Retro Style; ಸೋಶಿಯಲ್‌ ಮೀಡಿಯಾದಲ್ಲೊಂದು ರೆಟ್ರೋ ಸ್ಟೈಲ್‌


Team Udayavani, Oct 4, 2024, 3:53 PM IST

Retro style trends in social media

ಅದೊಂದು ಕಾಲವಿತ್ತು, ಬೈತಲೆ ತೆಗೆದು ಉದ್ದಕ್ಕೆ ನೇಯ್ದ ಜಡೆ, ಕನಕಾಂಬರ, ಮಲ್ಲಿಗೆ, ಗುಲಾಬಿ ಹೂವುಗಳಿಂದ ಸಿಂಗರಿಸಿದ ನೀಳವಾದ ಕಪ್ಪನೆಯ ಮೀರಿ ಮೀರಿ ಹೊಳೆಯುವ ಕೇಶ, ಪ್ರಿಂಟೆಡ್‌ ಜರಿ ಸೀರೆ, ಗಾಜಿನ ಬಳೆಗಳು, ಬುಗ್ಗೆ, ಅಥವಾ ಉದ್ದ ತೊಳಿನ ಕುಪ್ಪಸ, ಎದ್ದು ಕಾಣುವ ಚಂದ್ರಾಕಾರದ ಬೊಟ್ಟು, ಹೊಳೆವ ಮೂಗುತ್ತಿ ಇವುಗಳೆಲ್ಲಾ ಸುಮಾರು 80 ಮತ್ತು 90ರ ದಶಕದ ನಡುವಿನ ಕನ್ನಡ ಮತ್ತು ಬೇರೆ ಬೇರೆ ಚಿತ್ರ ರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೀದಾ ಸಾದ ನಾಯಕಿ ಪಾತ್ರಧಾರಿಗಳ ಉಡುಗೆ ತೊಡುಗೆಗಳು. ಸಾಮಾನ್ಯವಾಗಿ ಸಿನಿಮಾ ನಾಟಕ, ಅಥವಾ ಇನ್ಯಾವುದೇ ರಂಗ ಚಟುವಟಿಕೆಗಳಲ್ಲಿ ನಾಯಕಿ, ನಾಯಕ ಅಥವಾ ಇನ್ನುಳಿದ ಪಾತ್ರಧಾರಿಗಳ ಉಡುಪು ಅವರು ಯಾವ ಬಗೆಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಎನ್ನವುದರ ಮೇಲೆ ನಿರ್ಧಾರವಾಗುತ್ತಿತ್ತು. ಮೇಲೆ ಹೇಳಿದಂತೆ ಒಂದೊಮ್ಮೆ ಸಿನಿಮಾದ ನಾಯಕಿ ಅಮಾಯಕಿ ಅಥವಾ ಸಂಸ್ಕಾರವಂತ ಕುಟುಂಬದಿಂದ ಬಂದ ಪಾತ್ರವನ್ನು ನಿಭಾಯಿಸುತ್ತಿದ್ದರೆ ಆಕೆಯ ಉಡುಪು ಇಷ್ಟೇ ಸರಳ ರೀತಿಯಲ್ಲಿರುವುದು ಆ ಕಾಲದ ಟ್ರೆಂಡ್‌. ಇದು ಬರಿ ಸಿನಿಮಾಗಳಿಗೆ ಮಾತ್ರ ಸೀಮಿತವಾದುದ್ದಲ್ಲ ಆ ಕಾಲದಲ್ಲಿನ ಸ್ತ್ರೀಯರು ಧರಿಸುತ್ತಿದ್ದ ಉಡುಪುಗಳು ಸಾಮಾನ್ಯವಾಗಿ ಇದೇ ಆಗಿರುತ್ತಿತ್ತು.

