![Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/07/haryana-415x234.jpg)
Pollution; ಹೆಚ್ಚುತ್ತಿರುವ ಮಾಲಿನ್ಯವೂ…ಹವಾಮಾನ ಬದಲಾವಣೆಯೂ…
Team Udayavani, Dec 2, 2023, 6:15 AM IST
![delhi air](https://www.udayavani.com/wp-content/uploads/2023/12/delhi-air-620x380.jpg)
ವಿಶ್ವದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಪರಿಣಾಮ ಹವಾಮಾನ ಬದಲಾವಣೆ ವರ್ಷಗಳುರುಳಿದಂತೆ ಬಲುದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಭೂ, ಜಲ, ವಾಯುಮಾಲಿನ್ಯದಿಂದಾಗಿ ಮಾನವನ ಆರೋಗ್ಯದಲ್ಲಿ ಏರುಪೇರು ಗಳಾಗುತ್ತಿವೆ ಮಾತ್ರವಲ್ಲದೆ ಜೀವಜಗತ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಯಿಂದ ಭಾರತವೂ ಹೊರತಾಗಿಲ್ಲ. ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಪ್ರತೀ ವರ್ಷ ಡಿ.2ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತಿದೆ.
ಬಾಹ್ಯ ವಾಯುಮಾಲಿನ್ಯ: ಭಾರತ ದ್ವಿತೀಯ!
ಬ್ರಿಟಿಷ್ ಮೆಡಿಕಲ್ ಜರ್ನಲ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ಬಾಹ್ಯ ವಾಯುಮಾಲಿನ್ಯದಲ್ಲಿ ವಿಶ್ವದಲ್ಲಿ ಚೀನ ಮೊದಲ ಸ್ಥಾನದಲ್ಲಿದ್ದರೆ ಭಾರತ ಎರಡನೇ ಸ್ಥಾನದಲ್ಲಿದೆ. ವಾಯುಮಾಲಿನ್ಯದಿಂದ ದೇಶದಲ್ಲಿ ಅಂದಾಜು 2.18 ಮಿಲಿ ಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ಹೇಳಿದೆ. ಅದ ರಲ್ಲೂ ಕೇವಲ ಕಾರ್ಖಾನೆಗಳು ಬಳಸುವ ಪಳೆಯುಳಿಕೆ ಇಂಧನ ಗಳಿಂದ ಉಂಟಾಗುವ ವಾಯುಮಾಲಿನ್ಯದಿಂದ ವಿಶ್ವದಲ್ಲಿ 5.1 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ದಕ್ಷಿಣ ಹಾಗೂ ಪೂರ್ವ ಏಷ್ಯಾದಲ್ಲಿ ವಾಯುಮಾಲಿನ್ಯದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಚೀನದಲ್ಲಿ ಪ್ರತೀ ವರ್ಷ 2.44 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದೆ.
ಸಾಮೂಹಿಕ ಪ್ರಯತ್ನ ಅಗತ್ಯ
ಹವಾಮಾನ ಬದಲಾವಣೆಗೆ ಮೂಲ ಕಾರಣವಾಗಿರುವ ನೆಲ, ಜಲ ಮತ್ತು ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಡೀ ಜಗತ್ತು ಒಗ್ಗೂಡಬೇಕಿದೆ. ಈ ನಿಟ್ಟಿನಲ್ಲಿ ಜನತೆ ಕೂಡ ತಮ್ಮ ಕರ್ತವ್ಯ, ಹೊಣೆಗಾರಿಕೆಗಳನ್ನು ಅರಿತುಕೊಳ್ಳಬೇಕಿದೆ.
ಹಿನ್ನೆಲೆ
1984ರ ಡಿ. 2-3ರ ರಾತ್ರಿ ಭೋಪಾಲ್ನ ಕ್ರಿಮಿನಾಶಕ ತಯಾರಿಕ ಕಂಪೆನಿಯಾದ ಯೂನಿಯನ್ ಕಾರ್ಬನ್ ಇಂಡಿಯಾ ಲಿಮಿಟೆಡ್ನ ಕಾರ್ಖಾನೆಯಲ್ಲಿ ಸಂಭವಿಸಿದ ಅನಿಲ ಸೋರಿಕೆ ದುರಂತದ ವೇಳೆ ಮಿಥೈಲ್ ಐಸೋಸೈನೆಟ್ ವಿಷಾನಿಲ ಸೋರಿಕೆಯಾಗಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಈ ದುರಂತದ ದುಷ್ಪರಿಣಾಮವನ್ನು ಆ ಪರಿಸರದ ಜನರು ಇಂದಿಗೂ ಅನುಭ ವಿಸುತ್ತಿದ್ದಾರೆ. ಭೋಪಾಲ್ ಅನಿಲ ದುರಂತದಲ್ಲಿ ಸಾವನ್ನಪ್ಪಿದವರ ಸ್ಮರಣೆಗಾಗಿ ಪ್ರತೀ ವರ್ಷ ಡಿ. 2ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ ಆಚರಿಸಲಾಗುತ್ತಿದೆ. ಎಲ್ಲ ತೆರನಾದ ಮಾಲಿನ್ಯವನ್ನು ನಿಯಂತ್ರಿಸುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಈ ಭೂಮಿಯ ಮೇಲಣ ಜೀವ ಸಂಕುಲದ ರಕ್ಷಣೆಯ ಸದುದ್ದೇಶದೊಂದಿಗೆ ಈ ದಿನವನ್ನು ಆಚರಿಸುತ್ತ ಬರಲಾಗಿದೆ.
