World Tourism Day 2023: ನಾರಾವಿಯಲ್ಲಿದೆ “24 ತೀರ್ಥಂಕರ ಪವಿತ್ರ ವನ”


Team Udayavani, Sep 27, 2023, 12:30 PM IST

Untitled-1

ನಿಸರ್ಗಾರಾಧನೆಯು ಭಾರತೀಯ ಸಂಸ್ಕೃತಿಯ ಪ್ರಧಾನ ಭಾಗವಾಗಿದೆ. ವೃಕ್ಷಗಳಲ್ಲಿ ದೈವತ್ವ ಕಾಣುವ ಪವಿತ್ರ ಸಂಸ್ಕೃತಿ ನಮ್ಮದು. ಅಂತೆಯೇ ಜೈನ ಧರ್ಮದ ಇಪ್ಪತ್ತನಾಲ್ಕು ತೀರ್ಥಂಕರರು ಮೋಕ್ಷವನ್ನು ಪಡೆದ ಮರಗಳನ್ನು ಬೆಳ್ತಂಗಡಿ ತಾಲ್ಲೂಕಿನ ನಾರಾವಿ ಗ್ರಾಮದ ಅನಂತ ಶಾಂತಿ ತೀರ್ಥಂಕರ ವನದಲ್ಲಿ ನೆಟ್ಟು ಪೋಷಿಸಲಾಗುತ್ತಿದೆ.

ನಾರಾವಿ ಗ್ರಾಮದ ಜೈನ್ ಪೇಟೆಯಲ್ಲಿರುವ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿ ಮತ್ತು ಸೂರ್ಯ ನಾರಾಯಣ ದೇವಾಲಯ ಸಮೀಪ, ಸುವರ್ಣ ನದಿಯ ದಡದಲ್ಲಿ ಶ್ರೀ ಅನಂತ ಶಾಂತಿ ತೀರ್ಥಂಕರ ವನವನ್ನು ಜೈನ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ರಚಿಸಲಾಗಿದೆ.

ಚಾವುಂಡರಾಯ ಪುರಾಣದ ಪ್ರಕಾರ ಭ. ವೃಷಭನಾಥ ಸ್ವಾಮಿ ಮೋಕ್ಷ ಪಡೆದ ವಟ ವೃಕ್ಷ, ಭ. ಅಜಿತನಾಥ ಸ್ವಾಮಿ – ಸಪ್ತಪರ್ಣಿ, ಶಂಭವನಾಥ – ಶಾಲ, ಭ. ಅಭಿನಂದನಾಥ ಸ್ವಾಮಿ – ಸರಳ, ಭ. ಸುಮತಿನಾಥ ಸ್ವಾಮಿ – ಪ್ರಿಯಾಂಗು, ಭ. ಪದ್ಮಪ್ರಭನಾಥ ಸ್ವಾಮಿ – ಪ್ರಿಯಾಂಗು, ಭ. ಸುಪಾರ್ಶ್ವನಾಥ ಸ್ವಾಮಿ – ಶಿರೀಷ, ಭ. ಚಂದ್ರಪ್ರಭನಾಥ ಸ್ವಾಮಿ – ನಾಗ ಕೇಸರ, ಭ. ಪುಷ್ಪದಂತನಾಥ ಸ್ವಾಮಿ – ಬಬೀತಕಿ, ಭ. ಶೀತಲನಾಥ ಸ್ವಾಮಿ – ಪಾಲಾಶ, ಭ. ಶ್ರೇಯಾಂಸನಾಥ ಸ್ವಾಮಿ – ತಿಂದುಕಾ, ಭ. ವಾಸುಪೂಜ್ಯನಾಥ ಸ್ವಾಮಿ – ಕದಂಬ, ಭ. ವಿಮಲನಾಥ ಸ್ವಾಮಿ – ಜಂಬೂ, ಭ. ಅನಂತನಾಥ ಸ್ವಾಮಿ – ಅಶ್ವತ್ಥ, ಭ. ಧರ್ಮನಾಥ ಸ್ವಾಮಿ – ಕಪಿತ್ಥ, ಭ. ಶಾಂತಿನಾಥ ಸ್ವಾಮಿ – ನಂದಿ, ಭ. ಕುಂಥುನಾಥ ಸ್ವಾಮಿ – ತಿಲಕ, ಭ. ಅರನಾಥ ಸ್ವಾಮಿ – ಆಮ್ರ, ಭ. ಮಲ್ಲಿನಾಥ ಸ್ವಾಮಿ – ಅಶೋಕ, ಭ. ಮುನಿಸುವ್ರತನಾಥ ಸ್ವಾಮಿ – ಚಂಪಕ, ಭ. ನಮಿನಾಥ ಸ್ವಾಮಿ – ಬಕುಳ, ಭ. ನೇಮಿನಾಥ ಸ್ವಾಮಿ – ಮೇಷ ಶೃಂಗ, ಭ. ಪಾರ್ಶ್ವನಾಥ ಸ್ವಾಮಿ – ಧವಳ ಮತ್ತು ಭ. ಮಹಾವೀರ ಸ್ವಾಮಿ – ಬೂರುಗ. ಹೀಗೆ ಇಪ್ಪತ್ತನಾಲ್ಕು ತೀರ್ಥಂಕರರ ಮೋಕ್ಷವನ್ನು ಪಡೆದ ವೃಕ್ಷ ಜಾತಿಗಳನ್ನು ಇಲ್ಲಿ ನೆಟ್ಟು ಅದರ ಸನಿಹದಲ್ಲೇ ಪಾದುಕೆಗಳ ಮತ್ತು ಸಂಕೇತಗಳ ಪ್ರತಿಕೃತಿಯನ್ನು ವಜ್ರಾಕೃತಿಯಲ್ಲಿ ನಿರ್ಮಿಸಲಾಗಿದೆ‌. ಈ ಮೂಲಕ ತೀರ್ಥಂಕರರ ತಪಸ್ಸಿನ ಅಂತಿಮ ದಿನಗಳನ್ನು ಭಕ್ತಿಯಿಂದ ನೆನೆಯಲು ಅವಕಾಶ ಮಾಡಿಕೊಡಲಾಗಿದೆ.