ಸುಮಾರು 2000 ಇಸವಿಯ ಇಚೇಗೆ ಬೇರೆ ಬೇರೆ ಪಾಶ್ಚಿಮಾತ್ಯ ಉಡುಗೆಗಳಿಂದ ಪ್ರೇರಿತಗೊಂಡು ಸಿನಿಮಾಗಳಲ್ಲೂ ಪಾತ್ರಧಾರಿಗಳ ಉಡುಗೆ ತೊಡುಗೆಗಳಲ್ಲಿ ಬದಲಾವಣೆಗಳು ಬರಲಾರಂಭವಾದವು. ಕ್ರಮೇಣ ತಮ್ಮ ನೆಚ್ಚಿನ ನಾಯಕ, ನಾಯಕಿಯರ ಪ್ಯಾಷನ್‌ ಗಳನ್ನು ಹಿಂಬಾಲಿಸುವ ಅಭಿಮಾನಿಗಳ ಉಡುಪುಗಳಲ್ಲೂ ಬದಲಾವಣೆಗಳು ಬಂದು ಆಗಿನ ರೆಟ್ರೋ ನೀರ ಮೇಲಿನ ಗುಳ್ಳೆಯಂತೆ ಕಣ್ಮರೆಯಾಯಿತು.

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಇದೀಗ ಮತ್ತೆ ರೆಟ್ರೋ ಸ್ಟೈಲ್‌ ಚಾಲ್ತಿಗೆ ಬಂದಿದೆ. ಇದೀಗ ನವ ಮಾಧ್ಯಮಗಳ ಉಗಮ ನಂತರ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ವಿಷಯಗಳು ಟ್ರೆಂಡಿಂಗ್‌ ನಲ್ಲಿರುವುದು ಸಾಮಾನ್ಯ.

ಇದೀಗ ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿರುವುದು ರೆಟ್ರೋ ಉಡುಪು ಮತ್ತು ಹಾಡುಗಳು. ಸದ್ಯಕ್ಕೆ ರೀಲ್ಸ್‌ ಪೋಟೋ ಶೂಟ್‌ಗಳಲ್ಲಿ ಅದರಲ್ಲೂ ಹೆಚ್ಚಾಗಿ ಯುವತಿಯರು ರೆಟ್ರೋ ಕಾಲದ ಉಡುಪು ಧರಿಸಿ, ರೆಟ್ರೋ ಸಾಂಗ್‌ಗಳಿಗೆ ರೀಲ್ಸ್‌ ಮಾಡುತ್ತಿದ್ದಾರೆ. ಇದರ ಜತೆಗೆ ಫ್ರೀವೆಡಿಂಗ್‌ ಶೂಟ್‌, ಕಿರುತೆರೆಯ ರಿಯಾಲಿಟಿ ಶೋ, ಶಾಲಾ ಕಾಲೇಜುಗಳ ಕಾರ್ಯಕ್ರಮದಲ್ಲೂ ರೆಟ್ರೋ ಗಾಳಿ ಬೀಸುತ್ತಿದೆ.

ಎಸ್‌ ಜಾನಕಿ ಹಾಡಿರುವ ʼನಗು ಎಂದಿದೆ ಮಂಜಿನ ಬಿಂದುʼ, ಎಸ್‌.ಪಿ ಬಾಲಸುಬ್ರಹ್ಮಣ್ಯ ಅವರು ಹಾಡಿರುವ ʼನಗುವ ನಯನ ಮಧುರಾ ಮೌನಾʼ ಹಾಡುಗಳು ಅಂದಿಂಗೂ ಇಂದಿಗೂ, ಎಂದೆಂದಿಗೂ ಜನಮಾನಸದಲ್ಲಿ, ಸಂಗೀತ ಪ್ರಿಯರ ಮಸ್ತಕದಲ್ಲಿ ಅಚ್ಚೊತ್ತಿರುವ ಹಾಡುಗಳು. ಈ ಹಾಡುಗಳು ಇಗ ಮತ್ತೆ ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಗುನುಗುತ್ತಿವೆ. ದಶಕಗಳಿಂದ ಸಿನಿಮಾ ರಂಗದಿಂದ ಈ ರೀತಿಯ ಮೆಲೋಡಿಯಸ್‌ ಸಾಂಗ್‌ ಮತ್ತು ಉಡುಪುಗಳು ಮರೆಯಾಗಿದ್ದರು ಕೂಡ ಇದೀಗ ಅವು ಮತ್ತೆ ನವ ಮಾಧ್ಯಮ ಮೂಲಕ ಬೆಳಕಿಗೆ ಬಂದಿದೆ.

