ಪದಾರ್ಪಣೆ ಪಂದ್ಯದಲ್ಲೇ ಗಾಯ: ಕನಸು ನನಸಾದ ಖುಷಿಯಲ್ಲಿಗಾಯದ ನೋವು!


Team Udayavani, May 15, 2021, 9:36 AM IST

injuryin debut match

ಯಾವುದೇ ಆಟಗಾರನಾಗಲಿ ಆತನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಾರ್ಪಣಾ ಪಂದ್ಯವೆಂದರೆ ಅದು ನಿಜಕ್ಕೂ ಸ್ಮರಣೀಯವಾಗಿರುತ್ತದೆ. ತನ್ನ ದೇಶವನ್ನು ಪ್ರತಿನಿಧಿಸುವ ಅವಕಾಶಕ್ಕಾಗಿ ವರ್ಷಗಳ ಕಾಲ ಕಾದವರು ಆ ಒಂದು ಅವಕಾಶವನ್ನು ಸದುಪಯೋಗ ಪಡಿಸುವ ಯೋಚನೆಯಲ್ಲಿರುತ್ತಾರೆ. ಕ್ರಿಕೆಟ್ ನಲ್ಲಿ ಬ್ಯಾಟ್ಸಮನ್ ಆದರೆ ಶತಕ ಬಾರಿಸಲು, ಬೌಲರ್ ಆದರೆ ಪ್ರಮುಖ ವಿಕೆಟ್ ತೆಗೆಯಲು ಯೋಜನೆ ಮಾಡಿರುತ್ತಾರೆ. ಆದರೆ ಮೊದಲ ಪಂದ್ಯದಲ್ಲೇ ಗಾಯಗೊಂಡರೆ ಆ ಆಟಗಾರ ಭವಿಷ್ಯಕ್ಕೆ ಕಲ್ಲು ಹಾಕಿದಂತೆ. ಇಂತಹ ಐದು ಕ್ರಿಕೆಟ್ ಆಟಗಾರರ ಪರಿಚಯ ಇಲ್ಲಿದೆ.

ಕ್ರೇಗ್ ಓವರ್ಟನ್

ಇಂಗ್ಲೆಂಡ್ ವೇಗಿ ಕ್ರೇಗ್ ಓವರ್ಟನ್ 2017-18ರ ಆ್ಯಶಸ್ ಸರಣಿಯಲ್ಲಿ ಪದಾರ್ಪಣೆ ಮಾಡಿದರು. 6 ಅಡಿ 5 ಇಂಚು ಉದ್ದದ ಈ ಬೌಲರ್ ಉತ್ತಮ ಬೌಲಿಂಗ್ ಮಾಡಿದ್ದರು. ಆದರೆ ಬ್ಯಾಟಿಂಗ್ ಗೆ ಬಂದಾಗ ಮಾತ್ರ ಅದೃಷ್ಟ ಕೆಟ್ಟಿತ್ತು. ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಎಸೆದ ಬೌನ್ಸರ್ ಓವರ್ಟನ್ ಪಕ್ಕೆಲುಬಿಗೆ ತಾಗಿತ್ತು. ಕೂಡಲೇ ಓವರ್ಟನ್ ಮೈದಾನಕ್ಕೆ ಒರಗಿದ್ದರು. ಆದರೆ ಈ ಗಾಯದಿಂದ ಚೇತರಿಸಿಕೊಂಡ ಓವರ್ಟನ್ ಸಂಪೂರ್ಣ ಪಂದ್ಯ ಆಡಿದರು.

ಬಾಯ್ಡ್ ರಾಂಕಿನ್

ತನ್ನ ಕ್ರಿಕೆಟ್ ಕೆರಿಯರ್ ಅನ್ನು ಮೊದಲು ಐರ್ಲೆಂಡ್ ದೇಶದ ಪರವಾಗಿ ಆರಂಭಿಸಿದ ರಾಂಕಿನ್ ನಂತರ ಇಂಗ್ಲೆಂಡ್ ಪರವಾಗಿ ಆಡಿದರು. 2014ರ ಆ್ಯಷಸ್ ನಲ್ಲಿ ಇಂಗ್ಲೆಂಡ್  ಪರವಾಗಿ ಮೊದಲ ಟೆಸ್ಟ್ ಕ್ಯಾಪ್ ಪಡೆದ ರಾಂಕಿನ್ ಮೊದಲ ಪಂದ್ಯದಲ್ಲೇ ಗಾಯಗೊಂಡರು.

ಮೊದಲ ಪಂದ್ಯದ ಮೊದಲ ದಿನ ಬೌಲಿಂಗ್ ಮಾಡುತ್ತಿದ್ದ ರಾಂಕಿನ್ ಮಂಡಿರಜ್ಜು ಗಾಯಕ್ಕೆ ಒಳಗಾದರು, ಎರಡೆರಡು ಸಲ ಮೈದಾನ ತೊರೆದ ರಾಂಕಿನ್ ಹಾಕಿದ್ದು ಕೇವಲ ಎಂಟು ಓವರ್. ಅದಲ್ಲದೇ ರಾಂಕಿನ್ ಪದಾರ್ಪಣೆ ಪಂದ್ಯವೇ ಅವರ ಇಂಗ್ಲೆಂಡ್ ಪರವಾಗಿ ಅಂತಿಮ ಪಂದ್ಯವಾಯಿತು. ನಂತರ ರಾಂಕಿನ್ ಮತ್ತೆ ಐರ್ಲೆಂಡ್ ದೇಶದ ಪರವಾಗಿ ಆಡಿದರು.

