QR Code!: ಬಿಟ್ಟೇನೆಂದರೆ ಬಿಡದು, ಈ ಕ್ಯುಆರ್‌ ಕೋಡ್‌!


Team Udayavani, Jul 11, 2024, 7:15 AM IST

QR Code!: ಬಿಟ್ಟೇನೆಂದರೆ ಬಿಡದು, ಈ ಕ್ಯುಆರ್‌ ಕೋಡ್‌!

ಐದಾರು ವರ್ಷಗಳಿಂದ ನಮ್ಮ ದೈನಂದಿನ ಜೀವನದ ಪ್ರಯಾಣ ಮತ್ತು ವ್ಯವಹಾರಗಳಲ್ಲಿ ನುಸುಳಿಕೊಂಡ ಕ್ಯುಆರ್‌ ಕೋಡ್‌ ಗೊತ್ತಿ¨ªೋ, ಗೊತ್ತಿಲ್ಲದೆಯೋ ಎಲ್ಲ ಸ್ತರಗಳಲ್ಲೂ ಅವಿಭಾಜ್ಯ ಅಂಗವಾಗಿ ಸ್ಥಾಪಿತ ಗೊಂಡಿದೆ. ಕ್ಯುಆರ್‌ ಕೋಡ್‌ ಆಧಾರಿತ ವ್ಯವಸ್ಥೆ, ವ್ಯಾಪಾರ, ವ್ಯವಹಾರ ನಮ್ಮೆಲ್ಲರ ಬಾಳಿನಲ್ಲಿ ಅನೇಕ ಬಾರಿ ಉಪಯೋಗಕ್ಕೆ ಬರುತ್ತಿರುವ ಆಧುನಿಕ ತಂತ್ರಜ್ಞಾನ ಸಾಧನ-ಸಾಧನೆ ಎನ್ನಲಡ್ಡಿಯಿಲ್ಲ. ಬ್ಯಾಂಕ್‌ ಖಾತೆಯಲ್ಲಿ ಹಣ ಮತ್ತು ಕೈಯಲ್ಲಿ ಸ್ಮಾರ್ಟ್‌ ಫೋನ್‌ ಇದ್ದರೆ ದೈನಂದಿನ ವ್ಯವಹಾರ, ಪ್ರಯಾಣ, ಪ್ರವಾಸ, ಖರ್ಚು-ವೆಚ್ಚ ಎಲ್ಲವೂ ಚಿಟಿಕೆ ಹೊಡೆದಷ್ಟು ಸಲೀಸು. ವ್ಯವಹಾರಕ್ಕೆ ಚಿಲ್ಲರೆ ಹುಡುಕುವ ಪ್ರಮೇಯವಿಲ್ಲ. ಜನನಿಬಿಡ ಪ್ರದೇಶದಲ್ಲಿ ಪರ್ಸ್‌, ದುಡ್ಡು ಕಳೆದುಕೊಳ್ಳುವ ಆತಂಕವೂ ಇಲ್ಲ.

ಕ್ಯುಆರ್‌ ಕೋಡ್‌ ಬಗೆಗಿನ ಒಂದಷ್ಟು ವಿವರಗಳನ್ನು ನೋಡೋಣ. ಇದು ಕ್ವಿಕ್‌ ರೆಸ್ಪಾನ್ಸ್‌ ಕೋಡ್‌ ಪದದ ಸಂಕ್ಷಿಪ್ತ ರೂಪ. ಆಟೊಮೋಟಿವ್‌ ಕೈಗಾರಿಕ ವಿಭಾಗದ ಅಗತ್ಯತೆ ಪೂರೈಸುವ ಉದ್ದೇಶದಿಂದ ಜಪಾನಿನ ಡೆನ್ಸೊ ವೇವ್‌ ಹೆಸರಿನ ಸಂಸ್ಥೆ 1994ರಲ್ಲಿ ಈ ತಂತ್ರಜ್ಞಾನ ಸಂಶೋಧಿಸಿ ಬಳಸಲು ಆರಂಭ ಮಾಡಿತು.

