ಪ್ರೀತಿಯ ನಿಜವಾದ ಅರ್ಥ ಹುಡುಕಿದಾಗ..

ನಮ್ಮ ಯುವಕ ಯುವತಿಯರು ನಾನಾ ರೀತಿಯಲ್ಲಿ ತಮಗೇ ಅರಿವಿಲ್ಲದಂತೆ ಮೋಸ ಹೋಗುತ್ತಿದ್ದಾರೆ.

Team Udayavani, Feb 14, 2023, 11:05 AM IST

ಪ್ರೀತಿಯ ನಿಜವಾದ ಅರ್ಥ ಹುಡುಕಿದಾಗ..

ಪ್ರೀತಿ ಎಂಬುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ, ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿಯೂ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದು ಅಂತೆ. ಪ್ರೀತಿ ಎನ್ನುವುದು ಕೇವಲ ಮಾನವ ಕುಲಕ್ಕೆ ಮಾತ್ರ ಸೀಮಿತವಾದುದಲ್ಲ. ಸರಿಯಾಗಿ ನಾವು ಅವುಗಳನ್ನು ಗಮನಿಸಿದರೆ, ಅದು ಎಲ್ಲರಲ್ಲೂ ಕಾಣ ಸಿಗುತ್ತದೆ. ಮುಗ್ದ ಮೂಕ ಪ್ರಾಣಿಗಳಿಗೆ ನಾವು ಸಾಸಿವೆಯಷ್ಟು ಪ್ರೀತಿ ತೋರಿದರೆ, ಅವು ನಮಗೆ ಬೆಟ್ಟದಷ್ಟು ಪ್ರೀತಿಸುತ್ತದೆ.

ಹೀಗೆ ಪ್ರೀತಿಗೆ ಎಲ್ಲರನ್ನು-ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿಯೂ ಇದೆ. ಹೀಗೆ ಪ್ರತಿಯೊಂದು ಧರ್ಮದಲ್ಲಿಯೂ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆಯನ್ನು ನೀಡುತ್ತಾರೆ. ನಿಜವಾಗಿಯೂ ಪ್ರೀತಿಯ ಮೂಲಕ್ಕೆ ಇಳಿದು ನೋಡಿದಾಗ, ಅದರ ಅರ್ಥ ಹುಡುಕುತ್ತಾ ಹೋದಾಗ ತಿಳಿಯುವುದೇನೆಂದರೆ, ಈ ಪ್ರೀತಿ ಎಂಬುವುದು ಮನಸ್ಸಿನಿಂದ ಮೂಡಬೇಕೇ ಹೊರತು ಆ ಪ್ರೀತಿ ಒತ್ತಾಯ ಪೂರ್ವಕವಾಗಿರಬಾರದು.

ಆದರೆ ಇಂದು, ಇಂದಿನ ಯುವ ಜನತೆಯಲ್ಲಿ ಪ್ರೀತಿ ಎಂಬ ವಿಷಯಕ್ಕೆ ಅರ್ಥವಿಲ್ಲದಂತಾಗಿದೆ. ಅಷ್ಟೇ ಅಲ್ಲ ಇನ್ನೂ ಕೆಲವರನ್ನು ನೋಡಿದಾಗ ಪ್ರೀತಿ ಎಂಬುದು ಮರೆಯಾಗಿದೆ ಎನಿಸುತ್ತದೆ. ಅದಕ್ಕೆ ಕಾರಣ ಕೆಲಸದ ಒತ್ತಡವಿದ್ದಿರಬಹುದು. ಕುಟುಂಬದ ನಾನಾ ಕಾರಣಗಳಿಂದಲೂ ಆಗಿರಬಹುದು. ಇಲ್ಲವೇ ಸಮಾಜದ ಮೇಲ್ನೋಟದಿಂದಲೂ ಆಗಿರಬಹುದು.

ಯುವಕ-ಯುವತಿ ಒಬ್ಬಂಟಿಯಾಗಿರಲು ಇಚ್ಛಿಸುತ್ತಾರೆ. ಆದರೆ ಇದರಿಂದ ಅವರಿಗೆ ತಂದೆ-ತಾಯಿಯ, ಗೆಳಯ-ಗೆಳತಿಯ, ಸಂಬಂಧಿಕರ, ಪ್ರೀತಿಯ ಮೌಲ್ಯವನ್ನರಿತಾಗ, ಅದರ ಬಗ್ಗೆ ಯೋಚಿಸುತ್ತಾ ದಿನೇ ದಿನೇ ಒಂದಲ್ಲ ಒಂದು ರೀತಿಯಲ್ಲಿ ಕೊರಗುತ್ತಾರೆ.

