ರಾಜಕೀಕರಣಗೊಳ್ಳುತ್ತಿದೆ ಅಡಿಕೆ ಬೆಲೆ
Team Udayavani, Dec 17, 2022, 6:25 AM IST
ಅಡಿಕೆ ಬೆಲೆ ಏರಿಕೆ, ಇಳಿಕೆಯು ಗುಮ್ಮ ಬಂತು ಗುಮ್ಮ ಎಂಬ ಕಥೆಯಂತಾಗಿದೆ. ಪ್ರತೀ ವರ್ಷ ಈ ಅವಧಿಯಲ್ಲಿ ಅಡಿಕೆ ಬೆಲೆ ಇಳಿಕೆಯಾಗುವುದು ವಾಡಿಕೆ. ಈ ಬಾರಿ ಅನೇಕ ಕಾರಣಗಳು ಇದಕ್ಕೆ ಜತೆಯಾಗಿವೆ. ಚುನಾವಣೆ ಹತ್ತಿರವಿರುವ ಕಾರಣ ಅದು ರಾಜಕೀಯಗೊಳ್ಳುತ್ತಿದೆ.
ಅಸಲಿಗೆ ಕೆಂಪು ಅಡಿಕೆ ಬೆಲೆ ಸೆಪ್ಟಂ ಬರ್ನಲ್ಲಿ 58,000ರೂ.ವರೆಗೆ ಹೋಗಿ ಅಕ್ಟೋಬರ್ನಲ್ಲಿ 48ರಿಂದ 50 ಸಾವಿರ ರೂ. ವರೆಗೆ ಇತ್ತು. ಡಿಸೆಂಬರ್ ಮೊದಲ ವಾರ 40 ಸಾವಿರಕ್ಕೆ ಇಳಿಕೆಯಾಗಿತ್ತು. ಇದು ರೈತರಲ್ಲಿ ಆತಂಕ ಮೂಡಿಸಿದೆ. ಈಗ ಹೊಸ ಬೆಳೆ ಬಂದಿದ್ದು ಭರದಿಂದ ಕೊಯ್ಲು ಸಾಗಿದೆ. ಮಾರುಕಟ್ಟೆಗೆ ಹೊಸ ಅಡಿಕೆ ಬರುತ್ತಿದೆ. ಈ ಹಂತದಲ್ಲಿ ಬೆಲೆ ಇಳಿಕೆ ಸಹಜವಾಗಿ ಆತಂಕ ಮೂಡಿಸಿದೆ. ಐದಾರು ಜಿಲ್ಲೆಗಳ ರೈತರ ಪ್ರಮುಖ ಆದಾಯ ಮೂಲವೂ ಇದೇ. ಅಡಿಕೆ ವಿಚಾರವು ಪ್ರತೀ ಚುನಾವಣ ವಸ್ತುವಾಗಿ ರುವುದು ತಿಳಿದಿರುವ ವಿಚಾರ.
ನಾಲ್ಕು ವರ್ಷಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಅಡಿಕೆ ಬೆಳೆ ಕೊಳೆ ರೋಗ, ಎಲೆಚುಕ್ಕಿ ರೋಗಕ್ಕೆ ತುತ್ತಾಗಿದೆ. ಸರಕಾರವೇ 42 ಸಾವಿರ ಹೆಕ್ಟೇರ್ ಅಡಿಕೆ ತೋಟಕ್ಕೆ ತೊಂದರೆ ಯಾಗಿದೆ ಎಂಬುದನ್ನು ಒಪ್ಪಿಕೊಂಡಿದೆ. ಈ ಹಂತದಲ್ಲಿ ಮಾರುಕಟ್ಟೆಗೆ ಅಡಿಕೆ ಆವಕ ಕಡಿಮೆಯಾಗಬಹುದು, ಬೆಲೆ ಏರಬಹುದು ಎಂದು ಅಂದುಕೊಳ್ಳಲಾಗಿತ್ತಾದರೂ ಅದು ಈಗ ವಿರುದ್ಧವಾಗಿದೆ. ವ್ಯಾಪಾರಿಗಳು ಹೇಳುವಂತೆ ಮಾರುಕಟ್ಟೆಗೆ ಮೊದಲಿನಂತೆ ಅಡಿಕೆ ಬರುತ್ತಿದೆ.
