![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 24, 2021, 7:25 AM IST
ಪ್ರತೀ ತಿಂಗಳೂ ವೇತನ ಬರುತ್ತಿತ್ತು, ಅದರಲ್ಲಿ ಒಂದಿಷ್ಟು ಪಾಲು ಮನೆ ಖರ್ಚಿಗೆ, ಇನ್ನೊಂದಿಷ್ಟು ಪಾಲು ಸಾಲ ತೀರಿಸಲು, ಮತ್ತೂಂದಿಷ್ಟು ಪಾಲು ಸಿನೆಮಾ, ಸುತ್ತಾಟ, ಹೊಟೇಲ್ ಊಟ ಇತ್ಯಾದಿ ಮನರಂಜನೆಯ ಚಟುವಟಿಕೆಗಳಿಗೆ ಬಳಕೆಯಾಗುತ್ತಿತ್ತು. ಪ್ರತೀ ತಿಂಗಳು ಕೈಗೆ ಸಿಗುತ್ತಿದ್ದ ವೇತನದಲ್ಲಿ ಒಂದಿಷ್ಟು ದಿನಗಳು ಅತ್ತಿತ್ತ ಆದರೂ ಹಾಗೋ ಹೀಗೋ ಲೆಕ್ಕಾಚಾರ ಮಾಡಿ ಜನಸಾಮಾನ್ಯರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನಬಂಡಿ ಸಾಗುತ್ತಿತ್ತು. ಸಿಗುತ್ತಿದ್ದ ವೇತನಕ್ಕೇ ಕತ್ತರಿ ಬೀಳಬಹುದು ಎಂಬುದನ್ನು ಉದ್ಯೋಗಸ್ಥರು ಕನಸು-ಮನಸ್ಸಿ ನಲ್ಲೂ ಎಣಿಸಿರಲಿಲ್ಲ.
ಕೋವಿಡ್ ಪೂರ್ವದಲ್ಲಿ ಆರ್ಥಿಕ ತಜ್ಞರು ಪ್ರತೀ ವ್ಯಕ್ತಿ ತನ್ನ ಮೂರು ತಿಂಗಳುಗಳ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಅಗತ್ಯವಿರುವಷ್ಟು ಹಣವನ್ನು ದಪತ್ ಕಾಲದ ಧನದ ರೂಪದಲ್ಲಿ ಇರಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದರು. ವ್ಯಕ್ತಿ ಉದ್ಯೋಗ ಕಳೆದುಕೊಂಡರೆ ಅಥವಾ ಇನ್ಯಾವುದೋ ಕಾರಣ ದಿಂದ ಆದಾಯ ಇಲ್ಲದಂತೆ ಆದರೆ ಹೊಸ ಉದ್ಯೋಗವನ್ನು, ಆದಾಯ ಮೂಲವನ್ನು ಹುಡುಕಿ ಕೊಳ್ಳಲು ಗರಿಷ್ಠ ಮೂರು ತಿಂಗಳು ಗಳು ಸಾಕಾಗಬಹುದು ಎಂಬ ಅಂದಾಜಿನಿಂದ ಆ ಸಲಹೆ ನೀಡುತ್ತಿದರು. ಆದರೆ ಈಗ ಪ್ರತೀ ವ್ಯಕ್ತಿಯೂ ಕನಿಷ್ಠ ಆರು ತಿಂಗಳುಗಳ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಅಗತ್ಯವಿರುವ ಹಣವನ್ನು ಆಪತ್ ಕಾಲದ ಧನವಾಗಿ ತೆಗೆದಿರಿಸಬೇಕು ಎಂಬ ಸಲಹೆ ನೀಡುತ್ತಿದ್ದಾರೆ. ಏಕೆಂದರೆ ಇಂದಿನ ಸಂಕಷ್ಟದ ಸಂದರ್ಭದಲ್ಲಿ ಮೂರು ತಿಂಗಳುಗಳಲ್ಲಿ ಹೊಸ ಉದ್ಯೋಗ ಹುಡುಕಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುತ್ತದೆ ಎನ್ನಲಾಗದು.
ಆಪತ್ ಕಾಲಕ್ಕೆ ಅಗತ್ಯವಿರುವ ಹಣವನ್ನು ಮಾಮೂಲಿ ಉಳಿ ತಾಯ ಖಾತೆಯಲ್ಲಿ ಇರಿಸುವುದು ತರವಲ್ಲ. ಆ ಹಣವನ್ನು ನಿಶ್ಚಿತ ಠೇವಣಿ ಯಾಗಿಯೂ ಇರಿಸಲಾಗದು. ಅದನ್ನು ಲಿಕ್ವಿಡ್ ಮ್ಯೂಚುವಲ್ ಫಂಡ್ಗಳಲ್ಲಿ ಇರಿಸುವುದು ಸೂಕ್ತ. ಲಿಕ್ವಿಡ್ ಫಂಡ್ಗಳು ಹಣಕ್ಕೆ ಉಳಿತಾಯ ಖಾತೆಗಿಂತ ತುಸು ಹೆಚ್ಚಿನ ಬಡ್ಡಿ ನೀಡುತ್ತವೆ. ಹಣವನ್ನು ಯಾವಾಗ ಬೇಕಿದ್ದರೂ ಹಿಂಪಡೆಯಬಹುದು. ಆಪತ್ ಕಾಲಕ್ಕೆಂದು ನಿಧಿ ಇಲ್ಲದಿದ್ದರೆ, ಉಳಿತಾಯದ ಹಣ ಕರಗಿಸಬೇಕಾಗುತ್ತದೆ. ಪೇಟಿಎಂ ಮನಿ, ಫೋನ್ ಪೇ ತರಹದ ಹೊಸ ಕಾಲದ ಹಣಕಾಸು ನಿರ್ವಹಣ ಆ್ಯಪ್ಗ್ಳಲ್ಲಿ ಕೂಡ ಲಿಕ್ವಿಡ್ ಮ್ಯೂಚುವಲ್ ಫಂಡ್ಗಳಲ್ಲಿ ಹಣ ಇರಿಸಬಹುದು.
ಈ ಅಂಶಗಳು ನೆನಪಿನಲ್ಲಿರಲಿ :
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.