2015ರ ಅನಂತರ ಎಲ್ಲೆಡೆ ಮೊಬೈಲ್‌ ನೆಟ್‌ವರ್ಕ್‌ ವೃದ್ಧಿಸಿ, ಸ್ಮಾರ್ಟ್‌ ಫೋನ್‌ ಮತ್ತು ಆನ್‌ಲೈನ್‌ ವ್ಯವಹಾರಕ್ಕೆ ಇಡೀ ಜಗತ್ತು ತೆರೆದುಕೊಳ್ಳುತ್ತಿದ್ದಂತೆ ಈ ಕ್ಯುಆರ್‌ ಕೋಡ್‌ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಿಗೂ ಬಹಳ ವೇಗವಾಗಿ ಪಸರಿಸಿತು. ಹಲವಾರು ವ್ಯವಹಾರಗಳು, ವಿವಿಧ ಕ್ಷೇತ್ರಗಳ ಅಗತ್ಯತೆ ಮತ್ತು ಜೀವನವನ್ನು ಸರಳ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ ಕ್ಯುಆರ್‌ ಕೋಡ್‌ ತಂತ್ರಜ್ಞಾನ ಉಪಯುಕ್ತವಾದ ಭಾರೀ ಕೊಡುಗೆ ನೀಡುತ್ತಿದೆ. ಭಾರತದಲ್ಲಿ ಕೇಂದ್ರ ಸರಕಾರದ ನೀತಿಗಳು ಮತ್ತು ದೇಶದೆಲ್ಲೆಡೆ ಆನ್‌ಲೈನ್‌ ವ್ಯವಹಾರಕ್ಕೆ ಬೇಕಾದ ಮೂಲ ಸೌಕರ್ಯಗಳ ಅಭಿವೃದ್ಧಿ, ಉತ್ತೇಜನದ ಮೂಲಕ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಲ್ಲಿ ಕ್ಯುಆರ್‌ ಕೋಡ್‌ ಕೇಂದ್ರಿತ ವ್ಯವಹಾರ ಹೆಚ್ಚು ಚಾಲ್ತಿಯಲ್ಲಿದೆ. ಮತ್ತದು ಬದುಕಿನ ದಿನಚರಿಯ ಅವಿಚ್ಛಿನ್ನ ಅಂಗವಾಗಿದೆ.

ಈ ಕ್ಯುಆರ್‌ ಕೋಡ್‌ಗಳನ್ನು ನಮಗರಿವಿರದ ಹಲವು ರೀತಿಗಳಲ್ಲಿ ಬಳಸಲಾಗುತ್ತದೆ. ಕೋರ್ಟ್‌ಗ ಳಲ್ಲಿ ನಡೆಯುವ ಪ್ರಕರಣಗಳಲ್ಲಿ, ವಿವಿಧ ಕೋರ್ಟ್‌ ಗಳ ಇ-ಕೋರ್ಟ್‌ ಜಾಲತಾಣಗಳಲ್ಲಿ ಕ್ಯುಆರ್‌ ಕೋಡ್‌ ಬಳಸಿ ಪ್ರಕರಣದ ಎಲ್ಲ ವಿವರಗಳನ್ನು ಪಡೆಯಬಹುದು. ಅಲ್ಲಿ ಪ್ರತಿಯೊಂದು ಪ್ರಕರಣಕ್ಕೂ ವಿಶಿಷ್ಟ ಕ್ಯುಆರ್‌ ಕೋಡ್‌ ಲಭ್ಯವಿದೆ. “ಎಲ್ ಪಿಜಿ ಸಿಲಿಂಡರ್‌ ನಿರ್ವಹಣೆಯನ್ನು ಇನ್ನೂ ಪರಿಣಾಮಕಾರಿಯಾಗಿ ಮತ್ತೂ ಜನಸ್ನೇಹಿಯಾಗಿ ಸಲು ಇದೇ ಕ್ಯುಆರ್‌ ಕೋಡ್‌ ತಂತ್ರಜ್ಞಾನವನ್ನು ದೇಶದಾದ್ಯಂತ ಹಂತ ಹಂತವಾಗಿ ಬಳಸುವ ಮಾತುಕತೆಗಳು ಅಂತಿಮ ಹಂತದಲ್ಲಿವೆ.

