ಸೂರ್ಯವಂಶದ ರಾಜ “ಸೌದಾಸ” ರಾಕ್ಷಸನಾಗಿ ಸಂತಾನಹೀನನಾದ ರಹಸ್ಯ…


Team Udayavani, Aug 21, 2018, 11:50 AM IST

vashistastopskalmashapad.jpg

ಹರಿಶ್ಚಂದ್ರ ಹಾಗೂ ಭಗೀರಥರು ಹುಟ್ಟಿದ ಸೂರ್ಯವಂಶದಲ್ಲೇ ಸೌದಾಸನೆಂಬ ಮತ್ತೊಬ್ಬ ರಾಜನು ಜನಿಸುತ್ತಾನೆ. ಅವನು
ಎಲ್ಲರೊಂದಿಗೆ ಬಹಳ ಸ್ನೇಹಮಯಿಯಾಗಿದ್ದ ಕಾರಣ ಅವನನ್ನು ಎಲ್ಲರೂ ಮಿತ್ರಸಹನೆಂದು ಕರೆಯುತ್ತಿದ್ದರು. ಈತನ ಪತ್ನಿ
ಮದಯಂತಿ . ರಾಜನು ಪ್ರಜಾರಕ್ಷಕನೂ, ಸತ್ಕರ್ಮಗಳನ್ನು ಮಾಡುತ್ತಾ ನಿಷ್ಠೆಯಿಂದ ರಾಜ್ಯಭಾರವನ್ನು ಮಾಡುತ್ತಿದ್ದನು.

ಹೀಗಿರಲು ಒಂದು ದಿನ ಸೌದಾಸನು ಕ್ರೂರಮೃಗಗಳನ್ನು ಬೇಟೆಯಾಡಲು ಕಾಡಿಗೆ ಹೋಗಿರಲು ಅಲ್ಲಿ ಪ್ರಜಾಕಂಟಕನಾದ ರಾಕ್ಷಸನನ್ನು ಸಂಹರಿಸಿದನು.  ಆ ರಾಕ್ಷಸನ ತಮ್ಮನ್ನು ಅಣ್ಣನ ಸಾವಿನ ಸೇಡನ್ನು ತೀರಿಸಿಕೊಳ್ಳಲು ವೇಷ ಬದಲಿಸಿಕೊಂಡು ರಾಜನ ಸೇವೆಯನ್ನು ಮಾಡಿ ಬಹಳ ನಿಷ್ಠಾವಂತನೆಂದು ತೋರಿಸಿಕೊಂಡು ರಾಜನ ವಿಶ್ವಾಸವನ್ನು ಸಂಪಾದಿಸಿದನು. ರಾಜನಾದರೂ ಇವನಲ್ಲಿ ಬಹಳ ವಿಶ್ವಾಸವಿಟ್ಟು ಅರಮನೆಗೆ ಕರೆದೊಯ್ದು ಅಡುಗೆ ಮನೆಯ ಮೇಲುಸ್ತುವಾರಿಯನ್ನು ವಹಿಸಿದನು. ಆ ರಾಕ್ಷಸನು ತಾನಂದುಕೊಂಡಂತೆ ರಾಜನ ಮೇಲೆ ಸೇಡು ತೀರಿಸಿಕೊಳ್ಳುವ ಸಮಯಕೋಸ್ಕರ ಕಾಯುತ್ತಿದ್ದನು.

