ಇಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆ: ಉಡುಪಿ ಸೀರೆಗೆ ಕಾಯಕಲ್ಪ


Team Udayavani, Aug 6, 2023, 10:41 PM IST

UDUPI SAREE

ಭಾರತೀಯ ನಾರಿಯರಿಗೆ ಸೀರೆಗಳು ಭೂಷಣ. ನಮ್ಮ ಸಂಸ್ಕೃತಿಯಲ್ಲಿ ಸೀರೆಗಳಿಗೆ ವಿಶೇಷವಾದ ಸ್ಥಾನವನ್ನು ಕಲ್ಪಿಸ ಲಾಗಿದೆ. ಸಾಂಪ್ರದಾಯಿಕ ಸೀರೆಗಳು ಮತ್ತು ಆಭರಣಗಳು ಮೇಳೈಸಿ, ಹಬ್ಬ ಹರಿದಿನಗಳಲ್ಲಿ, ಪ್ರಮುಖ ಕಾರ್ಯ ಕ್ರಮಗಳಲ್ಲಿ ಮಹಿಳೆಯರು ಸಂಭ್ರಮಿಸುವುದು ವಾಡಿಕೆ.

ನಮ್ಮ ದೇಶದಲ್ಲಿರುವ ನಾನಾ ರೀತಿಯ ವೈವಿಧ್ಯಮಯ ಸೀರೆಗಳ ನಡುವೆ ಕೈಮಗ್ಗದಲ್ಲಿ ನೇಯ್ದ ಉಡುಪಿ ಸೀರೆಗಳು ಎದ್ದು ಕಾಣುತ್ತವೆ. ಈ ಸೀರೆಗಳು ಪ್ರಾದೇಶಿಕ ಇತಿಹಾಸ ಮತ್ತು ಸಂಸ್ಕೃತಿಯನ್ನು ಸಾರುತ್ತವೆ.

ಉಡುಪಿ ಸೀರೆ ಕರ್ನಾಟಕ ರಾಜ್ಯದ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೈಮಗ್ಗದಲ್ಲಿ ನೇಕಾರರು ಕೈಯಲ್ಲಿ ನೇಯ್ದ ಸೀರೆಯ ಹೆಸರಾಗಿದೆ.
ಈ ಸೀರೆಯು ಭಾರತದ ಪಶ್ಚಿಮ ಕರಾವಳಿಯ ದ. ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ವ್ಯಾಪ್ತಿಯಲ್ಲಿ ನೇಕಾರ ಜನಾಂಗದವರು ಜೀವನಾ ಧಾರವಾಗಿ ನಡೆಸಿ ಕೊಂಡು ಬಂದ ಕುಲ ಕಸುಬಾಗಿದೆ. ಪ್ರಮುಖವಾಗಿ ಪದ್ಮಶಾಲಿ / ಶೆಟ್ಟಿಗಾರ್‌ ಎಂಬ ಜಾತಿ ಸಮು ದಾಯದ ಜನರು, ಈ ಕೆಲಸದಲ್ಲಿ ಪರಂಪರಾಗತವಾಗಿ ತೊಡಗಿಸಿಕೊಂಡಿದ್ದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನೇಕಾರರು ತಮ್ಮದೇ ನೇಕಾರರ ಸಂಘಗಳನ್ನು ಸ್ಥಾಪಿಸಿ ಅದರ ಮೂಲಕ ನೇಕಾರಿಕೆ ಕೆಲಸ ಮಾಡುತ್ತಿದ್ದರು. “ಮಲಬಾರ್‌ ಫ್ರೆಮ್‌” ಎಂದು ಕರೆಯುವ ಮಗ್ಗದಲ್ಲಿ ಹತ್ತಿಯ ನೂಲಿನಿಂದ ಸಾದಾ ವಿನ್ಯಾಸದಲ್ಲಿ ಅಥವಾ ಸಣ್ಣ ಸಣ್ಣ ಚೌಕುಳಿಯ ವಿನ್ಯಾಸದಲ್ಲಿ ಈ ಸೀರೆಯನ್ನು ತಯಾರಿಸಲಾಗುತ್ತದೆ. ಹತ್ತಿಯಿಂದ ತಯಾರಿಸಿದ ನೂಲಿನಿಂದ 40, 60 ಹಾಗೂ 80 ಸಂಖ್ಯೆಯ ನೂಲಿನ ಸೀರೆಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಈ ಸೀರೆಗಳು ತುಂಬಾ ಲಘುವಾಗಿ ಇರುತ್ತವೆ, ಯಾವುದೇ ಕಾಲ ದಲ್ಲೂ ಧರಿಸಲು ಯೋಗ್ಯವಾಗಿರುತ್ತವೆ ಮತ್ತು ಧರಿಸಿದಾಗ ಆಹ್ಲಾದಕರ ಅನುಭವವನ್ನು ನೀಡುತ್ತವೆ. ಈ ಸೀರೆಗಳಿಗೆ ಹಿಂದಿನ ದಿನಗಳಲ್ಲಿ ಸಾಕಷ್ಟು ಬೇಡಿಕೆ ಇತ್ತು. ಆದರೆ ಪವರ್‌ ಲೂಮ್‌ಗಳು ಬಂದ ಬಳಿಕ ಈ ಸೀರೆಗಳಿಗೆ ಬೇಡಿಕೆ ಕಡಿಮೆಯಾಯಿತು. ಸಂಭಾವನೆ ಕಡಿಮೆಯಾಗಿ ನೇಕಾರರು ಸಂಕಷ್ಟಕ್ಕೆ ಸಿಲುಕಿದರು, ಪರಿಣಾಮವಾಗಿ ನೇಕಾರರ ಇಂದಿನ ಜನಾಂಗ ಬೇರೆ ಬೇರೆ ಉದ್ಯೋಗಗಳತ್ತ ಹೊರಳಿತು.