ಚಳಿಗಾಲದಲ್ಲಿ ಅಡಿಕೆ ಉತ್ಪನ್ನಗಳ (ಗುಟ್ಕಾ) ಸೇವನೆ ಕಡಿಮೆಯಾಗುತ್ತದೆ. ಈ ಅವಧಿಯಲ್ಲಿ ಕಂಪೆನಿಗಳು ಉತ್ಪಾದನೆ ನಿಲ್ಲಿಸುತ್ತವೆ. ಗುಜ ರಾತ್, ಹಿಮಾಚಲ ಪ್ರದೇಶದ ಚುನಾ ವಣೆ ಇದ್ದ ಕಾರಣ ಗುಟ್ಕಾ ಕಂಪೆನಿಗಳ ವಹಿವಾಟಿಗೆ ಅಡ್ಡಿಯಾಗಿತ್ತು. ಖರೀದಿ ನಿಲ್ಲಿಸಿದ್ದರೂ ಇವೆಲ್ಲವೂ ಅಡಿಕೆ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಬೆಲೆ ಮತ್ತೆ ಏರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಹುತೇಕ ಅಡಿಕೆ ಬೆಳೆಗಾರರು ಮತ್ತು ರೈತ ಸಂಘಟನೆಗಳು ಭೂತಾನ್ ಅಡಿಕೆ ಆಮದಿಗೆ ಕೇಂದ್ರ ಸರಕಾರ ತೆರಿಗೆ ರಹಿತ ಅವಕಾಶ ನೀಡಿರುವುದು ಅಕ್ರಮಕ್ಕೆ ನಾಂದಿಯಾಗಿದೆ ಎಂದು ಆರೋಪಿಸಿವೆ. ಪ್ರತೀ ವರ್ಷ 13 ಸಾವಿರ ಮೆ.ಟ. ಅಡಿಕೆ ಆಮದಿಗೆ ಅವಕಾಶ ನೀಡಿದೆ. ಇದು ಕಳ್ಳ ಮಾರ್ಗದಲ್ಲಿ ಅಡಿಕೆ ಬರಲು ಅವಕಾಶ ನೀಡಿದೆ. ಗುಟ್ಕಾ ಕಂಪೆನಿಗಳು ದೇಶೀ ಅಡಿಕೆ ಖರೀದಿಗೆ ಹಿಂದೇಟು ಹಾಕುತ್ತಿರುವುದೇ ಬೆಲೆ ಕುಸಿತಕ್ಕೆ ಕಾರಣ ಎಂದು ಆರೋಪಿಸಿವೆ. ಆದರೆ ಇದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ.
ನಮ್ಮ ದೇಶದಲ್ಲಿ ಪ್ರತೀ ವರ್ಷ 10 ಲಕ್ಷ ಮೆ. ಟ. ಅಡಿಕೆ ಉತ್ಪಾದನೆಯಾಗುತ್ತದೆ. ಅದರಲ್ಲಿ ಶೇ.80 ರಷ್ಟು ಕರ್ನಾಟಕದಲ್ಲೇ ಆಗುತ್ತದೆ. ಇದು ತಾತ್ಕಾಲಿಕ ಸಮಸ್ಯೆ ಎನ್ನುತ್ತಾರೆ ವ್ಯಾಪಾರಿಗಳು. ಈಗಾಗಲೇ ಅಡಿಕೆ ಕೊಯ್ಲು ಆರಂಭವಾಗಿದ್ದು ಮಳೆ ಯಿಂದಾಗಿ ಒಣಗಲು ಹಾಕಿದ್ದ ಅಡಿಕೆಗೆ ಬೂಸ್ಟ್ ಬರುತ್ತಿದೆ. ಬೆಲೆ ಇಳಿದಿದೆ. ವ್ಯಾಪಾರಿಗಳು ಕೊಯ್ಲು ಸಂದರ್ಭದಲ್ಲಿ ಬೆಲೆ ಇಳಿಸಿ ಲಾಭ ಮಾಡಿಕೊಳ್ಳುತ್ತಾರೆ ಎಂಬ ಆರೋಪಗಳೂ ಇವೆ.
-ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Yakshagana;ಇನ್ನೂ ನೂರಾರು ಸುಶ್ರಾವ್ಯ ರಾಗಗಳ ಅಳವಡಿಕೆ ಸಾಧ್ಯ: ವಿದ್ವಾನ್ ಗಣಪತಿ ಭಟ್
Assam; ಅತೀ ಪುರಾತನ ಶಕ್ತಿ ಕೇಂದ್ರ ಮಾ ಕಾಮಾಖ್ಯಾ ದೇವಾಲಯ
Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!
ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್
Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !
Bigg Boss Kannada11: ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?
Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.