ಮಾಲಿನ್ಯ ತಡೆ ನಮ್ಮಿಂದಲೇ ಆರಂಭಗೊಳ್ಳಲಿ

ಇಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ

Team Udayavani, Dec 2, 2021, 5:40 AM IST

ಮಾಲಿನ್ಯ ತಡೆ ನಮ್ಮಿಂದಲೇ ಆರಂಭಗೊಳ್ಳಲಿ

ದಿನ ಕಳೆಯುತ್ತಾ ಹೋದಂತೆ ಜಗತ್ತಿನ ಮಾಲಿನ್ಯ ಸೂಚ್ಯಂಕ ಏರುತ್ತಲೇ ಇದೆ. ಇದನ್ನು ನಿಯಂತ್ರಿಸಲು ನಾವು ಕಟಿಬದ್ಧರಾಗಬೇಕಾಗಿದೆ. ಮಾಲಿನ್ಯದಿಂದಾಗಿ ಇಡೀ ಪರಿಸರದ ಮೇಲಾಗಿರುವ ಪರಿಣಾಮದ ಫ‌ಲವನ್ನು ನಾವು ಇದೀಗ ಅನುಭವಿಸುತ್ತಿದ್ದೇವೆ. ವಾಯು, ಜಲ, ಮಣ್ಣು, ಪರಿಸರ..

ಹೀಗೆ ಪ್ರತಿ ಯೊಂದರ ಮೇಲೆ ಮಾನವ ಹಿಡಿತ ಸಾಧಿಸಲು ಹೋಗಿ ಇಡೀ ಪರಿಸರ ವ್ಯವಸ್ಥೆಯನ್ನು ಹಾಳು ಗೆಡವಿದ್ದಾನೆ. ಪ್ರಗತಿ, ಅಭಿವೃದ್ಧಿಯ ಹೆಸರಲ್ಲಿ ಕಳೆದ ಹಲವಾರು ದಶಕಗಳಿಂದ ಮಾನವ ಇಡೀ ಭೂಮಿಯನ್ನು ಪ್ರಯೋಗಶಾಲೆಯನ್ನಾಗಿಸಿದ್ದಾನೆ. ಇದರಿಂದಾಗಿ ಇಡೀ ಪರಿಸರ ಮಾಲಿನ್ಯಮಯವಾಗಿದೆ. ಇದು ಕೇವಲ ಮಾನವನ ಮಾತ್ರವಲ್ಲದೆ ಈ ಭೂಮಿಯ ಮೇಲಣ ಸಕಲ ಜೀವಿಗಳ ಬದುಕಿಗೆ ಸಂಚಕಾರ ತಂದೊಡ್ಡಿದೆ. ಸರಕಾರ ಆದಿಯಾಗಿ ನಮ್ಮ ಆಡಳಿತ ವ್ಯವಸ್ಥೆ ಮಾಲಿನ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಕಡಿವಾಣ ಹಾಕಬೇಕಿದೆ. ಅಷ್ಟು ಮಾತ್ರವಲ್ಲದೆ ಪ್ರತಿಯೋರ್ವರೂ ಮಾಲಿನ್ಯ ನಿಯಂತ್ರಣಕ್ಕೆ ಪಣ ತೊಡಬೇಕಿದೆ. ಇದು ಇಂದಿನ ಅಗತ್ಯ ಮಾತ್ರವಲ್ಲದೆ ಅನಿವಾರ್ಯವೂ ಕೂಡ.

