Teacher’s Day: ಗುರುವಿನ ಗುಲಾಮನಾಗದೇ ದೊರೆಯದಣ್ಣ ಮುಕುತಿ
Team Udayavani, Sep 5, 2024, 9:30 AM IST
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ.
ಗುರು ಭಾರತೀಯ ಪರಂಪರೆಯಲ್ಲಿ ಬಹಳ ಗೌರವಯುತ ಮತ್ತು ಘನತೆಯುಳ್ಳ ಪದ ಹಾಗೂ ಪದವಿ. ಆಚಾರ್ಯ ದೇವೋ ಭವ ಅನ್ನುವಂತೆ ಹಿಂದಿನ ಕಾಲದಿಂದ ಶುರುವಾಗಿ ಇಂದಿನ ಆಧುನಿಕ ಯುಗದವರೆಗೂ ದೈವಿ ಸ್ವರೂಪರಾಗಿಯೇ ಉಳಿದವರೆಂದರೇ ಅದು ಗುರುಗಳು ಮಾತ್ರ. ಜಾತಿ-ಮತ, ಮೇಲು-ಕೀಳು, ಬಡವ-ಬಲ್ಲಿದ ಅನ್ನುವ ತಾರತಮ್ಯ ಮಾಡದೇ ತನ್ನೆಲ್ಲ ಶಿಷ್ಯರನ್ನೂ ಸ್ವಂತ ಮಕ್ಕಳಂತೆ ಭಾವಿಸಿ ತಾನು ಕಲಿತಂಥಹ ವಿದ್ಯೆ, ಸಂಸ್ಕಾರ ಮತ್ತು ಆಚರಣೆಗಳನ್ನು ಬಹಳ ಪ್ರೀತಿ, ಕಾಳಜಿ ಮತ್ತು ಜವಾಬ್ದಾರಿಯುತವಾಗಿ ಭೋದಿಸಿ ಅವರುಗಳ ವ್ಯಕ್ತಿತ್ವವನ್ನು ರೂಪಿಸಿ, ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಬೆಳಕಿನೆಡೆಗೆ ಕೈಹಿಡಿದು ಕರೆದುಕೊಂಡು ಹೋಗಿ ಸಮಾಜದಲ್ಲಿ ಒಬ್ಬ ಗಣ್ಯ ಆದರ್ಶ ವ್ಯಕ್ತಿಯನ್ನಾಗಿ ಮಾಡುವ ಅದ್ಭುತ ಶಕ್ತಿಯೇ ಗುರು.
ಗುರು ಎಂದರೆ ಕೇವಲ ಶಾಲೆಗಳಲ್ಲಿ ಅಕ್ಷರ ಹೇಳಿಕೊಡುವ ಗುರುಗಳಷ್ಟೇ ಅಲ್ಲ. ಮನೆಯಲ್ಲಿರುವ ತಾಯಿ-ತಂದೆ ಹಿರಿಯ ಜೀವಗಳು, ಒಡಹುಟ್ಟಿದವರು , ಬಂಧು ಬಳಗದವರು, ಸ್ನೇಹಿತರು, ದಿನಾಲೂ ನಾವು ನೋಡುವ ಮಾತಾಡಿಸುವ ವ್ಯಕ್ತಿಗಳು, ಸಮಾಜದಲ್ಲಿ ಎತ್ತರದಲ್ಲಿರುವ ಗಣ್ಯ ವ್ಯಕ್ತಿಗಳು ಮತ್ತು ಮಹನೀಯರನ್ನೂ ಸಹ ಗುರುಗಳಾಗಿ ಭಾವಿಸಿದರೆ, ಮನುಷ್ಯ ಬಹಳ ಎತ್ತರಕ್ಕೆ ಏರಬಹುದು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎನ್ನುವಂತೆ ಏನೂ ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನಿಗೆ ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೆ ಅರಿಯಲು ಸಾಧ್ಯವಿಲ್ಲ.
ಯಾವಾಗ ಗುರುವಿನಿಂದ ಕಲಿತ ಈ ಎಲ್ಲ ವಿದ್ಯೆಗಳನ್ನು ಉಪಯೋಗಿಸಿಕೊಂಡು ನಾವು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಬಿಂಬಿತರಾಗುತ್ತೇವೋ ಅದುವೇ ಗುರುಗಳಿಗೆ ನೀಡುವ ಗುರುದಕ್ಷಿಣೆಯಾಗಿರುತ್ತದೆ. ಗುರುವನ್ನು ಪ್ರೀತಿಸೋಣ ಗುರುವನ್ನು ಗೌರವಿಸೋಣ.
ಪ್ರಸಾದ್ ಆಚಾರ್ಯ
ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Landslide: ತುರ್ತು ಬ್ರೇಕ್ ಹಾಕಿದ ಕಾರಣ ತಪ್ಪಿದ ರೈಲು ದುರಂತ
Democracy Day: ಕೊಡಗು: 72.2 ಕಿ.ಮೀ. ಅಂತರದ ಮಾನವ ಸರಪಳಿ
ಹೃದಯಾಘಾತ: ಶಾಲೆಯಲ್ಲೇ 3ನೇ ತರಗತಿ ವಿದ್ಯಾರ್ಥಿನಿ ಸಾ*ವು
Democracy Day: ಮಾನವ ಸರಪಳಿ; ಉಭಯ ಜಿಲ್ಲೆಗಳಲ್ಲಿ ವಾಹನ ಚಾಲಕರು, ಸಾರ್ವಜನಿಕರು ಹೈರಾಣು!
Trainee doctor ಹ*ತ್ಯೆ ಕೇಸು: ಮಾಜಿ ಪ್ರಿನ್ಸಿ ಸಂದೀಪ್ 17ರ ವರೆಗೆ ಸಿಬಿಐ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.