ಒಂದು ದಿನ ಅರಮನೆಗೆ ವಸಿಷ್ಠರು ಆಗಮಿಸಿದ್ದರು. ಈ ವೇಳೆ ರಾಜನಿಗೆ ಕೆಡುಕನ್ನು ಬಯಸುತ್ತಿದ್ದ ಮಾಯಾವಿ ರಾಕ್ಷಸನು, ಸೇಡುತೀರಿಸಿಕೊಳ್ಳಲು ಇದುವೇ ಸೂಕ್ತ ಸಮಯವೆಂದು ತಿಳಿದು ವಸಿಷ್ಠರಿಗೆ ನರಮಾಂಸವನ್ನು ಉಣ ಬಡಿಸಿದ್ದ. ತನಗೆ ನರಮಾಂಸ ಬಡಿಸಿದ್ದನ್ನು ಅರಿತ ವಸಿಷ್ಠರು ಕೋಪದಿಂದ ಕೆಂಡಾಮಂಡಲವಾಗಿ , ರಾಜನ್ , ಅನಾಗರಿಕವಾಗಿ ಊಟ ತಯಾರಿಸಿ ಬಡಿಸಿ ನನಗೆ 
ಅಪಚಾರವೆಸಗಿದ ಕಾರಣ ರಾಕ್ಷಸನಾಗಿ ಹೋಗು ಎಂದು ಶಪಿಸಿದರು. ಇದರಲ್ಲಿ ತನ್ನ ತಪ್ಪಿಲ್ಲವೆಂದು ರಾಜನು ಪರಿಪರಿಯಾಗಿ ಬೇಡಿಕೊಳ್ಳಲು, ರಾಕ್ಷಸನು ಮಾಡಿದ ಕೃತ್ಯವನ್ನು ತಮ್ಮ ದಿವ್ಯದೃಷ್ಟಿಯಿಂದ ಅರಿತ ವಸಿಷ್ಠರು, ರಾಜಾ… ಇದರಲ್ಲಿ ನಿನ್ನ ತಪ್ಪಿಲ್ಲವಾದರೂ ಒಮ್ಮೆ ಕೊಟ್ಟ ಶಾಪವನ್ನು ಹಿಂದಕ್ಕೆ ಪಡೆಯಲು ಅಸಾಧ್ಯವಾದ ಕಾರಣ ಆ ಶಾಪವನ್ನು ನೀನು ಹನ್ನೆರಡು ವರ್ಷ ಸೀಮಿತಗೊಳಿಸಿದ್ದೇನೆ ಎಂದು ಹೇಳಿದರು.

ಇದನ್ನು ಕೇಳಿದ ಸೌದಾಸನು ಬಹಳ ಕೋಪಗೊಂಡು ಬೊಗಸೆಯಲ್ಲಿ ಜಲವನ್ನು ಹಿಡಿದು ಮಂತ್ರಿಸಿ ವಸಿಷ್ಠರಿಗೆ ಪ್ರತಿಶಾಪವನ್ನೀಯಲು ಮುಂದಾದನು. ಇದನ್ನರಿತ ಮದಯಂತಿಯು ಗುರುಗಳಿಗೆ ಶಪಿಸುವುದು ಹೇಯಕೃತ್ಯವಾಗಿದೆ. ಇದು ನಿಮಗೆ ಶೋಭೆಯಲ್ಲ ಎಂದು ರಾಜನನ್ನು ತಡೆದಳು. ರಾಜನಿಗೆ ತನ್ನ ತಪ್ಪಿನ ಅರಿವಾಗಿ ಮಂತ್ರ ಜಲವನ್ನು ಭೂಮಿಯಲ್ಲಿ ಚೆಲ್ಲಿದರೆ ಅದರಿಂದ ಅನಾಹುತವಾಗಬಹುದೆಂದು ಭಾವಿಸಿ ಅದನ್ನು ತನ್ನ ಕಾಲಮೇಲೆಯೇ ಹಾಕಿಕೊಂಡನು. ಮಂತ್ರಜಲದ ಪ್ರಭಾವದಿಂದ ಅವನ ಕಾಲುಗಳು ಕಪ್ಪಾದವು. ಇದರಿಂದ ಅವನಿಗೆ ಕಲ್ಮಷ ಪಾದನೆಂಬ ಹೆಸರಾಯಿತು.