ವೈಶಿಷ್ಟéಗಳಿಂದ ಕೂಡಿದ ಉಡುಪಿ ಸೀರೆಗಳಿಗೆ 2016ರಲ್ಲಿ ಭೌಗೋಳಿಕ ಮಾನ್ಯತೆ ದೊರಕಿತು. ಪರಂಪರಾಗತ ಉಡುಪಿ ಸೀರೆಗೆ ಆಧುನಿಕ ತಂತ್ರಜ್ಞಾನದ ಮೂಲಕ ಹೊಸ ವಿನ್ಯಾಸದ ಸ್ಪರ್ಶವನ್ನು ನೀಡುವುದು ಮತ್ತು ಹಿರಿಯ ನೇಕಾರರ ಮಾರ್ಗದರ್ಶನದಲ್ಲಿ ಯುವ ಪೀಳಿಗೆಯ ಮಹಿಳೆಯರನ್ನು ಈ ಉದ್ಯಮಕ್ಕೆ ಕರೆತರುವ ಪ್ರಯತ್ನಕ್ಕೆ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಕೈ ಹಾಕಿದೆ. ಜತೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಡುಪಿ ಸೀರೆಗಳಿಗೆ ಬೇಡಿಕೆ ಹೆಚ್ಚಿಸಲು ಕಾರ್ಯಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ.

ಕಳೆದ ವರ್ಷ 100 ಹೊಸ ನೇಕಾರರನ್ನು ಈ ಉದ್ಯಮಕ್ಕೆ ಕರೆ ತರುವ ಸಂಕಲ್ಪ ಮಾಡಿದ ಪ್ರತಿಷ್ಠಾನ ಈಗಾಗಲೇ 80 ನೇಕಾರರನ್ನು ಉದ್ಯಮಕ್ಕೆ ತರಲು ಉಡುಪಿಯ ಜಿಲ್ಲಾಡಳಿತ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌, ನಬಾರ್ಡ್‌ ಮತ್ತು ರೋಬೋ ಸೋಫ್ಟ್ ಟೆಕ್ನಾಲಜಿಸ್‌ನ ಸಿಎಸ್‌ಆರ್‌ ಯೋಜನೆಯ ಅಡಿ ಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆಗಸ್ಟ್‌ 7 ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಂದು 55 ಮಹಿಳೆಯರ ಕೈಮಗ್ಗ ತರಬೇತಿ ಕಾರ್ಯಗಾರಕ್ಕೆ ಚಾಲನೆ ಸಿಗಲಿದೆ.

