Teachers’ Day: ಪೆಟ್ಟು ಮರೆತು ನಕ್ಕವನು…


Team Udayavani, Sep 5, 2023, 8:30 AM IST

tdy-15

ಹದಿನೈದು ವರ್ಷಗಳ ಉಪನ್ಯಾಸಕ ವೃತ್ತಿಯಲ್ಲಿ ಮಕ್ಕಳಿಗೆ ಕಲಿಸಿದ್ದಕ್ಕಿಂತ ಹೆಚ್ಚಾಗಿ ಅವರಿಂದ ನಾನೇ ಕಲಿತಿದ್ದೇನೆ. ಮಕ್ಕಳು ಎಷ್ಟು ಮುಗ್ಧರಾಗಿರುತ್ತಾರೆ, ನಾವೆಷ್ಟೇ ಕಟುವಾಗಿ ವರ್ತಿಸಿದರೂ ನಮ್ಮನ್ನು ಕ್ಷಣಾರ್ಧದಲ್ಲಿ ಕ್ಷಮಿಸಿಬಿಡುತ್ತಾರೆ ಎಂದು ನನಗೆ ಅರ್ಥವಾದ ಘಟನೆಯ ವಿವರ ಇಲ್ಲಿದೆ.

ನಾಲ್ಕು ವರ್ಷಗಳ ಹಿಂದಿನ ಘಟನೆಯಿದು. ದ್ವಿತೀಯ ಪಿಯುಸಿಯ ಒಬ್ಬ ಹುಡುಗ ತರಗತಿಯ ಹೊರಗೆ ಕಾರಿಡಾರಲ್ಲಿ ನಿಂತಿದ್ದ. ಒಳಗೆ ಕುಳಿತು ಇನ್ನೇನು ಶುರುವಾಗುವ ತರಗತಿಯ ಪುಸ್ತಕ ಜೋಡಿಸಿ­ಕೊಳ್ಳುವು­ದನ್ನು ಬಿಟ್ಟು ಹೊರಗಿದ್ದಾನಲ್ಲ ಎಂದು ನನಗೆ ಸಿಟ್ಟು ಬಂತು. ಅವನಿಗೆ ಸ್ಟಾಫ್ ರೂಮಿಗೆ ಬರಲು ಹೇಳಿ ಕಳಿಸಿದೆ. ಎರಡು ನಿಮಿಷವಾದರೂ ಬರಲಿಲ್ಲ. ಇನ್ನೊಬ್ಬ ಹುಡುಗನ ಹತ್ತಿರ ಹೇಳಿಕಳಿಸಿದೆ. ಆದರೂ ಬರಲಿಲ್ಲ. ಕೋಪ ನೆತ್ತಿಗೇರಿ ಅಲ್ಲೇ ಇದ್ದ ತೆಳುವಾದ ಕೋಲನ್ನು ತೆಗೆದುಕೊಂಡು ಅವನ ಕ್ಲಾಸಿಗೆ ಹೋದೆ. ಅವನನ್ನು ನಿಲ್ಲಿಸಿ ಬೈದು ನಾಲ್ಕು ಪೆಟ್ಟು ಕೊಟ್ಟೆ. ಅವನು ಅಲ್ಲಾಡಲಿಲ್ಲ. ಮತ್ತೂ ಎರಡೇಟು ಬಿಗಿದೆ. ಸುಮ್ಮನೆ ನಿಂತಿದ್ದ, ಮತ್ತೂಂದೇಟು ಬಿಗಿದು ವಾಪಸಾದೆ. ಏಕೆಂದರೆ ಹತ್ತು ಗಂಟೆಗೆ ನಾನು ತರಗತಿಗೆ ಹೋಗಬೇಕಿತ್ತು. ನೋಡಿದರೆ, ಅದೇ ತರಗತಿಗೇ ಮೊದಲ ಪೀರಿಯಡ್‌ ಇತ್ತು. ನಾನು ಒಳಹೋದ ಕೂಡಲೇ ಎಲ್ಲರೂ ಎದ್ದು ನಿಂತು “ಗುಡ್‌ ಮಾರ್ನಿಂಗ್‌ ಮೇಡಂ’ ಎಂದರು. ಮೊದಲ ಬೆಂಚಿನಲ್ಲೇ ಇದ್ದವನು, ನಾನು ಅವನ ಕಡೆಗೆ ನೋಡಿದ ಕೂಡಲೇ ಮುಗುಳ್ನಕ್ಕ. ಒಂದೇ ಕ್ಷಣ!

ನನ್ನ ಕಣ್ಣುಗಳು ತುಂಬಿಬಂದವು. ಈಗ ತಾನೇ ಬೈದು ಪೆಟ್ಟು ಕೊಟ್ಟಿದ್ದನ್ನು (ನೋವಾಗುವ ಹಾಗೆ ಹೊಡೆಯದೇ ಇರಬಹುದು, ಆದರೆ ತರಗತಿಯ ಮಕ್ಕಳ ಎದುರು ಅದು ಅವಮಾನವೇ) ಒಂದು ಚೂರೂ ಮನಸ್ಸಿನಲ್ಲಿಟ್ಟುಕೊಳ್ಳದೇ ಮುಗುಳ್ನಕ್ಕ ಹುಡುಗ ನನಗೆ ಬಹುದೊಡ್ಡ ಪಾಠ ಕಲಿಸಿದ್ದ. ಸಣ್ಣಪುಟ್ಟ ಮಾತುಗಳನ್ನು ವರ್ಷಗಟ್ಟಲೆ ನೆನಪಿಟ್ಟುಕೊಂಡು ಹಗೆ ಸಾಧಿಸುವ ನಮ್ಮಂಥ ಹಿರಿಯರಿಗೆ ಆ 17 ವರ್ಷದ ಚಿಕ್ಕ ಹುಡುಗನ ಪಾಠ ಎಂತಹ ಅಮೂಲ್ಯವಾದುದಲ್ಲವೇ? ಅವನಿಗೆ ಧನ್ಯವಾದ ಹೇಳಿ ಎಲ್ಲರೆದುರಿಗೆ ಅವನ ಕ್ಷಮೆ ಕೇಳಿದೆ. ಭಯಕ್ಕಿಂತ ಪ್ರೀತಿ ಹೆಚ್ಚು ಪ್ರಭಾವಶಾಲಿ ಎಂಬುದನ್ನು ಅರ್ಥಮಾಡಿಕೊಂಡೆ. ಈಗಲೂ ಟೀಚರ್ಸ್‌ ಡೇಗೆ ಮೊದಲ ವಿಶ್‌ ಅವನದ್ದೇ. ಈಗಲೂ ತರಗತಿಗಳಲ್ಲಿ ಆ ಘಟನೆಯನ್ನು ಹೇಳುವಾಗ ನನ್ನ ಕಣ್ಣಂಚು ಒದ್ದೆಯಾಗುತ್ತದೆ.

ದೀಪಾ ಹಿರೇಗುತ್ತಿ, ಆಂಗ್ಲ ಉಪನ್ಯಾಸಕಿ,

ಕೊಪ್ಪ, ಚಿಕ್ಕಮಗಳೂರು ಜಿಲ್ಲೆ 

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.