Tulu Tradition: ಆ.4 ಆಟಿ ಅಮಾವಾಸ್ಯೆ- ರೋಗ ನಿರೋಧಕ ಸಪ್ತಪರ್ಣಿ ಕಷಾಯ

ಈ ವೃಕ್ಷವು ಸಂಸ್ಕೃತದಲ್ಲಿ "ಸಪ್ತಪರ್ಣಿ' ಎಂದೂ ಕನ್ನಡದಲ್ಲಿ "ಏಳೆಲಗ' ಎಂದು ಉಲ್ಲೇಖ

Team Udayavani, Aug 3, 2024, 12:30 PM IST

Tulu Tradition ನಾಳೆ ಆಟಿ ಅಮಾವಾಸ್ಯೆ; ರೋಗ ನಿರೋಧಕ ಸಪ್ತಪರ್ಣಿ ಕಷಾಯ

ಕರ್ಕಾಟಕ ಮಾಸ ಅಥವಾ “ಆಟಿ ಅಮಾವಾಸ್ಯೆ’ ಎಂದರೆ ಪಕ್ಕನೆ ಕಣ್ಣೆದುರಿಗೆ ನೀಳವಾಗಿ ಬೆಳೆದ ಹಾಲುವಾನ ಅಥವಾ ಸಪ್ತವರ್ಣಿ ಮರದ ಭವ್ಯ ನಿಲುವು ವ್ಯಕ್ತವಾಗುತ್ತದೆ. ತನ್ನದೇ ಆದ ವೈಚಿತ್ರ್ಯ ಮತ್ತು ವೈಶಿಷ್ಟéವನ್ನು ಹೊಂದಿರುವ ಈ ವೃಕ್ಷವು ವರ್ಷದಲ್ಲಿ ಒಮ್ಮೆ ಮಾತ್ರ ಓಲೈಸಿಕೊಳ್ಳುವ ಅಪರೂಪದ ಸಂಪ್ರದಾಯಕ್ಕೆ ಒಳಪಟ್ಟಿವೆ.

ಕರ್ಕಾಟಕ ಮಾಸದ ಅಮಾವಾಸ್ಯೆ ಅಥವಾ ತುಳು ಸಂಪ್ರದಾಯದ “ಆಟಿ ಅಮಾವಾಸ್ಯೆ’ಯ ಪ್ರಾದೇಶಿಕ ಪರ್ವದಂದು “ಸಪ್ತಪರ್ಣಿ’ ವೃಕ್ಷಕ್ಕೆ ಒಂದು ರೀತಿಯ ಜನಪದೀಯ ಮೌಲ್ಯವು ಪ್ರಾಪ್ತಿಯಾಗಿ ತುಳುವರ ಕೆಲವು ಆಚರಣೆಯ ಒಂದು ಭಾಗವಾಗಿ “ಹಾಲುವಾನ’ ವೃಕ್ಷವು ತನ್ನ ಮಹತ್ವವನ್ನು ಸಾರುತ್ತದೆ.

ಬಲಿಷ್ಠವಾದ ಬುಡವನ್ನು ಹೊಂದಿ ನೀಳವಾಗಿ ಬೆಳೆಯುವ ಹಾಲುವಾನ, ಪಾಳೆಮರ ಎಂದು ಕರೆಸಿಕೊಳ್ಳುವ ಈ ವೃಕ್ಷವು ಸಂಸ್ಕೃತದಲ್ಲಿ “ಸಪ್ತಪರ್ಣಿ’ ಎಂದೂ ಕನ್ನಡದಲ್ಲಿ “ಏಳೆಲಗ’ ಎಂದು ಉಲ್ಲೇಖಿತವಾಗಿದೆ. ಸಸ್ಯಶಾಸ್ತ್ರದಲ್ಲಿ ಇದನ್ನು “ಆಲ್‌ ನ್ಪೋನಿಯಾ ಸ್ಕಾಲರೀಸ್‌’ ಎಂದು ಗುರುತಿಸಲಾಗಿದೆ.