ತಿಂಗಳ ಹಿಂದೆ ಸಂಪನ್ನಗೊಂಡ ಪ್ರಜಾಪ್ರಭುತ್ವದ ಅತೀ ದೊಡ್ಡ ಹಬ್ಬವಾದ ಲೋಕಸಭಾ ಚುನಾವಣೆ ಯಲ್ಲಿ ಇದೇ ಮೊದಲ ಬಾರಿಗೆ ಸುಮಾರು 99 ಕೋಟಿ ಮತದಾರರಿಗೆ ಕ್ಯುಆರ್‌ ಕೋಡ್‌ ಹೊಂದಿರುವ ವೋಟರ್‌ ಸ್ಲಿಪ್‌ಗ್ಳನ್ನು ವಿತರಿಸಲಾಯಿತು. ಇದರ ಮುಖಾಂತರ ಮತದಾರರು ತಮ್ಮ ಮತಗಟ್ಟೆಯ ವಿಳಾಸ ಮತ್ತಿತರ ಎಲ್ಲ ವಿವರಗಳನ್ನು ಒಂದು ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಪಡೆಯಲು ಮಾಡಿದ ಚೆಂದದ ವ್ಯವಸ್ಥೆ ಇದು. ಸಾರ್ವಜನಿಕ ಮತ್ತು ಸರಕಾರಿ ವಲಯದಲ್ಲಿ ಇಷ್ಟು ದೊಡ್ಡ ಯೋಜನೆ ಸಾಧ್ಯವಾಗಿಸಿ ಯಶಸ್ವಿಯಾದದ್ದು ದೊಡ್ಡ ಗರಿಮೆಯೇ ಸರಿ.

ಕಳೆದ ದೀಪಾವಳಿ ಸಮಯದಿಂದ ದೇಶದ ಹಲವಾರು ರಾಜ್ಯಗಳು ಕೇವಲ ಹಸುರು ಪಟಾಕಿ ಉತ್ಪಾದಿಸಿ ಮಾರಾಟ ಮತ್ತು ಸಿಡಿಸಲು ಅನುಮತಿ ನೀಡಿದ್ದು ಬಹಳ ದೊಡ್ಡ ವಿವಾದ ಮತ್ತು ಸುದ್ದಿಯಾಗಿತ್ತು. “ಯಾವ್ಯಾವ ಪಟಾಕಿ ಪೆಟ್ಟಿಗೆಗಳು ಹಸುರು ಪಟಾಕಿ ಪ್ರಭೇದಗಳು ಎಂದು ಹೇಗೆ ದೃಢೀಕರಿಸುವುದು?’ ಎಂದು ಚಿಂತೆಯಲ್ಲಿ ಇದ್ದ ಅಧಿಕಾರಿಗಳಿಗೆ ಹೊಳೆದದ್ದು ಮತ್ತು ನೆರವಾದದ್ದು ಇದೇ ಕ್ಯುಆರ್‌ ಕೋಡ್‌! ಸರಕಾರ ಹಸುರು ಪಟಾಕಿ ಎಂದು ತಿಳಿಯಲು ಮತ್ತು ಪತ್ತೆ ಹಚ್ಚಲು ಪಟಾಕಿ ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ತನ್ನ ಪೋರ್ಟಲ್‌ನಲ್ಲಿ ಕಡ್ಡಾಯ ನೋಂದಣಿ ಮಾಡುವಂತೆ ಆದೇಶ ಹೊರಡಿಸಿತು. ಎಲ್ಲ ಅಧಿಕೃತ ನೋಂದಣಿದಾರರಿಗೆ ವಿಶಿಷ್ಟ ಕ್ಯುಆರ್‌ ಕೋಡ್‌ಗಳನ್ನು ನೀಡಿ ಪಟಾಕಿ ಪೆಟ್ಟಿಗೆಗಳ ಮೇಲೆ ಕಡ್ಡಾಯವಾಗಿ ಮುದ್ರಿಸುವಂತೆ ಫ‌ರ್ಮಾನು ಹೊರಡಿಸಿತು. ನಕಲಿ, ಅನಧಿಕೃತ ಮತ್ತು ಪರಿಸರಕ್ಕೆ ಹೆಚ್ಚು ಮಾರಕ ಪಟಾಕಿಗಳನ್ನು ಸುಲಭದಲ್ಲಿ ಪತ್ತೆಹಚ್ಚಲು ಇದು ಸಹಕಾರಿಯಾಯಿತು. ಖರೀದಿಸಲು ಬಯಸಿದ ಪಟಾಕಿ ಪೆಟ್ಟಿಗೆಯ ಮೇಲಿನ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಜನಸಾಮಾನ್ಯರಿಗೆ ನಕಲಿ-ಅಸಲಿ ಪಟಾಕಿಯ ಮಾಹಿತಿ ದೃಢೀಕರಿಸುವಲ್ಲಿ ಈ ತಂತ್ರಜ್ಞಾನ ನೆರವಾಯಿತು.