25 ಮಹಿಳೆಯರಿಗೆ ಈಗಾಗಲೇ ನಾಲ್ಕು ತಿಂಗಳ ಕೈಮಗ್ಗದ ನೇಯ್ಗೆ ತರಬೇತಿ ಉಡುಪಿ ಜಿಲ್ಲಾಡಳಿತದ ಜಿಲ್ಲಾ ಖನಿಜ ನಿಧಿಯ ಮೂಲಕ ಸಾಧ್ಯವಾಗಿದೆ. ಈ 25 ಮಹಿಳೆಯರಿಗೆ ಕೇಂದ್ರ ಸರಕಾರದ ಸಮರ್ಥ ಯೋಜನೆ ಅಡಿಯಲ್ಲಿ 45 ದಿನಗಳ ಕೌಶಲ ಉನ್ನತೀಕರಣ ಕಾರ್ಯಗಾರ ಈಗಾಗಲೇ ಆರಂಭವಾಗಿದೆ. ಈ ಯುವ ಪೀಳಿಗೆಯ ಎಲ್ಲ ನೇಕಾರರು ಮುಂದಿನ ದಿನಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉಡುಪಿ ಸೀರೆಗಳಲ್ಲಿ ಹೊಸತನವನ್ನು ತರಲಿದ್ದಾರೆ.

ಈ ಮೂಲಕ ಉಡುಪಿಯಲ್ಲಿ ಕೈಮಗ್ಗದ ನೇಯ್ಗೆ ಉದ್ಯಮಕ್ಕೆ ಹೊಸ ಕಾಯಕಲ್ಪ ಸಿಗಲಿದೆ. ಜತೆಗೆ ನೇಕಾರರು ಕೂಡ ಒಳ್ಳೆಯ ಆದಾಯವನ್ನು ಗಳಿಸುವ ಮೂಲಕ ಆರ್ಥಿಕ ವಾಗಿಯೂ ಸದೃಢರಾಗಲು ಸಾಧ್ಯವಿದೆ.

ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಉಡುಪಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ ಉಡುಪಿ ಬೀಚ್‌, ಉಡುಪಿ ಮಲ್ಲಿಗೆ, ಉಡುಪಿ ಗುಳ್ಳ, ಉಡುಪಿ ವಿದ್ಯಾನಗರಿಯ ಜತೆಗೆ ಭೌಗೋಳಿಕ ಮಾನ್ಯತೆ ಹೊಂದಿರುವ ವಿಶಿಷ್ಟವಾದ ಉಡುಪಿ ಸೀರೆಗಳನ್ನು ಕೂಡ ಭವಿಷ್ಯದಲ್ಲಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸುವ ಪ್ರಯತ್ನವನ್ನು ನಾವೆಲ್ಲರೂ ಒಟ್ಟು ಸೇರಿ ಮಾಡಬೇಕಾಗಿದೆ.

 ರತ್ನಾಕರ್‌ ಇಂದ್ರಾಳಿ ಅಧ್ಯಕ್ಷರು, ಪದ್ಮಶಾಲಿ ನೇಕಾರ ಪ್ರತಿಷ್ಠಾನ, ಉಡುಪಿ ಮತ್ತು ಅಧ್ಯಕ್ಷರು, ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ, ಉಡುಪಿ.

ಟಾಪ್ ನ್ಯೂಸ್

2-mng-kbc

Mangaluru: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ

Tour: ಹೊಳೆ ಆಂಜನೇಯ,ಸೋಮನಾಥಪುರ ದೇವಾಲಯ… ಸ್ನೇಹಿತರೊಂದಿಗಿನ ಏಕದಿನದ ನವೋಲ್ಲಾಸ

Tour: ಹೊಳೆ ಆಂಜನೇಯ,ಸೋಮನಾಥಪುರ ದೇವಾಲಯ… ಸ್ನೇಹಿತರೊಂದಿಗಿನ ಏಕದಿನದ ನವೋಲ್ಲಾಸ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Laapataa Ladies

Laapataa Ladies: ಕಾಣೆಯಾದ ಮಹಿಳೆಯರ ಆಸ್ಕರ್‌ ಪ್ರಯಾಣ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2-mng-kbc

Mangaluru: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.