 ಆಚರಣೆ ಹಿನ್ನೆಲೆ ಮತ್ತು ಉದ್ದೇಶ
ಮಧ್ಯಪ್ರದೇಶದ ಭೋಪಾಲ್‌ನ ಕ್ರಿಮಿನಾಶಕ ತಯಾರಿಕ ಕಂಪೆನಿಯಾದ ಯೂನಿಯನ್‌ ಕಾರ್ಬನ್‌ ಇಂಡಿಯಾ ಲಿಮಿಟೆಡ್‌ನ‌ಲ್ಲಿ 1984ರ ಡಿಸೆಂಬರ್‌ 2-3ರ ರಾತ್ರಿ ಸಂಭವಿಸಿದ ಅನಿಲ ದುರಂತದ ವೇಳೆ ಮಿಥೈಲ್‌ ಐಸೋಸೈನೇಟ್‌ ವಿಷಾನಿಲ ಸೋರಿಕೆಯಾಗಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಅಷ್ಟು ಮಾತ್ರವಲ್ಲದೆ ಈ ದುರಂತದ ದುಷ್ಪರಿಣಾಮವನ್ನು ಇಂದಿಗೂ ಅಲ್ಲಿನ ಜನರು ಅನುಭವಿಸುತ್ತಿದ್ದಾರೆ. ಈ ಘೋರ ದುರಂತದಲ್ಲಿ ಸಾವನ್ನಪ್ಪಿದವರ ಸ್ಮರಣಾರ್ಥ ಮತ್ತು ಮಾಲಿನ್ಯ ನಿಯಂತ್ರಣದ ಬಗೆಗೆ ಜನಜಾಗೃತಿಗಾಗಿ ಪ್ರತೀ ವರ್ಷ ಡಿ. 2ರಂದು ದೇಶದಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ:ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ಆಚರಣೆ ಹೇಗೆ?
ಕೈಗಾರಿಕೆಗಳು ಅಥವಾ ಮಾನವ ನಿರ್ಲಕ್ಷ್ಯದಿಂದ ಉಂಟಾಗುವ ಮಾಲಿನ್ಯ, ಅದರ ಪರಿಣಾಮಗಳು ಮತ್ತು ಅದನ್ನು ತಡೆಗಟ್ಟುವುದು, ಮಾಲಿನ್ಯ ನಿಯಂತ್ರಣ ಕಾಯಿದೆಗಳ ಮಹತ್ವದ ಬಗ್ಗೆ ಜನರಿಗೆ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಅರಿವು ಮೂಡಿಸುವ ಪ್ರಯತ್ನವನ್ನು ಈ ದಿನದಂದು ನಡೆಸಲಾಗುತ್ತದೆ. ಅಲ್ಲದೆ ಈ ದಿನದಂದು ಗಾಳಿ, ಮಣ್ಣು, ಶಬ್ದ ಮತ್ತು ಜಲ ಮಾಲಿನ್ಯದ ಪರಿಣಾಮ, ಮತ್ತವುಗಳನ್ನು ತಡೆಗಟ್ಟುವ ಬಗ್ಗೆಯೂ ಜನಜಾಗೃತಿ ಮೂಡಿಸಲಾಗುತ್ತದೆ.

ಈ ವರ್ಷದ ಧ್ಯೇಯ
ಮಾಲಿನ್ಯ ನಿಯಂತ್ರಣದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಮಾಲಿನ್ಯವನ್ನು ತಡೆಗಟ್ಟುವುದರ ಕುರಿತು ಜನರಿಗೆ ತಿಳಿವಳಿಕೆ ನೀಡುವುದು-ಈ ವರ್ಷದ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಧ್ಯೇಯವಾಗಿದೆ.

ಮಾಲಿನ್ಯಕ್ಕೆ ಕಾರಣಗಳು
ದೇಶದಲ್ಲಿ ಅದರಲ್ಲೂ ಮುಖ್ಯವಾಗಿ ನಗರಗಳಲ್ಲಿ ಹೆಚ್ಚುತ್ತಿರುವ ಜನಸಾಂದ್ರತೆ ಮತ್ತು ತತ್ಪರಿಣಾಮವಾಗಿ ಮೂಲಸೌಕರ್ಯಗಳ ವೃದ್ಧಿ, ಅಭಿವೃದ್ಧಿ ಕಾಮಗಾರಿಗಳು, ವಾಹನಗಳ ದಟ್ಟಣೆೆ ಮತ್ತವುಗಳು ಉಗುಳುವ ಹೊಗೆ, ಬೃಹತ್‌ ಮತ್ತು ಸಣ್ಣ ಕೈಗಾರಿಕೆಗಳು, ವಾಹನಗಳ ತಯಾರಿ ಮತ್ತು ಸಂಚಾರದ ವೇಳೆ ಸೃಷ್ಟಿಯಾಗುವ ಮಾಲಿನ್ಯಕಾರಕ ಧೂಳು, ತ್ಯಾಜ್ಯಗಳನ್ನು ಸುಡುವಿಕೆ, ಅಡುಗೆಗಾಗಿ ಕಟ್ಟಿಗೆ ಬಳಕೆ, ಬೆಳಕು ಮತ್ತು ತಾಪಮಾನಕ್ಕಾಗಿ ಮಾಡುವ ಇಂಧನಗಳ ದಹನ, ಡೀಸೆಲ್‌ ಜನರೇಟರ್‌ ಮೂಲಕ ವಿದ್ಯುತ್‌ ಉತ್ಪಾದನೆ, ನಿರಂತರ ಅರಣ್ಯ ನಾಶ.. ಹೀಗೆ ಅನೇಕ ರೀತಿಯಲ್ಲಿ ದೇಶದಲ್ಲಿ ವಾಯು ಮಾಲಿನ್ಯ, ಪರಿಸರ ಮಾಲಿನ್ಯ ಉಂಟಾಗುತ್ತಿದೆ.