ಹಾಲುವಾನ ಮರವು ಎಲ್ಲೆಡೆ ಗೋಚರಿಸಿದರೂ ಒಂದು ರೀತಿಯ ನಿಷಿದ್ಧ ವೃಕ್ಷವೆಂದೇ ತಿಳಿಯಲಾಗಿದೆ. ಈ ಮರದ ಕಟ್ಟಿಗೆಯನ್ನು ಉರುವಲಾಗಿ ಉಪಯೋ ಗಿಸುವುದು ತೀರಾ ಕಡಿಮೆ. ಮಂತ್ರ ಶಾಸ್ತ್ರದ ಪ್ರಕಾರ ಪ್ರೇತಾವಾಹನೆಗೆ ಮತ್ತು ಬಾಧ ಕರ್ಷಣೆಗೆ ಉಪಯೋಗಿಸಲ್ಪಡುವ ಕೆಲವು ವಿಕಾರ ಮೂರ್ತಿಗಳಿಗೆ ಈ ವೃಕ್ಷದ ತಿರುಳನ್ನು ಬಳಸಲಾಗುತ್ತದೆ. ವಿಸರ್ಜನೆ ಮಾಡುವ ಕಾಷ್ಠ ಮೂರ್ತಿಗಳ ರಚನೆಗೆ ಈ ವೃಕ್ಷ ಬಳಕೆ ಯಾಗುವುದನ್ನು ಹೊರತುಪಡಿಸಿದರೆ ಅನ್ಯತ್ರ ಇದರ ಉಪಯೋಗವು ಗೋಚರಿ ಸುವುದಿಲ್ಲ.

ಆದರೆ ಈಗಾಗಲೇ ಉಲ್ಲೇಖಿಸಿದಂತೆ ಕರ್ಕಾಟಕ ಅಮಾವಾಸ್ಯೆ ಅಥವಾ ಆಟಿ ಅಮಾವಾಸ್ಯೆಯಂದು ಈ ಮರಕ್ಕೆ ಅತ್ಯಂತ ಮಹತ್ವ ಒದಗುತ್ತದೆ. ಅಮಾವಾಸ್ಯೆಯ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಹಾಲುವಾನ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತೆಗೆದ ಅದರ ಕಹಿ-ಒಗರು ರಸವನ್ನು ಸೇವಿಸುವ ಪದ್ಧತಿ ತುಳು ಜನಾಂಗದ ಜನರಲ್ಲಿ ರೂಢಿಯಲ್ಲಿದೆ. ವೈಜ್ಞಾನಿಕವಾಗಿ ಈ ಪದ್ಧತಿಗೆ ಯಾವುದೇ ಸ್ಪಷ್ಟತೆ ದೊರಕಿಲ್ಲವಾದರೂ ಜನರ ನಂಬಿಕೆ ಮತ್ತು ಸಂಪ್ರದಾಯದ ದೃಷ್ಟಿಯಿಂದ ಒಂದು ರೀತಿಯ ಧಾರ್ಮಿಕ ಮಹತ್ವವು ಆಟಿ ಅಮಾವಾಸ್ಯೆ ಮತ್ತು ಸಪ್ತವರ್ಣಿ ವೃಕ್ಷದ ಕಷಾಯ ಸೇವನೆಗೆ ಒದಗಿಸಿರುವುದು ಗಮನೀಯವೆನಿಸಿದೆ.

ರೋಗ ನಿರೋಧಕ-ನಂಜು ನಿವಾರಕ ಕಷಾಯ: ಆಯುರ್ವೇದ ಶಾಸ್ತ್ರದಲ್ಲಿ “ಸಪ್ತವರ್ಣಿ’ ವೃಕ್ಷದ ರಸವನ್ನು ರೋಗ ನಿರೋಧಕ ಮತ್ತು ನಂಜು ನಿವಾರಕ ಶಕ್ತಿಯಿಂದ ಕೂಡಿದ ಔಷಧೀಯ ಗುಣಗಳ ಸತ್ವವೆಂದು ಉಲ್ಲೇಖೀಸಲಾಗಿದೆ. ಜ್ಯೇಷ್ಠ ಆಷಾಢ ಮಾಸಗಳ ಶೀತ-ಜ್ವರಗಳ ಸಮಸ್ಯೆ ಮತ್ತು ಕೊಳೆತ ಮಣ್ಣಿನಿಂದಾಗಿ ಕಾಲಿನಲ್ಲಿ ಉಂಟಾಗುವ ನಂಜಿನ ಬಾಧೆಗಳ ಪರಿಹಾರಕ್ಕೆ ಹಾಲುವಾನ ಮರದ ಕಷಾಯ ಮಹಾ ಔಷಧ ಎಂದು ಪರಿಗಣಿಸಿ ಆಟಿ ಅಮಾವಾಸ್ಯೆಯಂದು ಅದರ ಸೇವನೆಗೆ ಜನಪದೀಯ ಒತ್ತಾಸೆಯನ್ನು ನೀಡಲಾಗಿದೆ ಎಂದು ಕೆಲವರ ಅನಿಸಿಕೆ.