ಗುರುಶಾಪದಿಂದ ರಾಕ್ಷಸನಾದ ಕಲ್ಮಷಪಾದನು ಕಾಡಿನಲ್ಲಿ ಅಲೆದಾಡುತ್ತಿರಲು ರತಿಕ್ರೀಡಾಸಕ್ತರಾದ ಬ್ರಾಹ್ಮಣ ದಂಪತಿಗಳನ್ನು ನೋಡಿದನು. ಹಸಿವಿನಿಂದ ಕಂಗೆಟ್ಟಿದ್ದ ರಾಕ್ಷನು ಬ್ರಾಹ್ಮಣನನ್ನು ಭಕ್ಷಿಸುವುದಕ್ಕೋಸ್ಕರ ಹಿಡಿದುಕೊಂಡನು. ಆಗ ಆ ಬ್ರಾಹ್ಮಣನ ಪತ್ನಿಯು ತನ್ನ ಪತಿಯನ್ನು ಬಿಟ್ಟುಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರೂ, ಬಹಳ ಹಸಿದಿದ್ದ ರಾಕ್ಷಸನು ಅವಳ ಮಾತಿಗೆ ಕಿವಿಗೊಡದೆ ಬ್ರಾಹ್ಮಣನನ್ನು ಭಕ್ಷಿಸಿದನು. ಪತಿಯ ವಿರಹದಿಂದ ದುಃಖಿತಳಾದ ಸಾದ್ವಿಯೂ ಕ್ರೋಧಗೊಂಡು  ಸಂತಾನಾಪೇಕ್ಷಿಯಾದ ನನ್ನ ಪತಿಯನ್ನು ಭಕ್ಷಿಸಿದ ನೀನು ಶಾಪವಿಮೋಚನೆಯಾಗಿ ಪುನಃ ರಾಜನಾದ ಮೇಲೆ ನಿನ್ನ ಪತ್ನಿಯೊಂದಿಗೆ ಸೇರಿದರೆ ನಿನಗೆ ಮರಣ
ಸಂಭವಿಸುವುದು ಎಂದು ಶಪಿಸಿ, ಪತಿವ್ರತೆಯಾದ ಸಾದ್ವಿಯೂ ಪತಿಯ ಅಸ್ಥಿಗಳನ್ನು ಸಂಗ್ರಹಿಸಿ ಚಿತೆಯನ್ನು ರಚಿಸಿ ಅಸ್ಥಿಗಳನ್ನು ಇಟ್ಟು ತಾನು ಸಹಗಮನ ಮಾಡಿ ಸದ್ಗತಿಯನ್ನು ಹೊಂದಿದಳು. ಹನ್ನೆರಡು ವರ್ಷಗಳ ನಂತರ ಸೌದಾಸನು ಶಾಪವಿಮುಕ್ತನಾಗಿ ಅರಮನೆಗೆ ಹಿಂದಿರುಗಿ ಹೆಂಡತಿಯನ್ನು ಕಂಡೊಡನೆ ಸಾದ್ವಿಯೂ ಕೊಟ್ಟ ಶಾಪವು ನೆನಪಾಗಿ ತನ್ನ ಹೆಂಡತಿಗೆ ಅದರ ವೃತ್ತಾಂತವನ್ನು ತಿಳಿಸಿದನು. ನಂತರ ರಾಜನು ಸ್ತ್ರೀಸುಖವನ್ನು ಸಂಪೂರ್ಣವಾಗಿ ಪರಿತ್ಯಜಿಸಿ, ತನ್ನ ಕರ್ಮಫಲದಿಂದಾಗಿ ಸಂತಾನ ಹೀನನಾದನು. ಸಂತಾನವಿಲ್ಲದ ರಾಜನ ಅನುಮತಿಯನ್ನು ಪಡೆದು ವಸಿಷ್ಠರು ಮದಯಂತಿಗೆ ಗರ್ಭಧಾನವನ್ನು ಮಾಡಿದರು. ಗರ್ಭವತಿಯಾದ ಮದಯಂತಿಯು ಏಳು ವರ್ಷವಾದರೂ ಪ್ರಸವಿಸದಿರಲು ವಸಿಷ್ಠರು ಅವಳ ಹೊಟ್ಟೆಯನ್ನು ಕಲ್ಲಿನಿಂದ ಕುಟ್ಟಿದಾಗ ಶಿಶುವಿನ ಜನನವಾಯಿತು. ಕಲ್ಲಿನ ಏಟಿನಿಂದ ಹುಟ್ಟಿದ ಆ ಮಗುವಿಗೆ ಅಶ್ಮಕ ನೆಂದು ನಾಮಕರಣ ಮಾಡಿದರು.

ಪರಶುರಾಮನು ಕ್ಷತ್ರೀಯರನ್ನೆಲ್ಲ ಸಂಹರಿಸುತ್ತ ಬರಲು ಅಶ್ಮಕನ ಪುತ್ರನಾದ ಮೂಲಕನನ್ನು ಸ್ತ್ರೀಯರು ಅಡಗಿಸಿಟ್ಟರು. ಇದರಿಂದ ಅವನಿಗೆ ನಾರಿಕವಚ ನೆಂದು ಹೆಸರಾಯಿತು. ಭೂಮಿಯು ಕ್ಷತ್ರೀಯ ರಹಿತವಾದಾಗ ಸ್ತ್ರೀಯರಿಂದ ರಕ್ಷಿಸಲ್ಪಟ್ಟ ಅಶ್ಮಕನ ಮಗನಿಂದ ಕ್ಷತ್ರೀಯ ಕುಲವು ಮುಂದುವರೆದ ಕಾರಣ ಆತನಿಗೆ ಮೂಲಕನೆಂಬ ಹೆಸರು ಬಂದಿತು.

ಪಲ್ಲವಿ

ಟಾಪ್ ನ್ಯೂಸ್

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.