ದಿವ್ಯಾ ದೇವಾಡಿಗ

ಟಾಪ್ ನ್ಯೂಸ್

13-constitution

Constitution: ವಿಶ್ವಕ್ಕೆ ಮಾದರಿ ನಮ್ಮ ಸಂವಿಧಾನ

1-kejri-aa

CM residence ತೊರೆದ ಕೇಜ್ರಿವಾಲ್: ಕಣ್ಣೀರಿಟ್ಟು ಬೀಳ್ಕೊಟ್ಟ ಸಿಬಂದಿಗಳು Watch video 

Mumbai: ST ಮೀಸಲಾತಿ ಬೇಡಿಕೆ- 3ನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್!

Mumbai: ST ಮೀಸಲಾತಿ ಬೇಡಿಕೆ- 3ನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್!

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ…

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…

Chhattisgarh: ಎನ್‌ಕೌಂಟರ್‌ನಲ್ಲಿ ಏಳು ನಕ್ಸಲರ ಹತ್ಯೆ: ಅಪಾರ ಶಸ್ತ್ರಾಸ್ತ್ರ ವಶ

Chhattisgarh: ಎನ್‌ಕೌಂಟರ್‌ನಲ್ಲಿ ಏಳು ನಕ್ಸಲರ ಹ*ತ್ಯೆ: ಅಪಾರ ಶಸ್ತ್ರಾಸ್ತ್ರ ವಶ

Bengalru-Bomb

Bomb Threat: ಬೆಂಗಳೂರು ನಗರದ ಪ್ರತಿಷ್ಠಿತ ಮೂರು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ!

12-bantwala

Sand Mining: ಬಂಟ್ವಾಳ ಅಕ್ರಮ ಮರಳು ಅಡ್ಡೆಗೆ ದಾಳಿ; 20 ದೋಣಿ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Patiala: ಐತಿಹಾಸಿಕ ದೇಗುಲಕ್ಕೆ ರಾಷ್ಟ್ರೀಯ ಸ್ಮಾರಕದ ಸ್ಥಾನಮಾನ ಶ್ರೀ ಕಾಳಿ ದೇವಿ ದೇಗುಲ

Patiala: ಐತಿಹಾಸಿಕ ದೇಗುಲಕ್ಕೆ ರಾಷ್ಟ್ರೀಯ ಸ್ಮಾರಕದ ಸ್ಥಾನಮಾನ ಶ್ರೀ ಕಾಳಿ ದೇವಿ ದೇಗುಲ

Navaratri: ಶರನ್ನವರಾತ್ರಿ ಮತ್ತು ಶ್ರೀ ಚಕ್ರಾರಾಧನೆ

Navaratri: ಶರನ್ನವರಾತ್ರಿ ಮತ್ತು ಶ್ರೀ ಚಕ್ರಾರಾಧನೆ

Navaratri Special:  ನಮ್ಮೊಳಗಿನ ರಾವಣನ ಸುಡುವುದೆಂತು…?

Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?

WhatsApp Image 2024-10-01 at 9.22.19 PM

Navaratri: ನವ ಮಹಾಭಾರತ- ದ್ರೌಪದಿಯ ನಿಟ್ಟುಸಿರಿಗೆ ಕೊನೆ ಎಂದು…? ಬದಲಾಗದ ಹೆಣ್ಣಿನ ಬವಣೆ

T-20-Captains

Womens T20 World Cup: ಪುರುಷರು ಆಯ್ತು ಈಗ ವನಿತಾ ಕ್ರಿಕೆಟ್‌ ಸಮರ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

13-constitution

Constitution: ವಿಶ್ವಕ್ಕೆ ಮಾದರಿ ನಮ್ಮ ಸಂವಿಧಾನ

1-kejri-aa

CM residence ತೊರೆದ ಕೇಜ್ರಿವಾಲ್: ಕಣ್ಣೀರಿಟ್ಟು ಬೀಳ್ಕೊಟ್ಟ ಸಿಬಂದಿಗಳು Watch video 

Shivalinge-Gowda

CM ಸಿದ್ದರಾಮಯ್ಯ ರಾಜೀನಾಮೆ ಸಲ್ಲದು; ಶಾಸಕ ಶಿವಲಿಂಗೇಗೌಡ

Mumbai: ST ಮೀಸಲಾತಿ ಬೇಡಿಕೆ- 3ನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್!

Mumbai: ST ಮೀಸಲಾತಿ ಬೇಡಿಕೆ- 3ನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್!

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ…

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.