಲಾಂತಸ್‌ ಜೀನ್ಸ್‌ನಲ್ಲಿ 70 ಪ್ರಭೇದಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಹೆಚ್ಚಿನ ಸ್ಟ್ರೊಬಿಲಾಂತಸ್‌ ಸಸ್ಯ ಪ್ರಭೇದಗಳು ಸ್ಥಳೀಯ ಪ್ರಭೇದಗಳಾಗಿವೆ. ಆದುದರಿಂದಲೇ ಸಸ್ಯ ಸಂಶೋಧಕರು ಇದನ್ನು ಎಂಡಮಿಕ್‌ ಸ್ಪೀಶೀಸ್‌ ಎಂದು ಕರೆಯುತ್ತಾರೆ.

ನಮ್ಮಲ್ಲಿ ಮಾತ್ರ ಇರುವ ನಮ್ಮ ನೀಲ ಕುರುಂಜಿ: ಸ್ಟ್ರೊಬಿಲಾಂತಸ್‌ ಸೆಸ್ಸೈಲಿಸ್‌ನಲ್ಲಿ ಮೂರು ಪ್ರಕಾರ ಅಥವಾ ತಳಿಗಳಿವೆ: ಮೊದಲನೆಯದು – ಸೆಸ್ಸೈಲಿಸ್‌, ಎರಡನೆಯದಾಗಿ – ರಿಟಿcಯೈ, ಮೂರನೆಯದು – ಸೆಸ್ಸಿಲೋಯ್ಡಿಸ್‌. ಇದರಲ್ಲಿ ಮೊದಲನೆಯ ಪ್ರಕಾರ – ಸೆಸ್ಸೈಲಿಸ್‌ ಕೇರಳ­ದಲ್ಲಿ ಕಂಡುಬರುತ್ತದೆ, ರಿಟ್ಚಿಯೈಗಳು ಮಹಾರಾಷ್ಟ್ರದ ಪರ್ವತ ಶ್ರೇಣಿಯನ್ನು ಅಲಂಕರಿಸಿದೆ. ಮೂರನೆಯದಾದ ಸೆಸ್ಸಿಲೊಯ್ಡಿಸ್‌ ಮಾತ್ರ ಇವುಗಳಲ್ಲಿ ಅತೀ ಸುಂದರವಾದ, ಹಾಗೆಯೇ ಅತೀ ವಿರಳವಾದ ನಮ್ಮ ಕರುನಾಡಿನ ಸಂಪತ್ತಾಗಿದೆ. ಸ್ಥಳೀಯರಿಗೆ ಪರಿಚಯವಿರುವ ಸಾಮಾನ್ಯವಾಗಿ ಕಂಡುಬರುವ ಪ್ರಭೇದ ಸ್ಟ್ರೊಬಿಲಾಂತಸ್‌ ಕುಂತಿಯಾನ. ನೀಲಕುರುಂಜಿ ಗಿಡಗಳು ದಕ್ಷಿಣಭಾಗದ ಪಶ್ಚಿಮ ಘಟ್ಟಗಳಲ್ಲಿ ಅಂದರೆ, ಕೊಡಗು, ನೀಲಗಿರಿ ಬೆಟ್ಟಗಳಲ್ಲಿ, ಪಳನಿ ಬೆಟ್ಟಗಳಲ್ಲಿ ಮತ್ತು ಅಣ್ಣಾಮಲೈ ಪರ್ವತಗಳಲ್ಲಿ ಕಂಡುಬರುತ್ತದೆ.

ಡಾ| ಜೋಮಿ ಅಗಸ್ಟಿನ್‌ ಎಂಬ ಸ್ಟ್ರೊಬಿಲಾಂತಸ್‌ ಸಂತ: ಮೂಲತಃ ಕೇರಳ ರಾಜ್ಯದ ಕೋಟ್ಟಾಯಮ್‌ ಜಿಲ್ಲೆಯ ಪಾಲ ಎಂಬ ಪ್ರದೇಶದವರಾದ ಡಾ| ಜೋಮಿ ಅಗಸ್ಟಿನ್‌ ಅವರು 1991ರಲ್ಲಿ ಸಸ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಂಶೋಧನ ವೃತ್ತಿ ಜೀವನವನ್ನು ಆರಂಭಿಸಿದರು. ತನ್ನ ಜೀವನದ 25 ವರ್ಷಗಳನ್ನು ಸ್ಟ್ರೊಬಿಲಾಂತಸ್‌ ಸಂಶೋಧನೆಯಲ್ಲಿ ತೊಡಗಿಸಿ­ಕೊಂಡ ತಪಸ್ವಿ ಇವರು. ಸ್ಟ್ರೊಬಿಲಾಂತಸ್‌ ಜೋಮಿಯೈ ಎಂಬ ನೀಲ­ಕುರುಂಜಿಯ ಪ್ರಭೇದ ಇವರ ಹೆಸರಿನಿಂದಲೆ ಕರೆಯಲಾ­ಗುತ್ತದೆ.  ಸ್ಥಳೀಯರಿಗೆ, ನೀಲಕುರುಂಜಿಯನ್ನು ನೋಡುವ ಆಸಕ್ತರಿಗೆ ಸೆಪ್ಟಂಬರ್‌ ಮತ್ತು ಅಕ್ಟೋಬರ್‌ ತಿಂಗಳ ಒಳಗೆ ಅರಣ್ಯ ಇಲಾಖೆಯ ನಿರ್ದೇಶನ ಪಾಲಿಸಿಕೊಂಡು ಭೇಟಿ ನೀಡಬಹುದು.