ಧಾರ್ಮಿಕ ಮಹತ್ವವುಳ್ಳ ಈ ಪ್ರದೇಶದಲ್ಲಿ ಲಭ್ಯವಿರುವ ಶಾಸನಗಳ ಪ್ರಕಾರ, ಈ ಹಿಂದೆ ಇಲ್ಲಿ ಹದಿಮೂರನೇ ಶತಮಾನದ ಸುಮಾರಿಗೆ ನಿರ್ಮಾಣವಾಗಿದ್ದ ಶಾಂತಿನಾಥ ಸ್ವಾಮಿ ಮತ್ತು ಅನಂತನಾಥ ಸ್ವಾಮಿ ಬಸದಿಗಳಿದ್ದವು. ಆದರೆ ಸುವರ್ಣ ನದಿಯ ಕೊರೆತದಿಂದ ಈ ಬಸದಿಗಳಿಗೆ ಹಾನಿಯಾಗುವ ಸಾಧ್ಯತೆಗಳಿದ್ದ ಕಾರಣ ಈ ಬಸದಿಗಳನ್ನು ಧರ್ಮನಾಥ ಸ್ವಾಮಿ ಬಸದಿಯ ಎಡ ಮತ್ತು ಬಲ ಭಾಗಗಳಲ್ಲಿ ಸ್ಥಾಪಿಸಲಾಯಿತು.

ಜಿನ ಬಿಂಬಗಳ ಸ್ಥಳಾಂತರದ ನಂತರ ನಾಗ ಮತ್ತು ಕ್ಷೇತ್ರ ಪಾಲಕರ ಹೊರತಾಗಿ ತೆರವಾದ ಇಲ್ಲಿನ ನಿವೇಶನದ ಸದುಪಯೋಗಕ್ಕಾಗಿ ತೀರ್ಥಂಕರ ವನದ ನಿರ್ಮಾಣವಾಯಿತು. ಒಟ್ಟಿನಲ್ಲಿ ಜೈನ ಧರ್ಮದ ಸಮ್ಮೇದ ಶಿಖರಜಿಯಷ್ಟೇ ಪುಣ್ಯ ಸ್ಥಳವೆಂದು ಪರಿಗಣಿಸಲ್ಪಡುವ ಈ ಸ್ಥಳಕ್ಕೆ ಧಾರ್ಮಿಕ ನಂಬಿಕೆಯುಳ್ಳವರಷ್ಟೇ ಅಲ್ಲದೇ ಪರಿಸರ ಪ್ರೇಮಿಗಳು ಹಾಗೂ ಸಸ್ಯ ಶಾಸ್ತ್ರ ಆಸಕ್ತರೂ ಭೇಟಿ ನೀಡಬಹುದಾಗಿದೆ.

– ಅನುರಾಗ್‌ ಗೌಡ
ದ್ವಿತೀಯ ಪತ್ರಿಕೋದ್ಯಮ
ಎಸ್‌ ಡಿ ಎಂ ಉಜಿರೆ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.