ನಮ್ಮ ಯುವ ಜನತೆಯಲ್ಲಿಯೂ ಸಹ, ಪ್ರೀತಿ ಕಣ್ಮರೆಯಾಗಿದೆ. ಪ್ರೀತಿ ಎಂಬುವುದು ನಾನ ಆಯಾಮಗಳನ್ನು ಪಡೆಯುತ್ತಿದೆ. ಪ್ರೀತಿ ಎಂಬ ಅಮೂಲ್ಯ ಪದವನ್ನು ಅರ್ಥೈಸಿಕೊಳ್ಳದೆ, ನಮ್ಮ ಯುವಕ ಯುವತಿಯರು ನಾನಾ ರೀತಿಯಲ್ಲಿ ತಮಗೇ ಅರಿವಿಲ್ಲದಂತೆ ಮೋಸ ಹೋಗುತ್ತಿದ್ದಾರೆ.

ಇಂದಿನ ಟೈಮ್‌-ಪಾಸ್‌ ಯುಗದಲ್ಲಿ ಪ್ರೀತಿಯೂ ಒಂದು ಪಾಲು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಅರಿಷಡ್ವರ್ಗಗಳಲ್ಲಿ ಒಂದಾದ ಕಾಮವೂ ಪ್ರೀತಿಯಲ್ಲ ತಾತ್ಕಲಿಕ ಭಾಗದಂತಾಗಿದೆ.

ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳದೆ ತಮ್ಮ ಅಮೂಲ್ಯವಾದ ಜೀವನವನ್ನು ಸರ್ವನಾಶ ಮಾಡಿಕೊಳ್ಳುತ್ತಿದ್ದಾರೆ. ಪ್ರೀತಿ ಎಂಬುದು ಮಾನವನಿರ್ಮಿತವಾದದಲ್ಲ. ಬದಲಿಗೆ ದೇವರಿಂದಲೇ ನಿರ್ಮಿತವಾದದ್ದು. ನಾವು ಯಾವುದೇ ವ್ಯಕ್ತಿಯನ್ನು ಮನಸ್ಸಾರೆ ಇಷ್ಟಪಟ್ಟು ಪ್ರೀತಿ ಮಾಡುತ್ತಿದ್ದರೇ ಮೊದಲು ಅವರೊಂದಿಗೆ ಅವರು ನಮ್ಮಲ್ಲಿ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಮತ್ತು ನಂಬಿಗಸ್ಥರಾಗಿದ್ದು ಪ್ರಾಮಾಣಿಕರಾಗಿರಬೇಕು. ಅವರನ್ನು ಅರ್ಥೈಸಿಕೊಳ್ಳಬೇಕು, ಅವರೊಂದಿಗೆ ಬೆರೆಯುತ್ತಾ ತಮ್ಮ ಸಮಯದಲ್ಲಿ ಒಂದಿಷ್ಟು ಸಮಯವನ್ನಾದರೂ ಅವರಿಗೆಂದೇ ಮೀಸಲಿಡಬೇಕು.

ಹಾಗೆಯೇ ಯಾವಾಗ ಅವರೊಂದಿಗೆ ತಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುತ್ತೇವೆ ಅದೇ ನಿಷ್ಕಲ್ಮಶ ಪ್ರೀತಿ. ಈ ಕಾರಣದಿಂದಲೇ ಪ್ರೀತಿಯನ್ನು ದೇವರ ಸ್ವರೂಪ ಎಂದು ಹೇಳುತ್ತಾರೆ. ನಾವು ಯಾವಾಗ ಪ್ರೀತಿಯನ್ನು ನಮ್ಮ ಜೀವನದಲ್ಲಿ ಒಳ್ಳೆಯ ರೀತಿಯಲ್ಲಿ ಅಳವಡಿಸಿಕೊಳ್ಳುತ್ತೇವೆಯೋ ಆವಾಗ ಸ್ವತಃ ದೇವರೇ ನಮ್ಮೊಳಗೆ ಬಂದು, ನಮ್ಮೊಳಗಿನ ಪ್ರೀತಿಯು ಅಮರವಾಗುತ್ತದೆ.

ಸಂಜಯ್ ಸಿರಿಲ್ ಐ

ಸಂತ ಅಲೋಶಿಯಸ್‌ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.