ಪಳೆಯುಳಿಕೆ ಇಂಧನಗಳ ಬಳಕೆಗೆ ಕಡಿವಾಣ ಅನಿವಾರ್ಯ
ಹೆಚ್ಚಿನ ದೇಶಗಳು ಇಂದಿಗೂ ಪಳೆಯುಳಿಕೆ ಇಂಧನ ಶಕ್ತಿಯ ಮೇಲೆ ಅವಲಂಬಿತವಾಗಿರುವುದರಿಂದ ವಾಯು ಮಾಲಿನ್ಯ ನಿಯಂತ್ರಣ ಕಷ್ಟಸಾಧ್ಯವಾಗುತ್ತಿದೆ. ಈ ಕಾರಣದಿಂದಾಗಿಯೇ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಯನ್ನು ಕಡಿಮೆ ಮಾಡಿದಲ್ಲಿ ವಾಯುಮಾಲಿನ್ಯ ದಿಂದಾಗಿ ಸಂಭವಿಸುತ್ತಿರುವ ಸಾವುಗಳಲ್ಲಿ ಶೇ.90ರಷ್ಟು ತಡೆಗಟ್ಟಬಹುದು ಎಂದು ವರದಿ ಬೆಟ್ಟು ಮಾಡಿದೆ.
ಟಾಪ್ ನ್ಯೂಸ್
![Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/07/haryana-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…](https://www.udayavani.com/wp-content/uploads/2024/07/Education-150x75.jpg)
Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…
![ಕಲಾವಿದರು ಹಾದಿ ತಪ್ಪಲು ಪ್ರೇಕ್ಷಕ ವರ್ಗವೂ ಕಾರಣ: ಕೆ.ಎಚ್.ದಾಸಪ್ಪ ರೈ](https://www.udayavani.com/wp-content/uploads/2024/07/yaksha-150x98.jpg)
ಕಲಾವಿದರು ಹಾದಿ ತಪ್ಪಲು ಪ್ರೇಕ್ಷಕ ವರ್ಗವೂ ಕಾರಣ: ಕೆ.ಎಚ್.ದಾಸಪ್ಪ ರೈ
![Sitharama tholpadi](https://www.udayavani.com/wp-content/uploads/2024/07/Sitharama-tholpadi-150x100.jpeg)
Yakshagana: ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣ ಪ್ರಶಸ್ತಿ ಗೌರವ
![Gayana](https://www.udayavani.com/wp-content/uploads/2024/07/Gayana-150x89.jpeg)
Music Programme: ಸಂಗೀತ ರಸಿಕರನ್ನು ರಂಜಿಸಿದ ಮಳೆಗಾಲದ ರಾಗಗಳ ಗಾಯನ
![France-Assmbly](https://www.udayavani.com/wp-content/uploads/2024/07/France-Assmbly-150x90.jpg)
France Election: ಫ್ರಾನ್ಸ್ನಲ್ಲೂ ಬದಲಾವಣೆ ಗಾಳಿ!
MUST WATCH
ಹೊಸ ಸೇರ್ಪಡೆ
![Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/07/haryana-150x84.jpg)
Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು
![Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ](https://www.udayavani.com/wp-content/uploads/2024/07/11-5-150x90.jpg)
Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ
![Udupi: ವ್ಯಾಪಕ ಮಳೆಗೆ ಗುಂಡಿಬೈಲು ಪ್ರದೇಶ ಜಲಾವೃತ.. ವಿದ್ಯಾರ್ಥಿಗಳು ಸೇರಿ ಸ್ಥಳೀಯರ ರಕ್ಷಣೆ](https://www.udayavani.com/wp-content/uploads/2024/07/gundibailu-150x82.jpg)
Udupi: ಭಾರಿ ಮಳೆಗೆ ಗುಂಡಿಬೈಲು ಪ್ರದೇಶ ಜಲಾವೃತ… ವಿದ್ಯಾರ್ಥಿಗಳ ರಕ್ಷಣೆ
![10](https://www.udayavani.com/wp-content/uploads/2024/07/10-6-150x90.jpg)
ಸಾಕುನಾಯಿ ಹುಟ್ಟುಹಬ್ಬಕ್ಕೆ 2.5 ಲಕ್ಷ ರೂ. ಮೌಲ್ಯದ ಗೋಲ್ಡ್ ಚೈನ್ ಗಿಫ್ಟ್ ಕೊಟ್ಟ ಮಹಿಳೆ
![Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು](https://www.udayavani.com/wp-content/uploads/2024/07/Dubai01-150x84.jpg)
Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.