ಚೇತನಾ ಬಡೇಕರ್‌, ಶೈಕ್ಷಣಿಕ ನಿರ್ದೇಶಕಿ, ಚಿರ ಎಜುಕೇಶನಲ್‌ ಟ್ರಸ್ಟ್‌

ಟಾಪ್ ನ್ಯೂಸ್

Hubli: President of Ramakrishna Ashram Swami Raghuveerananda Maharaj is no more

Hubli: ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ಮಹಾರಾಜರು ಇನ್ನಿಲ್ಲ

Delhi; ಕೇಜ್ರಿವಾಲ್‌ ಗಾಗಿ ಖಾಲಿ ಕುರ್ಚಿ ಇರಿಸಿ ನಿಷ್ಠೆ ತೋರಿಸಿದ ದೆಹಲಿ ಸಿಎಂ ಆತಿಶಿ

Delhi; ಕೇಜ್ರಿವಾಲ್‌ ಗಾಗಿ ಖಾಲಿ ಕುರ್ಚಿ ಇರಿಸಿ ನಿಷ್ಠೆ ತೋರಿಸಿದ ದೆಹಲಿ ಸಿಎಂ ಆತಿಶಿ

Mudigere: ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆಗೆ ಆದ್ಯತೆ: ಬಿಜೆಪಿ ಕಿಡಿ

Mudigere: ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆಗೆ ಆದ್ಯತೆ: ಬಿಜೆಪಿ ಕಿಡಿ

Oscars 2025: 97ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ಲಾಪತಾ ಲೇಡೀಸ್’

Oscars: 97ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ಲಾಪತಾ ಲೇಡೀಸ್’

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

chaitra j achar joins Marnami movie team

Chaithra J Achar: ಮಾರ್ನಮಿ ತಂಡ ಸೇರಿದ ಚೈತ್ರಾ

Will discuss about Rayanna Chennamma Brigade: K.S.Eshwarappa

Shimoga; ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಬಗ್ಗೆ ಶೀಘ್ರ ತೀರ್ಮಾನ: ಕೆ.ಎಸ್.ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hGreen hydrogen ಭವಿಷ್ಯದ ಇಂಧನ!ಭಾರತವನ್ನು ವಿಶ್ವದ ಹೈಡ್ರೋಜನ್‌ ಕೇಂದ್ರವಾಗಿಸಲು ಭಾರೀ ಯತ್ನ

Green hydrogen ಭವಿಷ್ಯದ ಇಂಧನ!ಭಾರತವನ್ನು ವಿಶ್ವದ ಹೈಡ್ರೋಜನ್‌ ಕೇಂದ್ರವಾಗಿಸಲು ಭಾರೀ ಯತ್ನ

1-rrttt

Yakshagana;ಕಲೆ ಬದುಕಿನ ಸಂಪಾದನೆಗಲ್ಲ, ನಮ್ಮ ಸಂತೋಷಕ್ಕೆ:ಸಂಜೀವ ಸುವರ್ಣ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupati: ಲಡ್ಡು ಪ್ರಸಾದ ಪ್ರಮಾದ!

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mangaluru: ಸಿಸಿ ಕೆಮರಾದ ಇಂಟರ್‌ನೆಟ್‌ಗೆ ರೀಚಾರ್ಜ್‌ ಮಾಡದ ಪಾಲಿಕೆ!

Mangaluru: ಸಿಸಿ ಕೆಮರಾದ ಇಂಟರ್‌ನೆಟ್‌ಗೆ ರೀಚಾರ್ಜ್‌ ಮಾಡದ ಪಾಲಿಕೆ!

Hubli: President of Ramakrishna Ashram Swami Raghuveerananda Maharaj is no more

Hubli: ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ಮಹಾರಾಜರು ಇನ್ನಿಲ್ಲ

ಪ್ಯಾಸೆಂಜರ್‌ ರೈಲು ಓಡಾಟ ಎಂದು? ರೈಲ್ವೆ ಹೋರಾಟಗಾರರಿಗೆ ಬೇಸರ…

Multi-level ಕಾರ್‌ ಪಾರ್ಕಿಂಗ್‌ ಮತ್ತೆ ಸಾಕಾರದ ಆಶಾಭಾವ!

Multi-level ಕಾರ್‌ ಪಾರ್ಕಿಂಗ್‌ ಮತ್ತೆ ಸಾಕಾರದ ಆಶಾಭಾವ!

Delhi; ಕೇಜ್ರಿವಾಲ್‌ ಗಾಗಿ ಖಾಲಿ ಕುರ್ಚಿ ಇರಿಸಿ ನಿಷ್ಠೆ ತೋರಿಸಿದ ದೆಹಲಿ ಸಿಎಂ ಆತಿಶಿ

Delhi; ಕೇಜ್ರಿವಾಲ್‌ ಗಾಗಿ ಖಾಲಿ ಕುರ್ಚಿ ಇರಿಸಿ ನಿಷ್ಠೆ ತೋರಿಸಿದ ದೆಹಲಿ ಸಿಎಂ ಆತಿಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.