ಆಟಿ ಅಮಾವಾಸ್ಯೆಯಂದು ಹಾಳೆಮರದ ತೊಗಟೆಯ ರಸವು ಸ್ವಲ್ಪವಾದರೂ ಹೊಟ್ಟೆಗೆ ಸೇರಿದರೆ ಹೊಟ್ಟೆಯಲ್ಲಿರುವ ಲಾಡಿಹುಳ, ಜಂತುಹುಳಗಳ ತೊಂದರೆ ನಿವಾರಣೆಯಾಗುವುದರ ಜತೆಗೆ ಕೆಲವು ಅಭಿಚಾರ ದೋಷದ ಔಷಧ ಪ್ರಯೋಗದ (ಕೈಮಾಸ್‌-ಕೈ ಮದ್ದು) ಬಾಧೆಯೂ ಪರಿಹಾರವಾಗಲು ಸಾಧ್ಯವಿದೆ ಎಂದು ಮಾಂತ್ರಿಕ ಮತ್ತು ವೈದ್ಯಕೀಯ ಅಭಿಪ್ರಾಯಗಳೂ ಉಲ್ಲೇಖಿತವಾಗಿವೆ. ಆಹಾರ ಸೇವನೆಗೆ ಮೊದಲು ಖಾಲಿ ಹೊಟ್ಟೆಗೆ ಹಾಲೆಮರದ ಕಷಾಯ ಆಟಿ ಅಮಾವಾಸ್ಯೆಯ ದಿನ ಸೇವಿಸಿದರೆ 366 ಬಗೆ ಔಷಧಗಳು ಶರೀರಕ್ಕೆ ವ್ಯಾಪಿಸಿದಂತೆ ಎಂದು ತುಳುವರ ನಂಬಿಕೆ.

ಏಕೆಂದರೆ ಕಾಡಿನಲ್ಲಿರುವ ಎಲ್ಲ ಔಷಧೀಯ ಗುಣವುಳ್ಳ ಸಸ್ಯಗಳ ಸಾರವು ಆಟಿ ಅಮಾವಾಸ್ಯೆಯಂದು “ಸಪ್ತಪರ್ಣಿ, ಏಳೆಲಗ, ಹಾಲುವಾನ, ಹಾಳೆಮರ, ಪಾಳೆದ ಮರ’ ಎಂದು ಹಲವಾರು ಹೆಸರಿನಿಂದ ಕರೆಯಲ್ಪಡುವ ಈ ಮಹಾವೃಕ್ಷದ ತೊಗಟೆಯಲ್ಲಿ ಅಡಕವಾಗಿರುತ್ತದಂತೆ! ರೋಗ ನಿರೋಧಕವಾಗಿ, ಕ್ರಿಮಿನಾಶಕವಾಗಿ, ಉಷ್ಣಧಾತುವಾಗಿ ಶರೀರದ ಥಂಡಿ, ಶೀತ, ಚಳಿ, ಜ್ವರಗಳನ್ನು ನಿಯಂತ್ರಿಸುವ ಚೈತನ್ಯವಿರುವ ಹಾಳೆ ಮರದ ಕಷಾಯ ವನೌಷಧವಾಗಿ ಪರಿಗಣಿಸಲ್ಪಟ್ಟು ಆಟಿ ಅಮಾವಾಸ್ಯೆಯ ದಿನದಂದು ಮಾತ್ರ ಸೇವಿಸಲ್ಪಡುವ ತುಳುನಾಡಿನ ಈ ಜಾನಪದ ಆಚರಣೆಯ ಹಿನ್ನೆಲೆಯ ವೈಜ್ಞಾನಿಕ ಸತ್ಯ-ತಣ್ತೀ- ಸತ್ವವನ್ನು ತಳ್ಳಿ ಹಾಕುವಂತಿಲ್ಲ ಅಲ್ಲವೇ?.

-ಮೋಹನದಾಸ, ಸುರತ್ಕಲ್‌

ಟಾಪ್ ನ್ಯೂಸ್

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

uUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

Udupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

Health: ಬಿಸಿಲಿನ ತಾಪದಿಂದ ಆರೋಗ್ಯ ಅಪಾಯ ತಡೆಯಲು ಏನು ಮಾಡ ಬೇಕು?

16

Health: ಸ್ತನ ಕಸಿ ಮತ್ತು ಕ್ಯಾನ್ಸರ್‌ ಪರಸ್ಪರ ಸಂಬಂಧ ಇದೆಯೇ?

9

Children’s Health: ತಂತ್ರಜ್ಞಾನ ಮತ್ತು ಕೋಮಲ ಮನಸ್ಸುಗಳು

8

Healthy Spine; ಬೆನ್ನಿನ ಮೇಲೊಂದು ಪಕ್ಷಿನೋಟ!

natto 1

Health Tips: Japanese Natto ಉತ್ತಮ ಆರೋಗ್ಯಕರ ಆಹಾರ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿPilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.