ಜ್ಞಾನವ್ಯಾಪಿ ಮಸೀದಿ: ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಎಂದರೇನು?


Team Udayavani, Oct 14, 2022, 7:10 AM IST

ಜ್ಞಾನವ್ಯಾಪಿ ಮಸೀದಿ: ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಎಂದರೇನು?

ಜ್ಞಾನವ್ಯಾಪಿ ಮಸೀದಿಯ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗದ ಕುರಿತಾಗಿ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ನಡೆಸಬೇಕು ಎಂಬ ಅರ್ಜಿ ಸಲ್ಲಿಕೆಯಾಗಿದ್ದು, ಇಂದು (ಅ. 14) ವಾರಾಣಸಿ ಜಿಲ್ಲಾ ಕೋರ್ಟ್‌ ತೀರ್ಪು ನೀಡಲಿದೆ. ಹಾಗಾದರೆ ಈ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಎಂದರೇನು?  ಇದನ್ನು ಏಕೆ ನಡೆಸಲಾಗುತ್ತದೆ? ಇಲ್ಲಿದೆ ಮಾಹಿತಿ…

ಕಾರ್ಬನ್‌ ಡೇಟಿಂಗ್‌ ಅಂದರೆ…

ಪುರಾತನ ವಸ್ತುವೊಂದು ಪತ್ತೆಯಾದಾಗ, ಅದು ಯಾವ ಕಾಲದ್ದು ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪುರಾತತ್ವ ಇಲಾಖೆ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ನಡೆಸುತ್ತದೆ. ಇದನ್ನು ಕೇವಲ ವಸ್ತುಗಳ ಮೇಲಷ್ಟೇ ಬಳಕೆ ಮಾಡುವುದಿಲ್ಲ, ಸಸಿಗಳು, ಸತ್ತ ಪ್ರಾಣಿಗಳು ಅಥವಾ ಅಸ್ಥಿಪಂಜರದ ಪಳೆಯುಳಿಕೆಗಳ ಮೇಲೂ ಪ್ರಯೋಗಿಸಲಾಗುತ್ತದೆ. ಅಂದರೆ ವಿಜ್ಞಾನಿಗಳು ವಸ್ತು ಅಥವಾ ಇನ್ನಿತರ ವಸ್ತುಗಳ ಮೇಲೆ ರೇಡಿಯೋ ಆಕ್ಟೀವ್‌ ಕಾರ್ಬನ್‌ ಡೇಟಿಂಗ್‌ ಪ್ರಯೋಗಿಸಿ ದಾಗ, ಅದರಲ್ಲಿ ಕಾರ್ಬನ್‌ 14 ಯಾವಾಗ, ಎಷ್ಟು ಪ್ರಮಾಣದಲ್ಲಿ ಇತ್ತು ಎಂಬುದು ಗೊತ್ತಾಗುತ್ತದೆ.

ಜಾಗತಿಕವಾಗಿ ಬಳಕೆ  :

ಈ ಕಾರ್ಬನ್‌ ಡೇಟಿಂಗ್‌ ಅನ್ನು ಜಗತ್ತಿನಾದ್ಯಂತ ಎಲ್ಲ ಪುರಾತತ್ವ ಇಲಾಖೆ ಸಂಶೋಧಕರು ಸೇರಿದಂತೆ ಇತರ ಇತಿಹಾಸ ತಜ್ಞರು ಬಳಕೆ ಮಾಡುತ್ತಾರೆ. ಆದರೆ ಭೂಗರ್ಭ ಶಾಸ್ತ್ರಜ್ಞರು ಮಾತ್ರ ಈ ವಿಧಾನವನ್ನು ಕಲ್ಲುಗಳ ಜೀವಿತಾವಧಿ ಕಂಡುಹಿಡಿಯಲು ಬಳಕೆ ಮಾಡಲ್ಲ. ಏಕೆಂದರೆ ಕಾರ್ಬನ್‌ ಡೇಟಿಂಗ್‌ 50 ಸಾವಿರ ವರ್ಷಗಳಿಂದ ಈಚಿಗಿನ ಕಲ್ಲುಗಳ ಜೀವಿತಾವಧಿ ಬಗ್ಗೆ ಹೇಳುತ್ತದೆ.

