ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು


Team Udayavani, Sep 19, 2021, 6:20 AM IST

ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು

ಭಾರತ ಹಳ್ಳಿಗಳ ದೇಶ. ಒಟ್ಟಾರೆ ಜನಸಂಖ್ಯೆಯ ಶೇ. 70ಕ್ಕೂ ಹೆಚ್ಚು ಜನರು ಇಂದಿಗೂ ಹಳ್ಳಿಗಳಲ್ಲಿಯೇ ವಾಸಿಸುತ್ತಿದ್ದಾರೆ. ನಗರದ ಆಡಂಬರ, ಮಲಿನ ಪರಿಸರದ ಅರಿವೇ ಇಲ್ಲದೆ ಹಳ್ಳಿಯ ಪರಿಶುದ್ಧ ಗಾಳಿ, ಆರೋಗ್ಯಯುತ ಆಹಾರ, ಸ್ವತ್ಛಂದ ಪರಿಸರದ ನಡುವೆ ಜೀವನ ಸಾಗಿಸುವ ಜನ ಒಂದು ಕಡೆಯಾದರೆ, ನಗರ ಜೀವನಕ್ಕೆ ಮಾರುಹೋಗಿ ಅವರ ಜೀವನ ಶೈಲಿಯನ್ನು ಮೈಗೂಡಿಸಿಕೊಂಡವರು ಇನ್ನೊಂದು ಕಡೆ. ಹಾಗಾಗಿ ಇಂಥವರು ಕ್ಯಾನ್ಸರ್‌, ಅಧಿಕ ರಕ್ತದೊತ್ತಡ, ಮಧುಮೇಹ, ಖನ್ನತೆ, ಹೃದಯ ಸಂಬಂಧಿ ಕಾಯಿಲೆ, ಅಸ್ತಮಾ, ಬೊಜ್ಜು ಮತ್ತಿತರ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಪ್ರಸ್ತುತ ಎಲ್ಲಿಯೂ ಕೂಡ ಜನರ ಜೀವನ ಶೈಲಿ ವ್ಯವಸ್ಥಿತವಾಗಿಲ್ಲ ಎನ್ನಬಹುದು. ಜೀವನಶೈಲಿಯನ್ನು ಸುವ್ಯವಸ್ಥಿತಗೊಳಿಸಲು ಇರುವುದು ಒಂದೇ ಮಾರ್ಗ ವ್ಯಕ್ತಿತ್ವ ವಿಕಸನ. ಇದು ಯೋಗಾಭ್ಯಾಸದಿಂದ ಮಾತ್ರ ಸಾಧ್ಯ.

ಹಳ್ಳಿಗಳಲ್ಲಿ ಸಾಕ್ಷರತೆಯ ಪ್ರಮಾಣ ಸ್ವಲ್ಪ ಕಡಿಮೆ. ಇಲ್ಲಿನ ಜನರಿಗೆ ಯೋಗ ಹಾಗೂ ಯೋಗಾಭ್ಯಾಸದ ಬಗ್ಗೆ ಅಷ್ಟೊಂದು ಜ್ಞಾನ ಇಲ್ಲ. ಯಾರು ವೇದಾಧ್ಯಯನ ಮಾಡಿದವರಿದ್ದಾರೋ ಯಾರು ಆಧ್ಯಾತ್ಮಿಕ ವ್ಯಕ್ತಿಗಳಿರುತ್ತಾರೋ ಅಂಥವರು ಯೋಗದ ಬಗ್ಗೆ ಜ್ಞಾನ ಉಳ್ಳವರಾಗಿದ್ದಾರೆ. ನಮಗೆಲ್ಲರಿಗೂ ಮೂಡುವ ಒಂದೇ ಒಂದು ಪ್ರಶ್ನೆ ಎಂದರೆ, ಹಳ್ಳಿಗಳಲ್ಲಿ ವಾಸಿಸುವ ಕೃಷಿಕರು, ಕೂಲಿಗಳು ಹೀಗೆ ಶಾರೀರಿಕ ಶ್ರಮದಿಂದ ಜೀವಿಸುವವರಿಗೆ ಯೋಗ ಬೇಕೇ ಎಂಬುದು. ಇಂಥವರಿಗೂ ಯೋಗ ಬಹಳ ಆವಶ್ಯಕ. ಯಾಕೆಂದರೆ ಅವರ ಕೆಲಸ-ಕಾರ್ಯಗಳು ಇಂಥವರಿಗೆ ಬರೀ ಶಾರೀರಿಕ ವ್ಯಾಯಾಮವನ್ನು ಕೊಡುತ್ತದೆ. ಆದರೆ ಯೋಗಾಭ್ಯಾಸವು ಶರೀರದಿಂದ ಮನಸ್ಸಿನವರೆಗೂ ಮುಂದುವರಿಯುತ್ತದೆ. ಅವರು ಮಾಡುವ ಯಾವುದೇ ಕೆಲಸ ಅವರ ಕೆಲವೊಂದು ಮಾಂಸಖಂಡಗಳಿಗೆ ವ್ಯಾಯಾಮ ಲಭಿಸುವಂತೆ ಮಾಡುತ್ತದೆ. ಜತೆಗೆ ಅವರಿಗೆ ಮಾನಸಿಕ ವಿಶ್ರಾಂತಿಯೂ ಇಲ್ಲ. ಯಾವಾಗಲೂ ಹಣಕಾಸು, ವ್ಯವಹಾರದ ಬಗ್ಗೆ ಚಿಂತಿತರಾಗಿರುತ್ತಾರೆ. ಇದರಿಂದಾಗಿ ಕುಡಿತದ ದಾಸರಾಗಿ ಆತ್ಮಹತ್ಯೆಗೆ ಶರಣಾಗುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಯೋಗಾಭ್ಯಾಸ ಮಾಡುವುದರಿಂದ ತನ್ನ ದೇಹದ ಎಲ್ಲ ಮಾಂಸಖಂಡಗಳಿಗೆ ವ್ಯಾಯಾಮ ದೊರೆಯುತ್ತದೆ. ಯೋಗಾಭ್ಯಾಸ ಮಾಡುವುದರಿಂದ ಶಾರೀರಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ  ಸಮತೋಲನ ದೊರೆಯುತ್ತದೆ.