ಪರಿಣಾಮಗಳು
01 ನ್ಯಾಶನಲ್‌ ಹೆಲ್ತ್‌ ಪೋರ್ಟಲ್‌ ಆಫ್ ಇಂಡಿಯಾದ ಮಾಹಿತಿ ಪ್ರಕಾರ ವಾಯು ಮಾಲಿನ್ಯದಿಂದಾಗಿ ಜಾಗತಿಕವಾಗಿ ಪ್ರತೀ ವರ್ಷ ಸುಮಾರು 7 ಮಿಲಿಯನ್‌ ಜನರು ಸಾವನ್ನಪ್ಪುತ್ತಿದ್ದಾರೆ.ಅವರಲ್ಲಿ 4 ಮಿಲಿಯನ್‌ ಜನರು ಒಳಾಂಗಣ ವಾಯುಮಾಲಿನ್ಯದಿಂದ ಸಾಯುತ್ತಾರೆ.
02 ಜಾಗತಿಕವಾಗಿ ಹತ್ತರಲ್ಲಿ ಒಂಬತ್ತು ಜನರಿಗೆ ಶುದ್ಧ ಮತ್ತು ಸುರಕ್ಷಿತ ಗಾಳಿ ಉಸಿರಾಡಲು ಸಿಗುವುದಿಲ್ಲ.
03 ಮಾಲಿನ್ಯಕಾರಕ ಸೂಕ್ಷ್ಮಕಣಗಳು ಶ್ವಾಸಕೋಶ, ಹೃದಯ, ಮೆದುಳಿಗೆ ಹಾನಿಯಂಟು ಮಾಡುತ್ತವೆ.
04 ಪ್ರತೀ ವರ್ಷ ವಾಯು ಮಾಲಿನ್ಯದಿಂದ ಸಾಯು ವವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ವೃದ್ಧರು.
05 ಹವಾಮಾನ ಬದಲಾವಣೆಗೆ ವಾಯು ಮಾಲಿನ್ಯ ಪ್ರಮುಖ ಕಾರಣ.

ಪರಿಸರ-ಅಭಿವೃದ್ಧಿ ನಡುವೆ ಸಮತೋಲನ ಅಗತ್ಯ
ಪರಿಸರ ಮಾಲಿನ್ಯಕ್ಕೆ ಮಾನವನೇ ನೇರ ಕಾರಣವಾಗಿ ದ್ದಾನೆ. ಮಾನವನ ಅತಿಯಾಸೆ, ಇಡೀ ಭೂಮಿಯ ಮೇಲೆ ಹಕ್ಕು ಸ್ಥಾಪಿಸುವ ಅಹಂತನವನ್ನು ಬಿಡಲೇ ಬೇಕಿದೆ. ನೀರು, ಬೆಂಕಿ, ಗಾಳಿಯ ವಿರುದ್ಧ ಎದೆ ಸೆಟೆಸಿ ನಿಲ್ಲುವ ಹುಂಬತನವನ್ನು ಬಿಡದೇ ಹೋದಲ್ಲಿ ಇಡೀ ಮನುಕುಲಕ್ಕೆ ಸಂಚಕಾರ ಬಂದೊದಗುವುದು ಶತಃಸಿದ್ಧ. ಪ್ರಕೃತಿಯೊಂದಿಗೆ ಸಮತೋಲನ ಕಾಯ್ದುಕೊಂಡು ಮುನ್ನಡೆದಲ್ಲಿ ಮಾತ್ರವೇ ಮಾನವನ ಬದುಕು ಸಹನೀಯವಾದೀತು. ಅಭಿವೃದ್ಧಿ, ಸಂಶೋಧನೆ ಹೆಸರಲ್ಲಿ ನಡೆಸಲಾಗುತ್ತಿರುವ ಪ್ರಕೃತಿ ಮೇಲಣ ದೌರ್ಜನ್ಯಗಳನ್ನು ನಿಲ್ಲಿಸಿ ತಮ್ಮ ಭಾವೀ ಪೀಳಿಗೆಗೆ ಈ ಭೂಮಿಯನ್ನು ಕಾಪಿಡುವ ಕಾರ್ಯಕ್ಕೆ ಪ್ರತಿಯೋರ್ವರು ಮುಂದಾಗಬೇಕಿದೆ.

 

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.