ಹೇಗೆ ಕಂಡು ಹಿಡಿಯಲಾಗುತ್ತದೆ?  :

ಇಂಗಾಲದ ಹೊರತಾಗಿ, ಪೊಟ್ಯಾಸಿ ಯಮ್‌ -40 ಸಹ ವಿಕಿರಣಶೀಲ ಕಾಲನಿರ್ಣಯಕ್ಕಾಗಿ ವಿಶ್ಲೇಷಿಸಬಹು ದಾದ ಒಂದು ಧಾತುವಾಗಿದೆ. ಪೊಟ್ಯಾಸಿ ಯಮ್‌ -40 ಅರ್ಧಾಯುಷ್ಯ 1.3 ಬಿಲಿಯನ್‌ ವರ್ಷಗಳಷ್ಟಿದೆ, ಅದೇ ರೀತಿ, ಯುರೇನಿಯಂ -235  704 ಮಿಲಿಯನ್‌ ವರ್ಷಗಳ ಅರ್ಧಾಯುಷ್ಯವನ್ನು ಹೊಂದಿದೆ ಮತ್ತು 14 ಬಿಲಿಯನ್‌ ವರ್ಷಗಳ ಅರ್ಧಾಯುಷ್ಯವನ್ನು ಹೊಂದಿರುವ ಥೋರಿಯಂ -232 ಅನ್ನು ಬಂಡೆಗಳಂತಹ ಭೂವೈಜ್ಞಾನಿಕ ವಸ್ತುಗಳ ವಯಸ್ಸನ್ನು ಅಂದಾಜು ಮಾಡಲು ಸಹ ಬಳಸಲಾಗುತ್ತದೆ.

ಕಾರ್ಬನ್‌ 14 ಅಂದರೇನು? :

ಎಲ್ಲ ಜೀವಿಗಳು ಸೂರ್ಯನಿಂದ ಭೂಮಿಯ ವಾತಾವರಣದ ಮೂಲಕ ಬರುವ ಕಾಸ್ಮಿಕ್‌ ಕಿರಣಗಳನ್ನು ಎದುರಿಸುತ್ತವೆ. ಈ ಕಾಸ್ಮಿಕ್‌ ಕಿರಣಗಳಲ್ಲಿ ಕೆಲವು ವಾತಾವರಣದಲ್ಲಿನ ಪರಮಾಣುವಿಗೆ ಢಿಕ್ಕಿ ಹೊಡೆಯುತ್ತವೆ. ನಾವು ಹೀರಿಕೊಳ್ಳುವ ಕಾರ್ಬನ್‌ -14 ಪರಮಾಣುಗಳನ್ನು ಹೊಂದಿರುವ ದ್ವಿತೀಯಕ ಕಾಸ್ಮಿಕ್‌ ಕಿರಣವನ್ನು ಸೃಷ್ಟಿಸುತ್ತವೆ. ಕಾರ್ಬನ್‌-14 ವಿಕಿರಣಶೀಲವಾಗಿದ್ದು, ಸುಮಾರು 5,700 ವರ್ಷಗಳ ಅರ್ಧಾಯುಷ್ಯವನ್ನು ಹೊಂದಿದೆ. ಇದು ವಿಕಿರಣಶೀಲ ಮಾದರಿಯ ಪರಮಾಣು ನ್ಯೂಕ್ಲಿಯಸ್‌ಗಳು ಅರ್ಧದಷ್ಟು ಕೊಳೆಯಲು ಬೇಕಾಗುವ ಸಮಯವಾಗಿದೆ. ಕಾರ್ಬನ್‌ -14 ಪರಮಾಣುಗಳು ಆಮ್ಲಜನಕವನ್ನು ಸಂಧಿಸಿದಾಗ, ಅವು ಇಂಗಾಲದ ಡೈಆಕ್ಸೈಡ್‌ ಅನ್ನು ರೂಪಿಸುತ್ತವೆ, ಇದನ್ನು ದ್ಯುತಿಸಂಶ್ಲೇಷಣೆಯ ಮೂಲಕ ಸಸ್ಯಗಳು ಹೀರಿಕೊಳ್ಳುತ್ತವೆ. ಈ ಸಸ್ಯವನ್ನು ನಮ್ಮ ವ್ಯವಸ್ಥೆಗೆ ಕಾರ್ಬನ್‌ -14 ಅನ್ನು ಸೇರಿಸುತ್ತವೆ. ಕಾರ್ಬನ್‌ -14 ಕೊಳೆಯುತ್ತಲೇ ಇದ್ದರೂ ನಮ್ಮ ಕೊನೆಯ ಉಸಿರು ಇರುವವರೆಗೂ ಅವುಗಳನ್ನು ನಿರಂತರವಾಗಿ ಸೇರಿಸಲಾಗುತ್ತಿರುತ್ತದೆ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.