ಪ್ರಕಟಿತ ಮಾಹಿತಿಗಳ ಪ್ರಕಾರ, ಪ್ರತಿಯೊಬ್ಬರ ಬ್ಯಾಂಕ್‌ ಖಾತೆ ಮತ್ತು ಪೇಮೆಂಟ್‌ ಬ್ಯಾಂಕ್‌ ಖಾತೆಗಳ ಮತ್ತು ಇತರ ಎಲ್ಲ ವ್ಯವಹಾರಗಳ ಕ್ಯುಆರ್‌ ಕೋಡ್‌ ಸೇರಿದಂತೆ ದೇಶದಲ್ಲಿ ಉಪಯೋಗದಲ್ಲಿ (ಚಲಾವಣೆಯಲ್ಲಿ!) ಇರುವ ಒಟ್ಟು ಕ್ಯುಆರ್‌ ಕೋಡ್‌ಗಳ ಸಂಖ್ಯೆ ಅಂದಾಜು 400 ಕೋಟಿಗಳಿಗೂ ಹೆಚ್ಚು! ಇವೆಲ್ಲವೂ ನೋಡಲು ಒಂದೇ ರೀತಿ ಕಂಡರೂ ಇದರಲ್ಲಿ ಪ್ರತಿಯೊಂದು ಕ್ಯುಆರ್‌ ಕೋಡ್‌ ಕೂಡ ಅನನ್ಯ-ವಿಶಿಷ್ಟ (ಯುನಿಕ್‌)! ಅಬ್ಟಾ ಈ ತಂತ್ರಜ್ಞಾನ ಸಂಶೋಧಿಸಿ, ಈ ಮಟ್ಟಕ್ಕೆ ಬೆಳೆದು ನಿಂತು, ಜನರಿಗೆ ಈ ವ್ಯಾಪ್ತಿಯಲ್ಲಿ ಉಚಿತ ಸೇವೆ ಒದಗಿಸುವ ಪರಿ ನಿಜಕ್ಕೂ ಅಚ್ಚರಿ.