ಶಾರ್ದೂಲ್ ಠಾಕೂರ್

ಮೊದಲ ಪಂದ್ಯದಲ್ಲೇ ಗಾಯಗೊಂಡ ಪಟ್ಟಿಗೆ ಇತ್ತೀಚಿನ ಸೇರ್ಪಡೆಯೆಂದರೆ ಭಾರತದ ವೇಗಿ ಶಾರ್ದೂಲ್ ಠಾಕೂರ್. ನಿಗಧಿತ ಓವರ್ ಕ್ರಿಕೆಟ್ ಗೆ ಆಗಲೇ ಪದಾರ್ಪಣೆ ಮಾಡಿದ್ದ ಠಾಕೂರ್ ಟೆಸ್ಟ್ ಆಡುವ ಕನಸಿಗೆ ವೆಸ್ಟ್ ಇಂಡೀಸ್ ವಿರುದ್ದ ಸರಣಿಯಲ್ಲಿ ಅವಕಾಶ ಸಿಕ್ಕಿತ್ತು. ಮೊಹಮ್ಮದ್ ಶಮಿ ಬದಲಿಗೆ ಮೈದಾನಕ್ಕಿಳಿದ ಶಾರ್ದೂಲ್ ಕನಸು ನನಸಾದ ಸಂಭ್ರಮ ಮೊದಲ ದಿನವೇ ನುಚ್ಚುನೂರಾಗಿತ್ತು. ತನ್ನ ಎರಡನೇ ಓವರ್ ಹಾಕುತ್ತಿದ್ದ ಠಾಕೂರ್ ಮಂಡಿರಜ್ಜು ಗಾಯಕ್ಕೆ ಒಳಗಾದರು. ಆಗ ಮೈದಾನ ತೊರೆದ ಠಾಕೂರ್ ಗೆ ಮತ್ತೆ ಟೆಸ್ಟ್ ಕ್ರಿಕೆಟ್ ಆಡುವ ಅವಕಾಶ ಸಿಕ್ಕಿದ್ದು ಕೆಲವು ಸರಣಿಗಳ ಬಳಿಕ.

ಇಮಾಮ್ ಉಲ್ ಹಕ್

ಪಾಕಿಸ್ಥಾನದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಟೆಸ್ಟ್ ಪದಾರ್ಪಣೆ ನಾಟಕೀಯವಾಗಿತ್ತು. ತನ್ನ ಮೊದಲ ಟೆಸ್ಟ್ ನ ಮೊದಲ ಎಸೆತದಲ್ಲೇ ಇಮಾಮ್ ಗಾಯಗೊಂಡು ಬಿದ್ದಿದ್ದರು. ನಾನ್ ಸ್ಟ್ರೈಕ್ ನಲ್ಲಿದ್ದ ಇಮಾಮ್ ಸ್ಟ್ರೈಕ್ ನ ಅಜರ್ ಅಲಿಯ ಕರೆಗೆ ಒಂಟಿ ರನ್ ಕದಿಯಲು ಒಡಿದಾಗ ಎದುರಾಳಿ ಐರ್ಲೆಂಡ್ ನೀಲ್ ಒಬ್ರೈನ್ ಜೊತೆಗೆ ಢಿಕ್ಕಿಯಾಗಿ ಬಿದ್ದರು.

ಕೆಲಕಾಲ ಮೈದಾನದದಲ್ಲೇ ಬಿದ್ದಿದ್ದ ಇಮಾಮ್ ಗೆ ಕೂಡಲೇ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ನಂತರ ಎದ್ದು ನಿಂತರೂ ಇಮಾಮ್ ಆಟ ಕೇವಲ ಎಳು ರನ್ ಗೆ ಅಂತ್ಯವಾಯಿತು. ಆದರೆ ದ್ವಿತೀಯ ಇನ್ನಿಂಗ್ಸ್ ನಲ್ಲಿ 74 ರನ್ ಬಾರಿಸಿದ್ದರು.

ಶಿಖರ್ ಧವನ್

ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ರ ಟೆಸ್ಟ್ ಪದಾರ್ಪಣೆ ಭಾರತೀಯರು ಮರೆಯಲು ಅಸಾಧ್ಯ. ಆಸೀಸ್ ವಿರುದ್ಧದ ಮೊಹಾಲಿ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಶಿಖರ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಬೊಂಬಾಟ್ ಶತಕ ಬಾರಿಸಿ 187 ರನ್ ನೊಂದಿಗೆ ದಾಖಲೆ ಬರೆದಿದ್ದರು.

ಆದರೆ ಆಸೀಸ್ ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಧವನ್ ಗಾಯಗೊಂಡರು. ಕೈ ಬೆರಳನ್ನು ಜಜ್ಜಿಸಿಕೊಂಡಿದ್ದ ಧವನ್ ಮುಂದೆ ಆರು ವಾರಗಳ ಕ್ರಿಕೆಟ್ ಆಡದಂತಾದರು. ಮುಂದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ ಧವನ್ ಕೂಟದ ಸರಣಿ ಶ್ರೇಷ್ಠರಾದರು.

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mahakumbha–Kharge-Bjp

MahaKumbh Mela: ಪುಣ್ಯಸ್ನಾನದ ಬಗ್ಗೆ ಪ್ರಶ್ನಿಸಿ ಮಲ್ಲಿಕಾರ್ಜುನ ಖರ್ಗೆ ಸಾಧಿಸಿದ್ದೇನು?

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.