Yoga;ನನ್ನ ವೃತ್ತಿ ಜೀವನದ ಒತ್ತಡಕ್ಕೆ ಯೋಗ ಪರಿಹಾರ ನೀಡಿತು

ಪ್ರಾಣಾಯಾಮದಿಂದ ಒತ್ತಡ ನಿವಾರಣೆ; ಬೆನ್ನು ಮತ್ತಿತರ ನೋವು ನಿವಾರಣೆ

Team Udayavani, Jun 15, 2023, 5:21 AM IST

Yoga;ನನ್ನ ವೃತ್ತಿ ಜೀವನದ ಒತ್ತಡಕ್ಕೆ ಯೋಗ ಪರಿಹಾರ ನೀಡಿತು

“ಯೋಗೇನ ಚಿತ್ತಸ್ಯ ಪದೇನ ವಾಚಾಂ
ಮಲಂ ಶರೀರಸ್ಯ ಚವೈದ್ಯಕೇನ
ಯೋಪಾಕರೋತ್ತಂ ಪ್ರವರಂ ಮುನೀನಾಂ
ಪತಂಜಲಿ ಪ್ರಾಂಜಲಿರಾನತೋಸ್ಮಿ’
ಎಂಬ ಶ್ಲೋಕ ಕೇಳುತ್ತಾ, ಅಪ್ಪ -ಅಮ್ಮ ಮಾಡುತ್ತಿದ್ದ ಯೋಗಾ ಭ್ಯಾಸವನ್ನು ನೋಡುತ್ತಲೇ ಬೆಳೆದವಳು ನಾನು. ಆಗೆಲ್ಲ ಯೋಗ ಎಂದರೆ ವಿಚಿತ್ರ ಭಂಗಿಗಳು, ಸತ್ತಂತೆ ಮಲಗುವುದು, ಜೋರಾಗಿ ಉಸಿರಾಡುವುದು ಎನ್ನುವ ತಪ್ಪು ಅಭಿಪ್ರಾಯವಿತ್ತು.

ಮನೋವೈದ್ಯರಾದ ಅಪ್ಪ 1981ರಲ್ಲಿಯೇ “ಯೋಗ ಮತ್ತು ಟೆನ್ಶನ್‌ ತಲೆನೋವು’ ಕುರಿತಾಗಿ ನಿಮ್ಹಾನ್ಸ್‌ನಿಂದ ಎಂ.ಡಿ ಪಡೆದು ಅದನ್ನು ಚಿಕಿತ್ಸೆಯ ಭಾಗವಾಗಿ ಯಶಸ್ವಿಯಾಗಿ ಅಳವಡಿಸಿದವರು. ಅದಕ್ಕೆ ಪೂರಕವಾಗಿ ಅಮ್ಮ, ಯೋಗಶಿಕ್ಷಣ ಪಡೆದು ಸಾರ್ವಜನಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಯೋಗ ತರಗತಿ ನಡೆಸುತ್ತಿದ್ದರು. ಮಕ್ಕಳಾದ ನಾವು ಆರಂಭದಲ್ಲಿ ಯೋಗ ಮಾಡುತ್ತಿದ್ದದ್ದು ಅವರಿಬ್ಬರ ಒತ್ತಾಯಕ್ಕಾಗಿ ಮಾತ್ರ!

ಹಾಗೆ ರೂಢಿಯಾದ ಯೋಗಾಭ್ಯಾಸ, ಉತ್ತಮ ಜೀವನ ಶೈಲಿಗೆ- ಆರೋಗ್ಯಕ್ಕೆ ಭದ್ರಬುನಾದಿ ಎಂಬುದು ನಿಧಾನವಾಗಿ ಬುದ್ಧಿ ಬೆಳೆದಂತೆಲ್ಲ ಅರಿವಾಯಿತು. ದಂತವೈದ್ಯಕೀಯ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳೆರಡನ್ನೂ ಬೇಡುವ ವೃತ್ತಿ. ಸೂಕ್ಷವಾಗಿ ಬಾಯಿಯಲ್ಲಿ ಕೆಲಸಗಳನ್ನು ಮಾಡುವಾಗ ಒಂದೇ ಭಂಗಿಯಲ್ಲಿ ಸಾಕಷ್ಟು ಸಮಯ ಕೂರುವುದು ಅಥವಾ ನಿಲ್ಲುವುದು ಅನಿವಾರ್ಯ. ದಂತವೈದ್ಯೆಯಾಗಿ ವೃತ್ತಿಜೀವನ ಕೈಗೊಂಡು ವರ್ಷಗಟ್ಟಲೆ ಈ ರೀತಿ ಕೆಲಸ ಮಾಡುವಾಗ ಬೆನ್ನು, ಕೈ, ಭುಜ, ಕತ್ತು ನೋವು ಸರ್ವೇಸಾಮಾನ್ಯ. ಈ ನೋವನ್ನು ತಡೆಗಟ್ಟಲು, ಮಾಂಸಖಂಡಗಳಿಗೆ ಉಂಟಾಗುವ ದಣಿವನ್ನು ನಿವಾರಿಸಲು ಯೋಗದ ತ್ರಿಕೋನಾಸನ, ಉಷ್ಟಾಸನ, ಭುಜಂಗಾಸನ, ವೃಕ್ಷಾಸನ, ಸರ್ಪಾಸನ ಉಪಯುಕ್ತವಾಗಿವೆ. ಭರತನಾಟ್ಯ ನನ್ನ ಪ್ರೀತಿ ಮತ್ತು ಆಸಕ್ತಿಯ ಕ್ಷೇತ್ರ. ಗುರುಗಳಾದ ಡಾ| ವಸುಂಧರಾ ದೊರೆಸ್ವಾಮಿ ಅವರಿಂದ ಶಿಕ್ಷಣ ಪಡೆಯುತ್ತಾ ನೃತ್ಯದ ಬಳುಕು -ಬಾಗುಗಳಿಗೆ, ಭಾವ -ಭಂಗಿಗಳಿಗೆ ಯೋಗ ಹೇಗೆ ಆವಶ್ಯಕ ಎನ್ನುವ ಅರಿವು ಮೂಡಿತು. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ವೃತ್ತಿ ಮತ್ತು ಸಾಂಸಾರಿಕ ಬದುಕಿನಲ್ಲಿ ಬಹುವಿಧ ಪಾತ್ರಗಳನ್ನು ನಿರ್ವಹಿಸುವುದು ಅನಿವಾರ್ಯ. ಆಗ ಸೃಷ್ಟಿಯಾಗುವ ಒತ್ತಡ, ಆತಂಕ, ನಕಾರಾತ್ಮಕ ಭಾವನೆಗಳನ್ನು ತಗ್ಗಿಸುವಲ್ಲಿ ಪ್ರಾಣಾಯಾಮ ಮತ್ತು ಧ್ಯಾನ ಖಂಡಿತವಾಗಿಯೂ ಸಹಕಾರಿಯಾಗಿದೆ.

-ಡಾ| ಕೆ.ಎಸ್‌.ಚೈತ್ರಾ

ಟಾಪ್ ನ್ಯೂಸ್

adike

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

adike

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.