![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 6, 2020, 8:29 AM IST
ಭೋಪಾಲ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇ ಬೇಕು. ಇದಕ್ಕೆ ಅಡಿಗಲ್ಲು ಹಾಕುವಲ್ಲಿವರೆಗೆ ಊಟ ಮಾಡುವುದಿಲ್ಲ ಎಂದು ಶಪಥ ತೊಟ್ಟಿದ್ದ ಅಜ್ಜಿಯೊಬ್ಬಳ ಮಾತು ಬುಧವಾರಕ್ಕೆ ಈಡೇರಿದರೂ ಉಪವಾಸ ಮಾತ್ರ ಬಿಟ್ಟಿಲ್ಲ!
1992, ಡಿ.6ರಂದು ಬಾಬರಿ ಮಸೀದಿ ಸ್ಥಳದಲ್ಲಿ ರಾಮಲಲ್ಲಾನ ಸ್ಥಾಪನೆಯಾದ ಸಂದರ್ಭ, ಜಬಲ್ಪುರ ಮೂಲದ ಉರ್ಮಿಳಾ ಚತುರ್ವೇದಿ ಅವರು ಉಪವಾಸದ ಶಪಥ ಕೈಗೊಂಡಿದ್ದರು. ಅಂದಿನಿಂದ ಅವರು ಊಟ ಮಾಡೇ ಇಲ್ಲ. ಬರೀ ಹಣ್ಣು ಹಂಪಲು ತಿಂದುಕೊಂಡೇ ಜೀವನ ನಡೆಸುತ್ತಿದ್ದಾರೆ. ಮೂರು ಹೊತ್ತೂ ರಾಮಧ್ಯಾನ ಮಾಡುತ್ತಾರೆ. ಇಂತಹ ಅಜ್ಜಿಗೆ ಅಯೋಧ್ಯೆಗೆ ಹೋಗಿ ರಾಮ ಮಂದಿರ ಶಿಲಾನ್ಯಾಸ ನೋಡಬೇಕೆಂಬ ಉತ್ಕಟ ಇಚ್ಛೆ ಇತ್ತು. ಆದರೆ ಕೋವಿಡ್ ಮತ್ತು ಭದ್ರತೆ ಕಾರಣಕ್ಕಾಗಿ ಈಗ ಊರು ಬಿಟ್ಟು ಹೋಗಲು ಸಾಧ್ಯವಾಗಿಲ್ಲ. ಆಕೆ ಶಪಥ ಕೈಗೊಂಡು 28 ವರ್ಷಗಳಾಗಿವೆ. ಉಪವಾಸದ ಶಪಥ ಏನಿದ್ದರೂ ಅಯೋಧ್ಯೆಯಲ್ಲಿ ರಾಮನ ಎದುರೇ ಬಿಡುತ್ತೇನೆ ಎಂಬ ಮಾತು ಆಕೆಯದ್ದು. ಸದ್ಯ ಅದು ಈಡೇರದ್ದರಿಂದ ಉಪವಾಸ ಮುಂದುವರಿಸಲಿದ್ದೇನೆ ಎಂಬ ಮಾತು ಅಜ್ಜಿಯದ್ದು.
ಹೋಗಬೇಕೆನ್ನುವ ಆಸೆ ಹೆಚ್ಚಿತ್ತು. ಆದರೆ ಈಗಿನ ಸಂದರ್ಭದಲ್ಲಿ ಸಾಧ್ಯವಿಲ್ಲ. ಮನೆಯವರು ಮುಂದೊಂದು ದಿನ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಲಿದ್ದಾರೆ. ನಾನೂ ಮಂತ್ರಿಯವರೊಬ್ಬರ ಬಳಿ ಮಾತನಾಡಿದ್ದು, ಕರೆದುಕೊಂಡು ಹೋಗಬೇಕಾದವರ ಪಟ್ಟಿ ಮಾಡಿದ್ದಾರಂತೆ ಎಂದು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಉಳಿದ ಜೀವನವನನ್ನು ಅಯೋಧ್ಯೆ-ಸರಯೂ ನದಿ ತೀರದಲ್ಲೇ ಕಳೆಯಬೇಕೆನ್ನುವ ಆಸೆ ಅಜ್ಜಿಯದ್ದಂತೆ. ಅಲ್ಲೇ ನನಗೆ ಉಳಿದುಕೊಳ್ಳಲೂ ಒಂದು ವ್ಯವಸ್ಥೆಯಾದರೆ ನಾನೇ ಧನ್ಯ ಎಂದಿದ್ದಾರೆ ಅಜ್ಜಿ.
Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ
Ayodhya: ವ್ಯಾಟಿಕನ್, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ
Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?
Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ
Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.