Yoga;ನನ್ನ ವೃತ್ತಿ ಜೀವನದ ಒತ್ತಡಕ್ಕೆ ಯೋಗ ಪರಿಹಾರ ನೀಡಿತು

ಪ್ರಾಣಾಯಾಮದಿಂದ ಒತ್ತಡ ನಿವಾರಣೆ; ಬೆನ್ನು ಮತ್ತಿತರ ನೋವು ನಿವಾರಣೆ

Team Udayavani, Jun 15, 2023, 5:21 AM IST

Yoga;ನನ್ನ ವೃತ್ತಿ ಜೀವನದ ಒತ್ತಡಕ್ಕೆ ಯೋಗ ಪರಿಹಾರ ನೀಡಿತು

“ಯೋಗೇನ ಚಿತ್ತಸ್ಯ ಪದೇನ ವಾಚಾಂ
ಮಲಂ ಶರೀರಸ್ಯ ಚವೈದ್ಯಕೇನ
ಯೋಪಾಕರೋತ್ತಂ ಪ್ರವರಂ ಮುನೀನಾಂ
ಪತಂಜಲಿ ಪ್ರಾಂಜಲಿರಾನತೋಸ್ಮಿ’
ಎಂಬ ಶ್ಲೋಕ ಕೇಳುತ್ತಾ, ಅಪ್ಪ -ಅಮ್ಮ ಮಾಡುತ್ತಿದ್ದ ಯೋಗಾ ಭ್ಯಾಸವನ್ನು ನೋಡುತ್ತಲೇ ಬೆಳೆದವಳು ನಾನು. ಆಗೆಲ್ಲ ಯೋಗ ಎಂದರೆ ವಿಚಿತ್ರ ಭಂಗಿಗಳು, ಸತ್ತಂತೆ ಮಲಗುವುದು, ಜೋರಾಗಿ ಉಸಿರಾಡುವುದು ಎನ್ನುವ ತಪ್ಪು ಅಭಿಪ್ರಾಯವಿತ್ತು.

ಮನೋವೈದ್ಯರಾದ ಅಪ್ಪ 1981ರಲ್ಲಿಯೇ “ಯೋಗ ಮತ್ತು ಟೆನ್ಶನ್‌ ತಲೆನೋವು’ ಕುರಿತಾಗಿ ನಿಮ್ಹಾನ್ಸ್‌ನಿಂದ ಎಂ.ಡಿ ಪಡೆದು ಅದನ್ನು ಚಿಕಿತ್ಸೆಯ ಭಾಗವಾಗಿ ಯಶಸ್ವಿಯಾಗಿ ಅಳವಡಿಸಿದವರು. ಅದಕ್ಕೆ ಪೂರಕವಾಗಿ ಅಮ್ಮ, ಯೋಗಶಿಕ್ಷಣ ಪಡೆದು ಸಾರ್ವಜನಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಯೋಗ ತರಗತಿ ನಡೆಸುತ್ತಿದ್ದರು. ಮಕ್ಕಳಾದ ನಾವು ಆರಂಭದಲ್ಲಿ ಯೋಗ ಮಾಡುತ್ತಿದ್ದದ್ದು ಅವರಿಬ್ಬರ ಒತ್ತಾಯಕ್ಕಾಗಿ ಮಾತ್ರ!

ಹಾಗೆ ರೂಢಿಯಾದ ಯೋಗಾಭ್ಯಾಸ, ಉತ್ತಮ ಜೀವನ ಶೈಲಿಗೆ- ಆರೋಗ್ಯಕ್ಕೆ ಭದ್ರಬುನಾದಿ ಎಂಬುದು ನಿಧಾನವಾಗಿ ಬುದ್ಧಿ ಬೆಳೆದಂತೆಲ್ಲ ಅರಿವಾಯಿತು. ದಂತವೈದ್ಯಕೀಯ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳೆರಡನ್ನೂ ಬೇಡುವ ವೃತ್ತಿ. ಸೂಕ್ಷವಾಗಿ ಬಾಯಿಯಲ್ಲಿ ಕೆಲಸಗಳನ್ನು ಮಾಡುವಾಗ ಒಂದೇ ಭಂಗಿಯಲ್ಲಿ ಸಾಕಷ್ಟು ಸಮಯ ಕೂರುವುದು ಅಥವಾ ನಿಲ್ಲುವುದು ಅನಿವಾರ್ಯ. ದಂತವೈದ್ಯೆಯಾಗಿ ವೃತ್ತಿಜೀವನ ಕೈಗೊಂಡು ವರ್ಷಗಟ್ಟಲೆ ಈ ರೀತಿ ಕೆಲಸ ಮಾಡುವಾಗ ಬೆನ್ನು, ಕೈ, ಭುಜ, ಕತ್ತು ನೋವು ಸರ್ವೇಸಾಮಾನ್ಯ. ಈ ನೋವನ್ನು ತಡೆಗಟ್ಟಲು, ಮಾಂಸಖಂಡಗಳಿಗೆ ಉಂಟಾಗುವ ದಣಿವನ್ನು ನಿವಾರಿಸಲು ಯೋಗದ ತ್ರಿಕೋನಾಸನ, ಉಷ್ಟಾಸನ, ಭುಜಂಗಾಸನ, ವೃಕ್ಷಾಸನ, ಸರ್ಪಾಸನ ಉಪಯುಕ್ತವಾಗಿವೆ. ಭರತನಾಟ್ಯ ನನ್ನ ಪ್ರೀತಿ ಮತ್ತು ಆಸಕ್ತಿಯ ಕ್ಷೇತ್ರ. ಗುರುಗಳಾದ ಡಾ| ವಸುಂಧರಾ ದೊರೆಸ್ವಾಮಿ ಅವರಿಂದ ಶಿಕ್ಷಣ ಪಡೆಯುತ್ತಾ ನೃತ್ಯದ ಬಳುಕು -ಬಾಗುಗಳಿಗೆ, ಭಾವ -ಭಂಗಿಗಳಿಗೆ ಯೋಗ ಹೇಗೆ ಆವಶ್ಯಕ ಎನ್ನುವ ಅರಿವು ಮೂಡಿತು. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ವೃತ್ತಿ ಮತ್ತು ಸಾಂಸಾರಿಕ ಬದುಕಿನಲ್ಲಿ ಬಹುವಿಧ ಪಾತ್ರಗಳನ್ನು ನಿರ್ವಹಿಸುವುದು ಅನಿವಾರ್ಯ. ಆಗ ಸೃಷ್ಟಿಯಾಗುವ ಒತ್ತಡ, ಆತಂಕ, ನಕಾರಾತ್ಮಕ ಭಾವನೆಗಳನ್ನು ತಗ್ಗಿಸುವಲ್ಲಿ ಪ್ರಾಣಾಯಾಮ ಮತ್ತು ಧ್ಯಾನ ಖಂಡಿತವಾಗಿಯೂ ಸಹಕಾರಿಯಾಗಿದೆ.

-ಡಾ| ಕೆ.ಎಸ್‌.ಚೈತ್ರಾ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.