ಹಳ್ಳಿಗಳಲ್ಲಿ ಯೋಗದ ಅರಿವು ಮೂಡಿಸುವುದು ಹೇಗೆ?:

ನಗರವಾಸಿಗಳು ಅಂತರ್ಜಾಲ, ಸಮೂಹಮಾಧ್ಯಮಗಳ ಮೂಲಕ ಯೋಗಾಭ್ಯಾಸದ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಹಳ್ಳಿಗಳಲ್ಲಿ ಇವುಗಳ ಬಳಕೆಯಲ್ಲಿ ಹಿಂದುಳಿದಿರುವ ಕಾರಣ ಯೋಗಾಭ್ಯಾಸದ ಪ್ರಚಾರ ನಡೆಯಬೇಕಿದೆ. ಈ ಕೆಲಸವನ್ನು ಸ್ಥಳೀಯ ಸಂಘ-ಸಂಸ್ಥೆಗಳು ಉಚಿತ ಯೋಗ ಶಿಬಿರಗಳನ್ನು ಮಾಡುವ ಮೂಲಕ ಪ್ರಚಾರ ಮಾಡಬೇಕಿದೆ. ಊರಿನಲ್ಲಿ ಯಾರು ಯೋಗಾಸಕ್ತರಿರುತ್ತಾರೋ ಅವರಿಗೆ ಪ್ರತ್ಯೇಕ ಯೋಗಾಭ್ಯಾಸ ತರಬೇತಿ  ನೀಡಿ, ಇಂಥವರು ಉಳಿದ ಜನರಿಗೆ ಯೋಗವನ್ನು ಅಭ್ಯಸಿಸುವಂತೆ ಉತ್ತೇಜನ ನೀಡಬೇಕು. ಈ ಮೊದಲೇ ಯಾರು ಯೋಗ ಕಲಿತಿರುತ್ತಾರೋ ಅವರು ಯೋಗದ ಶಾರೀರಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಪ್ರಯೋಜನಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿಕೊಡಬೇಕು. ಈಗಾಗಲೇ ಯೋಗಾಸನ, ಪ್ರಾಣಾಯಾಮ, ಧ್ಯಾನದಿಂದ ಧನಾತ್ಮಕ ಲಾಭವನ್ನು ಪಡೆದವರು ತಮ್ಮ ಯೋಗಾನುಭವವನ್ನು ಅವರ ಸಂಬಂಧಿಗಳಿಗೆ, ಸ್ನೇಹಿತರಿಗೆ, ನೆರೆಹೊರೆಯವರಿಗೆ ಹೇಳಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು.

ಯೋಗ ಭಾರತದಲ್ಲೇ ಹುಟ್ಟಿದರೂ ಈಗ ವಿಶ್ವವ್ಯಾಪಿ ಪ್ರಚಲಿತದಲ್ಲಿದೆ. ಹಾಗೆಂದು ದೇಶದ ಪ್ರತಿಯೊಬ್ಬರು ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದೇನೂ ಅಲ್ಲ. ದೇಶದ ಹಿಂದುಳಿದ ಹಳ್ಳಿಗಳಲ್ಲಿ ಯೋಗದ ಬಗ್ಗೆ ಮಾಹಿತಿ ಇಲ್ಲದವರೂ ಇದ್ದಾರೆ. ಮುಂದಿನ ಕಾಲಘಟ್ಟದಲ್ಲಾದರೂ ಪ್ರತಿಯೊಬ್ಬ ಪ್ರಜೆಯೂ ಯೋಗಾಭ್ಯಾಸ ಮಾಡುವಂತಾಗಬೇಕು.

 

 ಡಾ| ಗ್ರೀಷ್ಮಾ ಗೌಡ ಆರ್ನೋಜಿ, ಮೂಡುಬಿದಿರೆ

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.