ಬ್ಯಾಂಕ್‌ಗಳ ಒಕ್ಕೂಟದ ಮಾಹಿತಿಯ ಪ್ರಕಾರ ದೇಶದಾದ್ಯಂತ ಇರುವ ಬ್ಯಾಂಕ್‌ ಖಾತೆಗಳು ಮತ್ತು ಎಟಿಎಂಗಳಿಗೆ ಹೋಲಿಸಿದರೆ ಕೊರೊನಾ ಕಾಲಘಟ್ಟದ ಅನಂತರದ ಕಾಲದಲ್ಲಿ ಜನರು ವರ್ಷದಿಂದ ವರ್ಷಕ್ಕೆ (Year on Year) ವ್ಯವಹಾರಕ್ಕೆ ನಗದು ಬಳಸುವ ಪ್ರಮಾಣ ಅಂದಾಜು ಶೇ.4-ಶೇ.5 ಕಡಿಮೆಯಾಗುತ್ತಿದೆ. ಜನರ ಖರ್ಚಿನ ಅಭ್ಯಾಸ (spending habit) ದಿನೇದಿನೆ ಜಾಸ್ತಿಯಾಗುತ್ತಿರುವ ಪರಿಣಾಮ ಕ್ಯುಆರ್‌ ಕೋಡ್‌ ತಂತ್ರಜ್ಞಾನ ಸೇರಿದಂತೆ ಆನ್‌ಲೈನ್‌ ವಹಿವಾಟಿನ ಸಂಖ್ಯೆ (ಮೊತ್ತ ಅಲ್ಲ) ವರ್ಷದಿಂದ ವರ್ಷಕ್ಕೆ ಸುಮಾರು ಶೇ. 5.5- ಶೇ.6 ವೃದ್ಧಿಸುತ್ತಿದೆ. ದೇಶದಾದ್ಯಂತ ನಡೆಯುವ ಐದು ವಹಿವಾಟುಗಳಲ್ಲಿ ಮೂರು ವಹಿವಾಟು ಆನ್‌ಲೈನ್‌ ಮೂಲಕ ಮತ್ತು ಆ ಮೂರರಲ್ಲಿ ಎರಡು ಕ್ಯುಆರ್‌ ಕೋಡ್‌ ಆಧಾರಿತ! ಅಂದರೆ ದೇಶದ ಒಟ್ಟು ವ್ಯವಹಾರಗಳ ಸಂಖ್ಯೆಯ (ಮೊತ್ತ ಅಲ್ಲ) ಅಂದಾಜು ಶೇ.40 ವ್ಯವಹಾರಗಳು ಕ್ಯುಆರ್‌ ಕೋಡ್‌ ಬಳಸಿ ಆಗುತ್ತಿವೆ. ಇದಕ್ಕೆ ಬಳಸಲ್ಪಡುವ ತಂತ್ರಜ್ಞಾನ, ಸರ್ವರ್‌, ಅಂತರ್ಜಾಲ, 24/7 ಆವರ್ತನದಲ್ಲಿ ಬೆಂಬಲಿಸುವ ತಂಡ… ಹೀಗೆ ಅಬ್ಟಾ ಇದೊಂದು ಯಾರೂ ಇನ್ನೂ ಸರಿಯಾಗಿ ಊಹಿಸದ, ಶೋಧಿಸದ, ಖನನ ಮಾಡಿರದ ದೊಡ್ಡ ತಂತ್ರಜ್ಞಾನ ಆಧಾರಿತ ಮಾರುಕಟ್ಟೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ, ಕಲಿಯುತ್ತಿರುವವರಿಗೆ ಈ ಕ್ಷೇತ್ರ ಸಂಶೋಧನೆಗೆ ತೆರೆದಿಟ್ಟ ಅವಕಾಶಗಳು ಆಗಸದಷ್ಟು. ಪೇಮೆಂಟ್‌ ಬ್ಯಾಂಕ್‌ಗಳು ಪ್ರವರ್ಧಮಾನಕ್ಕೆ ಬಂದುದರ ನೇರ, ಗುರುತರ ಮತ್ತು ಧನಾತ್ಮಕ ಪರಿಣಾಮವಿದು.

ಕೊನೆಯದಾಗಿ: ಕಲಿಯುಗದ ತಂತ್ರಜ್ಞಾನ, ಇಂಟರ್‌ನೆಟ್‌ ಆಧಾರಿತ ಬದುಕಿನ “ಜಾಲತಾಣ ಪಯಣ’ದಲ್ಲಿ “ಬಿಟ್ಟೇನೆಂದರೂ ನಮ್ಮನ್ನು ಬಿಡದು ನೋಡು ಈ ಮಾಯೆ; ಕ್ಯುಆರ್‌ ಕೋಡ್‌ ಎಂಬ ತಂತ್ರಾಂಶ-ತಂತ್ರಜ್ಞಾನದ ಛಾಯೆ’. ಜಗದ ನಾಳೆಗಳ ವಿದ್ಯಮಾನಗಳ ಕುರಿತ ಭವಿಷ್ಯದ ಊಹನೆ ಕಷ್ಟಸಾಧ್ಯ; ಆದರೆ ಕ್ಯುಆರ್‌ ಕೋಡ್‌ ತಂತ್ರಜ್ಞಾನದ ನಾಳೆಗಳ ಭವಿಷ್ಯ ಮತ್ತಷ್ಟು ವಿಸ್ತರಿಸಲಿದೆ ಮತ್ತು ಉಜ್ವಲವಾಗಿರಲಿದೆ!

– ರವೀ ಸಜಂಗದ್ದೆ

ಟಾಪ್ ನ್ಯೂಸ್

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupati: ಲಡ್ಡು ಪ್ರಸಾದ ಪ್ರಮಾದ!

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Langoti Man Movie Review

Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.